AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೊಟ್ಟಿಗೆ ಉಗುಳು: ಸೋನು ಸೂದ್​ ಹೇಳಿಕೆಗೆ ಕಂಗನಾ ಆಕ್ರೋಶ

ನಟ ಸೋನು ಸೂದ್ ಮುಸ್ಲೀಮರ ಬಗ್ಗೆ ಮಾಡಿರುವ ಒಂದು ಟ್ವೀಟ್​ ಬಗ್ಗೆ ನಟಿ, ಬಿಜೆಪಿ ಸಂಸದೆ ಕಂಗನಾ ರನೌತ್ ಪ್ರತಿಕ್ರಿಯೆ ನೀಡಿದ್ದು, ಸೋನು ಸೂದ್​ರ ಕಾಲೆಳೆದಿದ್ದಾರೆ ನಟಿ. ಈ ಇಬ್ಬರ ನಡುವೆ ವರ್ಷಗಳಿಂದಲೂ ಮುನಿಸು ಸಾಗುತ್ತಲೇ ಬಂದಿದೆ.

ರೊಟ್ಟಿಗೆ ಉಗುಳು: ಸೋನು ಸೂದ್​ ಹೇಳಿಕೆಗೆ ಕಂಗನಾ ಆಕ್ರೋಶ
ಮಂಜುನಾಥ ಸಿ.
|

Updated on: Jul 21, 2024 | 9:26 AM

Share

ಕೋವಿಡ್ ಸಮಯದಲ್ಲಿ ಸಾವಿರಾರು ಜನಕ್ಕೆ ಸಹಾಯ ಮಾಡಿದ್ದ ಸೋನು ಸೂದ್​ರನ್ನು ‘ಮಸಿಯಾ’ (ದೇವರು) ಎಂದು ಕರೆಯಲಾಗಿತ್ತು. ಹಲವು ಸಚಿವರು, ರಾಜ್ಯಪಾಲರುಗಳು ಸೋನು ಸೂದ್​ರ ಕಾರ್ಯಕ್ಕೆ ಕೊಂಡಾಡಿದ್ದರು. ಆದರೆ ಇತ್ತೀಚೆಗೆ ಅವರ ರಾಜಕೀಯ ನಿರ್ಧಾರದಿಂದಾಗಿ ಕೆಲ ವರ್ಗಗಳು ಅವರ ಟೀಕೆಗೆ ಇಳಿದಿವೆ. ಸೋನು ಸೂದ್​, ತಮ್ಮ ಸಹೋದರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಕೊಡಿಸಿ, ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ನಡೆಸಿದ್ದರು. ಇದು ಬಿಜೆಪಿ ಬೆಂಬಲಿಗರ ಕಣ್ಣು ಕೆಂಪಗಾಗಿಸಿತ್ತು. ಇದರ ಜೊತೆಗೆ ಸೋನು ಸೂದ್ ಮಾಡಿರುವ ಟ್ವೀಟ್ ಒಂದು ಬಿಜೆಪಿ ಬೆಂಬಲಿಗರು ಮಾತ್ರವೇ ಅಲ್ಲದೆ ಬಿಜೆಪಿಯ ಕೆಲ ಮುಖಂಡರ ಆಕ್ರೋಶಕ್ಕೂ ಕಾರಣವಾಗಿದೆ.

ಎಲ್ಲವೂ ಪ್ರಾರಂಭವಾಗಿದ್ದು ಉತ್ತರ ಪ್ರದೇಶದ ಸರ್ಕಾರ ನೀಡಿದ ಹೊಸ ಆದೇಶದಿಂದ. ಕನ್ವಾರ್ ಯಾತ್ರಾ ಮಾರ್ಗದ ಹೋಟೆಲ್​ಗಳ ಮಾಲೀಕರು ತಮ್ಮ ಹೆಸರುಗಳನ್ನು ಅಂಗಡಿಯ ಮುಂಭಾಗ ಬರೆಯಬೇಕು ಎಂಬ ಆದೇಶವನ್ನು ಉತ್ತರ ಪ್ರದೇಶ ಸರ್ಕಾರ ಹೊರಡಿಸಿತು. ಆ ಮಾರ್ಗದಲ್ಲಿ ತೆರಳುವ ಪ್ರಯಾಣಿಕರಿಗೆ ಯಾವುದು ಹಿಂದೂಗಳ ಹೋಟೆಲ್, ಯಾವುದು ಮುಸ್ಲೀಮರ ಹೋಟೆಲ್ ಎಂಬುದು ತಿಳಿಯಲಿ ಎಂಬುದು ಈ ಆದೇಶದ ಉದ್ದೇಶವಾಗಿತ್ತು. ಆದೇಶದ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ ನಟ ಸೋನು ಸೂದ್, ‘ಎಲ್ಲ ಅಂಗಡಿಗಳ ಮುಂದೆ ‘ಮಾನವೀಯತೆ’ ಎಂಬುದೇ ಬೋರ್ಡ್ ಆಗಿರಬೇಕು’ ಎಂದಿದ್ದರು.

