AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕರಣ್​ ಜೋಹರ್​ ಬಗ್ಗೆ ಕೆಟ್ಟದಾಗಿ ಮಾತಾಡು’ ಎಂದು ಕಾಂಟ್ರವರ್ಸಿ ಖಾನ್​ಗೆ ಮೆಸೇಜ್ ಮಾಡಿದ್ದ ಕಂಗನಾ?

‘ಕಂಗನಾ ರಣಾವತ್​ ಅವರು ಕರಣ್​ ಜೋಹರ್​ ಬಗ್ಗೆ ಕೆಟ್ಟದಾಗಿ ಮಾತನಾಡುವಂತೆ ನನಗೆ ಹೇಳಿದ್ದಾರೆ. ಅವರ ಎಲ್ಲ ಎಸ್​ಎಂಎಸ್​ಗಳು ನನ್ನ ಬಳಿ ಸಾಕ್ಷಿಗೆ ಇವೆ’ ಎಂದು ಕಮಾಲ್​ ಆರ್​. ಖಾನ್​ ಟ್ವೀಟ್​ ಮಾಡಿದ್ದಾರೆ.

‘ಕರಣ್​ ಜೋಹರ್​ ಬಗ್ಗೆ ಕೆಟ್ಟದಾಗಿ ಮಾತಾಡು’ ಎಂದು ಕಾಂಟ್ರವರ್ಸಿ ಖಾನ್​ಗೆ ಮೆಸೇಜ್ ಮಾಡಿದ್ದ ಕಂಗನಾ?
ಕಂಗನಾ ರಣಾವತ್​, ಕಮಾಲ್​ ಆರ್​. ಖಾನ್​, ಕರಣ್​ ಜೋಹರ್​
TV9 Web
| Edited By: |

Updated on: Oct 02, 2021 | 8:38 AM

Share

ನಟ/ನಿರ್ದೇಶಕ ಕಮಾಲ್​ ಆರ್​. ಖಾನ್​ ಪ್ರತಿದಿನ ಕಿರಿಕ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಬಾಲಿವುಡ್​ನ ಅನೇಕರ ಬಗ್ಗೆ ಅವರು ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ಕೆಲವು ದಿನಗಳಿಂದ ನಟಿ ಕಂಗನಾ ರಣಾವತ್​ ಬಗ್ಗೆ ಕಮಾಲ್​ ಆರ್​. ಖಾನ್​ ಅನೇಕ ಶಾಕಿಂಗ್​ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈಗ ಇನ್ನೊಂದು ಬಾಂಬ್​ ಹಾಕಿದ್ದಾರೆ. ಖ್ಯಾತ ನಿರ್ಮಾಪಕ/ನಿರ್ದೇಶಕ ಕರಣ್​ ಜೋಹರ್​ ಬಗ್ಗೆ ಕೆಟ್ಟದಾಗಿ ಮಾತನಾಡುವಂತೆ ತಮಗೆ ಕಂಗನಾ ಸೂಚನೆ ನೀಡಿದ್ದಾರೆ ಎಂದು ಕಮಾಲ್​ ಆರ್​. ಖಾನ್​ ಹೇಳಿದ್ದಾರೆ. ಅದಕ್ಕೆ ಸಾಕ್ಷಿ ಕೂಡ ಇದೆ ಎಂದು ಅವರು ಹೇಳಿಕೊಂಡಿದ್ದಾರೆ.

ಟ್ವಿಟರ್​ನಲ್ಲಿ ಕಮಾಲ್​ ಖಾನ್​ ಸಿಕ್ಕಾಪಟ್ಟೆ ಆ್ಯಕ್ಟೀವ್​ ಆಗಿರುತ್ತಾರೆ. ಇತ್ತೀಚೆಗೆ ಟ್ವೀಟ್​ ಮಾಡಿರುವ ಅವರು ಕಂಗನಾ ಮೇಲೆ ಆರೋಪ ಹೊರಿಸಿದ್ದಾರೆ. ‘ಇಷ್ಟು ದಿನಗಳವರೆಗೆ ಚಿತ್ರರಂಗದ ಯಾರೊಬ್ಬರೂ ಕೂಡ ಇನ್ನೊಬ್ಬ ಸೆಲೆಬ್ರಿಟಿಗಳ ಬಗ್ಗೆ ಕೆಟ್ಟದಾಗಿ ಮಾತನಾಡು ಎಂದು ನನಗೆ ಹೇಳಿರಲಿಲ್ಲ. ಆದರೆ ಕಂಗನಾ ರಣಾವತ್​ ಅವರು ಕರಣ್​ ಜೋಹರ್​ ಬಗ್ಗೆ ಕೆಟ್ಟದಾಗಿ ಮಾತನಾಡುವಂತೆ ನನಗೆ ಹೇಳಿದ್ದಾರೆ. ಅವರ ಎಲ್ಲ ಎಸ್​ಎಂಎಸ್​ಗಳು ನನ್ನ ಬಳಿ ಸಾಕ್ಷಿಗೆ ಇವೆ’ ಎಂದು ಕಮಾಲ್​ ಆರ್​. ಖಾನ್​ ಟ್ವೀಟ್​ ಮಾಡಿದ್ದಾರೆ.

