AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೊಟ್ಟಿಗೆ ಉಗುಳು: ಸೋನು ಸೂದ್​ ಹೇಳಿಕೆಗೆ ಕಂಗನಾ ಆಕ್ರೋಶ

ನಟ ಸೋನು ಸೂದ್ ಮುಸ್ಲೀಮರ ಬಗ್ಗೆ ಮಾಡಿರುವ ಒಂದು ಟ್ವೀಟ್​ ಬಗ್ಗೆ ನಟಿ, ಬಿಜೆಪಿ ಸಂಸದೆ ಕಂಗನಾ ರನೌತ್ ಪ್ರತಿಕ್ರಿಯೆ ನೀಡಿದ್ದು, ಸೋನು ಸೂದ್​ರ ಕಾಲೆಳೆದಿದ್ದಾರೆ ನಟಿ. ಈ ಇಬ್ಬರ ನಡುವೆ ವರ್ಷಗಳಿಂದಲೂ ಮುನಿಸು ಸಾಗುತ್ತಲೇ ಬಂದಿದೆ.

ರೊಟ್ಟಿಗೆ ಉಗುಳು: ಸೋನು ಸೂದ್​ ಹೇಳಿಕೆಗೆ ಕಂಗನಾ ಆಕ್ರೋಶ
ಮಂಜುನಾಥ ಸಿ.
|

Updated on: Jul 21, 2024 | 9:26 AM

Share

ಕೋವಿಡ್ ಸಮಯದಲ್ಲಿ ಸಾವಿರಾರು ಜನಕ್ಕೆ ಸಹಾಯ ಮಾಡಿದ್ದ ಸೋನು ಸೂದ್​ರನ್ನು ‘ಮಸಿಯಾ’ (ದೇವರು) ಎಂದು ಕರೆಯಲಾಗಿತ್ತು. ಹಲವು ಸಚಿವರು, ರಾಜ್ಯಪಾಲರುಗಳು ಸೋನು ಸೂದ್​ರ ಕಾರ್ಯಕ್ಕೆ ಕೊಂಡಾಡಿದ್ದರು. ಆದರೆ ಇತ್ತೀಚೆಗೆ ಅವರ ರಾಜಕೀಯ ನಿರ್ಧಾರದಿಂದಾಗಿ ಕೆಲ ವರ್ಗಗಳು ಅವರ ಟೀಕೆಗೆ ಇಳಿದಿವೆ. ಸೋನು ಸೂದ್​, ತಮ್ಮ ಸಹೋದರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಕೊಡಿಸಿ, ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ನಡೆಸಿದ್ದರು. ಇದು ಬಿಜೆಪಿ ಬೆಂಬಲಿಗರ ಕಣ್ಣು ಕೆಂಪಗಾಗಿಸಿತ್ತು. ಇದರ ಜೊತೆಗೆ ಸೋನು ಸೂದ್ ಮಾಡಿರುವ ಟ್ವೀಟ್ ಒಂದು ಬಿಜೆಪಿ ಬೆಂಬಲಿಗರು ಮಾತ್ರವೇ ಅಲ್ಲದೆ ಬಿಜೆಪಿಯ ಕೆಲ ಮುಖಂಡರ ಆಕ್ರೋಶಕ್ಕೂ ಕಾರಣವಾಗಿದೆ.

ಎಲ್ಲವೂ ಪ್ರಾರಂಭವಾಗಿದ್ದು ಉತ್ತರ ಪ್ರದೇಶದ ಸರ್ಕಾರ ನೀಡಿದ ಹೊಸ ಆದೇಶದಿಂದ. ಕನ್ವಾರ್ ಯಾತ್ರಾ ಮಾರ್ಗದ ಹೋಟೆಲ್​ಗಳ ಮಾಲೀಕರು ತಮ್ಮ ಹೆಸರುಗಳನ್ನು ಅಂಗಡಿಯ ಮುಂಭಾಗ ಬರೆಯಬೇಕು ಎಂಬ ಆದೇಶವನ್ನು ಉತ್ತರ ಪ್ರದೇಶ ಸರ್ಕಾರ ಹೊರಡಿಸಿತು. ಆ ಮಾರ್ಗದಲ್ಲಿ ತೆರಳುವ ಪ್ರಯಾಣಿಕರಿಗೆ ಯಾವುದು ಹಿಂದೂಗಳ ಹೋಟೆಲ್, ಯಾವುದು ಮುಸ್ಲೀಮರ ಹೋಟೆಲ್ ಎಂಬುದು ತಿಳಿಯಲಿ ಎಂಬುದು ಈ ಆದೇಶದ ಉದ್ದೇಶವಾಗಿತ್ತು. ಆದೇಶದ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ ನಟ ಸೋನು ಸೂದ್, ‘ಎಲ್ಲ ಅಂಗಡಿಗಳ ಮುಂದೆ ‘ಮಾನವೀಯತೆ’ ಎಂಬುದೇ ಬೋರ್ಡ್ ಆಗಿರಬೇಕು’ ಎಂದಿದ್ದರು.

