AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದಯವಿಟ್ಟು ತಪ್ಪು ತಿಳಿಯಬೇಡಿ’; ಮಧ್ಯರಾತ್ರಿ ಆದ ಬಳಿಕ ಸನ್ನಿ ಲಿಯೋನ್​ ಮನೆಗೆ ಹೋಗಿದ್ದ ಖ್ಯಾತ ಗಾಯಕ

ಸನ್ನಿ ಲಾಸ್​ ಏಂಜಲೀಸ್​ನಲ್ಲಿ ಮನೆ ಹೊಂದಿದ್ದಾರೆ. ಈ ಮನೆಗೆ ಮಿಕಾ ಸಿಂಗ್​ ಮುಂಜಾನೆ 4 ಗಂಟೆಗೆ ತೆರಳಿದ್ದರು. ಈ ಬಗ್ಗೆ ಮಿಕಾ ಸಿಂಗ್​ ಹೇಳಿಕೊಂಡಿದ್ದಾರೆ. ಸನ್ನಿ ನೀಡಿದ ಆತಿಥ್ಯದ ಬಗ್ಗೆಯೂ ಅವರು ಸಂತಸ ಹೊರಹಾಕಿದ್ದಾರೆ.

‘ದಯವಿಟ್ಟು ತಪ್ಪು ತಿಳಿಯಬೇಡಿ’; ಮಧ್ಯರಾತ್ರಿ ಆದ ಬಳಿಕ ಸನ್ನಿ ಲಿಯೋನ್​ ಮನೆಗೆ ಹೋಗಿದ್ದ ಖ್ಯಾತ ಗಾಯಕ
ಮಿಕಾ ಸಿಂಗ್​, ಸನ್ನಿ ಲಿಯೋನ್​
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Jan 09, 2022 | 7:21 PM

Share

ಸನ್ನಿ ಲಿಯೋನ್ ಅವರು ನೀಲಿ ಜಗತ್ತಿನಲ್ಲಿ ಮಿಂಚಿದವರು. ಈಗ ಅದನ್ನು ಸಂಪೂರ್ಣವಾಗಿ ತೊರೆದು ಬಾಲಿವುಡ್​ನಲ್ಲಿ ಬ್ಯುಸಿ ಆಗಿದ್ದಾರೆ. ಐಟಂ ಸಾಂಗ್​ನಲ್ಲೂ ಸನ್ನಿ ಮಿಂಚುತ್ತಿದ್ದಾರೆ. ಅವರ ಜತೆ ಯಾರಾದರೂ ಕಾಣಿಸಿಕೊಂಡರೆ ಅನೇಕರು ಅಪಾರ್ಥ ಮಾಡಿಕೊಳ್ಳುತ್ತಿದ್ದರು. ಸನ್ನಿ ಅವರನ್ನು ನೋಡುವ ದೃಷ್ಟಿ ಬದಲಾಗಿದೆ. ಅವರು ಭಾರತೀಯರಿಗೆ ಇಷ್ಟವಾಗಿದ್ದಾರೆ. ಅವರನ್ನು ಎಲ್ಲರೂ ನಟಿಯಾಗಿ ಒಪ್ಪಿಕೊಂಡಿದ್ದಾರೆ. ಸನ್ನಿ ಅಮೆರಿಕದಲ್ಲಿ ಇರುವಾಗ ಮಧ್ಯರಾತ್ರಿ ಆದ ಬಳಿಕ ಸನ್ನಿ ಮನೆಗೆ ಖ್ಯಾತ ಗಾಯಕ ಮಿಕಾ ಸಿಂಗ್ ಭೇಟಿ ನೀಡಿದ್ದರು. ಈ ವಿಚಾರ ಕಪಿಲ್ ಶರ್ಮಾ ಶೋನಲ್ಲಿ ಹೊರಬಿದ್ದಿದೆ.

