AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾತ್ರಿ ಸುಶಾಂತ್​ ಜತೆ ವೈನ್​ ಕುಡಿಯುತ್ತ, ಸೋಲಿಗೆ ಕಾರಣ ಹುಡುಕಿದ್ದ ಘಟನೆ ನೆನಪಿಸಿಕೊಂಡ ಕೃತಿ ಸನೋನ್​

2017ರಲ್ಲಿ ‘ರಾಬ್ತಾ’ ಸಿನಿಮಾ ತೆರೆಕಂಡಿತ್ತು. ಕೃತಿ ಸನೋನ್​ ಮತ್ತು ಸುಶಾಂತ್​ ಸಿಂಗ್​ ರಜಪೂತ್​ ಎರಡು ಶೇಡ್​ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಚಿತ್ರಕ್ಕೆ ಜನಮೆಚ್ಚುಗೆ ಸಿಗಲಿಲ್ಲ.

ರಾತ್ರಿ ಸುಶಾಂತ್​ ಜತೆ ವೈನ್​ ಕುಡಿಯುತ್ತ, ಸೋಲಿಗೆ ಕಾರಣ ಹುಡುಕಿದ್ದ ಘಟನೆ ನೆನಪಿಸಿಕೊಂಡ ಕೃತಿ ಸನೋನ್​
ಕೃತಿ ಸನೋನ್​, ಸುಶಾಂತ್​ ಸಿಂಗ್​ ರಜಪೂತ್
TV9 Web
| Updated By: ಮದನ್​ ಕುಮಾರ್​|

Updated on: Jan 13, 2022 | 12:22 PM

Share

ನಟಿ ಕೃತಿ ಸನೋನ್​ (Kriti Sanon) ಅವರು ಈಗ ಬಾಲಿವುಡ್​ನಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಹಲವು ಹಿಟ್​ ಸಿನಿಮಾಗಳನ್ನು ನೀಡಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಕಳೆದ ವರ್ಷ ನೆಟ್​ಫ್ಲಿಕ್ಸ್​ ಮೂಲಕ ತೆರೆಕಂಡ ‘ಮಿಮಿ’ ಸಿನಿಮಾದಿಂದ ಅವರಿಗೆ ಭರ್ಜರಿ ಗೆಲುವು ಸಿಕ್ಕಿತು. ಚಿತ್ರರಂಗದಲ್ಲಿ ಅವರ ಕೆಲವು ಸಿನಿಮಾಗಳು ಹೀನಾಯವಾಗಿ ಸೋತ ಉದಾಹರಣೆಯೂ ಇದೆ. ನಟ ಸುಶಾಂತ್​ ಸಿಂಗ್​ ರಜಪೂತ್​ ಜೊತೆ ಅವರು ‘ರಾಬ್ತಾ’ (Raabta Movie) ಸಿನಿಮಾದಲ್ಲಿ ಅಭಿನಯಿಸಿದ್ದರು. ಪ್ರೇಕ್ಷಕರ ಮನಗೆಲ್ಲುವಲ್ಲಿ ಆ ಚಿತ್ರ ವಿಫಲವಾಗಿತ್ತು. ಆ ಬೇಸರವನ್ನು ತೋಡಿಕೊಳ್ಳಲು ಸುಶಾಂತ್​ ಸಿಂಗ್​ ರಜಪೂತ್​ (Sushant Singh Rajput), ಕೃತಿ ಸನೋನ್​ ಮತ್ತು ನಿರ್ದೇಶಕ ದಿನೇಶ್ ವಿಜನ್​ ಅವರು ರಾತ್ರಿ ವೇಳೆ ವೈನ್​ ಕುಡಿಯುತ್ತ ಚರ್ಚೆ ಮಾಡಿದ್ದರು ಎಂಬ ಸಂಗತಿಯನ್ನು ಕೃತಿ ಈಗ ನೆನಪಿಸಿಕೊಂಡಿದ್ದಾರೆ.

2017ರಲ್ಲಿ ‘ರಾಬ್ತಾ’ ಸಿನಿಮಾ ತೆರೆಕಂಡಿತ್ತು. ಕೃತಿ ಸನೋನ್​ ಮತ್ತು ಸುಶಾಂತ್​ ಸಿಂಗ್​ ರಜಪೂತ್​ ಅವರು ಎರಡು ಶೇಡ್​ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಚಿತ್ರಕ್ಕೆ ಜನಮೆಚ್ಚುಗೆ ಸಿಗಲಿಲ್ಲ. ಅದರಿಂದ ತೀವ್ರ ಬೇಸರಕ್ಕೆ ಒಳಗಾದ ನಿರ್ದೇಶಕ ದಿನೇಶ್​ ವಿಜನ್​ ಅವರು ಕೃತಿ ಮತ್ತು ಸುಶಾಂತ್​ಗೆ ಕರೆಮಾಡಿ ಮನೆಗೆ ಕರೆಸಿಕೊಂಡಿದ್ದರು. ಈ ಮೂವರೂ ವೈನ್​ ಕುಡಿಯುತ್ತ, ತಮ್ಮ ಸೋಲಿಗೆ ಕಾರಣ ಏನೆಂಬುದನ್ನು ಅವಲೋಕಿಸಿದ್ದರು.

