AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಈ ನಟರಿಗೆ ಅಹಂಕಾರ ಜಾಸ್ತಿ’; ವಿಡಿಯೋ ಮೂಲಕ ಎಳೆ ಎಳೆಯಾಗಿ ವಿವರಿಸಿದ ಕಮಾಲ್​ ಆರ್.​ ಖಾನ್​

ಈ ಹಿಂದೆ ಅನೇಕ ಬಾರಿ ಸಲ್ಮಾನ್​ ಖಾನ್​ ವಿರುದ್ಧ ಕಮಾಲ್​ ಆರ್​. ಖಾನ್​ ಗುಡುಗಿದ್ದುಂಟು. ಆದರೆ ಈ ಬಾರಿ ಅವರು ಶಾರುಖ್​ ಖಾನ್​, ರಣವೀರ್​ ಸಿಂಗ್​, ಅಜಯ್​ ದೇವಗನ್​ ಮತ್ತು ಆಯುಷ್ಮಾನ್​ ಖುರಾನಾ ಅವರನ್ನು ಕುಟುಕಿದ್ದಾರೆ.

‘ಈ ನಟರಿಗೆ ಅಹಂಕಾರ ಜಾಸ್ತಿ’; ವಿಡಿಯೋ ಮೂಲಕ ಎಳೆ ಎಳೆಯಾಗಿ ವಿವರಿಸಿದ ಕಮಾಲ್​ ಆರ್.​ ಖಾನ್​
ಅಜಯ್​ ದೇವಗನ್​, ರಣವೀರ್​ ಸಿಂಗ್​, ಶಾರುಖ್​ ಖಾನ್​, ಆಯುಷ್ಮಾನ್​ ಖುರಾನಾ
TV9 Web
| Updated By: ಮದನ್​ ಕುಮಾರ್​|

Updated on: Jan 10, 2022 | 8:02 AM

Share

ಸ್ಟಾರ್​ ಕಲಾವಿದರನ್ನು ಎಲ್ಲರೂ ಹೊಗಳುತ್ತಾರೆ. ಅವರನ್ನು ಟೀಕಿಸಿ, ದ್ವೇಷ ಕಟ್ಟಿಕೊಳ್ಳಲು ಯಾರೂ ಇಷ್ಟಪಡುವುದಿಲ್ಲ. ಆದರೆ ನಟ, ಸ್ವಯಂ ಘೋಷಿತ ವಿಮರ್ಶಕ ಕಮಾಲ್ ಆರ್​. ಖಾನ್​ ಅವರು ಎಲ್ಲರಿಗಿಂತ ಭಿನ್ನ. ಬಾಲಿವುಡ್​ನ ಅನೇಕ ಸ್ಟಾರ್​ ಕಲಾವಿದರನ್ನು ಅವರು ಎದುರು ಹಾಕಿಕೊಂಡಿದ್ದಾರೆ. ದೊಡ್ಡ ದೊಡ್ಡ ಸ್ಟಾರ್​ ಕಲಾವಿದರನ್ನು ಹಿಗ್ಗಾಮುಗ್ಗಾ ಟ್ರೋಲ್​ ಮಾಡುತ್ತಾರೆ. ಈಗ ಅವರೊಂದು ಹೊಸ ವಿಡಿಯೋ ಹರಿಬಿಟ್ಟಿದ್ದಾರೆ. ಅದರಲ್ಲಿ ಶಾರುಖ್​ ಖಾನ್​, ಅಜಯ್​ ದೇವಗನ್​, ರಣವೀರ್​ ಸಿಂಗ್​, ಜಾನ್​ ಅಬ್ರಾಹಂ ಮತ್ತು ಆಯುಷ್ಮಾನ್​ ಖುರಾನಾ ಅವರನ್ನು ಅಹಂಕಾರಿಗಳು ಎಂದು ಕರೆದಿದ್ದಾರೆ. ಸದ್ಯ ಈ ವಿಡಿಯೋ ವೈರಲ್​ ಆಗುತ್ತಿದೆ. ಈ ಎಲ್ಲ ನಟರ ಸೋತ ಸಿನಿಮಾಗಳನ್ನು ಕಮಾಲ್​ ಆರ್​. ಖಾನ್​ ಪಟ್ಟಿ ಮಾಡಿದ್ದಾರೆ.

