AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲ್ಮಾನ್ ಖಾನ್​ ಭದ್ರತೆಗೆ ವರ್ಷಕ್ಕೆ ಖರ್ಚಾಗೋದು ಎಷ್ಟು ಕೋಟಿ ರೂಪಾಯಿ?

ಒಟ್ಟೂ ಆರು ಭದ್ರತಾ ವಿಭಾಗ ಇದೆ. X, Y, Y+, Z, Z+ ಮತ್ತು SPG. ಪ್ರಧಾನಿ ಮತ್ತು ಅವರ ಪರಿವಾರದ ಭದ್ರತೆಯ ಹೊಣೆಯನ್ನು ಎಸ್‌ಪಿಜಿ ಹೊತ್ತುಕೊಂಡಿದೆ. ಇದು ಸಾಕಷ್ಟು ಬಿಗಿ ಭದ್ರತೆ ಆಗಿರುತ್ತದೆ. ಸರ್ಕಾರವು ಯಾವುದೇ ವ್ಯಕ್ತಿಗೆ ಹೆಚ್ಚುವರಿ ಭದ್ರತೆಯನ್ನು ಕೊಡಬಹುದು.

ಸಲ್ಮಾನ್ ಖಾನ್​ ಭದ್ರತೆಗೆ ವರ್ಷಕ್ಕೆ ಖರ್ಚಾಗೋದು ಎಷ್ಟು ಕೋಟಿ ರೂಪಾಯಿ?
ಸಲ್ಮಾನ್
 ಶ್ರೀಲಕ್ಷ್ಮೀ ಎಚ್
| Edited By: |

Updated on:Oct 19, 2024 | 7:35 AM

Share

ಎನ್‌ಸಿಪಿ ನಾಯಕ ಬಾಬಾ ಸಿದ್ಧಿಕಿ ಹತ್ಯೆಯ ನಂತರ ನಟ ಸಲ್ಮಾನ್ ಖಾನ್‌ಗೆ ವೈ+ ಭದ್ರತೆ ಒದಗಿಸಲಾಗಿದೆ. ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​ನವರು ಬಾಬಾ ಸಿದ್ಧಿಕಿಯ ಹತ್ಯೆಯ ಹೊಣೆ ಹೊತ್ತುಕೊಂಡಿದ್ದಾರೆ. ಸಲ್ಮಾನ್ ಖಾನ್ ಜೊತೆ ಒಳ್ಳೆಯ ಗೆಳೆತನ ಹೊಂದಿದ ಕಾರಣಕ್ಕೆ ಈ ಕೊಲೆ ನಡೆದಿದೆ. ಇದರ ಬೆನ್ನಲ್ಲೇ, ಬಾಂದ್ರಾದಲ್ಲಿರುವ ಸಲ್ಮಾನ್ ಮತ್ತು ಅವರ ಗ್ಯಾಲಾಕ್ಸಿ ಅಪಾರ್ಟ್‌ಮೆಂಟ್ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸಲ್ಮಾನ್ ಭದ್ರತೆಗಾಗಿ ವ್ಯಯಿಸಿರುವ ಹಣವೇ ಬೆಚ್ಚಿ ಬೀಳಿಸುವಂತಿದೆ.

ಒಟ್ಟೂ ಆರು ಭದ್ರತಾ ವಿಭಾಗ ಇದೆ. X, Y, Y+, Z, Z+ ಮತ್ತು SPG. ಪ್ರಧಾನಿ ಮತ್ತು ಅವರ ಪರಿವಾರದ ಭದ್ರತೆಯ ಹೊಣೆಯನ್ನು ಎಸ್‌ಪಿಜಿ ಹೊತ್ತುಕೊಂಡಿದೆ. ಇದು ಸಾಕಷ್ಟು ಬಿಗಿ ಭದ್ರತೆ ಆಗಿರುತ್ತದೆ. ಸರ್ಕಾರವು ಯಾವುದೇ ವ್ಯಕ್ತಿಗೆ ಹೆಚ್ಚುವರಿ ಭದ್ರತೆಯನ್ನು ಕೊಡಬಹುದು. ಆ ಅಧಿಕಾರವನ್ನು ಸರ್ಕಾರ ಹೊಂದಿದೆ.

