AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಮಶಾನದ ಪಕ್ಕದಲ್ಲಿ ಮನೆ ಮಾಡಿದ್ದೇ ತಪ್ಪಾಯ್ತು; ಈ ನಟಿಯ ಜೀವನದಲ್ಲಾಯಿತು ಚಿತ್ರ ವಿಚಿತ್ರ ಅನುಭವ

ನರ್ಗೀಸ್ ಅವರಿಗೆ ವಿಚಿತ್ರ ಅನುಭವಗಳು ಆಗಿದ್ದರಿಂದ ಇದನ್ನು ಅವರು ನಂಬುತ್ತಾರೆ. ಮುಂಬೈನಲ್ಲಿ ಇದ್ದಾಗ ಒಂದಷ್ಟು ಹಾರರ್ ಅನುಭವ ಅವರಿಗೆ ಆಗಿತ್ತು.

ಸ್ಮಶಾನದ ಪಕ್ಕದಲ್ಲಿ ಮನೆ ಮಾಡಿದ್ದೇ ತಪ್ಪಾಯ್ತು; ಈ ನಟಿಯ ಜೀವನದಲ್ಲಾಯಿತು ಚಿತ್ರ ವಿಚಿತ್ರ ಅನುಭವ
ನರ್ಗೀಸ್
ರಾಜೇಶ್ ದುಗ್ಗುಮನೆ
|

Updated on: Jul 29, 2023 | 7:15 AM

Share

ರಣಬೀರ್ ಕಪೂರ್ (Ranbir Kapoor) ನಟನೆಯ ‘ರಾಕ್​ಸ್ಟಾರ್’ ಚಿತ್ರದ ಮೂಲಕ ನರ್ಗೀಸ್ ಫಕ್ರಿ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಬಾಲಿವುಡ್‌ನಲ್ಲಿ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ‘ಮದ್ರಾಸ್ ಕೆಫೆ’, ‘ಹೌಸ್‌ಫುಲ್ 3’, ‘ಮೇ ತೇರಾ ಹೀರೋ’ ಮೊದಲಾದ ಹಿಂದಿ ಸಿನಿಮಾಗಳ ಮೂಲಕ ಅವರು ಗಮನ ಸೆಳೆದಿದ್ದಾರೆ. ವಿಶೇಷ ಸಾಂಗ್​ಗೆ ಹೆಜ್ಜೆ ಹಾಕಿ ಅವರು ಹೆಸರು ಮಾಡಿದ್ದಾರೆ. ಈಗ ಅವರು ಟಾಲಿವುಡ್‌ಗೆ ಎಂಟ್ರಿ ಕೊಡಲು ರೆಡಿ ಆಗಿದ್ದಾರೆ. ಪವನ್ ಕಲ್ಯಾಣ್ ನಟನೆಯ, ಕ್ರಿಶ್ ನಿರ್ದೇಶನದ ‘ಹರಿಹರ ವೀರಮಲ್ಲು’ (Hari Hara Veera Mallu Movie) ಚಿತ್ರದಲ್ಲಿ ನರ್ಗೀಸ್ ಫಕ್ರಿ ನಟಿಸುತ್ತಿದ್ದಾರೆ. ಈಗ ಅವರು ಮುಂಬೈನಲ್ಲಿ ಉಂಟಾದ ಭಯಾನಕ ಅನುಭವಗಳ ಬಗ್ಗೆ ಹೇಳಿದ್ದಾರೆ.