ಇಷ್ಟೆಲ್ಲ ಆರೋಪ ಮಾಡಿರುವ ಕಮಾಲ್​ ಖಾನ್​ ಆ ಎಸ್​ಎಂಎಸ್​ಗಳನ್ನು ತೋರಿಸಲು ಸಿದ್ಧರಿಲ್ಲ. ‘ಕಂಗನಾ ಮಾಡಿದ ಮೆಸೇಜ್​ಗಳನ್ನು ನಾನು ಬಹಿರಂಗಪಡಿಸುವುದಿಲ್ಲ. ಈವರೆಗೆ ನಾನು ಯಾರ ಮೆಸೇಜ್​ಗಳನ್ನೂ ಬಹಿರಂಗ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ’ ಎಂದು ಅವರು ಟ್ವೀಟ್​ ಮಾಡಿದ್ದಾರೆ. ಹಾಗಾಗಿ ಅವರ ಮಾತು ನಿಜವೋ ಸುಳ್ಳೋ ಎಂಬ ಬಗ್ಗೆ ಅನುಮಾನ ಮೂಡಿದೆ.

ಇತ್ತೀಚೆಗೆ ಬಾಲಿವುಡ್ ನಟಿ ಮೌನಿ ರಾಯ್​ ಬಗ್ಗೆಯೂ ಕಮಾಲ್​ ಆರ್​. ಖಾನ್​ ಟ್ವೀಟ್​ ಮಾಡಿದ್ದರು. ಮೌನಿ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂದು ಅನೇಕರಿಗೆ ಅನುಮಾನ ಇದೆ. ಆದರೆ ಆ ಬಗ್ಗೆ ಅವರು ಎಂದೂ ಬಾಯಿ ಬಿಟ್ಟಿಲ್ಲ. ಮೌನಿ ಪ್ಲಾಸ್ಟಿಕ್​ ಸರ್ಜರಿಗೆ ಒಳಗಾಗಿದ್ದಾರೆ ಎಂಬುದನ್ನು ಸಾಬೀತು ಪಡಿಸಲು ಅವರ ಹಲವು ಫೋಟೋಗಳನ್ನು ಕಮಾಲ್ ಖಾನ್​ ಶೇರ್​ ಮಾಡಿಕೊಂಡಿದ್ದರು. ಆ ಫೋಟೋಗಳಲ್ಲಿನ ವ್ಯತ್ಯಾಸವನ್ನು ಗಮನಿಸುವಂತೆ ನೆಟ್ಟಿಗರಿಗೆ ಅವರು ಸೂಚಿಸಿದ್ದರೆ. ‘ಹಣದಿಂದ ಸೌಂದರ್ಯವನ್ನು ಬದಲಾಯಿಸಬಹುದು. ಮೌನಿ ರಾಯ್ ಆಗಾಗ ಬದಲಾಗುತ್ತಲೇ ಇದ್ದಾರೆ’ ಎಂದು ಆ ಫೋಟೋಗೆ ಕಮಾಲ್​ ಖಾನ್​ ಕ್ಯಾಪ್ಷನ್​ ನೀಡಿದ್ದರು.

ಇದನ್ನೂ ಓದಿ:

ಮತ್ತೆ ಜಯಲಲಿತಾ ಅವತಾರದಲ್ಲಿ ಕಂಗನಾ ರಣಾವತ್​; ಹೊಸ ಸಿನಿಮಾಗಾಗಿ ನಡೆದಿದೆ ಸಿದ್ಧತೆ

ಓಟಿಟಿಗೆ ಬಂತು ‘ತಲೈವಿ’; ಚಿತ್ರಮಂದಿರದಲ್ಲಿ ಸೋತ ಕಂಗನಾ ಸಿನಿಮಾಗೆ ನೆಟ್​ಫ್ಲಿಕ್ಸ್​ನಲ್ಲಿ ಸಿಗುತ್ತಾ ಜಯ?

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