ಮಾಜಿ ಪ್ರಿಯಕರ ರಣಬೀರ್​ ಕಪೂರ್​ ಮದುವೆ ಸಮಯದಲ್ಲಿ ಮುಂಬೈ ತೊರೆದ ದೀಪಿಕಾ; ಸಖತ್​ ಟ್ರೋಲ್​

| Updated By: ಮದನ್​ ಕುಮಾರ್​

Updated on: Apr 14, 2022 | 3:08 PM

Deepika Padukone: ಯಾವ ಕಾರಣಕ್ಕಾಗಿ ದೀಪಿಕಾ ಪಡುಕೋಣೆ ಅವರು ಮುಂಬೈ ತೊರೆದಿದ್ದಾರೆ ಎಂಬುದು ಗೊತ್ತಾಗಿಲ್ಲ. ಅಷ್ಟರಲ್ಲಾಗಲೇ ನೆಟ್ಟಿಗರು ಟ್ರೋಲ್​ ಮಾಡಲು ಆರಂಭಿಸಿದ್ದಾರೆ.

ಮಾಜಿ ಪ್ರಿಯಕರ ರಣಬೀರ್​ ಕಪೂರ್​ ಮದುವೆ ಸಮಯದಲ್ಲಿ ಮುಂಬೈ ತೊರೆದ ದೀಪಿಕಾ; ಸಖತ್​ ಟ್ರೋಲ್​
ರಣಬೀರ್​ ಕಪೂರ್​, ಆಲಿಯಾ ಭಟ್​, ದೀಪಿಕಾ ಪಡುಕೋಣೆ
Follow us on

ಸೆಲೆಬ್ರಿಟಿಗಳಿಗೆ ಟ್ರೋಲ್​ (Troll) ಕಾಟ ತಪ್ಪಿದ್ದಲ್ಲ. ಸದಾ ಕಾಲ ಸಾರ್ವಜನಿಕರ ಕಣ್ಣಿಗೆ ಕಾಣಿಸಿಕೊಳ್ಳುವ ನಟ-ನಟಿಯರು ಎಷ್ಟು ಹುಷಾರಾಗಿದ್ದರೂ ಒಂದಿಲ್ಲೊಂದು ತಪ್ಪು ಕಂಡು ಹಿಡಿದು ಟ್ರೋಲ್​ ಮಾಡಲಾಗುತ್ತದೆ. ಅದರಲ್ಲೂ ಈಗಿನ ಸೋಶಿಯಲ್​ ಮೀಡಿಯಾ ಜಮಾನಾದಲ್ಲಿ ತಾರೆಯರಿಗೆ ಟ್ರೋಲ್​ನದ್ದೇ ಕಿರಿಕಿರಿ. ಕೆಲವೊಮ್ಮೆ ಏನೂ ತಪ್ಪು ಮಾಡದೇ ಇದ್ದರೂ ಕೂಡ ಜನರಿಂದ ನೆಗೆಟಿವ್​ ಕಮೆಂಟ್​ಗಳನ್ನು ಸ್ವೀಕರಿಸಬೇಕಾಗುತ್ತದೆ. ಈಗ ನಟಿ ದೀಪಿಕಾ ಪಡುಕೋಣೆ (Deepika Padukone) ಅವರನ್ನು ಅದೇ ರೀತಿ ಟಾರ್ಗೆಟ್​ ಮಾಡಲಾಗಿದೆ. ಇತ್ತೀಚೆಗೆ ಅವರು ಮುಂಬೈನ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ವಿಡಿಯೋ ಮತ್ತು ಫೋಟೋಗಳನ್ನು ಪಾಪರಾಜಿಗಳು ಸೆರೆ ಹಿಡಿದಿದ್ದಾರೆ. ಅವು ವೈರಲ್​ ಆಗುತ್ತಿದ್ದಂತೆಯೇ ಜನರು ಬಗೆಬಗೆಯಲ್ಲಿ ಕಮೆಂಟ್​ ಮಾಡಲು ಆರಂಭಿಸಿದ್ದಾರೆ. ದೀಪಿಕಾ ಪಡುಕೋಣೆ ಅವರು ಮುಂಬೈ ಬಿಟ್ಟು ಬೇರೆಡೆಗೆ ತೆರಳುತ್ತಿರುವುದಕ್ಕೂ ರಣಬೀರ್​ ಕಪೂರ್​-ಆಲಿಯಾ ಭಟ್​ ಮದುವೆಗೂ (Alia Bhatt Ranbir Kapoor Marriage) ಲಿಂಕ್​ ಇದೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಸದ್ಯ ಈ ವಿಡಿಯೋ ವೈರಲ್​ ಆಗಿದೆ.

