AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಭಾಸ್, ಅಲ್ಲು ಅರ್ಜುನ್ ಬದಲಿಗೆ ಯಶ್ ಅನ್ನು ಆರಿಸಿದ ಬಾಲಿವುಡ್ ನಟಿ

Yash: 'ಕೆಜಿಎಫ್' ಸಿನಿಮಾ ಯಶ್ ಅವರನ್ನು ಹೊಸ ಎತ್ತರಗಳಿಗೆ ಕೊಂಡೊಯ್ದಿದೆ. ಕನ್ನಡ ಚಿತ್ರರಂಗ ಎಂಬುದೊಂದು ಇದೆಯೆಂದೂ ಗುರುತಿಸಲು ಮುಜುಗರ ಪಡುತ್ತಿದ್ದ ಕೆಲವು ಸೋ ಕಾಲ್ಡ್ ಸ್ಟಾರ್ ನಟ-ನಟಿಯರು ಇಂದು ಯಶ್​ ಜೊತೆಗೆ ನಟಿಸುವ ಆಸೆ ವ್ಯಕ್ತಪಡಿಸುತ್ತಿದ್ದಾರೆ.

ಪ್ರಭಾಸ್, ಅಲ್ಲು ಅರ್ಜುನ್ ಬದಲಿಗೆ ಯಶ್ ಅನ್ನು ಆರಿಸಿದ ಬಾಲಿವುಡ್ ನಟಿ
Follow us
ಮಂಜುನಾಥ ಸಿ.
|

Updated on:Nov 16, 2023 | 6:12 PM

ಕೆಜಿಎಫ್‘ (KGF) ಸಿನಿಮಾ, ಯಶ್​ ಅನ್ನು ಅತ್ಯಂತ ಎತ್ತರಕ್ಕೆ ಕೊಂಡೊಯ್ದಿದೆ. ಕನ್ನಡ ಚಿತ್ರರಂಗದ ಕಡೆಗೆ ತಿರುಗಿಯೂ ನೋಡದಿದ್ದ ಸೆಲೆಬ್ರಿಟಿಗಳೆಲ್ಲ ಈಗ ಯಶ್ ಜೊತೆ ನಟಿಸುವಾಸೆ ಎನ್ನುತ್ತಿದ್ದಾರೆ. ತಮ್ಮನ್ನು ‘ಕೆಜಿಎಫ್’ ಜೊತೆ ಸಮೀಕರಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್​ನ ಹೈಫೈ ನಟಿಯರಲ್ಲಿ ಒಬ್ಬರಾಗಿರುವ ಕರೀನಾ ಕಪೂರ್ ಇದೀಗ ಶೋ ಒಂದರಲ್ಲಿ ‘ಕೆಜಿಎಫ್’ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಮಾತ್ರವಲ್ಲದೆ, ದಕ್ಷಿಣದ ಇತರೆ ನಟರ ಬದಲಿಗೆ ಯಶ್​ರನ್ನು ಆರಿಸಿದ್ದಾರೆ.

ಕರೀನಾ ಕಪೂರ್ ಇತ್ತೀಚೆಗೆ ಬಾಲಿವುಡ್​ನ ಜನಪ್ರಿಯ ಹಾಗೂ ವಿವಾದಾತ್ಮಕ ಶೋ ಎನಿಸಿಕೊಂಡಿರುವ ‘ಕಾಫಿ ವಿತ್ ಕರಣ್’ ಸೀಸನ್ ಏಳರಲ್ಲಿ ನಟಿ ಆಲಿಯಾ ಭಟ್ ಜೊತೆಗೆ ಪಾಲ್ಗೊಂಡಿದ್ದರು. ಶೋನಲ್ಲಿ ಕರಣ್ ಜೋಹರ್, ಆಲಿಯಾ ಹಾಗೂ ಕರೀನಾಗೆ ಹಲವು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು. ಕರೀನಾರಿಗೆ ‘ದಕ್ಷಿಣ ಭಾರತದ ಸ್ಟಾರ್​ಗಳೊಟ್ಟಿಗೆ ನಟಿಸುವ ಅವಕಾಶ ಸಿಕ್ಕರೆ ಯಾರೊಟ್ಟಿಗೆ ನಟಿಸಲು ಇಷ್ಟಪಡುತ್ತೀರಿ’ ಎಂದು ಕೇಳಿದರು. ಆಯ್ಕೆಯಾಗಿ ಅಲ್ಲು ಅರ್ಜುನ್, ಪ್ರಭಾಸ್, ವಿಜಯ್ ದೇವರಕೊಂಡ, ರಾಮ್ ಚರಣ್ ಹಾಗೂ ಯಶ್ ಹೆಸರುಗಳನ್ನು ಕರಣ್ ಜೋಹರ್ ಹೇಳಿದರು.

