AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಈ ನಟರಿಗೆ ಅಹಂಕಾರ ಜಾಸ್ತಿ’; ವಿಡಿಯೋ ಮೂಲಕ ಎಳೆ ಎಳೆಯಾಗಿ ವಿವರಿಸಿದ ಕಮಾಲ್​ ಆರ್.​ ಖಾನ್​

ಈ ಹಿಂದೆ ಅನೇಕ ಬಾರಿ ಸಲ್ಮಾನ್​ ಖಾನ್​ ವಿರುದ್ಧ ಕಮಾಲ್​ ಆರ್​. ಖಾನ್​ ಗುಡುಗಿದ್ದುಂಟು. ಆದರೆ ಈ ಬಾರಿ ಅವರು ಶಾರುಖ್​ ಖಾನ್​, ರಣವೀರ್​ ಸಿಂಗ್​, ಅಜಯ್​ ದೇವಗನ್​ ಮತ್ತು ಆಯುಷ್ಮಾನ್​ ಖುರಾನಾ ಅವರನ್ನು ಕುಟುಕಿದ್ದಾರೆ.

‘ಈ ನಟರಿಗೆ ಅಹಂಕಾರ ಜಾಸ್ತಿ’; ವಿಡಿಯೋ ಮೂಲಕ ಎಳೆ ಎಳೆಯಾಗಿ ವಿವರಿಸಿದ ಕಮಾಲ್​ ಆರ್.​ ಖಾನ್​
ಅಜಯ್​ ದೇವಗನ್​, ರಣವೀರ್​ ಸಿಂಗ್​, ಶಾರುಖ್​ ಖಾನ್​, ಆಯುಷ್ಮಾನ್​ ಖುರಾನಾ
TV9 Web
| Updated By: ಮದನ್​ ಕುಮಾರ್​|

Updated on: Jan 10, 2022 | 8:02 AM

Share

ಸ್ಟಾರ್​ ಕಲಾವಿದರನ್ನು ಎಲ್ಲರೂ ಹೊಗಳುತ್ತಾರೆ. ಅವರನ್ನು ಟೀಕಿಸಿ, ದ್ವೇಷ ಕಟ್ಟಿಕೊಳ್ಳಲು ಯಾರೂ ಇಷ್ಟಪಡುವುದಿಲ್ಲ. ಆದರೆ ನಟ, ಸ್ವಯಂ ಘೋಷಿತ ವಿಮರ್ಶಕ ಕಮಾಲ್ ಆರ್​. ಖಾನ್​ ಅವರು ಎಲ್ಲರಿಗಿಂತ ಭಿನ್ನ. ಬಾಲಿವುಡ್​ನ ಅನೇಕ ಸ್ಟಾರ್​ ಕಲಾವಿದರನ್ನು ಅವರು ಎದುರು ಹಾಕಿಕೊಂಡಿದ್ದಾರೆ. ದೊಡ್ಡ ದೊಡ್ಡ ಸ್ಟಾರ್​ ಕಲಾವಿದರನ್ನು ಹಿಗ್ಗಾಮುಗ್ಗಾ ಟ್ರೋಲ್​ ಮಾಡುತ್ತಾರೆ. ಈಗ ಅವರೊಂದು ಹೊಸ ವಿಡಿಯೋ ಹರಿಬಿಟ್ಟಿದ್ದಾರೆ. ಅದರಲ್ಲಿ ಶಾರುಖ್​ ಖಾನ್​, ಅಜಯ್​ ದೇವಗನ್​, ರಣವೀರ್​ ಸಿಂಗ್​, ಜಾನ್​ ಅಬ್ರಾಹಂ ಮತ್ತು ಆಯುಷ್ಮಾನ್​ ಖುರಾನಾ ಅವರನ್ನು ಅಹಂಕಾರಿಗಳು ಎಂದು ಕರೆದಿದ್ದಾರೆ. ಸದ್ಯ ಈ ವಿಡಿಯೋ ವೈರಲ್​ ಆಗುತ್ತಿದೆ. ಈ ಎಲ್ಲ ನಟರ ಸೋತ ಸಿನಿಮಾಗಳನ್ನು ಕಮಾಲ್​ ಆರ್​. ಖಾನ್​ ಪಟ್ಟಿ ಮಾಡಿದ್ದಾರೆ.