ಸೋನು ಸೂದ್​ರ ಟ್ವೀಟ್​ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಇದರ ನಡುವೆ ಮುಸ್ಲಿಂ ವ್ಯಕ್ತಿಯೊಬ್ಬ ರೋಟಿಯನ್ನು ತಂದೂರ್​ನಲ್ಲಿ ಇಡುವ ಮುಂಚೆ ಅದಕ್ಕೆ ಉಗಿಯುತ್ತಿದ್ದ ವಿಡಿಯೋ ಒಂದು ವೈರಲ್ ಆಯ್ತು. ಆ ವಿಡಿಯೋವನ್ನು ಸೋನು ಸೂದ್​ರ ಟ್ರೋಲ್​ ಮಾಡಲು ಬಳಲಾಯ್ತು. ವಿಡಿಯೋ ಶೇರ್ ಮಾಡಿದ ಸೋನು ಸೂದ್, ‘ಶಬರಿ, ರಾಮನ ಎಂಜಲು ಹಣ್ಣನನ್ನು ತಿಂದಳು. ಹಿಂಸೆಯನ್ನು ಸೋಲಿಸಲು ಈ ಸಹೋದರನ ಎಂಜಲು ಮೆತ್ತಿದ ರೋಟಿಯನ್ನು ನಾನೇಕೆ ತಿನ್ನದೇ ಇರುವೆ. ಮಾನವೀಯತೆ ಎಲ್ಲೆಡೆ ಪಸರಿಸಬೇಕು ಅಷ್ಟೆ’ ಎಂದಿದ್ದರು.

ಇದನ್ನೂ ಓದಿ:ಕಂಗನಾ ರನೌತ್ ಆಸ್ತಿ ವಿವರ ಬಹಿರಂಗ, ನಟಿಯ ಬಳಿ ಇರುವ ಚಿನ್ನ ಎಷ್ಟು ಕೆಜಿ?

ಸೋನು ಸೂದ್​ರ ಟ್ವೀಟ್​ಗೆ ಹಲವರು ವಿಶೇಷವಾಗಿ ಬಿಜೆಪಿ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದ್ದಾರೆ, ಸೋನು ಸೂದ್​ರ ಹೇಳಿಕೆಯನ್ನು ವ್ಯಂಗ್ಯ ಮಾಡಿರುವ ಬಿಜೆಪಿ ಸಂಸದೆ, ನಟಿ ಕಂಗನಾ ರನೌತ್, ‘ಮುಂದೆ ಸೋನು ಸೂದ್ ತಮ್ಮದೇ ಆವಿಷ್ಕಾರದ ಮೂಲಕ ಹೊಸ ರಾಮಾಯಣದ ಕತೆ ಬರೆದು, ಬಾಲಿವುಡ್​ನಲ್ಲಿ ಹೊಸ ರಾಮಾಯಣ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ.

ಅಸಲಿಗೆ ಕಂಗನಾ ಹಾಗೂ ಸೋನು ಸೂದ್ ನಡುವಿನ ವಿವಾದ ಹಳೆಯದ್ದು. ಕಂಗನಾ ನಿರ್ದೇಶನ ಮಾಡಿದ್ದ ‘ಮಣಿಕರ್ಣಿಕಾ’ ಸಿನಿಮಾದಲ್ಲಿ ಸೋನು ಸೂದ್ ನಟಿಸಿದ್ದರು. ಆದರೆ ಅವರನ್ನು ಚಿತ್ರದಿಂದ ಕೈಬಿಟ್ಟಿದ್ದ ಕಂಗನಾ, ಸೋನು ವಿರುದ್ಧ ಋಣಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಅಸಲಿಗೆ ಆ ಸಿನಿಮಾವನ್ನು ಸಹ ಮೊದಲು ಬೇರೊಬ್ಬರು ನಿರ್ದೇಶನ ಮಾಡಿದ್ದರು. ಅವರನ್ನೂ ಸಹ ಕಂಗನಾ ಸಿನಿಮಾದಿಂದ ಹೊರಗಟ್ಟಿದರು. ಆಗಿನಿಂದಲೂ ಸೋನು ಹಾಗೂ ಕಂಗನಾ ಪರಸ್ಪರರ ಬಗ್ಗೆ ಟೀಕೆ, ನಿಂದನೆ ಮಾಡುತ್ತಲೇ ಬಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