AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಯ್​ಫ್ರೆಂಡ್​ ಕಳೆದುಕೊಂಡಿದ್ದ ಸಂಜಯ್​ ದತ್​ ಪುತ್ರಿಗೆ ಅಭಿಮಾನಿಯ ಪ್ರಪೋಸ್​; ಒಪ್ಪಿಕೊಂಡ್ರಾ ತ್ರಿಶಾಲಾ?

ಪ್ರಿಯಕರನ ಸಾವಿನಿಂದ ಎದುರಾದ ಆಘಾತದಿಂದ ಹೊರಬರಲು ತ್ರಿಶಾಲಾ ತುಂಬ ಕಷ್ಟಪಟ್ಟಿದ್ದರು. ಸೋಶಿಯಲ್​ ಮೀಡಿಯಾದಿಂದ ಸ್ವಲ್ಪ ಸಮಯ ದೂರ ಉಳಿದುಕೊಂಡಿದ್ದ ಅವರು ಈಗ ಮತ್ತೆ ಆ್ಯಕ್ಟೀವ್​ ಆಗಿದ್ದಾರೆ.

ಬಾಯ್​ಫ್ರೆಂಡ್​ ಕಳೆದುಕೊಂಡಿದ್ದ ಸಂಜಯ್​ ದತ್​ ಪುತ್ರಿಗೆ ಅಭಿಮಾನಿಯ ಪ್ರಪೋಸ್​; ಒಪ್ಪಿಕೊಂಡ್ರಾ ತ್ರಿಶಾಲಾ?
ಸಂಜಯ್​ ದತ್​, ತ್ರಿಶಾಲಾ
TV9 Web
| Edited By: |

Updated on: Sep 07, 2021 | 4:15 PM

Share

ನಟ ಸಂಜಯ್​ ದತ್​ ಅವರು ಹಲವು ದಶಕಗಳಿಂದ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಸ್ಟಾರ್​ ಕಿಡ್​ಗಳು ಚಿತ್ರರಂಗಕ್ಕೆ ಎಂಟ್ರಿ ನೀಡುವುದು ಸಹಜ. ಆದರೆ ಸಂಜಯ್ ದತ್​ ಪುತ್ರಿ ತ್ರಿಶಾಲಾ ಅವರಿಗೆ ಈ ಮಾತು ಅನ್ವಯ ಆಗುವುದಿಲ್ಲ. ಅವರು ಬೇರೆ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಬಣ್ಣದ ಲೋಕಕ್ಕೆ ಬಾರದಿದ್ದರೂ ಕೂಡ ಅವರ ಜನಪ್ರಿಯತೆಗೇನೂ ಕಮ್ಮಿ ಇಲ್ಲ. ಸೋಶಿಯಲ್​ ಮೀಡಿಯಾದಲ್ಲಿ ಅಪಾರ ಫಾಲೋವರ್ಸ್​ ಹೊಂದಿರುವ ತ್ರಿಶಾಲಾ ಒಂದಿಲ್ಲೊಂದು ಕಾರಣಕ್ಕೆ ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಈಗ ಪ್ರಪೋಸ್​ ವಿಚಾರದಿಂದ ಅವರು ಮತ್ತೆ ಸುದ್ದಿ ಆಗಿದ್ದಾರೆ.

