AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಮಿರ್ ಖಾನ್-ರಣ್​ಬೀರ್ ಕಪೂರ್ ಜಗಳ, ಮಧ್ಯಸ್ಥಿಕೆ ವಹಿಸಿದ ರೋಹಿತ್ ಶರ್ಮಾ

Ranbir Kapoor vs Aamir Khan: ಬಾಲಿವುಡ್ ಸ್ಟಾರ್ ನಟರಾದ ರಣ್​ಬೀರ್ ಕಪೂರ್ ಮತ್ತು ಆಮಿರ್ ಖಾನ್ ಅವರು ಪಾರ್ಟಿಯೊಂದರಲ್ಲಿ ಜೋರಾಗಿ ಜಗಳ ಮಾಡಿಕೊಂಡಿದ್ದಾರೆ. ಪರಸ್ಪರರ ಬಗ್ಗೆ ನಿಂದನೆ, ಅವಮಾನ ಮಾಡಿಕೊಂಡಿರುವ ಜೊತೆಗೆ ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದಾರೆ. ಆದರೆ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಮಧ್ಯ ಪ್ರವೇಶಿಸಿ ಅವರನ್ನು ತಡೆದಿದ್ದಾರೆ. ಅಷ್ಟಕ್ಕೂ ಇಬ್ಬರು ನಟರ ನಡುವೆ ಜಗಳ ಏಕಾಯ್ತು?

ಆಮಿರ್ ಖಾನ್-ರಣ್​ಬೀರ್ ಕಪೂರ್ ಜಗಳ, ಮಧ್ಯಸ್ಥಿಕೆ ವಹಿಸಿದ ರೋಹಿತ್ ಶರ್ಮಾ
Aamir Ranbir Rohit
ಮಂಜುನಾಥ ಸಿ.
|

Updated on: Mar 12, 2025 | 3:02 PM

Share

ಬಾಲಿವುಡ್​ನ ಸ್ಟಾರ್ ನಟರಾದ ಆಮಿರ್ ಖಾನ್ ಮತ್ತು ರಣ್​ಬೀರ್ ಕಪೂರ್ ಪರಸ್ಪರ ಜಗಳ ಮಾಡಿಕೊಂಡಿದ್ದಾರೆ. ಆಮಿರ್ ಖಾನ್, ರಣ್​ಬೀರ್ ಕಪೂರ್ ಅವರಿಗೆ ಪಾರ್ಟಿಯೊಂದರಲ್ಲಿ ಅವಮಾನ ಮಾಡಿದ್ದಾರೆ. ರಣ್​ಬೀರ್ ಕಪೂರ್ ಸಹ, ಹಿರಿಯ ನಟ ಎಂಬುದನ್ನೂ ಸಹ ನೋಡದೆ ಜಗಳ ಮಾಡಿರುವುದು ಮಾತ್ರವೇ ಅಲ್ಲದೆ, ಕೈ-ಕೈ ಮಿಲಾಯಿಸಲು ಮುಂದಾಗಿದ್ದಾರೆ. ಆದರೆ ಪಾರ್ಟಿಯಲ್ಲಿ ಹಾಜರಿದ್ದ ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಇಬ್ಬರ ಮಧ್ಯೆ ಬಂದು ಜಗಳವನ್ನು ತಡೆದಿದ್ದಾರೆ! ಅರೇ ಹೀಗೇಕಾಯ್ತು ಎಂದು ಗಾಬರಿ ಪಡಬೇಡಿ, ಏಕೆಂದರೆ ಇದೆಲ್ಲ ನಡೆದಿರುವುದು ಜಾಹೀರಾತಿನಲ್ಲಿ, ನಿಜ ಜೀವನದಲ್ಲಿ ಅಲ್ಲ.