ರಣಬೀರ್​ ಕಪೂರ್​ ಮತ್ತು ಆಲಿಯಾ ಭಟ್​ ಅವರು ಇತ್ತೀಚಿನ ವರ್ಷಗಳಲ್ಲಿ ಪರಸ್ಪರ ಪ್ರೀತಿಸಲು ಆರಂಭಿಸಿದ್ದರು. ಈಗ ಎರಡೂ ಕುಟುಂಬದ ಒಪ್ಪಿಗೆ ಮೇರೆಗೆ ಅವರು ಹಸೆಮಣೆ ಏರುತ್ತಿದ್ದಾರೆ. ಇಂದು (ಏ.14) ಮುಂಬೈನಲ್ಲಿ ಅದ್ದೂರಿಯಾಗಿ ಅವರ ವಿವಾಹ ಸಮಾರಂಭ ನಡೆಯುತ್ತಿದೆ. ಈ ಸಂದರ್ಭಕ್ಕೆ ಸರಿಯಾಗಿ ನಟಿ ದೀಪಿಕಾ ಪಡುಕೋಣೆ ಅವರು ಮುಂಬೈ ಬಿಟ್ಟು ಬೇರೆ ಕಡೆಗೆ ತೆರಳಿರುವುದು ಜನರ ಅನುಮಾನಕ್ಕೆ ಕಾರಣ ಆಗಿದೆ.

ರಣಬೀರ್​ ಕಪೂರ್​ ಮತ್ತು ದೀಪಿಕಾ ಪಡುಕೋಣೆ ಅವರು ಒಂದು ಕಾಲದಲ್ಲಿ ಪ್ರೇಮಿಗಳಾಗಿದ್ದರು. ನಂತರ ಅವರ ಸಂಬಂಧ ಬ್ರೇಕಪ್​ನಲ್ಲಿ ಅಂತ್ಯವಾಯ್ತು. ಈಗ ಮಾಜಿ ಪ್ರಿಯಕರನ ಮದುವೆಗೆ ಹೋಗುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿಯೇ ದೀಪಿಕಾ ಪಡುಕೋಣೆ ಅವರು ಮುಂಬೈ ಬಿಟ್ಟು ಬೇರೆ ಊರಿಗೆ ತೆರಳಿದ್ದಾರೆ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ. ದೀಪಿಕಾ ಓರ್ವ ಸ್ಟಾರ್​ ನಟಿ. ಅವರಿಗೆ ಸಿನಿಮಾ ಮಾತ್ರವಲ್ಲದೇ ಹಲವು ಕೆಲಸಗಳು ಇರುತ್ತವೆ. ಆದರೆ ಯಾವ ಕಾರಣಕ್ಕಾಗಿ ಅವರು ಈಗ ಮುಂಬೈನಿಂದ ಹೊರಗೆ ಹೋಗಿದ್ದಾರೆ ಎಂಬುದು ತಿಳಿದು ಬಂದಿಲ್ಲ.

