AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾ ವಂಚಕ ಸುಖೇಶ್ ಕುರಿತ ಡಾಕ್ಯುಮೆಂಟರಿ, ನಟಿಯಿಂದ ತಕರಾರು?

Sukesh Chandrashekhar: ಭಾರತದ ಮಹಾನ್ ವಂಚಕ ಸುಖೇಶ್ ಚಂದ್ರಶೇಖರ್ ಕುರಿತು ದೊಡ್ಡ ಒಟಿಟಿಯೊಂದು ಡಾಕ್ಯುಮೆಂಟರಿ ನಿರ್ಮಾಣ ಮಾಡುತ್ತಿದೆ. ಸುಖೇಶ್ ಚಂದ್ರಶೇಖರ್​ಗೆ ಬಲು ಆಪ್ತವಾಗಿದ್ದ ಬಾಲಿವುಡ್ ನಟಿಯನ್ನು ಸಹ ಡಾಕ್ಯುಮೆಂಟರಿಗಾಗಿ ಕೇಳಲಾಗಿದೆ. ಆದರೆ ನಟಿ, ಡಾಕ್ಯುಮೆಂಟರಿಯಲ್ಲಿ ತಮ್ಮ ಪಾತ್ರದ ಬಗ್ಗೆ ತಕರಾರು ಎತ್ತಿದ್ದಾರಂತೆ.

ಮಹಾ ವಂಚಕ ಸುಖೇಶ್ ಕುರಿತ ಡಾಕ್ಯುಮೆಂಟರಿ, ನಟಿಯಿಂದ ತಕರಾರು?
Sukesh Chandrashekhar
ಮಂಜುನಾಥ ಸಿ.
|

Updated on: Apr 27, 2025 | 4:40 PM

Share

ಭಾರತದ (India) ಮಹಾ ವಂಚನ ಸುಖೇಶ್ ಚಂದ್ರಶೇಖರ್ (Sukesh Chandrashekhar) ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿ ದಿನ ದೂಡುತ್ತಿದ್ದಾನೆ. ಭಾರತದ ಟಾಪ್ 1 ಉದ್ಯಮಿಗಳು, ರಾಜಕಾರಣಿಗಳು, ಸಿನಿಮಾ ನಟ-ನಟಿಯರಿಗೆ ಮೋಸ ಮಾಡಿರುವ ಸುಖೇಶ್, ಭಾರತದ ಮಹಾನ್ ವಂಚಕ ಎಂಬ ಬಿರುದು ಪಡೆದಿದ್ದಾನೆ. ಮಹಾ ವಂಚಕ ಸುಖೇಶ್​ನ ಜೀವನ ಒಂದು ರೀತಿ ಸಿನಿಮಾ ಕತೆಯ ಮಾದರಿಯಲ್ಲಿದೆ. ಪದವಿ ಸಹ ಪಡೆಯದ ಸುಖೇಶ್ ಅದು ಹೇಗೆ ಭಾರತದ ಟಾಪ್ ಉದ್ಯಮಿಗಳನ್ನು, ರಾಜಕಾರಣಿಗಳನ್ನು ಮೋಸ ಮಾಡಿ, ನೂರಾರು ಕೋಟಿ ಆಸ್ತಿ ಮಾಡಿದ ಎಂಬುದು ಬಲು ಕುತೂಹಲ ಕೆರಳಿಸುವ ಕತೆ.

ಈಗಾಗಲೇ ಕೆಲವು ಅಪರಾಧಿಗಳು, ಪ್ರಕರಣಗಳ ಬಗ್ಗೆ ಡಾಕ್ಯುಮೆಂಟರಿಗಳು ಭಾರತದಲ್ಲಿ ನಿರ್ಮಾಣವಾಗಿವೆ. ಒಟಿಟಿಗಳು ಹೆಚ್ಚು ಪ್ರಚಲಿತಕ್ಕೆ ಬಂದ ಬಳಿಕವಂತೂ ಕ್ರೈಂ ಡಾಕ್ಯುಮೆಂಟರಿಗಳು ಭಾರತದಲ್ಲಿ ಹೆಚ್ಚಾಗಿವೆ. ಇದೀಗ ಸುಖೇಶ್ ಜೀವನ ಕುರಿತಾಗಿ ಸಹ ಡಾಕ್ಯುಮೆಂಟರಿ ನಿರ್ಮಾಣ ಆಗುತ್ತಿದೆ. ಸುಖೇಶ್ ಜೀವನದ ಹಲವು ಅಂಶಗಳನ್ನು ಈ ಡಾಕ್ಯುಮೆಂಟರಿ ಹೊರಗೆ ಹಾಕಲಿದೆ. ಆದರೆ ಈ ಡಾಕ್ಯುಮೆಂಟರಿಗೆ ಬಾಲಿವುಡ್ ನಟಿಯೂ ಇರಲಿದ್ದಾರೆ ಎನ್ನಲಾಗುತ್ತಿದೆ.

