AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Miss India: ಮಿಸ್​ ಇಂಡಿಯಾ ಗೆದ್ದ ಸಿನಿ ಶೆಟ್ಟಿಗೆ ಸಿಗುತ್ತೆ ದೊಡ್ಡ​​ ಚಾನ್ಸ್​; ಹೀಗೆ ಬಾಲಿವುಡ್ ಟಿಕೆಟ್​ ಪಡೆದವರ ಲಿಸ್ಟ್​ ಇಲ್ಲಿದೆ..

Miss India Sini Shetty: ಕರ್ನಾಟಕ ಮೂಲದ ಸುಂದರಿ ಸಿನಿ ಶೆಟ್ಟಿ ಅವರು 2022ರ ಮಿಸ್​ ಇಂಡಿಯಾ ಪಟ್ಟಕ್ಕೆ ಏರಿದ್ದಾರೆ. ಶೀಘ್ರದಲ್ಲೇ ಅವರಿಗೆ ಬಾಲಿವುಡ್​ನಿಂದ ದೊಡ್ಡ ದೊಡ್ಡ ಆಫರ್​ ಸಿಗಲಿದೆ.

Miss India: ಮಿಸ್​ ಇಂಡಿಯಾ ಗೆದ್ದ ಸಿನಿ ಶೆಟ್ಟಿಗೆ ಸಿಗುತ್ತೆ ದೊಡ್ಡ​​ ಚಾನ್ಸ್​; ಹೀಗೆ ಬಾಲಿವುಡ್ ಟಿಕೆಟ್​ ಪಡೆದವರ ಲಿಸ್ಟ್​ ಇಲ್ಲಿದೆ..
Follow us
TV9 Web
| Updated By: ಮದನ್​ ಕುಮಾರ್​

Updated on:Jul 04, 2022 | 1:10 PM

ಫ್ಯಾಷನ್​ ಲೋಕಕ್ಕೂ ಚಿತ್ರರಂಗಕ್ಕೂ ಹತ್ತಿರದ ನಂಟು. ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಬಹಳ ಬೇಗ ಸಿನಿಮಾ ಜಗತ್ತಿನ ಪರಿಚಯ ಆಗುತ್ತದೆ. ಮಿಸ್​ ಇಂಡಿಯಾ (Miss India), ಮಿಸ್​ ವರ್ಲ್ಡ್​ ರೀತಿಯ ಕಿರೀಟ ಗೆದ್ದರೆ ಅನೇಕ ಅವಕಾಶಗಳು ಹರಿದು ಬರುತ್ತವೆ. ಅದರಲ್ಲೂ ಬಾಲಿವುಡ್​ ಲೋಕಕ್ಕೆ ಎಂಟ್ರಿ ಪಡೆಯಲು ನೇರ ಟಿಕೆಟ್​ ಸಿಗುತ್ತದೆ. ಆ ರೀತಿ ಬಿ-ಟೌನ್​ ಪ್ರವೇಶ ಪಡೆದವರ ದೊಡ್ಡ ಲಿಸ್ಟ್​ ಇದೆ. ಈಗ ಕರ್ನಾಟಕ ಮೂಲದ ಬೆಡಗಿ ಸಿನಿ ಶೆಟ್ಟಿ ಅವರು ಫೆಮಿನಾ ಮಿಸ್​ ಇಂಡಿಯಾ 2022 (Miss India 2022) ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಎಲ್ಲರೂ ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಸಿನಿ ಶೆಟ್ಟಿ (Miss India Sini Shetty) ಅವರಿಗೆ ಖಂಡಿತವಾಗಿ ಬಾಲಿವುಡ್​ ಮಂದಿ ಆಫರ್ ನೀಡುತ್ತಾರೆ. ಅವರು ಯಾವ ಪ್ರಾಜೆಕ್ಟ್​ ಒಪ್ಪಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು. ಸೌಂದರ್ಯ ಸ್ಪರ್ಧೆ ಗೆದ್ದು ಹಿಂದಿ ಚಿತ್ರರಂಗಕ್ಕೆ ಪ್ರವೇಶ ಪಡೆದ ನಟಿಯರು ಅನೇಕರಿದ್ದಾರೆ.

