AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತಿ ಜಾಹಿರಾತಿಗೆ ಕೋಟಿ ಕೋಟಿ ಪಡೆಯುವ ಶಾರುಖ್ ಇದೀಗ ನಿಮ್ಮ ಅಂಗಡಿಗೆ ಉಚಿತವಾಗಿ ಜಾಹಿರಾತು ನೀಡಬಲ್ಲರು; ಹೇಗೆ?

Shah Rukh Khan: ಬಾಲಿವುಡ್​ನ ಖ್ಯಾತ ನಟ ಶಾರುಖ್ ಖಾನ್ ಸದಾ ಒಂದಿಲ್ಲೊಂದು ಕಾರಣದಿಂದ ಸುದ್ದಿಯಲ್ಲಿರುತ್ತಾರೆ. ಸದ್ಯ ಅವರು ಕಾಣಿಸಿಕೊಂಡಿರುವ ದೀಪಾವಳಿಯ ಶುಭ ಕೋರಿರುವ ಜಾಹಿರಾತೊಂದು ಬಿಡುಗಡೆಯಾಗಿದ್ದು, ವೈರಲ್ ಆಗಿದೆ.

ಪ್ರತಿ ಜಾಹಿರಾತಿಗೆ ಕೋಟಿ ಕೋಟಿ ಪಡೆಯುವ ಶಾರುಖ್ ಇದೀಗ ನಿಮ್ಮ ಅಂಗಡಿಗೆ ಉಚಿತವಾಗಿ ಜಾಹಿರಾತು ನೀಡಬಲ್ಲರು; ಹೇಗೆ?
ಶಾರುಖ್ ಖಾನ್
TV9 Web
| Edited By: |

Updated on:Oct 24, 2021 | 5:56 PM

Share

ಬಾಲಿವುಡ್ ನಟ ಶಾರುಖ್ ಖಾನ್ ಅವರ ಬ್ರಾಂಡ್ ಮೌಲ್ಯ ಕೋಟ್ಯಾಂತರ ರೂಗಳಿವೆ. ಅವರು ಒಂದೊಂದು ಜಾಹಿರಾತಿಗೂ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಾರೆ. ಆದರೆ ಸ್ವಲ್ಪವೂ ಹಣ ಖರ್ಚು ಮಾಡದೇ, ನಿಮ್ಮ ಸಮೀಪದ, ನಿಮ್ಮ ನೆಚ್ಚಿನ ಅಥವಾ ನಿಮ್ಮದೇ ಅಂಗಡಿಯ ರಾಯಭಾರಿಯಾಗಿ ಶಾರುಖ್​ರನ್ನು ನೇಮಿಸಬಹುದು. ಅದೂ ಉಚಿತವಾಗಿ. ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ. ಪ್ರಸಿದ್ಧ ಚಾಕಲೇಟ್ ಬ್ರಾಂಡ್ ಆಗಿರುವ ‘ಕ್ಯಾಡ್ಬರಿ’ ಸಂಸ್ಥೆ ದೀಪಾವಳಿಗೆ ಹೊಸ ಯೋಜನೆಯೊಂದನ್ನು ಘೋಷಿಸಿದೆ. ಅದರಲ್ಲಿ, ಕೊರೊನಾ ಸಂಕಷ್ದ ಸಮಯದಲ್ಲಿ ನಲುಗಿರುವ ಸಣ್ಣ ವ್ಯಾಪಾರಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಮಹತ್ತರ ಯೋಜನೆಯನ್ನು ಅದು ಘೋಷಿಸಿದೆ.