ಸಿನಿಮಾದ ಕಥೆ ಬಗ್ಗೆ ಕೃತಿ ಕೆಲವು ಸಲಹೆಗಳನ್ನು ಮೊದಲೇ ನೀಡಿದ್ದರು. ಆದರೆ ಆ ಸಲಹೆಗಳನ್ನು ನಿರ್ದೇಶಕರು ಸ್ವೀಕರಿಸಿರಲಿಲ್ಲ. ಸಿನಿಮಾದ ಸೋಲಿಗೆ ಅದು ಕೂಡ ಒಂದು ಕಾರಣ ಇರಬಹುದು. ‘ಏನಾಗಿದೆ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು. ಪ್ರೇಕ್ಷಕರಿಗಾಗಿಯೇ ಸಿನಿಮಾ ಮಾಡಿದ ಮೇಲೆ ಈ ಸಿನಿಮಾ ಪ್ರೇಕ್ಷಕರಿಗೆ ಅರ್ಥವಾಗಿಲ್ಲ ಅಂತ ಹೇಳಬಾರದು. ಜನರಿಗೆ ಸಿನಿಮಾ ಅರ್ಥ ಆಗಿಲ್ಲ ಎಂದರೆ ಅದು ಕೂಡ ನಮ್ಮದೇ ತಪ್ಪು. ಕಾಲಕ್ಕಿಂತ ನಾವು ಮುಂದಿದ್ದೇವೆ ಎಂದುಕೊಳ್ಳಬಾರದು. ಈ ಕಾಲದ ಪ್ರೇಕ್ಷಕರಿಗಾಗಿಯೇ ಸಿನಿಮಾ ಮಾಡಬೇಕು’ ಎಂಬುದು ಕೃತಿ ಸನೋನ್​ ಅಭಿಪ್ರಾಯ.

ಈ ಎಲ್ಲ ವಿಚಾರಗಳನ್ನು ಆ ರಾತ್ರಿ ಕೃತಿ ಸನೋನ್​, ಸುಶಾಂತ್​ ಸಿಂಗ್​ ರಜಪೂತ್​, ದಿನೇಶ್​ ವಿಜನ್​ ಚರ್ಚೆ ಮಾಡಿದ್ದರು. ಇಂದು ಸುಶಾಂತ್​ ನಮ್ಮೊಂದಿಗೆ ಇಲ್ಲ. 2020ರ ಜೂ.14ರಂದು ಸುಶಾಂತ್​ ಅನುಮಾನಾಸ್ಪದ ರೀತಿಯಲ್ಲಿ ನಿಧನರಾದರು. ಅವರ ಸಾವಿಗೆ ಸೂಕ್ತ ಕಾರಣ ಏನು ಎಂಬುದು ಈವರೆಗೂ ಸ್ಪಷ್ಟವಾಗಿಲ್ಲ. ಕೋರ್ಟ್​ಗೆ ಸಿಬಿಐ ನೀಡಲಿರುವ ಅಂತಿಮ ವರದಿಗಾಗಿ ಎಲ್ಲರೂ ನಿರೀಕ್ಷಿಸುತ್ತಿದ್ದಾರೆ.

ಚಿತ್ರರಂಗದಲ್ಲಿ ಕೃತಿ ಸನೋನ್​ ಅವರಿಗೆ ಅನೇಕ ಆಫರ್​ಗಳಿವೆ. ‘ಬಚ್ಚನ್​ ಪಾಂಡೆ’, ‘ಆದಿಪುರುಷ್​’ ಮುಂತಾದ ಹೈವೋಲ್ಟೇಜ್​ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ‘ಬೇಡಿಯಾ’, ‘ಗಣಪತ್​’ ಸೇರಿ ಅನೇಕ ಚಿತ್ರಗಳು ಅವರ ಕೈಯಲ್ಲಿವೆ.

ಇದನ್ನೂ ಓದಿ:

ಇದ್ದಕ್ಕಿದ್ದಂತೆ ಆ್ಯಕ್ಟೀವ್​ ಆಯ್ತು ಸುಶಾಂತ್​ ಸಿಂಗ್​ ಫೇಸ್​ಬುಕ್​ ಖಾತೆ; ಗಾಬರಿಗೊಂಡ ಅಭಿಮಾನಿಗಳು

‘ಪರಮ ಸುಂದರಿ’ ಮನೆ ಸೇರಿತು 2.4 ಕೋಟಿ ರೂ. ಕಾರು; ‘ಮಿಮಿ’ ಗೆದ್ದ ಬಳಿಕ ಬದಲಾಯ್ತು ಕೃತಿ ಬದುಕು

ಪುತ್ತೂರಿನಲ್ಲಿ ನೈತಿಕ ಪೊಲೀಸ್‌ಗಿರಿ: ಎಸ್​ಪಿ ಹೇಳಿದ್ದಿಷ್ಟು
ಪುತ್ತೂರಿನಲ್ಲಿ ನೈತಿಕ ಪೊಲೀಸ್‌ಗಿರಿ: ಎಸ್​ಪಿ ಹೇಳಿದ್ದಿಷ್ಟು
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
ರಶ್ಮಿಕಾ ಮಂದಣ್ಣ ತಪ್ಪು ಮಾತಾಡಿದ್ದಾರೆ, ಕ್ಷಮಿಸಿ ಬಿಡೋಣ: ನಟಿ ಹರ್ಷಿಕಾ
ರಶ್ಮಿಕಾ ಮಂದಣ್ಣ ತಪ್ಪು ಮಾತಾಡಿದ್ದಾರೆ, ಕ್ಷಮಿಸಿ ಬಿಡೋಣ: ನಟಿ ಹರ್ಷಿಕಾ