ಜಾಕ್ವೆಲಿನ್ ಫರ್ನಾಂಡೀಸ್, ಸುಖೇಶ್ ಚಂದ್ರಶೇಖರ್​ಗೆ ಬಲು ಆಪ್ತ. ಆತನ ಗೆಳತಿಯೂ ಆಗಿದ್ದ ಜಾಕ್ವೆಲಿನ್ ಫರ್ನಾಂಡೀಸ್, ಸುಖೇಶ್​ನಿಂದ ಕೋಟ್ಯಂತರ ರೂಪಾಯಿ ಹಣ, ಬೆಲೆ ಬಾಳುವ ಐಶಾರಾಮಿ ಕಾರುಗಳು, ಬೆಲೆ ಬಾಳುವ ಆಭರಣ ಇನ್ನೂ ಹಲವಾರು ವಸ್ತುಗಳನ್ನು ಪಡೆದುಕೊಂಡಿದ್ದರು. ಜಾಕ್ವೆಲಿನ್, ಸುಖೇಶ್​ಗೆ ಮುತ್ತುಗಳು ಕೊಡುತ್ತಿರುವ ಹಲವು ಚಿತ್ರಗಳು ವೈರಲ್ ಸಹ ಆಗಿವೆ. ಸುಖೇಶ್ ಪ್ರಕರಣದಲ್ಲಿ ಜಾಕ್ವೆಲಿನ್ ಅನ್ನು ಸಹ ಆರೋಪಿಯನ್ನಾಗಿ ಇಡಿ ಮಾಡಿತ್ತು. ಆದರೆ ಪುಣ್ಯವಶಾತ್ ಜಾಕ್ವೆಲಿನ್ ಜೈಲಿಗೆ ಹೋಗುವುದನ್ನು ತಪ್ಪಿಸಿಕೊಂಡರು.

ಇದನ್ನೂ ಓದಿ:‘ನಿನ್ನ ಹೊಟ್ಟೆಯಲ್ಲಿ ನಮ್ಮ ಮಗಳಾಗಿ ಬರುತ್ತಾಳೆ’; ತಾಯಿ ನಿಧನದ ಬಗ್ಗೆ ಜಾಕ್ವೆಲಿನ್​ಗೆ ಮುಕೇಶ್ ಪತ್ರ

ಇದೀಗ ಡಾಕ್ಯುಮೆಂಟರಿ ನಿರ್ಮಾಣ ಮಾಡುತ್ತಿರುವ ಪ್ರತಿಷ್ಠಿತ ಒಟಿಟಿ ವೇದಿಕೆಯು, ಜಾಕ್ವೆಲಿನ್ ಫರ್ನಾಂಡೀಸ್ ಅನ್ನು ಸಹ ಸಂಪರ್ಕ ಮಾಡಿದ್ದು, ಡಾಕ್ಯುಮೆಂಟರಿಗಾಗಿ, ಸುಖೇಶ್​ ಬಗ್ಗೆ ಮಾಹಿತಿ ನೀಡುವಂತೆ ಮನವಿ ಮಾಡಿದೆ. ಜಾಕ್ವೆಲಿನ್, ಈ ಬಗ್ಗೆ ತುಸು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದು, ಡಾಕ್ಯುಮೆಂಟರಿಯಲ್ಲಿ ತಮ್ಮನ್ನು ಹೇಗೆ ತೋರಿಸಲಾಗುತ್ತದೆ ಎಂಬ ಬಗ್ಗೆ ಆತಂಕಗೊಂಡಿದ್ದಾರಂತೆ. ಇದೇ ಕಾರಣಕ್ಕೆ ಡಾಕ್ಯುಮೆಂಟರಿ ನಿರ್ಮಾಣ ಮಾಡುತ್ತಿರುವವರಿಗೆ ಮುಂಚಿತವಾಗಿ ಡಾಕ್ಯುಮೆಂಟರಿ ತೋರಿಸುವಂತೆ. ತಮ್ಮ ಬಗ್ಗೆ ಋಣಾತ್ಮಕವಾಗಿ ತೋರಿಸದೇ ಇರುವಂತೆ ಒತ್ತಾಯ ಮಾಡಿದ್ದಾರೆ. ಅಲ್ಲದೆ, ಆ ವಿಷಯ ಬೇಡ, ಈ ವಿಷಯ ಬೇಡ ಎಂದು ತಕರಾರು ಸಹ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಡಾಕ್ಯುಮೆಂಟರಿ ನಿರ್ಮಾಣ ತಡವಾಗುತ್ತಿದೆಯಂತೆ.

ಜಾಕ್ವೆಲಿನ್ ಫರ್ನಾಂಡೀಸ್ ಹಾಗೂ ಸುಖೇಶ್ ಪರಸ್ಪರ ರಿಲೇಶನ್​ನಲ್ಲಿದ್ದರು. ಈಗ ಸುಖೇಶ್, ಜೈಲಿನಿಂದ ಜಾಕ್ವೆಲಿನ್ ಫರ್ನಾಂಡೀಸ್​ಗೆ ಪತ್ರಗಳನ್ನು ಬರೆಯುತ್ತಿರುತ್ತಾರೆ. ಇತ್ತೀಚೆಗೆ ಜಾಕ್ವೆಲಿನ್ ಫರ್ನಾಂಡೀಸ್​ರ ತಾಯಿ ನಿಧನ ಹೊಂದಿದಾಗ ಸಂತಾಪ ವ್ಯಕ್ತಡಿಸಿದ್ದ ಸುಖೇಶ್, ಜಾಕ್ವೆಲಿನ್ ಫರ್ನಾಂಡೀಸ್ ತಾಯಿಗಾಗಿ ಬಾಲಿಯಲ್ಲಿ ಒಂದು ಉದ್ಯಾನವನ್ನು ಡೆಡಿಕೇಟ್ ಮಾಡುವುದಾಗಿ, ಆ ಉದ್ಯಾನದಲ್ಲಿ ಜಾಕ್ವೆಲಿನ್ ತಾಯಿಗೆ ಇಷ್ಟವಾದ ಎಲ್ಲ ಹೂವುಗಳು ಇರುವಂತೆ ನೋಡಿಕೊಳ್ಳುವುದಾಗಿ ಹೇಳಿದ್ದ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