ದೀಪಿಕಾ ಪಡುಕೋಣೆ ಕಡೆಯಿಂದ ಪ್ರತಿಕ್ರಿಯೆ ಬರುವುದಕ್ಕೂ ಮುನ್ನವೇ ಜನರು ಬಗೆಬಗೆಯಲ್ಲಿ ನೆಗೆಟಿವ್​ ಕಮೆಂಟ್​ ಮಾಡಲು ಆರಂಭಿಸಿದ್ದಾರೆ. ‘ರಣಬೀರ್​ ಕಪೂರ್​ ಹೊಸ ಜೀವನ ಕಟ್ಟಿಕೊಳ್ಳುತ್ತಿರುವುದು ದೀಪಿಕಾಗೆ ಇಷ್ಟ ಇಲ್ಲ. ಹೊಟ್ಟೆ ಕಿಚ್ಚಿನಿಂದಾಗಿ ಅವರು ಅವರು ಮುಂಬೈ ಬಿಟ್ಟು ಹೋಗುತ್ತಿದ್ದಾರೆ’ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಈ ರೀತಿಯ ಸಿಲ್ಲಿ ಕಮೆಂಟ್​ಗಳಿಗೆ ಪ್ರತಿಕ್ರಿಯೆ ನೀಡಲು ದೀಪಿಕಾ ಅವರಿಗೆ ಟೈಮ್​ ಇಲ್ಲ. ತಮ್ಮ ಪಾಡಿಗೆ ಅವರು ಕೆಲಸದ ಕಡೆಗೆ ಗಮನ ಹರಿಸಿದ್ದಾರೆ.

ಮಾಜಿ ಬಾಯ್​ಫ್ರೆಂಡ್​ ಮದುವೆ ಸಂದರ್ಭದಲ್ಲಿ ದೀಪಿಕಾ ಪಡುಕೋಣೆ ಅವರು ಸೈಲೆಂಟ್​ ಆಗಿದ್ದಾರೆ. ರಣಬೀರ್​-ಆಲಿಯಾ ವಿವಾಹಕ್ಕೆ ಸಂಬಂಧಿಸಿದಂತೆ ಅವರು ಯಾವುದೇ ಹೇಳಿಕೆ ನೀಡಿಲ್ಲ. ಕೇವಲ ಒಂದೇ ಒಂದು ಲೈಕ್​ ಮೂಲಕ ಅವರು ಪ್ರತಿಕ್ರಿಯಿಸಿದ್ದಾರೆ. ಹೌದು, ‘ಬ್ರಹ್ಮಾಸ್ತ್ರ’ ನಿರ್ದೇಶಕ ಅಯಾನ್​ ಮುಖರ್ಜಿ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಆಲಿಯಾ-ರಣಬೀರ್​ಗೆ ಶುಭಾಶಯ ಕೋರಿ ಒಂದು ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಆ ವಿಡಿಯೋವನ್ನು ದೀಪಿಕಾ ಪಡುಕೋಣೆ ಲೈಕ್​ ಮಾಡಿದ್ದಾರೆ ಅಷ್ಟೇ. ಈ ವಿಚಾರ ಅವರ ಅಭಿಮಾನಿಗಳ ವಲಯದಲ್ಲಿ ಚರ್ಚೆ ಆಗುತ್ತಿದೆ.

ಇದನ್ನೂ ಓದಿ:

ಮದುವೆ ವಿಚಾರ ಖಚಿತಪಡಿಸಿದ ಆಲಿಯಾ ಭಟ್​; ಒಂದೇ ಕಮೆಂಟ್ ಮೂಲಕ ಎಲ್ಲವೂ ಬಹಿರಂಗ

ಮುಂಬೈಗೆ ತೆರಳಿ ಆಲಿಯಾಗೆ ಶುಭ ಹಾರೈಸಲಿದೆ ‘ಆರ್​ಆರ್​ಆರ್​’ ತಂಡ; ಬುಕ್ ಆಯ್ತು ವಿಶೇಷ ವಿಮಾನ