ಈ ಹಿಂದೆ ಅನೇಕ ಬಾರಿ ಸಲ್ಮಾನ್​ ಖಾನ್​ ವಿರುದ್ಧ ಕಮಾಲ್​ ಆರ್​. ಖಾನ್​ ಗುಡುಗಿದ್ದುಂಟು. ಆದರೆ ಈ ಬಾರಿ ಅವರು ಸಲ್ಲು ಬಗ್ಗೆ ಮಾತನಾಡಿಲ್ಲ. ಇತರೆ ಸ್ಟಾರ್​ ನಟರನ್ನು ಅವರು ಕುಟುಕಿದ್ದಾರೆ. ಶಾರುಖ್​ ಖಾನ್​, ರಣವೀರ್​ ಸಿಂಗ್​, ಅಜಯ್​ ದೇವಗನ್​ ಮತ್ತು ಆಯುಷ್ಮಾನ್​ ಖುರಾನಾ ಅವರು ತಮ್ಮ ಸಿನಿಮಾ ಸೋತರೆ ಅದನ್ನು ಒಪ್ಪಿಕೊಳ್ಳುವ ಬದಲು ದುರಹಂಕಾರದ ಮಾತನಾಡುತ್ತಾರೆ ಎಂಬುದು ಕಮಾಲ್​ ಆರ್​. ಖಾನ್​ ಅಭಿಪ್ರಾಯ.

‘ಸತ್ಯಮೇವ ಜಯತೆ 2, ಚಂಡೀಗಡ್​ ಕರೇ ಆಶಿಖಿ, ಫ್ಯಾನ್​, 83, ಶಿವಾಯ್​ ಸಿನಿಮಾಗಳೆಲ್ಲ ಹೀನಾಯವಾಗಿ ಸೋತಿವೆ. ಆದರೆ ಈ ಸಿನಿಮಾಗಳಲ್ಲಿ ನಟಿಸಿರುವ ಸ್ಟಾರ್​ ಕಲಾವಿದರು ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಬದಲಾಗಿ, ಈ ಚಿತ್ರಗಳನ್ನು ಮಾಸ್ಟರ್​ಪೀಸ್​ ಎಂದು ಅವರೇ ಕರೆದುಕೊಳ್ಳುತ್ತಾರೆ. ಜನರಿಗೆ ಈ ಸಿನಿಮಾಗಳು ಅರ್ಥವಾಗಿಲ್ಲ ಅಂತ ಹೇಳ್ತಾರೆ’ ಎಂದು ಕಮಾಲ್​ ಆರ್​. ಖಾನ್​ ಗುಡುಗಿದ್ದಾರೆ.

‘ಈ ಬಾಲಿವುಡ್​ನವರು ತಮ್ಮನ್ನು ತಾವು ಮಹಾನ್​ ಬುದ್ಧಿವಂತರು ಎಂದುಕೊಂಡಿದ್ದಾರೆ. ಜನರಿಗೆ ಅರ್ಥವಾಗುವಂತಹ ಸಿನಿಮಾ ಮಾಡಲಿಲ್ಲ ಅಂದಾದರೆ ಆ ಚಿತ್ರವನ್ನು ನೀವು ನಿಮ್ಮ ಮನೆಯವರಿಗಾಗಿ ಮಾಡಿದ್ದೀರಾ? ನೀವು ಜನರಿಗಾಗಿ ಸಿನಿಮಾ ಮಾಡುತ್ತೀರಿ. ಜನರಿಗೆ ಇಷ್ಟ ಆಗಿಲ್ಲ ಎಂದರೆ ಆ ಚಿತ್ರಗಳು ಸರಿಯಿಲ್ಲ ಎಂದೇ ಅರ್ಥ. ಜನರಿಗೆ ಅರ್ಥ ಆಗಿಲ್ಲ ಅಂತ ಹೇಳೋದು ನಿಮ್ಮ ದುರಹಂಕಾರ’ ಎಂದು ಕಮಾಲ್​ ಆರ್​. ಖಾನ್​ ಹೇಳಿದ್ದಾರೆ.

ಇದನ್ನೂ ಓದಿ:

ವಿದೇಶದಲ್ಲಿ ಶಾರುಖ್​ ಫ್ಯಾನ್​ ಅಂತ ಹೇಳಿಕೊಂಡ್ರೆ ಸಿಗುತ್ತೆ ವಿಶೇಷ ಗೌರವ; ಸಾಕ್ಷಿ ಸಮೇತ ವಿವರಿಸಿದ ಪ್ರೊಫೆಸರ್​

16 ದಿನಕ್ಕೆ 175 ಕೋಟಿ ರೂ. ಗಳಿಸಿದ ‘83’ ಚಿತ್ರ; ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್​ ಮಾಡಲು ವಿಫಲ

ಧರ್ಮಶಾಲಾ: ಪ್ಯಾರಾಗ್ಲೈಡಿಂಗ್ ವೇಳೆ ಅಪಘಾತ, ವ್ಯಕ್ತಿ ಸಾವು
ಧರ್ಮಶಾಲಾ: ಪ್ಯಾರಾಗ್ಲೈಡಿಂಗ್ ವೇಳೆ ಅಪಘಾತ, ವ್ಯಕ್ತಿ ಸಾವು
ಚಂದ್ರ ಕುಂಭ ರಾಶಿಯಲ್ಲಿ ಸಂಚಾರ: ಇಂದಿನ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕುಂಭ ರಾಶಿಯಲ್ಲಿ ಸಂಚಾರ: ಇಂದಿನ ದಿನ ಭವಿಷ್ಯ ಇಲ್ಲಿದೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