AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದುಡ್ಡಿನಿಂದ ಸೌಂದರ್ಯ ಪಡೆಯಬಹುದು’: ಮೌನಿ ರಾಯ್​ ಫೋಟೋ ತೋರಿಸಿ ಸಾಕ್ಷಿ ಸಮೇತ ವಿವರಿಸಿದ ಕಮಾಲ್ ಖಾನ್

ಮೌನಿ ರಾಯ್​ ಅವರಿಗೆ ಈಗ 36ರ ಪ್ರಾಯ. ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು ಒಂದೂವರೆ ದಶಕ ಕಳೆದಿದೆ. ದಿನದಿಂದ ದಿನಕ್ಕೆ ಅವರ ಅಂದ ಹೆಚ್ಚುತ್ತಲೇ ಇದೆ.

‘ದುಡ್ಡಿನಿಂದ ಸೌಂದರ್ಯ ಪಡೆಯಬಹುದು’: ಮೌನಿ ರಾಯ್​ ಫೋಟೋ ತೋರಿಸಿ ಸಾಕ್ಷಿ ಸಮೇತ ವಿವರಿಸಿದ ಕಮಾಲ್ ಖಾನ್
ಮೌನಿ ರಾಯ್​
Follow us
TV9 Web
| Updated By: ಮದನ್​ ಕುಮಾರ್​

Updated on: Oct 01, 2021 | 4:32 PM

ಸಿನಿಮಾ ಮತ್ತು ಧಾರಾವಾಹಿಗಳ ಮೂಲಕ ನಟಿ ಮೌನಿ ರಾಯ್​ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿದೆ. ‘ಕೆಜಿಎಫ್​: ಚಾಪ್ಟರ್​ 1’ ಸಿನಿಮಾದ ಹಿಂದಿ ವರ್ಷನ್​ನಲ್ಲಿ ಅವರು ‘ಗಲಿ ಗಲಿ ಮೇ..’ ಹಾಡಿಗೆ ಹೆಜ್ಜೆ ಹಾಕಿದ್ದರು. ಈಗ ಅವರ ಕೈಯಲ್ಲಿ ಹಲವು ಸಿನಿಮಾ ಆಫರ್​ಗಳಿವೆ. ಈ ನಡುವೆ ಅವರ ಸೌಂದರ್ಯದ ಬಗ್ಗೆ ಸ್ವಯಂ ಘೋಷಿತ ವಿಮರ್ಶಕ ಕಮಾಲ್​ ಆರ್​. ಖಾನ್​ ಕಮೆಂಟ್​ ಮಾಡಿದ್ದಾರೆ. ಹಣದಿಂದ ಮೌನಿ ರಾಯ್​ ಅವರು ತಮ್ಮ ಲುಕ್​ ಬದಲಿಸಿಕೊಂಡಿದ್ದಾರೆ ಎಂಬುದು ಕಮಾಲ್​ ಖಾನ್​ ವಾದ. ಅದಕ್ಕೆ ಅವರು ಸಾಕ್ಷಿಯನ್ನೂ ನೀಡಿದ್ದಾರೆ.

ಮೌನಿ ರಾಯ್​ ಅವರಿಗೆ ಈಗ 36ರ ಪ್ರಾಯ. ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು ಒಂದೂವರೆ ದಶಕ ಕಳೆದಿದೆ. ದಿನದಿಂದ ದಿನಕ್ಕೆ ಅವರ ಅಂದ ಹೆಚ್ಚುತ್ತಲೇ ಇದೆ. ಅನೇಕ ಬಾರಿ ಅವರ ಬಾಡಿ ಟ್ರಾನ್ಸ್​ಫಾರ್ಮೇಷನ್​ ಆಗಿರುವುದು ಅಭಿಮಾನಿಗಳ ಗಮನಕ್ಕೆ ಬಂದಿದೆ. ಅಲ್ಲದೇ ಅವರ ಮುಖದಲ್ಲೂ ಅನೇಕ ಬದಲಾವಣೆ ಆಗಿದೆ. ಹಾಗಾಗಿ ಮೌನಿ ಆಗಾಗ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿರಬಹುದು ಎಂಬ ಅನುಮಾನ ಹಲವರಿಗೆ ಇದೆ.

ಈ ಬಗ್ಗೆ ಮೌನಿ ಏನನ್ನೂ ಒಪ್ಪಿಕೊಂಡಿಲ್ಲ. ಅದೇ ವಿಚಾರ ಇಟ್ಟುಕೊಂಡು ಕಮಾಲ್ ಆರ್​. ಖಾನ್​ ಕಾಲೆಳೆದಿದ್ದಾರೆ. ಮೌನಿ ರಾಯ್​ ಅವರ ಹಲವು ಫೋಟೋಗಳನ್ನು ಒಟ್ಟಿಗೆ ಶೇರ್​ ಮಾಡಿಕೊಂಡಿರುವ ಅವರು ಆ ಫೋಟೋಗಳಲ್ಲಿನ ವ್ಯತ್ಯಾಸವನ್ನು ಗಮನಿಸುವಂತೆ ನೆಟ್ಟಿಗರಿಗೆ ಸೂಚಿಸಿದ್ದಾರೆ. ‘ಹಣದಿಂದ ಸೌಂದರ್ಯವನ್ನು ಬದಲಾಯಿಸಬಹುದು. ಮೌನಿ ರಾಯ್ ಆಗಾಗ ಬದಲಾಗುತ್ತಲೇ ಇದ್ದಾರೆ’ ಎಂದು ಆ ಫೋಟೋಗೆ ಕಮಾಲ್​ ಖಾನ್​ ಕ್ಯಾಪ್ಷನ್​ ನೀಡಿದ್ದಾರೆ. ಸದ್ಯ ಈ ಪೋಸ್ಟ್​ ವೈರಲ್​ ಆಗುತ್ತಿದೆ.

ಬಾಲಿವುಡ್​ನಲ್ಲಿ ಅನೇಕರನ್ನು ಕಮಾಲ್​ ಖಾನ್​ ಕೆಣಕುತ್ತಲೇ ಇರುತ್ತಾರೆ. ಆ ಮೂಲಕ ಸದಾ ಅವರು ವಿವಾದ ಮೈಮೇಲೆ ಎಳೆದುಕೊಳ್ಳುತ್ತಾರೆ. ಈ ಹಿಂದೆ ಸಲ್ಮಾನ್ ಖಾನ್​ ಮತ್ತು ಕಂಗನಾ ರಣಾವತ್​ ಬಗ್ಗೆಯೂ ಅವರು ಖಾರವಾಗಿ ಟ್ವೀಟ್ ಮಾಡಿದ್ದರು.

ಇದನ್ನೂ ಓದಿ:

ಸಲ್ಮಾನ್ ಖಾನ್ ಜತೆ ನೃತ್ಯ ಮಾಡುತ್ತೀರಾ ಎಂದು ಕೇಳಿದ್ದಕ್ಕೆ ಇಲ್ಲವೆಂದ ನಟಿ ಮೌನಿ ರಾಯ್​; ವಿಡಿಯೋ ಭರ್ಜರಿ ವೈರಲ್​

ಕೆಜಿಎಫ್​ ಬೆಡಗಿಗೆ ಶೀಘ್ರವೇ ಮದುವೆ; ಬಾಯ್​ಫ್ರೆಂಡ್​ ಜತೆ ಇಟಲಿಯಲ್ಲಿ ವಿವಾಹ?

ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