ಕೆಲವೊಂದು ಮನೆಯಲ್ಲಿ ಉಳಿದುಕೊಂಡಾಗ ನೆಗೆಟಿವ್ ಎನರ್ಜಿ ಫೀಲ್ ಆಗುತ್ತದೆ. ಇದನ್ನು ಕೆಲವರು ನಂಬುತ್ತಾರೆ, ಇನ್ನೂ ಕೆಲವರು ನಂಬುವುದಿಲ್ಲ. ನರ್ಗೀಸ್ ಅವರಿಗೆ ಈ ರೀತಿ ಅನುಭವಗಳು ಆಗಿದ್ದರಿಂದ ಇದನ್ನು ಅವರು ನಂಬುತ್ತಾರೆ. ಮುಂಬೈನಲ್ಲಿ ಇದ್ದಾಗ ಒಂದಷ್ಟು ಹಾರರ್ ಅನುಭವ ಅವರಿಗೆ ಆಗಿತ್ತು. ಈ ಬಗ್ಗೆ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.

‘ನಾನು ಮುಂಬೈನ ಬಾಂದ್ರಾದ ಹಿಲ್​ರೋಡ್​​ನಲ್ಲಿ ವಾಸಿಸುತ್ತಿದ್ದೆ. ನನ್ನ ಮನೆಯ ಸಮೀಪದಲ್ಲಿ ಒಂದು ಸ್ಮಶಾನವಿತ್ತು. ಆ ಅಪಾರ್ಟ್‌ಮೆಂಟ್‌ನಲ್ಲಿ ಇದ್ದಾಗ ನನಗೆ ಭಯಾನಕ ಕನಸುಗಳು ಬೀಳುತ್ತಿದ್ದವು. ರಾತ್ರಿ ನಿದ್ದೆ ಬರುತ್ತಿರಲಿಲ್ಲ. ಭಯದಿಂದ ನಡುಗುತ್ತಿದ್ದ ನನಗೆ ರಾತ್ರಿ ಮೂರು ಗಂಟೆಗೆ ಎಚ್ಚರ ಆಗುತ್ತಿತ್ತು’ ಎಂದಿದ್ದಾರೆ ನರ್ಗೀಸ್.

‘ವಿಚಿತ್ರ ಕನಸು ಬೀಳುತ್ತಿತ್ತು. ಮಧ್ಯರಾತ್ರಿ ಓರ್ವ ಭಯಾನಕ ವ್ಯಕ್ತಿ ನನ್ನನ್ನು ಸ್ಮಶಾನಕ್ಕೆ ಕರೆದೊಯ್ದು ಮಾನವ ಮೂಳೆಗಳನ್ನು ತಿನ್ನುವಂತೆ ಒತ್ತಾಯಿಸುತ್ತಿದ್ದಂತೆ ಕನಸಿನಲ್ಲಿ ಕಾಣುತ್ತಿತ್ತು. ಸತತ ಮೂರ್ನಾಲ್ಕು ದಿನ ಇದೇ ಕನಸನ್ನು ಕಂಡಿದ್ದೆ. ಭಯದಿಂದ ತಕ್ಷಣ ಆ ಮನೆ ಬಿಟ್ಟು ದೆಹಲಿಗೆ ಬಂದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಮಾದಕ ಲುಕ್​ನಲ್ಲಿ ಮಿಂಚಿದ ನರ್ಗೀಸ್ ಫಖ್ರಿ

ನರ್ಗೀಸ್ ಅವರು ಮನೆ ಬಿಟ್ಟು ಬಂದ ಬಳಿಕ ಅಲ್ಲೊಂದು ವಿಚಿತ್ರ ಘಟನೆ ನಡೆದಿತ್ತಂತೆ. ಈ ಬಗ್ಗೆ ಅವರಿಗೆ ನಂತರ ಮಾಹಿತಿ ಸಿಕ್ಕಿತ್ತು. ನರ್ಗೀಸ್ ಅವರು ಮನೆ ಖಾಲಿ ಮಾಡುವಾಗ ಆರು ಪಕ್ಷಿ ಮರಿಗಳು ಸಾವನ್ನಪ್ಪಿದ್ದವು. ಇದು ಮನೆಯ ವಸ್ತುಗಳನ್ನು ಸಾಗಿಸಲು ಬಂದವರಿಗೆ ಕಂಡಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು