AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲ್ಮಾನ್ ಖಾನ್​ ಭದ್ರತೆಗೆ ವರ್ಷಕ್ಕೆ ಖರ್ಚಾಗೋದು ಎಷ್ಟು ಕೋಟಿ ರೂಪಾಯಿ?

ಒಟ್ಟೂ ಆರು ಭದ್ರತಾ ವಿಭಾಗ ಇದೆ. X, Y, Y+, Z, Z+ ಮತ್ತು SPG. ಪ್ರಧಾನಿ ಮತ್ತು ಅವರ ಪರಿವಾರದ ಭದ್ರತೆಯ ಹೊಣೆಯನ್ನು ಎಸ್‌ಪಿಜಿ ಹೊತ್ತುಕೊಂಡಿದೆ. ಇದು ಸಾಕಷ್ಟು ಬಿಗಿ ಭದ್ರತೆ ಆಗಿರುತ್ತದೆ. ಸರ್ಕಾರವು ಯಾವುದೇ ವ್ಯಕ್ತಿಗೆ ಹೆಚ್ಚುವರಿ ಭದ್ರತೆಯನ್ನು ಕೊಡಬಹುದು.

ಸಲ್ಮಾನ್ ಖಾನ್​ ಭದ್ರತೆಗೆ ವರ್ಷಕ್ಕೆ ಖರ್ಚಾಗೋದು ಎಷ್ಟು ಕೋಟಿ ರೂಪಾಯಿ?
ಸಲ್ಮಾನ್
 ಶ್ರೀಲಕ್ಷ್ಮೀ ಎಚ್
| Edited By: |

Updated on:Oct 19, 2024 | 7:35 AM

Share

ಎನ್‌ಸಿಪಿ ನಾಯಕ ಬಾಬಾ ಸಿದ್ಧಿಕಿ ಹತ್ಯೆಯ ನಂತರ ನಟ ಸಲ್ಮಾನ್ ಖಾನ್‌ಗೆ ವೈ+ ಭದ್ರತೆ ಒದಗಿಸಲಾಗಿದೆ. ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​ನವರು ಬಾಬಾ ಸಿದ್ಧಿಕಿಯ ಹತ್ಯೆಯ ಹೊಣೆ ಹೊತ್ತುಕೊಂಡಿದ್ದಾರೆ. ಸಲ್ಮಾನ್ ಖಾನ್ ಜೊತೆ ಒಳ್ಳೆಯ ಗೆಳೆತನ ಹೊಂದಿದ ಕಾರಣಕ್ಕೆ ಈ ಕೊಲೆ ನಡೆದಿದೆ. ಇದರ ಬೆನ್ನಲ್ಲೇ, ಬಾಂದ್ರಾದಲ್ಲಿರುವ ಸಲ್ಮಾನ್ ಮತ್ತು ಅವರ ಗ್ಯಾಲಾಕ್ಸಿ ಅಪಾರ್ಟ್‌ಮೆಂಟ್ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸಲ್ಮಾನ್ ಭದ್ರತೆಗಾಗಿ ವ್ಯಯಿಸಿರುವ ಹಣವೇ ಬೆಚ್ಚಿ ಬೀಳಿಸುವಂತಿದೆ.

ಒಟ್ಟೂ ಆರು ಭದ್ರತಾ ವಿಭಾಗ ಇದೆ. X, Y, Y+, Z, Z+ ಮತ್ತು SPG. ಪ್ರಧಾನಿ ಮತ್ತು ಅವರ ಪರಿವಾರದ ಭದ್ರತೆಯ ಹೊಣೆಯನ್ನು ಎಸ್‌ಪಿಜಿ ಹೊತ್ತುಕೊಂಡಿದೆ. ಇದು ಸಾಕಷ್ಟು ಬಿಗಿ ಭದ್ರತೆ ಆಗಿರುತ್ತದೆ. ಸರ್ಕಾರವು ಯಾವುದೇ ವ್ಯಕ್ತಿಗೆ ಹೆಚ್ಚುವರಿ ಭದ್ರತೆಯನ್ನು ಕೊಡಬಹುದು. ಆ ಅಧಿಕಾರವನ್ನು ಸರ್ಕಾರ ಹೊಂದಿದೆ.

