AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೂಟಿಂಗ್​ ಸೆಟ್​ನಲ್ಲಿ ಊಟ ಮಾಡಿ ಬೈಯಿಸಿಕೊಂಡಿದ್ದ ಸಂಜಯ್​ ದತ್​; ‘ಕೆಜಿಎಫ್​’ ಅಧೀರನ ಕಷ್ಟದ ಹಾದಿ

ಸಂಜಯ್​ ದತ್​ ನಟಿಸಿದ ಮೊದಲ ಸಿನಿಮಾ ‘ರಾಕಿ’. ಆ ಚಿತ್ರವನ್ನು ಅವರ ತಂದೆ ಸುನಿಲ್​ ದತ್​ ನಿರ್ದೇಶಿಸಿದ್ದರು. ಆದರೂ ತಮ್ಮ ಮಗನಿಗೆ ಅವರು ವಿಐಪಿ ಟ್ರೀಟ್​ಮೆಂಟ್​ ನೀಡಿರಲಿಲ್ಲ. ಹಸಿವಾದಾಗ ಊಟ ಮಾಡಲು ಕೂಡ ಸಂಜಯ್​ ದತ್​ಗೆ ಅವಕಾಶ ಇರಲಿಲ್ಲ!

ಶೂಟಿಂಗ್​ ಸೆಟ್​ನಲ್ಲಿ ಊಟ ಮಾಡಿ ಬೈಯಿಸಿಕೊಂಡಿದ್ದ ಸಂಜಯ್​ ದತ್​; ‘ಕೆಜಿಎಫ್​’ ಅಧೀರನ ಕಷ್ಟದ ಹಾದಿ
ಸಂಜಯ್ ದತ್
TV9 Web
| Edited By: |

Updated on: Sep 26, 2021 | 9:27 AM

Share

ಬಾಲಿವುಡ್​ನಲ್ಲಿ ನಟ ಸಂಜಯ್​ ದತ್​ ಸೂಪರ್​ ಸ್ಟಾರ್​. ಅವರ ಕಾಲ್​ಶೀಟ್​ ಸಖತ್ ಡಿಮ್ಯಾಂಡ್​ ಇದೆ. ‘ಕೆಜಿಎಫ್​: ಚಾಪ್ಟರ್​ 2’ ಮೂಲಕ ಅವರು ಕನ್ನಡ ಚಿತ್ರರಂಗಕ್ಕೂ ಕಾಲಿಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ‘ಅಧೀರ’ ಎಂಬ ಖಡಕ್​ ವಿಲನ್​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್​ನಲ್ಲಿ ಅವರು ಅನೇಕ ಹಿಟ್​ ಚಿತ್ರಗಳನ್ನು ನೀಡಿದ್ದಾರೆ. ಆದರೆ ಅವರ ಹಾದಿ ಅಷ್ಟು ಸುಲಭವಾಗಿ ಇರಲಿಲ್ಲ. ಅವರ ತಂದೆ ಸುನಿಲ್ ದತ್​ ಹಿಂದಿ ಚಿತ್ರರಂಗದಲ್ಲಿ ಸ್ಟಾರ್​ ನಟನಾಗಿದ್ದರು. ಹಾಗಿದ್ದರೂ ಕೂಡ ಅವರು ತಮ್ಮ ಮಗನಿಗೆ ಮೊದಲ ಸಿನಿಮಾದ ಸೆಟ್​ನಲ್ಲಿ ಐಷಾರಾಮಿ ಸೌಲಭ್ಯಗಳನ್ನು ನೀಡಿರಲಿಲ್ಲ. ಆ ವಿಚಾರದ ಬಗ್ಗೆ ಇತ್ತೀಚೆಗೆ ಸಂಜಯ್​ ದತ್​ ಬಾಯಿ ಬಿಟ್ಟಿದ್ದಾರೆ. ತಮ್ಮ ಮೊದಲ ಸಿನಿಮಾದ ಶೂಟಿಂಗ್​ ವೇಳೆ ನಡೆದ ಒಂದು ಘಟನೆಯನ್ನು ಸಂಜಯ್​ ದತ್​ ನೆನಪಿಸಿಕೊಂಡಿದ್ದಾರೆ.

ಸಂಜಯ್​ ದತ್​ ನಟಿಸಿದ ಮೊದಲ ಸಿನಿಮಾ ‘ರಾಕಿ’. ಆ ಚಿತ್ರವನ್ನು ಅವರ ತಂದೆ ಸುನಿಲ್​ ದತ್​ ನಿರ್ದೇಶಿಸಿದ್ದರು. ಆದರೂ ತಮ್ಮ ಮಗನಿಗೆ ಅವರು ವಿಐಪಿ ಟ್ರೀಟ್​ಮೆಂಟ್​ ನೀಡಿರಲಿಲ್ಲ. ಒಬ್ಬ ಹೊಸ ಹೀರೋ ಕಷ್ಟಪಡುವ ರೀತಿಯಲ್ಲೇ ಸಂಜಯ್​ ದತ್ ಕೂಡ ಶ್ರಮಿಸಬೇಕಿತ್ತು. ಎಷ್ಟರಮಟ್ಟಿಗೆಂದರೆ, ಹಸಿವಾದಾಗ ಊಟ ಮಾಡಲು ಕೂಡ ಅವರಿಗೆ ಅವಕಾಶ ಇರಲಿಲ್ಲ!