ಸಂಜಯ್​ ದತ್​ ಮೊದಲ ಪತ್ನಿ ರಿಚಾ ಶರ್ಮಾ ಅವರ ಪುತ್ರಿಯೇ ತ್ರಿಶಾಲಾ. ಸೈಕೋಥೆರಪಿಸ್ಟ್​ ಆಗಿರುವ ಅವರು ಇನ್​ಸ್ಟಾಗ್ರಾಮ್​ ಮೂಲಕ ಇತ್ತೀಚೆಗೆ ಅಭಿಮಾನಿಗಳ ಜೊತೆ ಪ್ರಶ್ನೋತ್ತರ ನಡೆಸಿದರು. ಮಾನಸಿಕ ಆರೋಗ್ಯದ ಕುರಿತು ಪ್ರಶ್ನೆಗಳನ್ನು ಆಹ್ವಾನಿಸಿದರು. ಆ ವೇಳೆ ಅವರಿಗೆ ಅಭಿಮಾನಿಯೊಬ್ಬ ನೇರವಾಗಿ ಪ್ರಪೋಸ್​ ಮಾಡಿದ್ದಾನೆ. ‘ನೀವು ಯಾವಾಗಲೂ ನನ್ನ ಪ್ರಶ್ನೆಗೆ ಉತ್ತರ ನೀಡಿಲ್ಲ. ನನ್ನನ್ನು ಮದುವೆ ಆಗುತ್ತೀರಾ?’ ಎಂದು ಕೇಳಿದ ಆತನಿಗೆ ತ್ರಿಶಾಲಾ ಪ್ರತಿಕ್ರಿಯೆ ನೀಡಿದ್ದಾರೆ.

‘ಇದಕ್ಕೆ ನಾನು ಎಂದಿಗೂ ಉತ್ತರಿಸುವುದಿಲ್ಲ. ಯಾಕೆಂದರೆ ಅದು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ್ದಲ್ಲ. ಈಗಂತೂ ಹೇಳದೇ ಕೇಳದೇ ಬ್ರೇಕಪ್​ಗಳಾಗುತ್ತಿವೆ. ಮೊದಲ ಡೇಟಿಂಗ್ ಬಳಿಕ ಹುಡುಗರು ಮಾತುಕತೆಯನ್ನೇ ಕಡಿಮೆ ಮಾಡುತ್ತಾರೆ. ಆದ್ದರಿಂದ ನಿಮ್ಮನ್ನು ಯಾಕೆ ಮದುವೆ ಆಗಬಾರದು? ಈಗ ಖುಷಿ ಆಯಿತೇ?​’ ಎಂದು ತ್ರಿಶಾಲಾ ಉತ್ತರ ನೀಡಿದ್ದಾರೆ.

ಅಂದಹಾಗೆ, ತ್ರಿಶಾಲಾ ಈ ಹಿಂದೆ ಯುವಕನೊಬ್ಬನ ಜೊತೆ ಡೇಟಿಂಗ್​ ಮಾಡುತ್ತಿದ್ದರು. 2019ರ ಜುಲೈ ತಿಂಗಳಲ್ಲಿ ಆತ ನಿಧನ ಹೊಂದಿರುವ ಸುದ್ದಿ ಕೇಳಿಬಂತು. ಅದಕ್ಕೂ ಮೊದಲೇ ಅವರ ಬ್ರೇಕಪ್​ ಆಗಿತ್ತು ಎಂಬ ಮಾಹಿತಿ ಇದೆ. ಪ್ರಿಯಕರನ ಸಾವಿನಿಂದ ಎದುರಾದ ಆಘಾತದಿಂದ ಹೊರಬರಲು ತ್ರಿಶಾಲಾ ತುಂಬ ಕಷ್ಟಪಟ್ಟಿದ್ದರು. ಆ ಬಗ್ಗೆ ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿ ಮೂಲಕ ಅವರು ಆಗಾಗ ಹೇಳಿಕೊಂಡಿದ್ದಾರೆ. ಆ ಎಲ್ಲ ಅನುಭವಗಳ ಆಧಾರದ ಮೇಲೆ ಅವರು ಪ್ರೀತಿ, ಬ್ರೇಕಪ್​, ಪ್ರಪೋಸ್​ ಮುಂತಾದ ವಿಚಾರಗಳಿಗೆ ತಮ್ಮದೇ ರೀತಿಯಲ್ಲಿ ಅರ್ಥ ಕಂಡುಕೊಂಡಿದ್ದಾರೆ. ಬಾಯ್​ಫ್ರೆಂಡ್​ ನಿಧನದ ಬಳಿಕ ಸೋಶಿಯಲ್​ ಮೀಡಿಯಾದಿಂದ ಸ್ವಲ್ಪ ಸಮಯ ದೂರ ಉಳಿದುಕೊಂಡಿದ್ದ ಅವರು ಈಗ ಮತ್ತೆ ಆ್ಯಕ್ಟೀವ್​ ಆಗಿದ್ದಾರೆ.