ಸೋನು ಸೂದ್​ರ ಟ್ವೀಟ್​ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಇದರ ನಡುವೆ ಮುಸ್ಲಿಂ ವ್ಯಕ್ತಿಯೊಬ್ಬ ರೋಟಿಯನ್ನು ತಂದೂರ್​ನಲ್ಲಿ ಇಡುವ ಮುಂಚೆ ಅದಕ್ಕೆ ಉಗಿಯುತ್ತಿದ್ದ ವಿಡಿಯೋ ಒಂದು ವೈರಲ್ ಆಯ್ತು. ಆ ವಿಡಿಯೋವನ್ನು ಸೋನು ಸೂದ್​ರ ಟ್ರೋಲ್​ ಮಾಡಲು ಬಳಲಾಯ್ತು. ವಿಡಿಯೋ ಶೇರ್ ಮಾಡಿದ ಸೋನು ಸೂದ್, ‘ಶಬರಿ, ರಾಮನ ಎಂಜಲು ಹಣ್ಣನನ್ನು ತಿಂದಳು. ಹಿಂಸೆಯನ್ನು ಸೋಲಿಸಲು ಈ ಸಹೋದರನ ಎಂಜಲು ಮೆತ್ತಿದ ರೋಟಿಯನ್ನು ನಾನೇಕೆ ತಿನ್ನದೇ ಇರುವೆ. ಮಾನವೀಯತೆ ಎಲ್ಲೆಡೆ ಪಸರಿಸಬೇಕು ಅಷ್ಟೆ’ ಎಂದಿದ್ದರು.

ಇದನ್ನೂ ಓದಿ:ಕಂಗನಾ ರನೌತ್ ಆಸ್ತಿ ವಿವರ ಬಹಿರಂಗ, ನಟಿಯ ಬಳಿ ಇರುವ ಚಿನ್ನ ಎಷ್ಟು ಕೆಜಿ?

ಸೋನು ಸೂದ್​ರ ಟ್ವೀಟ್​ಗೆ ಹಲವರು ವಿಶೇಷವಾಗಿ ಬಿಜೆಪಿ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದ್ದಾರೆ, ಸೋನು ಸೂದ್​ರ ಹೇಳಿಕೆಯನ್ನು ವ್ಯಂಗ್ಯ ಮಾಡಿರುವ ಬಿಜೆಪಿ ಸಂಸದೆ, ನಟಿ ಕಂಗನಾ ರನೌತ್, ‘ಮುಂದೆ ಸೋನು ಸೂದ್ ತಮ್ಮದೇ ಆವಿಷ್ಕಾರದ ಮೂಲಕ ಹೊಸ ರಾಮಾಯಣದ ಕತೆ ಬರೆದು, ಬಾಲಿವುಡ್​ನಲ್ಲಿ ಹೊಸ ರಾಮಾಯಣ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ.

ಅಸಲಿಗೆ ಕಂಗನಾ ಹಾಗೂ ಸೋನು ಸೂದ್ ನಡುವಿನ ವಿವಾದ ಹಳೆಯದ್ದು. ಕಂಗನಾ ನಿರ್ದೇಶನ ಮಾಡಿದ್ದ ‘ಮಣಿಕರ್ಣಿಕಾ’ ಸಿನಿಮಾದಲ್ಲಿ ಸೋನು ಸೂದ್ ನಟಿಸಿದ್ದರು. ಆದರೆ ಅವರನ್ನು ಚಿತ್ರದಿಂದ ಕೈಬಿಟ್ಟಿದ್ದ ಕಂಗನಾ, ಸೋನು ವಿರುದ್ಧ ಋಣಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಅಸಲಿಗೆ ಆ ಸಿನಿಮಾವನ್ನು ಸಹ ಮೊದಲು ಬೇರೊಬ್ಬರು ನಿರ್ದೇಶನ ಮಾಡಿದ್ದರು. ಅವರನ್ನೂ ಸಹ ಕಂಗನಾ ಸಿನಿಮಾದಿಂದ ಹೊರಗಟ್ಟಿದರು. ಆಗಿನಿಂದಲೂ ಸೋನು ಹಾಗೂ ಕಂಗನಾ ಪರಸ್ಪರರ ಬಗ್ಗೆ ಟೀಕೆ, ನಿಂದನೆ ಮಾಡುತ್ತಲೇ ಬಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