ಐಪಿಎಲ್ ಹತ್ತಿರ ಬಂದಿದ್ದು ಐಪಿಎಲ್​ಗೆ ಸಂಬಂಧಿಸಿದ ತಮಾಷೆಯ ಜಾಹೀರಾತುಗಳು ಒಂದೊಂದಾಗಿ ಬಿಡುಗಡೆ ಆಗುತ್ತಿವೆ. ಡ್ರೀಮ್ಸ್ 11 ಇದೀಗ ಹೊಸದೊಂದು ಜಾಹೀರಾತು ಬಿಡುಗಡೆ ಮಾಡಿದೆ. ಈ ಜಾಹೀರಾತಿನಲ್ಲಿ ಆಮಿರ್ ಖಾನ್, ರಣ್​ಬೀರ್ ಕಪೂರ್ ಸೇರಿದಂತೆ ಹಲವಾರು ಮಂದಿ ಕ್ರಿಕೆಟಿಗರು ನಟಿಸಿದ್ದಾರೆ. ಇಂದಷ್ಟೆ ಜಾಹೀರಾತು ಬಿಡುಗಡೆ ಆಗಿದ್ದು, ಜಾಹೀರಾತು ಬಹಳ ಮಜವಾಗಿದೆ. ಅದರಲ್ಲೂ ಆಮಿರ್ ಖಾನ್ ಮತ್ತು ರಣ್​ಬೀರ್ ಕಪೂರ್ ಅವರುಗಳ ತಮಾಷೆಯಂತೂ ಸಖತ್ ಆಗಿದೆ.

ರಿಷಬ್ ಪಂತ್, ತಮ್ಮ ಜೊತೆ ಫೋಟೊ ಕೇಳುವ ಬದಲಿಗೆ ರಣ್​ಬೀರ್ ಕಪೂರ್ ಜೊತೆಗೆ ಫೋಟೊ ಕೇಳಿದಾಗ ಸಿಟ್ಟಾಗುವ ಆಮಿರ್ ಖಾನ್, ರಣ್​ಬೀರ್ ಕಪೂರ್ ಅನ್ನು ರಣ್​ವೀರ್ ಸಿಂಗ್ ಎಂದು ಕರೆಯುತ್ತಾರೆ. ಅದಕ್ಕೆ ಸಿಟ್ಟಾಗುವ ರಣ್​ಬೀರ್ ಕಪೂರ್, ಹೋಗಿ ಹಾರ್ದಿಕ್ ಪಾಂಡ್ಯಾ ಬಳಿ ಇವರನ್ನು ನಾನು ಸಲ್ಮಾನ್ ಖಾನ್ ಎಂದರೆ ಇವರಿಗೆ ಸಿಟ್ಟು ಬರುವುದಿಲ್ಲವೇ ಎನ್ನುತ್ತಾರೆ. ಅದಕ್ಕೆ ಆಮಿರ್, ನನ್ನನ್ನು ಸಲ್ಮಾನ್ ಅನ್ನು ಪರ್ವಾಗಿಲ್ಲ, ಆದರೆ ಅರ್ಬಾಜ್ ಖಾನ್ ಎನ್ನಬೇಡ ಎಂದು ತಮಾಷೆ ಮಾಡುತ್ತಾರೆ. ನೋಡಿದರೆ ಅರ್ಬಾಜ್ ಖಾನ್ ಅಲ್ಲಿಯೇ ಇರುತ್ತಾರೆ. ಹೀಗೆ ಒಂದರ ಹಿಂದೊಂದು ಕಾಮಿಡಿ ಪಂಚ್​ಗಳು ಹಲವು ಈ ಜಾಹೀರಾತಿನಲ್ಲಿ ಇವೆ.

ಇದನ್ನೂ ಓದಿ:ಮುಂದಿನ ವಿಶ್ವಕಪ್​ಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಇಲ್ಲ..!