ಇದನ್ನೂ ಓದಿ:

ಸಂಜಯ್​ ದತ್​ ಮಗಳು ತ್ರಿಶಲಾ ಬಾಯ್​ ಫ್ರೆಂಡ್​ ಸತ್ತಿದ್ದು ಹೇಗೆ? ಸ್ಟಾರ್ ಪುತ್ರಿಗೆ ಕಿರಿಕಿರಿ ತಂದ ಪ್ರಶ್ನೆ!

ಸಂಜಯ್​ ದತ್ ಬದುಕಿನ 308 ಪ್ರೇಯಸಿಯರು ಮತ್ತು ಮೂವರು ಪತ್ನಿಯರ ಬಗ್ಗೆ ಅಚ್ಚರಿಯ ಮಾಹಿತಿ

ವಾರಾಣಸಿ-ಲಕ್ನೋ ರೈಲಿನೊಳಗೆ ಎರಡು ಗುಂಪುಗಳ ನಡುವೆ ಹೊಡೆದಾಟ
ವಾರಾಣಸಿ-ಲಕ್ನೋ ರೈಲಿನೊಳಗೆ ಎರಡು ಗುಂಪುಗಳ ನಡುವೆ ಹೊಡೆದಾಟ
ಗಾಯಗೊಂಡಿದ್ದ ಚಾಲಕ ಮೊಹಮ್ಮದ್ ರಫೀಕ್ ಸಾವು, ಗೋಳಾಡಿದ ಪತ್ನಿ
ಗಾಯಗೊಂಡಿದ್ದ ಚಾಲಕ ಮೊಹಮ್ಮದ್ ರಫೀಕ್ ಸಾವು, ಗೋಳಾಡಿದ ಪತ್ನಿ
ಉಡುಪಿ ಕೃಷ್ಣನಿಗಾಗಿ ಸಿದ್ಧವಾಯ್ತು ಚೆಂದದ ಚಿನ್ನದ ರಥ! ಹೇಗಿದೆ ನೋಡಿ
ಉಡುಪಿ ಕೃಷ್ಣನಿಗಾಗಿ ಸಿದ್ಧವಾಯ್ತು ಚೆಂದದ ಚಿನ್ನದ ರಥ! ಹೇಗಿದೆ ನೋಡಿ
ಚಿತ್ರದುರ್ಗ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಸಾವು
ಚಿತ್ರದುರ್ಗ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಸಾವು
ಮೃತರ ಕುಟುಂಬಗಳಿಗೆ ಶಾಸಕ ಪ್ರದೀಪ್ ಈಶ್ವರ್ ನೆರವಿನ ಭರವಸೆ
ಮೃತರ ಕುಟುಂಬಗಳಿಗೆ ಶಾಸಕ ಪ್ರದೀಪ್ ಈಶ್ವರ್ ನೆರವಿನ ಭರವಸೆ
2026 ಗುರು ಗ್ರಹದ ಸಂಚಾರದಿಂದ ಮಕರ ರಾಶಿಯವರಿಗೆ ಗುರುಬಲ ಮತ್ತು ಅದೃಷ್ಟ
2026 ಗುರು ಗ್ರಹದ ಸಂಚಾರದಿಂದ ಮಕರ ರಾಶಿಯವರಿಗೆ ಗುರುಬಲ ಮತ್ತು ಅದೃಷ್ಟ
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್