X ವರ್ಗದ ಭದ್ರತೆಗೆ ಓರ್ವ ಬಂದೂಕುಧಾರಿ ಮಾತ್ರ ಇರುತ್ತಾನೆ. Y ವರ್ಗದವರಿಗೆ ಇಬ್ಬರು ಬಂದೂಕುಧಾರಿಗಳು ಇರುತ್ತಾರೆ. Y+ ಅಂದರೆ ಸಲ್ಮಾನ್ ಖಾನ್​ಗೆ ನೀಡಿರುವ ಭದ್ರತೆಯ ಅಡಿಯಲ್ಲಿ 11 ಭದ್ರತಾ ಸಿಬ್ಬಂದಿ ಇರುತ್ತಾರೆ. ಇಬ್ಬರು ಪೊಲೀಸ್ ಅಧಿಕಾರಿಗಳು ಮತ್ತು ಒಬ್ಬರು ಮನೆಯ ಭದ್ರತೆಗಾಗಿ ಇರುತ್ತಾರೆ. ಸಲ್ಮಾನ್ ಖಾನ್​ ಎಲ್ಲೇ ಹೋದರೂ ಇಷ್ಟು ಮಂದಿ ಭದ್ರತೆಗೆ ಇರುತ್ತಾರೆ ಮತ್ತು ನಿತ್ಯವೂ ಆ ಭದ್ರತಾ ಸಿಬ್ಬಂದಿ ಬದಲಾಗುತ್ತಾ ಇರುತ್ತಾರೆ.

‘ಎಬಿಪಿ ಲೈವ್’ ವರದಿ ಪ್ರಕಾರ ಸಲ್ಮಾನ್ ಖಾನ್ ಭದ್ರತೆಯ ವೆಚ್ಚ ಕೋಟಿಗಟ್ಟಲೆ ಇದೆ. ವೈ ಪ್ಲಸ್ ಭದ್ರತೆಗೆ ವರ್ಷಕ್ಕೆ ಸುಮಾರು 3 ಕೋಟಿ ರೂಪಾಯಿ ಖರ್ಚಾಗುತ್ತದೆ ಎನ್ನಲಾಗಿದೆ. ಏಪ್ರಿಲ್ ತಿಂಗಳಿನಲ್ಲಿ ಬಾಂದ್ರಾದಲ್ಲಿರುವ ಸಲ್ಮಾನ್ ಮನೆಯ ಹೊರಗೆ ಶೂಟಿಂಗ್ ನಡೆದಿತ್ತು. ಅಂದಿನಿಂದ, ಅದರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇದೀಗ ಬಾಬಾ ಸಿದ್ದಿಕಿ ಹತ್ಯೆ ಬಳಿಕ ಸಲ್ಮಾನ್ ಭದ್ರತೆಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ.

ಇದನ್ನೂ ಓದಿ: ‘ಸಲ್ಮಾನ್ ಖಾನ್ ತಿರುಗೇಟು ನೀಡಬೇಕು’: ಲಾರೆನ್ಸ್ ಬಿಷ್ಣೋಯ್ ವಿಚಾರಕ್ಕೆ ತಲೆ ಹಾಕಿದ ಆರ್​ಜಿವಿ

ಸಲ್ಮಾನ್ ಈ ಮೊದಲು ಭದ್ರತೆ ಬಗ್ಗೆ ಮಾತನಾಡಿದ್ದರು. ‘ಇನ್​ಸೆಕ್ಯೂರಿಟಿಗಿಂತ ಸೆಕ್ಯುರಿಟಿ ಉತ್ತಮ. ಭದ್ರತೆ ಇದೆ. ಈಗ ಮೊದಲಿನಂತೆ ಬೈಕ್ ರೈಡ್ ಮಾಡೋಕೆ ಆಗಲ್ಲ. ಬೇಕಾದಲ್ಲಿ ಹೊಗೋಕೆ ಆಗಲ್ಲ. ನಾನು ಟ್ರಾಫಿಕ್​ನಲ್ಲಿದ್ದಾಗ ಸಾಕಷ್ಟು ಭದ್ರತೆ ಇರುತ್ತದೆ. ಇದರಿಂದ ಜನರಿಗೆ ತೊಂದರೆ ಆಗುತ್ತದೆ. ಸಾಕಷ್ಟು ಬೆದರಿಕೆ ಇರುವುದರಿಂದ ಈ ರೀತಿಯ ಭದ್ರತೆ’ ಎಂದಿದ್ದರು ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:31 pm, Thu, 17 October 24