X ವರ್ಗದ ಭದ್ರತೆಗೆ ಓರ್ವ ಬಂದೂಕುಧಾರಿ ಮಾತ್ರ ಇರುತ್ತಾನೆ. Y ವರ್ಗದವರಿಗೆ ಇಬ್ಬರು ಬಂದೂಕುಧಾರಿಗಳು ಇರುತ್ತಾರೆ. Y+ ಅಂದರೆ ಸಲ್ಮಾನ್ ಖಾನ್​ಗೆ ನೀಡಿರುವ ಭದ್ರತೆಯ ಅಡಿಯಲ್ಲಿ 11 ಭದ್ರತಾ ಸಿಬ್ಬಂದಿ ಇರುತ್ತಾರೆ. ಇಬ್ಬರು ಪೊಲೀಸ್ ಅಧಿಕಾರಿಗಳು ಮತ್ತು ಒಬ್ಬರು ಮನೆಯ ಭದ್ರತೆಗಾಗಿ ಇರುತ್ತಾರೆ. ಸಲ್ಮಾನ್ ಖಾನ್​ ಎಲ್ಲೇ ಹೋದರೂ ಇಷ್ಟು ಮಂದಿ ಭದ್ರತೆಗೆ ಇರುತ್ತಾರೆ ಮತ್ತು ನಿತ್ಯವೂ ಆ ಭದ್ರತಾ ಸಿಬ್ಬಂದಿ ಬದಲಾಗುತ್ತಾ ಇರುತ್ತಾರೆ.

‘ಎಬಿಪಿ ಲೈವ್’ ವರದಿ ಪ್ರಕಾರ ಸಲ್ಮಾನ್ ಖಾನ್ ಭದ್ರತೆಯ ವೆಚ್ಚ ಕೋಟಿಗಟ್ಟಲೆ ಇದೆ. ವೈ ಪ್ಲಸ್ ಭದ್ರತೆಗೆ ವರ್ಷಕ್ಕೆ ಸುಮಾರು 3 ಕೋಟಿ ರೂಪಾಯಿ ಖರ್ಚಾಗುತ್ತದೆ ಎನ್ನಲಾಗಿದೆ. ಏಪ್ರಿಲ್ ತಿಂಗಳಿನಲ್ಲಿ ಬಾಂದ್ರಾದಲ್ಲಿರುವ ಸಲ್ಮಾನ್ ಮನೆಯ ಹೊರಗೆ ಶೂಟಿಂಗ್ ನಡೆದಿತ್ತು. ಅಂದಿನಿಂದ, ಅದರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇದೀಗ ಬಾಬಾ ಸಿದ್ದಿಕಿ ಹತ್ಯೆ ಬಳಿಕ ಸಲ್ಮಾನ್ ಭದ್ರತೆಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ.

ಇದನ್ನೂ ಓದಿ: ‘ಸಲ್ಮಾನ್ ಖಾನ್ ತಿರುಗೇಟು ನೀಡಬೇಕು’: ಲಾರೆನ್ಸ್ ಬಿಷ್ಣೋಯ್ ವಿಚಾರಕ್ಕೆ ತಲೆ ಹಾಕಿದ ಆರ್​ಜಿವಿ

ಸಲ್ಮಾನ್ ಈ ಮೊದಲು ಭದ್ರತೆ ಬಗ್ಗೆ ಮಾತನಾಡಿದ್ದರು. ‘ಇನ್​ಸೆಕ್ಯೂರಿಟಿಗಿಂತ ಸೆಕ್ಯುರಿಟಿ ಉತ್ತಮ. ಭದ್ರತೆ ಇದೆ. ಈಗ ಮೊದಲಿನಂತೆ ಬೈಕ್ ರೈಡ್ ಮಾಡೋಕೆ ಆಗಲ್ಲ. ಬೇಕಾದಲ್ಲಿ ಹೊಗೋಕೆ ಆಗಲ್ಲ. ನಾನು ಟ್ರಾಫಿಕ್​ನಲ್ಲಿದ್ದಾಗ ಸಾಕಷ್ಟು ಭದ್ರತೆ ಇರುತ್ತದೆ. ಇದರಿಂದ ಜನರಿಗೆ ತೊಂದರೆ ಆಗುತ್ತದೆ. ಸಾಕಷ್ಟು ಬೆದರಿಕೆ ಇರುವುದರಿಂದ ಈ ರೀತಿಯ ಭದ್ರತೆ’ ಎಂದಿದ್ದರು ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:31 pm, Thu, 17 October 24

Follow Us
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ನಶಾಮುಕ್ತ ಭಾರತ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು
ನಶಾಮುಕ್ತ ಭಾರತ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು
ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; ಬೆಂಗಳೂರಿನಲ್ಲಿ ಹೈ ಅಲರ್ಟ್
ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; ಬೆಂಗಳೂರಿನಲ್ಲಿ ಹೈ ಅಲರ್ಟ್