AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೂಪರ್​ಸ್ಟಾರ್ ಆದರೂ ಪತ್ನಿಯಿಂದ ಹಣ ಪಡೆಯುತ್ತಾರೆ ಅಮಿತಾಭ್ ಬಚ್ಚನ್

ಕೌನ್ ಬನೇಗಾ ಕರೋಡ್ಪತಿ (KBC) ಕಾರ್ಯಕ್ರಮದಲ್ಲಿ, ಅಮಿತಾಭ್ ಬಚ್ಚನ್ ತಮ್ಮ ಪತ್ನಿ ಜಯಾ ಬಚ್ಚನ್ ಅವರ ಬಗ್ಗೆ ಆಸಕ್ತಿಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅವರು ಜಯಾ ಅವರಿಗೆ ಮಲ್ಲಿಗೆ ಹೂವುಗಳನ್ನು ತಂದುಕೊಡುವುದು ಮತ್ತು ತಮ್ಮ ಹಣಕಾಸಿನ ವಿಷಯಗಳನ್ನು ಜಯಾ ಅವರ ಮೇಲೆ ಅವಲಂಬಿತರಾಗಿರುವುದು ಸೇರಿದಂತೆ ಅವರ ದೈನಂದಿನ ಜೀವನದ ಕೆಲವು ಭಾಗಗಳನ್ನು ಬಿಚ್ಚಿಟ್ಟಿದ್ದಾರೆ.

ಸೂಪರ್​ಸ್ಟಾರ್ ಆದರೂ ಪತ್ನಿಯಿಂದ ಹಣ ಪಡೆಯುತ್ತಾರೆ ಅಮಿತಾಭ್ ಬಚ್ಚನ್
ಅಮಿತಾಭ್-ಜಯಾ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Dec 28, 2024 | 8:07 AM

Share

ಜನಪ್ರಿಯ ರಿಯಾಲಿಟಿ ಶೋ ‘ಕೌನ್ ಬನೇಗಾ ಕರೋಡ್ಪತಿ’ ಶೋನಲ್ಲಿ ನಿರೂಪಕನಾಗಿ ಗಮನ ಸೆಳೆಯುತ್ತಿರುವ ಅಮಿತಾಭ್​ ಬಚ್ಚನ್ ಆಗಾಗ್ಗೆ ತಮ್ಮ ವೈಯಕ್ತಿಕ ಜೀವನದ ಕಥೆಗಳನ್ನು ಸ್ಪರ್ಧಿಗಳಿಗೆ ಹೇಳುತ್ತಾರೆ. ಇತ್ತೀಚಿನ ಸಂಚಿಕೆಯಲ್ಲಿ, ಅವರು ತಮ್ಮ ಪತ್ನಿ ಜಯಾ ಬಚ್ಚನ್ ಬಗ್ಗೆ ಕೆಲವು ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ‘ಕೆಬಿಸಿ’ ಪ್ರಸ್ತುತ ತನ್ನ ಹದಿನಾರನೇ ಸೀಸನ್‌ನಲ್ಲಿದೆ. ಈ ಶೋನಲ್ಲಿ ಹಾಟ್ ಸೀಟ್​ನಲ್ಲಿ ಕುಳಿತುಕೊಳ್ಳುವ ಸ್ಪರ್ಧಿಗಳು ಬಿಗ್ ಬಿ ಅವರಿಗೆ ಅವರ ಸಿನಿಮಾಗಳು ಮತ್ತು ವೈಯಕ್ತಿಕ ಜೀವನದ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಅವರು ಇದಕ್ಕೆ ಉತ್ಸಾಹದಿಂದ ಉತ್ತರಿಸಿದ್ದಾರೆ.

‘ನಾನು ಕಚೇರಿಯಿಂದ ಮನೆಗೆ ಹೋಗುವಾಗ, ಅಮ್ಮ ನನಗೆ ಕೊತ್ತಂಬರಿ ಸೊಪ್ಪು ತರಲು ಕೇಳುತ್ತಾರೆ. ನೀವೂ ಜಯ ಮಾಮ್ ಅವರಿಗೆ ಮಾರುಕಟ್ಟೆಯಿಂದ ಸೊಪ್ಪು ತರಲು ಕೇಳುತ್ತೀರಾ’ ಎಂದು ಪ್ರಶ್ನೆ ಮಾಡಿದರು ಸ್ಪರ್ಧಿ. ಈ ಪ್ರಶ್ನೆಗೆ ಉತ್ತರಿಸಿದ ಅಮಿತಾಬ್ ಬಚ್ಚನ್ ತಮಾಷೆಯಾಗಿ ಉತ್ತರಿಸಿದ್ದಾರೆ.