ಹೆಚ್ಚು ಯೋಚನೆಯನ್ನೂ ಸಹ ಮಾಡದೆ ಪ್ರಶ್ನೆಗೆ ಉತ್ತರಿಸಿದ ನಟಿ ಕರೀನಾ ಕಪೂರ್, ‘ನಾನು ‘ಕೆಜಿಎಫ್’ ಮಾದರಿ ಯುವತಿ. ನನಗೆ ಯಶ್ ಜೊತೆ ನಟಿಸಲು ಇಷ್ಟ’ ಎಂದರು. ಮುಂದುವರೆದು ತಾವು ‘ಕೆಜಿಎಫ್’ ಸಿನಿಮಾವನ್ನು ವೀಕ್ಷಿಸಿರುವುದಾಗಿಯೂ ಕರೀನಾ ಕಪೂರ್ ಹೇಳಿದರು.

ಇದನ್ನೂ ಓದಿ:ಕೆಜಿಎಫ್ಗೆ ಮುಂಚೆ ಯಶ್ ಸ್ಟಾರ್ ಆಗಿರಲಿಲ್ಲ: ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್

‘ಕೆಜಿಎಫ್’ ಸಿನಿಮಾ ಬಾಲಿವುಡ್​ನಲ್ಲಿ ದೊಡ್ಡ ಹವಾ ಎಬ್ಬಿಸಿದೆ. ಬಾಲಿವುಡ್​ನ ತಾರೆಗಳಾದ ಸಂಜಯ್ ದತ್ ಹಾಗೂ ರವೀನಾ ಟಂಡನ್ ಸಹ ಆ ಸಿನಿಮಾದಲ್ಲಿ ನಟಿಸಿದ್ದಾರೆ. ಸ್ವತಃ ಕರಣ್ ಜೋಹರ್ ಸಹ ‘ಕೆಜಿಎಫ್’ ಸಿನಿಮಾದ ಹಿಂದಿ ವಿತರಣೆಯ ಪಾಲುದಾರರಾಗಿದ್ದರು. ಬೆಂಗಳೂರಿನಲ್ಲಿ ನಡೆದ ‘ಕೆಜಿಎಫ್ 2’ ಸಿನಿಮಾದ ಪ್ರೆಸ್ ಮೀಟ್​ ಅನ್ನು ನಿರೂಪಣೆ ಮಾಡಿದ್ದು ಸಹ ಕರಣ್ ಜೋಹರ್ ಅವರೇ.

‘ಕೆಜಿಎಫ್’ ಸಿನಿಮಾದ ಬಳಿಕ ಯಶ್ ಇನ್ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಆದರೆ ‘ಕೆಜಿಎಫ್’ ಕ್ಕಿಂತಲೂ ದೊಡ್ಡ ಸಿನಿಮಾಕ್ಕೆ ಯಶ್ ತಯಾರಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ವಿದೇಶದಿಂದ ಆಕ್ಷನ್ ನಿರ್ದೇಶಕರನ್ನು ತಮ್ಮ ಹೊಸ ಸಿನಿಮಾದ ಚಿತ್ರೀಕರಣಕ್ಕೆ ಯಶ್ ಕರೆತಂದಿದ್ದಾರೆ. ಶ್ರೀಲಂಕಾನಲ್ಲಿ ಸಿನಿಮಾದ ಚಿತ್ರೀಕರಣ ಮಾಡಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಯಶ್​ರ ಮುಂದಿನ ಸಿನಿಮಾಕ್ಕೆ ಸ್ವತಃ ಅವರೇ ಬಂಡವಾಳ ಸಹ ಹೂಡಲಿದ್ದು, ನಿರ್ದೇಶಕರು ಹಾಗೂ ಕತೆಯೂ ಫೈನಲ್ ಆಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:53 pm, Thu, 16 November 23

ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್