‘ದಿ ಕಪಿಲ್​ ಶರ್ಮಾ ಶೋ’ನಲ್ಲಿ ಮಿಕಾ ಸಿಂಗ್​ ಹಾಗೂ ಸನ್ನಿ ಲಿಯೋನ್​ ಅವರು ಅತಿಥಿಗಳಾಗಿ ಆಗಮಿಸಿದ್ದರು. ಶನಿವಾರ ಈ ಶೋ ಪ್ರಸಾರವಾಗಿದೆ. ಸನ್ನಿ ಲಾಸ್​ ಏಂಜಲೀಸ್​ನಲ್ಲಿ ಮನೆ ಹೊಂದಿದ್ದಾರೆ. ಈ ಮನೆಗೆ ಮಿಕಾ ಸಿಂಗ್​ ಮುಂಜಾನೆ 4 ಗಂಟೆಗೆ ತೆರಳಿದ್ದರು. ಈ ಬಗ್ಗೆ ಮಿಕಾ ಸಿಂಗ್​ ಹೇಳಿಕೊಂಡಿದ್ದಾರೆ. ಸನ್ನಿ ನೀಡಿದ ಆತಿಥ್ಯದ ಬಗ್ಗೆಯೂ ಅವರು ಸಂತಸ ಹೊರಹಾಕಿದ್ದಾರೆ.

‘ನಾನು ಸನ್ನಿ ಮನೆಗೆ ಮುಂಜಾನೆ 4 ಗಂಟೆಗೆ ತೆರಳಿದ್ದೆ. ಏಕೆಂದರೆ ತಡವಾಗಿತ್ತು. ರಾತ್ರಿ 11.30ಕ್ಕೆ ಅವರ ಮನೆಗೆ ತೆರಳುವ ಆಲೋಚನೆ ನನಗೆ ಇತ್ತು. ಆದರೆ, ನಾನು ಭಾಗವಹಿಸಿದ್ದ ಶೋ ತಡವಾಗಿತ್ತು. ಅಷ್ಟು ತಡವಾಗಿ ಅವರ ಮನೆಗೆ ತೆರಳಿದ್ದೇನೆ ಎಂದು ತಪ್ಪು ತಿಳಿಯಬೇಡಿ’ ಎಂದು ಕಪಿಲ್​ ಶರ್ಮಾಗೆ ಮಿಕಾ ಸಿಂಗ್​ ಹೇಳಿದರು. ಆಗ ಎಲ್ಲರೂ ನಕ್ಕರು. ‘ಸನ್ನಿ ಮತ್ತು ಅವರ ಪತಿ ಡ್ಯಾನಿಯಲ್​ ವೆಬರ್​ ತುಂಬಾನೇ ಸ್ವೀಟ್​. ಆ ಸಮಯದಲ್ಲೂ ನನಗೋಸ್ಕರ ಪಿಜ್ಜಾ ಮಾಡಿದ್ದರು. ಅದ್ಭುತ ಕಾಫೀ ನೀಡಿದರು. ಅದು ನನಗೆ ಇನ್ನೂ ನೆನಪಿದೆ’ ಎಂದು ಅವರು ಹೇಳಿದ್ದಾರೆ.

ಮಿಕಾ ಮತ್ತು ಕಪಿಲ್ ನೆರೆಹೊರೆಯವರು. ಕೊವಿಡ್-19 ಲಾಕ್‌ಡೌನ್ ಸಮಯದಲ್ಲಿ ಪರಸ್ಪರರ ಮನೆಗೆ ಭೇಟಿ ನೀಡುತ್ತಿದ್ದರು. ಈ ವೇಳೆ ಇಬ್ಬರೂ ಒಟ್ಟಾಗಿ ಸಮಯ ಕಳೆದಿದ್ದರು.

ಇತ್ತೀಚೆಗೆ ಸನ್ನಿ ಲಿಯೋನ್​ ಹೆಜ್ಜೆ ಹಾಕಿದ್ದ ಹಾಡು ‘ಮಧುಬನ್’ ವಿವಾದ ಸೃಷ್ಟಿಸಿತ್ತು. ನಂತರ ಈ ಹಾಡಿನ ಸಾಹಿತ್ಯ ಬದಲಾಯಿಸಲಾಗಿತ್ತು.

ಇದನ್ನೂ ಓದಿ: ಹಿಂದುಗಳ ಭಾವನೆಗೆ ಧಕ್ಕೆ ತಂದ ಸನ್ನಿ ಲಿಯೋನ್​ ಹಾಡು

Sunny Leone: ಸನ್ನಿ ಲಿಯೋನ್ ಕೈಯಲ್ಲಿವೆ 7 ಸಿನಿಮಾಗಳು; ನಟಿಗೆ ಯಶಸ್ಸು ತಂದುಕೊಡಲಿದೆಯೇ 2022?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