‘ನಮ್ಮ ಅಪ್ಪನೇ ನಿರ್ದೇಶನ ಮಾಡುತ್ತಿದ್ದರಿಂದ ‘ರಾಕಿ’ ಸಿನಿಮಾದಲ್ಲಿ ಕೆಲಸ ಮಾಡುವುದು ನನಗೆ ತುಂಬ ಕಷ್ಟವಾಗಿತ್ತು. ಆಗ ಮಧ್ಯಾಹ್ನ ಊಟದ ಬ್ರೇಕ್​ ಇರುತ್ತಿರಲಿಲ್ಲ. ಕಡಿಮೆ ಸಮಯ ತೆಗೆದುಕೊಂಡು ಏನಾದರೂ ತಿಂದು ಬರಬಹುದಷ್ಟೇ ಎಂದು ಸಹಾಯಕ ನಿರ್ದೇಶಕರೊಬ್ಬರು ನನಗೆ ಹೇಳಿದರು. ಹಾಗಾಗಿ ನಾನು ತಿನ್ನಲು ಕುಳಿತೆ. ಅದೇ ಸಮುದಲ್ಲಿ ಅಪ್ಪ ಶೂಟಿಂಗ್​ಗೆ ರೆಡಿ ಆಗಿದ್ದರು. ನಾನು ಸ್ಥಳದಲ್ಲಿ ಇಲ್ಲದಿರುವುದನ್ನು ಗಮನಿಸಿದ ಅವರು ಕೂಡಲೇ ನನ್ನನ್ನು ಕರೆಸಿದರು. ಊಟಕ್ಕೆ ಬ್ರೇಕ್​ ತೆಗೆದುಕೊಂಡಿದ್ದಕ್ಕಾಗಿ ಹಿಗ್ಗಾಮುಗ್ಗಾ ಬೈಯ್ದರು’ ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ ಸಂಜಯ್​ ದತ್​.

‘ನಿನಗೆ ಊಟಕ್ಕೆ ಹೋಗು ಅಂತ ಹೇಳಿದ್ದು ಯಾರು? ನಾನು ಬ್ರೇಕ್​ ಅಂತ ಹೇಳಿದ್ನಾ? ನಿರ್ದೇಶಕರ ಮಗ ಅಂತ ಈ ರೀತಿ ಮಾಡ್ತಾ ಇದೀಯಾ’ ಎಂದು ಸುನಿಲ್​ ಕೂಗಾಡಿದ್ದರಂತೆ. ‘ಶೂಟಿಂಗ್​ ಸೆಟ್​ನಲ್ಲಿ ಅಪ್ಪನನ್ನು ನಾನು ಸರ್​ ಅಂತ ಕರೆಯುತ್ತಿದ್ದೆ’ ಎಂದು ಕೂಡ ಸಂಜಯ್​ ದತ್​ ಹೇಳಿದ್ದಾರೆ. ಇಷ್ಟೆಲ್ಲ ಕಷ್ಟಪಟ್ಟು ಅವರು ಮಾಡಿದ ಮೊದಲ ಸಿನಿಮಾ ಸೂಪರ್​ ಹಿಟ್​ ಆಯಿತು. ಆದರೆ ಆ ಚಿತ್ರವನ್ನು ನೋಡಲು ಸಂಜಯ್​ ದತ್​ ತಾಯಿ ನರ್ಗೀಸ್​ ದತ್​ ಇರಲಿಲ್ಲ. ಸಿನಿಮಾ ಬಿಡುಗಡೆ ಆಗುವುದಕ್ಕೂ ಕೆಲವೇ ದಿನಗಳ ಮುನ್ನ ಅವರು ಕ್ಯಾನ್ಸರ್​ನಿಂದ ನಿಧನರಾದರು. ಆ ಚಿತ್ರದ ಪ್ರೀಮಿಯರ್​ ಪ್ರದರ್ಶನದ ದಿನ ಚಿತ್ರಮಂದಿರದಲ್ಲಿ ನರ್ಗೀಸ್ ದತ್​ಗಾಗಿ ಒಂದು ಸೀಟ್​ ಖಾಲಿ ಬಿಡಲಾಗಿತ್ತು.​

ಇದನ್ನೂ ಓದಿ:

ಬಾಯ್​ಫ್ರೆಂಡ್​ ಕಳೆದುಕೊಂಡಿದ್ದ ಸಂಜಯ್​ ದತ್​ ಪುತ್ರಿಗೆ ಅಭಿಮಾನಿಯ ಪ್ರಪೋಸ್​; ಒಪ್ಪಿಕೊಂಡ್ರಾ ತ್ರಿಶಾಲಾ?

ಕೆಜಿಎಫ್ 2 ಕ್ಲೈಮ್ಯಾಕ್ಸ್ ಶೂಟಿಂಗ್: ಪ್ರಶಾಂತ್ ನೀಲ್ ಬೇಡಿಕೆಗೆ ನೋ ಎಂದ ಸಂಜಯ್ ದತ್

Follow Us
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