‘ಖಂಡಿತವಾಗಿ ಅವರು ನನಗೆ ಹೇಳುತ್ತಾರೆ. ಜಯ ಅವರಿಗೆ ಮಲ್ಲಿಗೆ ಎಂದರೆ ತುಂಬಾ ಇಷ್ಟ. ಚಿಕ್ಕ ಮಕ್ಕಳು ರಸ್ತೆಯಲ್ಲಿ ಮಲ್ಲಿಗೆ ಮಾರುತ್ತಿರುವಾಗ ನಾನು ಅದನ್ನು ಖರೀದಿಸಿ ಜಯಾಗೆ ತಂದು ಕೊಡುತ್ತೇನೆ. ಕೆಲವೊಮ್ಮೆ ನಾನು ಆ ಹೂವುಗಳನ್ನು ನನ್ನ ಕಾರಿನಲ್ಲಿ ಇಡುತ್ತೇನೆ. ಏಕೆಂದರೆ ಅವುಗಳು ತುಂಬಾ ಒಳ್ಳೆಯ ಪರಿಮಳ ಹೊಂದಿರುತ್ತವೆ’ ಎಂದರು ಅವರು.

ಇದನ್ನೂ ಓದಿ: ಅಮಿತಾಭ್​ ಬಚ್ಚನ್​ ಕಾಲಿಗೆ ನಮಸ್ಕರಿಸಲು ಬಂದ ರಜನಿಕಾಂತ್; ಬಿಗ್​ ಬಿ ಪ್ರತಿಕ್ರಿಯೆ ಏನು?

‘ನೀವು ಎಂದಾದರೂ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಲು ಅಥವಾ ಹಣವನ್ನು ವಿತ್ ಡ್ರಾ ಮಾಡಲು ಎಟಿಎಂಗೆ ಹೋಗಿದ್ದೀರಾ’ ಎಂದು ಬಿಗ್ ಬಿ ಕೇಳಿದ್ದಾರೆ ಸ್ಪರ್ಧಿ. ಈ ಪ್ರಶ್ನೆಗೆ ಉತ್ತರಿಸಿದ ಬಿಗ್ ಬಿ, ‘ನಾನು ಎಂದಿಗೂ ನನ್ನೊಂದಿಗೆ ಹಣವನ್ನು ತೆಗೆದುಕೊಂಡು ಹೋಗುವುದಿಲ್ಲ ಮತ್ತು ನಾನು ಎಂದಿಗೂ ಎಟಿಎಂಗೆ ಹೋಗಿಲ್ಲ. ಏಕೆಂದರೆ ನಾನು ಅಲ್ಲಿಗೆ ಬಂದಾಗ ಏನು ಮಾಡಬೇಕೆಂದು ನನಗೆ ತಿಳಿದಿಲ್ಲ. ಆದರೆ ಜಯಾ ಬಚ್ಚನ್ ಬಳಿ ಯಾವಾಗಲೂ ನಗದು ಇರುತ್ತದೆ. ನಾನು ಅವರಿಂದ ಹಣವನ್ನು ಕೇಳುತ್ತೇನೆ’ ಎಂದರು ಅಮಿತಾಭ್.

ಅಮಿತಾಭ್ ಬಚ್ಚನ್ ಅವರ ಈ ಉತ್ತರ ಕೇಳಿ ಹಾಟ್ ಸೀಟ್ ಮೇಲೆ ಕುಳಿತಿದ್ದ ಸ್ಪರ್ಧಿ ಹಾಗೂ ಪ್ರೇಕ್ಷಕರು ಕೂಡ ಬೆಚ್ಚಿ ಬಿದ್ದಿದ್ದಾರೆ. ಅಮಿತಾಭ್ ಅವರ ‘ಕೌನ್ ಬನೇಗಾ ಕರೋಡ್ ಪತಿ’ ಶೋ ಬಹಳ ಜನಪ್ರಿಯವಾಗಿದೆ. ಕಳೆದ ಹಲವು ವರ್ಷಗಳಿಂದ ಬಿಗ್ ಬಿ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ವೀಕ್ಷಕರು KBC ಸಂಚಿಕೆಗಳನ್ನು ಸೋನಿ ಟಿವಿಯಲ್ಲಿ ಮತ್ತು OTT ಪ್ಲಾಟ್‌ಫಾರ್ಮ್ ಸೋನಿ ಲೈವ್‌ನಲ್ಲಿ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