ಕ್ಯಾಡ್ಬರಿ ಈ ಕುರಿತು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಈ ವಿಶೇಷ ಮಾಹಿತಿ ಹಂಚಿಕೊಂಡಿದೆ. ಅದರಲ್ಲಿ ತಿಳಿಸಿರುವಂತೆ, ದೇಶದ ಯಾವುದೇ ಮೂಲೆಯ, ಯಾವುದೇ ಅಂಗಡಿಯವರೂ ಕೂಡ ತಮ್ಮ ಅಂಗಡಿಗೆ, ಬ್ರಾಂಡ್​ಗೆ ಶಾರುಖ್​ರನ್ನು ರಾಯಭಾರಿಯನ್ನಾಗಿಸಬಹುದು. ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಮೂಲಕ ಇದು ಕಾರ್ಯ ನಿರ್ವಹಿಸುತ್ತದೆ. ಕ್ಯಾಡ್ಬರಿ ಇದಕ್ಕೆಂದೇ ಪ್ರತ್ಯೇಕ ವೆಬ್​ಸೈಟನ್ನು ಸೃಷ್ಟಿಸಿದ್ದು, ಅಲ್ಲಿ ಮಾಹಿತಿಗಳನ್ನು ತುಂಬಿದರೆ, ಶಾರುಖ್ ನೀವು ನಮೂದಿಸಿರುವ ಅಂಗಡಿಯ ಕುರಿತು ಜಾಹಿರಾತು ನೀಡುವ ವಿಡಿಯೋ ಲಭ್ಯವಾಗುತ್ತದೆ.

ಇದನ್ನು ಎಲ್ಲರಿಗೂ ತಲುಪಿಸುವ ಉದ್ದೇಶದಿಂದ ಕ್ಯಾಡ್ಬರಿ ವಿಡಿಯೋವನ್ನೂ ಹಂಚಿಕೊಂಡಿದೆ. ಅದರಲ್ಲಿ ವಿಧಾನಗಳನ್ನೂ ವಿವರಿಸಲಾಗಿದೆ. ‘ಕೇವಲ ಕ್ಯಾಡ್ಬರಿಯ ಜಾಹಿರಾತಲ್ಲ ಇದು’ ಎಂಬ ಪರಿಕಲ್ಪನೆಯಲ್ಲಿ ಮೂಡಿಬಂದಿರುವ ಈ ಜಾಹಿರಾತು, ಸದ್ಯ ವೈರಲ್ ಆಗಿದ್ದು, ಕ್ಯಾಡ್ಬರಿಯ ಉದ್ದೇಶಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಕ್ಯಾಡ್ಬರಿ ಹಂಚಿಕೊಂಡಿರುವ ವಿಡಿಯೋ ಇಲ್ಲಿದೆ:

‘ನಮ್ಮ ಸುತ್ತಮುತ್ತಲಿರುವ ಸಣ್ಣ ಸಣ್ಣ ಅಂಗಡಿಗಳೂ ಸಂತಸದ ದೀಪಾವಳಿಯನ್ನು ಆಚರಿಸಬೇಕು’ ಎಂಬ ಆಶಯದಲ್ಲಿ ಮೂಡಿಬಂದಿರುವ ಈ ಜಾಹಿರಾತು ಸದ್ಯ ವೈರಲ್ ಆಗಿದೆ. ಜೊತೆಗೆ ಈ ಹಾಡಿನ ಉದ್ದೇಶಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

ನೆಟ್ಟಿಗರು ಮೆಚ್ಚುಗೆ ಸೂಚಿಸಿರುವ ಕೆಲವೊಂದು ಟ್ವೀಟ್​ಗಳು ಇಲ್ಲಿವೆ:

ಶಾರುಖ್ ಅಭಿಮಾನಿಗಳು ಈ ಜಾಹಿರಾತನ್ನು ಬಹಳ ಇಷ್ಟಪಟ್ಟಿದ್ದು, ಶಾರುಖ್ ಹಾಗೂ ಕ್ಯಾಡ್ಬರಿಯ ಪರಿಕಲ್ಪನೆಯನ್ನು ಹೊಗಳಿದ್ದಾರೆ. ಕ್ಯಾಡ್ಬರಿ ಆಧುನಿಕ ತಂತ್ರಜ್ಞಾನದ ಮುಖಾಂತರ ಹೊಸ ಪರಂಪರೆಗೆ ನಾಂದಿ ಹಾಡಿದೆ ಎಂದೂ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:

Published On - 5:55 pm, Sun, 24 October 21

ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಸ್ವಂತ ಮನೆ ಕನಸು ನನಸಾಗಲು ಏನು ಮಾಡಬೇಕು ನೋಡಿ
ಸ್ವಂತ ಮನೆ ಕನಸು ನನಸಾಗಲು ಏನು ಮಾಡಬೇಕು ನೋಡಿ
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?