ಜಾಹೀರಾತಿನಲ್ಲಿ ಆಮಿರ್ ಖಾನ್, ರಣ್​ಬೀರ್ ಕಪೂರ್, ಜಾಕಿ ಶ್ರಾಫ್, ಅರ್ಬಾಜ್ ಖಾನ್ ಕ್ರಿಕೆಟಿಗರಾದ ರೋಹಿತ್ ಶರ್ಮಾ, ರಿಷಬ್ ಪಂತ್, ರವಿಚಂದ್ರನ್ ಅಶ್ವಿನ್, ಹಾರ್ದಿಕ್ ಪಾಂಡ್ಯಾ, ಜಸ್ಪ್ರಿತ್ ಬುಮ್ರಾ ಅವರುಗಳು ನಟಿಸಿದ್ದಾರೆ. ರಣ್​ಬೀರ್ ಮತ್ತು ಆಮಿರ್ ನಡುವಿನ ಜಗಳ ತಾರಕಕ್ಕೆ ಹೋದಾಗ ಮಧ್ಯ ಪ್ರವೇಶಿಸುವ ರೋಹಿತ್ ಶರ್ಮಾ, ಜಗಳ ನಿಲ್ಲಿಸುತ್ತಾರೆ. ಆದರೆ ಆಮಿರ್, ಈ ಜಗಳ ಗ್ರೌಂಡ್​ನಲ್ಲಿ ಮುಂದುವರೆಯಲಿದೆ, ನಿನ್ನ ಟೀಂ ನೀನು ಮಾಡಿಕೊ, ನನ್ನ ಟೀಂ ನಾನು ಮಾಡಿಕೊಳ್ಳುತ್ತೇನೆ ಯಾರು ಗೆಲ್ಲುತ್ತಾರೋ ನೋಡೋಣ ಎಂದು ಸವಾಲು ಹಾಕಿದ್ದಾರೆ. ಈ ಜಾಹೀರಾತು ಮುಂದುವರೆಯುತ್ತದೆಯೋ ಕಾದು ನೋಡಬೇಕು. ಹಲವಾರು ಸೆಲೆಬ್ರಿಟಿಗಳು ಈ ಜಾಹೀರಾತನ್ನು ಹಂಚಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ
ಬೆಂಗಳೂರು ಪೊಲೀಸರಿಂದ ಆಪರೇಷನ್ ಮುಕ್ತ: ಬಾಂಗ್ಲಾದೇಶಿಯರ ಗಡಿಪಾರಿಗೆ ಕ್ರಮ
ಬೆಂಗಳೂರು ಪೊಲೀಸರಿಂದ ಆಪರೇಷನ್ ಮುಕ್ತ: ಬಾಂಗ್ಲಾದೇಶಿಯರ ಗಡಿಪಾರಿಗೆ ಕ್ರಮ
ಗೃಹಲಕ್ಷ್ಮಿಯರಿಗೆ ಬಿಗ್ ಅಪ್‌ಡೇಟ್: ಮನೆ-ಮನೆಗೆ ಭೇಟಿ ನೀಡಿ ಮರುಪರಿಶೀಲನೆ
ಗೃಹಲಕ್ಷ್ಮಿಯರಿಗೆ ಬಿಗ್ ಅಪ್‌ಡೇಟ್: ಮನೆ-ಮನೆಗೆ ಭೇಟಿ ನೀಡಿ ಮರುಪರಿಶೀಲನೆ
ಶೌಚಾಲಯದಲ್ಲೇ ಅಡುಗೆ, ಊಟ! ಕೋಲಾರ ಬಸ್ ನಿಲ್ದಾಣದಲ್ಲಿ ಅನಾಗರಿಕ ಕೃತ್ಯ
ಶೌಚಾಲಯದಲ್ಲೇ ಅಡುಗೆ, ಊಟ! ಕೋಲಾರ ಬಸ್ ನಿಲ್ದಾಣದಲ್ಲಿ ಅನಾಗರಿಕ ಕೃತ್ಯ