ಈ ಹಿಂದೆ ಅನೇಕ ಬಾರಿ ಸಲ್ಮಾನ್​ ಖಾನ್​ ವಿರುದ್ಧ ಕಮಾಲ್​ ಆರ್​. ಖಾನ್​ ಗುಡುಗಿದ್ದುಂಟು. ಆದರೆ ಈ ಬಾರಿ ಅವರು ಸಲ್ಲು ಬಗ್ಗೆ ಮಾತನಾಡಿಲ್ಲ. ಇತರೆ ಸ್ಟಾರ್​ ನಟರನ್ನು ಅವರು ಕುಟುಕಿದ್ದಾರೆ. ಶಾರುಖ್​ ಖಾನ್​, ರಣವೀರ್​ ಸಿಂಗ್​, ಅಜಯ್​ ದೇವಗನ್​ ಮತ್ತು ಆಯುಷ್ಮಾನ್​ ಖುರಾನಾ ಅವರು ತಮ್ಮ ಸಿನಿಮಾ ಸೋತರೆ ಅದನ್ನು ಒಪ್ಪಿಕೊಳ್ಳುವ ಬದಲು ದುರಹಂಕಾರದ ಮಾತನಾಡುತ್ತಾರೆ ಎಂಬುದು ಕಮಾಲ್​ ಆರ್​. ಖಾನ್​ ಅಭಿಪ್ರಾಯ.

‘ಸತ್ಯಮೇವ ಜಯತೆ 2, ಚಂಡೀಗಡ್​ ಕರೇ ಆಶಿಖಿ, ಫ್ಯಾನ್​, 83, ಶಿವಾಯ್​ ಸಿನಿಮಾಗಳೆಲ್ಲ ಹೀನಾಯವಾಗಿ ಸೋತಿವೆ. ಆದರೆ ಈ ಸಿನಿಮಾಗಳಲ್ಲಿ ನಟಿಸಿರುವ ಸ್ಟಾರ್​ ಕಲಾವಿದರು ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಬದಲಾಗಿ, ಈ ಚಿತ್ರಗಳನ್ನು ಮಾಸ್ಟರ್​ಪೀಸ್​ ಎಂದು ಅವರೇ ಕರೆದುಕೊಳ್ಳುತ್ತಾರೆ. ಜನರಿಗೆ ಈ ಸಿನಿಮಾಗಳು ಅರ್ಥವಾಗಿಲ್ಲ ಅಂತ ಹೇಳ್ತಾರೆ’ ಎಂದು ಕಮಾಲ್​ ಆರ್​. ಖಾನ್​ ಗುಡುಗಿದ್ದಾರೆ.

‘ಈ ಬಾಲಿವುಡ್​ನವರು ತಮ್ಮನ್ನು ತಾವು ಮಹಾನ್​ ಬುದ್ಧಿವಂತರು ಎಂದುಕೊಂಡಿದ್ದಾರೆ. ಜನರಿಗೆ ಅರ್ಥವಾಗುವಂತಹ ಸಿನಿಮಾ ಮಾಡಲಿಲ್ಲ ಅಂದಾದರೆ ಆ ಚಿತ್ರವನ್ನು ನೀವು ನಿಮ್ಮ ಮನೆಯವರಿಗಾಗಿ ಮಾಡಿದ್ದೀರಾ? ನೀವು ಜನರಿಗಾಗಿ ಸಿನಿಮಾ ಮಾಡುತ್ತೀರಿ. ಜನರಿಗೆ ಇಷ್ಟ ಆಗಿಲ್ಲ ಎಂದರೆ ಆ ಚಿತ್ರಗಳು ಸರಿಯಿಲ್ಲ ಎಂದೇ ಅರ್ಥ. ಜನರಿಗೆ ಅರ್ಥ ಆಗಿಲ್ಲ ಅಂತ ಹೇಳೋದು ನಿಮ್ಮ ದುರಹಂಕಾರ’ ಎಂದು ಕಮಾಲ್​ ಆರ್​. ಖಾನ್​ ಹೇಳಿದ್ದಾರೆ.

ಇದನ್ನೂ ಓದಿ:

ವಿದೇಶದಲ್ಲಿ ಶಾರುಖ್​ ಫ್ಯಾನ್​ ಅಂತ ಹೇಳಿಕೊಂಡ್ರೆ ಸಿಗುತ್ತೆ ವಿಶೇಷ ಗೌರವ; ಸಾಕ್ಷಿ ಸಮೇತ ವಿವರಿಸಿದ ಪ್ರೊಫೆಸರ್​

16 ದಿನಕ್ಕೆ 175 ಕೋಟಿ ರೂ. ಗಳಿಸಿದ ‘83’ ಚಿತ್ರ; ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್​ ಮಾಡಲು ವಿಫಲ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು