Kangana Ranaut: ಯಶ್, ಅಲ್ಲು ಅರ್ಜುನ್​ ಫೋಟೋ ಹಂಚಿಕೊಂಡು ಸಲಹೆ ನೀಡಿದ ಕಂಗನಾ; ಇದಕ್ಕಿದೆ ವಿಶೇಷ ಕಾರಣ

| Updated By: shivaprasad.hs

Updated on: Jan 25, 2022 | 7:56 PM

Yash | Allu Arjun: ಬಾಲಿವುಡ್ ನಟಿ ಕಂಗನಾ ರಣಾವತ್ ದಕ್ಷಿಣ ಭಾರತದ ಚಿತ್ರಗಳನ್ನು ಹಾಗೂ ದಕ್ಷಿಣದ ತಾರೆಯರನ್ನು ಹೊಗಳಿದ್ದಾರೆ. ಅದರಲ್ಲೂ ವಿಶೇಷವಾಗಿ ಯಶ್ ಹಾಗೂ ಅಲ್ಲು ಅರ್ಜುನ್ ಅವರನ್ನು ಹೊಗಳಿದ ಕಂಗನಾ, ಒಂದು ಸಲಹೆಯನ್ನೂ ನೀಡಿದ್ದಾರೆ.

Kangana Ranaut: ಯಶ್, ಅಲ್ಲು ಅರ್ಜುನ್​ ಫೋಟೋ ಹಂಚಿಕೊಂಡು ಸಲಹೆ ನೀಡಿದ ಕಂಗನಾ; ಇದಕ್ಕಿದೆ ವಿಶೇಷ ಕಾರಣ
ಕಂಗನಾ ರಣಾವತ್
Follow us on

ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಆಗಾಗ ತಮ್ಮ ಹೇಳಿಕೆಯಿಂದ ಸುದ್ದಿಯಾಗುತ್ತಾರೆ. ಯಾವುದೇ ಹೇಳಿಕೆ ಏನು ಪರಿಣಾಮ ಬೀರುತ್ತದೆ ಎಂಬುದನ್ನು ಲೆಕ್ಕಿಸದೇ ತಮಗನಿಸಿದ್ದನ್ನು ನೇರವಾಗಿ ಸಾಮಾಜಿಕ ಜಾಲತಾಣಗಳಲ್ಲಿ, ವೇದಿಕೆಗಳಲ್ಲಿ ಹಂಚಿಕೊಳ್ಳುತ್ತಾರೆ. ಇದು ಹಲವು ಬಾರಿ ವಿವಾದಗಳನ್ನೂ ಸೃಷ್ಟಿಸಿದೆ. ಆದರೆ ಈ ಬಾರಿ ಕಂಗನಾ ಖ್ಯಾತ ತಾರೆಯರನ್ನು ಹೊಗಳಿ ಸುದ್ದಿಯಾಗಿದ್ದಾರೆ. ಹೌದು. ಇತ್ತೀಚೆಗೆ ಅವರು ದಕ್ಷಿಣದ ಜನಪ್ರಿಯ ನಟರಾದ ಯಶ್ (Yash) ಹಾಗೂ ಅಲ್ಲು ಅರ್ಜುನ್ (Allu Arjun) ಅವರನ್ನು ಹಾಡಿ ಹೊಗಳಿದ್ದಾರೆ. ಅಲ್ಲದೇ ದಕ್ಷಿಣದ ಸೂಪರ್ ಹಿಟ್ ಸಿನಿಮಾಗಳ ಯಶಸ್ಸಿಗೆ ಕಾರಣವೇನು ಎಂಬುದನ್ನು ತಮ್ಮ ದೃಷ್ಟಿಕೋನದಲ್ಲಿ ವಿವರಿಸಿದ್ದಾರೆ. ಪ್ರಸ್ತುತ ಕಂಗನಾ ನೀಡಿರುವ ಹೇಳಿಕೆ ದಕ್ಷಿಣದ ವಲಯದಲ್ಲಿ ಸಾಕಷ್ಟು ಚರ್ಚೆಯಾಗಿದೆ. ಕಾರಣ, ತಮ್ಮ ಹೇಳಿಕೆಯಲ್ಲಿ ಕಂಗನಾ ಬಾಲಿವುಡ್ ಪ್ರವೇಶದ ಕುರಿತಂತೆ ಕಿವಿಮಾತೊಂದನ್ನೂ ಹೇಳಿದ್ದಾರೆ. ಈ ಎಲ್ಲಾ ಕಾರಣದಿಂದ ಕಂಗನಾ ರಣಾವತ್ ನೀಡುರುವ ಹೇಳಿಕೆ ಬಾಲಿವುಡ್ ಹಾಗೂ ದಕ್ಷಿಣ ಚಿತ್ರರಂಗದ ವಲಯದಲ್ಲಿ ಸುದ್ದಿಯಾಗಿದೆ.

ಕಂಗನಾ ಹೇಳಿದ್ದೇನು?:
ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಕಂಗನಾ ದಕ್ಷಿಣದ ಚಿತ್ರಗಳು ಹಾಗೂ ನಾಯಕ ನಟರನ್ನು ಹಾಡಿ ಹೊಗಳಿದ್ದಾರೆ. ಇತ್ತೀಚೆಗಷ್ಟೇ ‘ಪುಷ್: ದಿ ರೈಸ್’ ಬಾಲಿವುಡ್​ನಲ್ಲಿ ಪಡೆದ ಅಪಾರ ಜನಪ್ರಿಯತೆ ಹಾಗೂ ಯಶ್ ನಟನೆಯ ಕೆಜಿಎಫ್ ಗಳಿಸಿದ್ದ ಮೆಚ್ಚುಗೆ ಮೊದಲಾದವುಗಳ ಹಿನ್ನೆಲೆಯಲ್ಲಿ ಕಂಗನಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ದಕ್ಷಿಣದ ಚಿತ್ರಗಳು ಹಾಗೂ ಇಲ್ಲಿನ ನಾಯಕ ನಟರು ಏಕೆ ಖ್ಯಾತಿ ಗಳಿಸುತ್ತಿದ್ದಾರೆ ಎಂಬುದನ್ನು ವಿವರಿಸಿರುವ ಕಂಗನಾ, ‘‘ಭಾರತೀಯ ಪರಂಪರೆಯನ್ನು ಪ್ರತಿಬಿಂಬಿಸುತ್ತಾರೆ. ಪಾಶ್ಚಾತ್ಯರಿಂದ ಪ್ರಭಾವಿತರಾಗದೇ ತಮ್ಮ ಕುಟುಂಬವನ್ನು ಹಾಗೂ ಸಂಬಂಧವನ್ನು ಪ್ರೀತಿಸುತ್ತಾರೆ. ಅವರ ವೃತ್ತಿಪರತೆಗೆ ಸರಿಸಾಟಿ ಇಲ್ಲ’’ ಎಂದು ಬರೆದಿದ್ದಾರೆ.

ಇಷ್ಟೆಲ್ಲಾ ವಿವರಿಸಿರುವ ಕಂಗನಾ ದಕ್ಷಿಣದವರಿಗೆ ಒಂದು ಸಲಹೆಯನ್ನೂ ನೀಡಿದ್ದು, ಬಾಲಿವುಡ್​ನಿಂದ ಈ ಪರಂಪರೆಯನ್ನು ಹಾಳಾಗಲು ಬಿಡಬೇಡಿ. ಬಾಲಿವುಡ್​ನಿಂದ ಭ್ರಷ್ಟರಾಗಬೇಡಿ ಎಂದಿದ್ದಾರೆ.

ಕಂಗನಾ ಹಂಚಿಕೊಂಡ ಪೋಸ್ಟ್ ಇಲ್ಲಿದೆ:

ಕಂಗನಾ ಸ್ಟೋರಿಯಲ್ಲಿ ಹಂಚಿಕೊಂಡ ಬರಹ

ಚಿತ್ರಗಳ ವಿಷಯಕ್ಕೆ ಬಂದರೆ ಕಂಗನಾ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 2022ರ ಮೇನಲ್ಲಿ ಕಂಗನಾ ನಟನೆಯ ‘ಧಾಕಡ್’ ತೆರೆಕಾಣಲಿದೆ. ‘ತೇಜಸ್’ ಚಿತ್ರದಲ್ಲಿ ಪೈಲಟ್ ಆಗಿ ಕಂಗನಾ ಬಣ್ಣಹಚ್ಚುತ್ತಿದ್ದಾರೆ. ‘ಟೀಕು ವೆಡ್ಸ್ ಶೇರು’ ಚಿತ್ರವನ್ನು ತಮ್ಮದೇ ಬ್ಯಾನರ್​ನಲ್ಲಿ ಕಂಗನಾ ನಿರ್ಮಿಸುತ್ತಿದ್ದು ಅದರ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ:

ಭುವನ ಸುಂದರಿ ಹರ್ನಾಜ್ ಸಂಧು ಈಗೆಲ್ಲಿದ್ದಾರೆ?

ಧನುಷ್​​ರಿಂದ ಬೇರ್ಪಟ್ಟ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಐಶ್ವರ್ಯಾ; ಇಲ್ಲಿದೆ ಫೋಟೋ