Follow Us
ಟಿವಿ9 ವಾರ್ಷಿಕ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಸ್ಫೂರ್ತಿದಾಯಕ ಭಾಷಣ
ಟಿವಿ9 ವಾರ್ಷಿಕ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಸ್ಫೂರ್ತಿದಾಯಕ ಭಾಷಣ
ಪ್ರಧಾನಿ ಮೋದಿಗೆ ಮೈ ಹೋಮ್ ಗ್ರೂಪ್ ಚೇರ್ಮನ್ ರಾಮೇಶ್ವರ ರಾವ್ ಸನ್ಮಾನ
ಪ್ರಧಾನಿ ಮೋದಿಗೆ ಮೈ ಹೋಮ್ ಗ್ರೂಪ್ ಚೇರ್ಮನ್ ರಾಮೇಶ್ವರ ರಾವ್ ಸನ್ಮಾನ
ಪ್ರಧಾನಿ ಮೋದಿ ನಾಯಕತ್ವದಿಂದ ಇಡೀ ಜಗತ್ತು ಭಾರತವನ್ನ ಗೌರವದಿಂದ ಕಾಣುತ್ತಿದೆ
ಪ್ರಧಾನಿ ಮೋದಿ ನಾಯಕತ್ವದಿಂದ ಇಡೀ ಜಗತ್ತು ಭಾರತವನ್ನ ಗೌರವದಿಂದ ಕಾಣುತ್ತಿದೆ
ಒಂದು ಕ್ಷಿಪಣಿ ಜಾಗತಿಕ ಮಾರುಕಟ್ಟೆಗಳನ್ನೇ ಅಸ್ತವ್ಯಸ್ತಗೊಳಿಸುತ್ತಿದೆ
ಒಂದು ಕ್ಷಿಪಣಿ ಜಾಗತಿಕ ಮಾರುಕಟ್ಟೆಗಳನ್ನೇ ಅಸ್ತವ್ಯಸ್ತಗೊಳಿಸುತ್ತಿದೆ
ಸಾರ್ವಜನಿಕವಾಗಿ ಪತ್ನಿಯನ್ನ ಗಂಡ ಹತ್ಯೆ ಮಾಡಿದ್ಯಾಕೆ? ಅಂತಹ ದ್ವೇಷ ಏನಿತ್ತು
ಸಾರ್ವಜನಿಕವಾಗಿ ಪತ್ನಿಯನ್ನ ಗಂಡ ಹತ್ಯೆ ಮಾಡಿದ್ಯಾಕೆ? ಅಂತಹ ದ್ವೇಷ ಏನಿತ್ತು
ಕುವೈತ್​​ನಲ್ಲಿ ಇರಾನ್​ನಿಂದ ಮತ್ತೊಂದು ಯುದ್ಧವಿಮಾನ ಪತನ; ವಿಡಿಯೋ ವೈರಲ್
ಕುವೈತ್​​ನಲ್ಲಿ ಇರಾನ್​ನಿಂದ ಮತ್ತೊಂದು ಯುದ್ಧವಿಮಾನ ಪತನ; ವಿಡಿಯೋ ವೈರಲ್
PM Modi Speech in WITT Live: ಟಿವಿ9​​ ಶೃಂಗಸಭೆ; ಪ್ರಧಾನಿ ಮೋದಿ ಭಾಷಣ
PM Modi Speech in WITT Live: ಟಿವಿ9​​ ಶೃಂಗಸಭೆ; ಪ್ರಧಾನಿ ಮೋದಿ ಭಾಷಣ
ಬಾಗಲಕೋಟೆ ಬೈ ಎಲೆಕ್ಷನ್ ಕಾಂಗ್ರೆಸ್ ಟಿಕೆಟ್ ಸೀಕ್ರೆಟ್ ಬಿಚ್ಚಿಟ್ಟ ಸಿಎಂ
ಬಾಗಲಕೋಟೆ ಬೈ ಎಲೆಕ್ಷನ್ ಕಾಂಗ್ರೆಸ್ ಟಿಕೆಟ್ ಸೀಕ್ರೆಟ್ ಬಿಚ್ಚಿಟ್ಟ ಸಿಎಂ
ಮುತ್ತಪ್ಪ ರೈ ಪುತ್ರ ರಿಕ್ಕಿ ರೈನಿಂದಲೇ ಕಾರ್ ಡ್ರೈವಿಂಗ್:
ಮುತ್ತಪ್ಪ ರೈ ಪುತ್ರ ರಿಕ್ಕಿ ರೈನಿಂದಲೇ ಕಾರ್ ಡ್ರೈವಿಂಗ್:
ಚಿನ್ನ-ಬೆಳ್ಳಿ ದರ ಏರಿಳಿತ, ಹೂಡಿಕೆ ಬಗ್ಗೆ ಆರ್ಥಿಕ ತಜ್ಞ ಮಹತ್ವದ ಮಾಹಿತಿ
ಚಿನ್ನ-ಬೆಳ್ಳಿ ದರ ಏರಿಳಿತ, ಹೂಡಿಕೆ ಬಗ್ಗೆ ಆರ್ಥಿಕ ತಜ್ಞ ಮಹತ್ವದ ಮಾಹಿತಿ