  1. ಜೂಹಿ ಚಾವ್ಲಾ – ಮಿಸ್​ ಇಂಡಿಯಾ ಯೂನಿವರ್ಸ್​ 1984: ಕೇವಲ 17ನೇ ವಯಸ್ಸಿನಲ್ಲೇ ಜೂಹಿ ಚಾವ್ಲಾ ಅವರು ಮಿಸ್​ ಇಂಡಿಯಾ ಯೂನಿವರ್ಸ್​ ಕಿರೀಟ ಮುಡಿಗೇರಿಸಿಕೊಂಡರು. ನಂತರ ಅವರು ಬಾಲಿವುಡ್​ಗೆ ಕಾಲಿಟ್ಟು ಮಿಂಚಿದರು. ಬಳಿಕ ಕನ್ನಡ ಸೇರಿ ಅನೇಕ ಭಾಷೆಯ ಚಿತ್ರದಲ್ಲಿ ನಟಿಸಿದರು.
  2. ಐಶ್ವರ್ಯಾ ರೈ – ಮಿಸ್​ ವರ್ಲ್ಡ್​ 1994: ಫ್ಯಾಷನ್​ ಲೋಕದಲ್ಲಿ ಸಕ್ರಿಯವಾಗಿದ್ದ ಐಶ್ವರ್ಯಾ ರೈ ಅವರು 1994ರಲ್ಲಿ ಮಿಸ್​ ವರ್ಲ್ಡ್​ ಸ್ಪರ್ಧೆ ಗೆದ್ದರು. 1997ರಲ್ಲಿ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಹಲವು ಸೂಪರ್​ ಹಿಟ್​ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡರು.
  3. ಸುಷ್ಮಿತಾ ಸೇನ್​ – ಮಿಸ್​ ಯೂನಿವರ್ಸ್​ 1994: ನಟಿ ಸುಷ್ಮಿತಾ ಸೇನ್​ ಅವರು 1994ರಲ್ಲಿ ಮಿಸ್​ ಯೂನಿವರ್ಸ್​ ಕಿರೀಟ ಮುಡಿಗೇರಿಸಿಕೊಂಡರು. ಅವರನ್ನು ಬಾಲಿವುಡ್​ ಕೈ ಬೀಸಿ ಕರೆಯಿತು. ಹಿಂದಿ ಬಳಿಕ ತಮಿಳು, ಬೆಂಗಾಲಿ ಭಾಷೆಯ ಸಿನಿಮಾಗಳಲ್ಲೂ ಸುಷ್ಮಿತಾ ಸೇನ್​ ನಟಿಸಿದರು.
  4. ಲಾರಾ ದತ್ತಾ – ಮಿಸ್​ ಯೂನಿವರ್ಸ್​ 2000: ಬಾಲಿವುಡ್​ಗೆ ಎಂಟ್ರಿ ನೀಡಲು ಲಾರಾ ದತ್ತ ಅವರಿಗೆ ಟಿಕೆಟ್​ ಸಿಕ್ಕಿದ್ದೇ ಬ್ಯೂಟಿ ಸ್ಪರ್ಧೆ ಗೆದ್ದ ಬಳಿಕ. 2000ರಲ್ಲಿ ಮಿಸ್​ ಯೂನಿವರ್ಸ್​ ಕಿರೀಟ ಮುಡಿಗೇರಿಸಿಕೊಂಡ ಅವರು ಹಿಂದಿನ ಹಲವು ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡರು.
  5. ಇದನ್ನೂ ಓದಿ
    Image
    Miss World 2021: ವಿಶ್ವ ಸುಂದರಿ ಸ್ಪರ್ಧೆ ಗೆದ್ದ ಪೋಲೆಂಡ್​ನ ಕರೋಲಿನಾ ಬಿಲಾವ್ಸ್ಕಾ
    Image
    ಮಿಸ್​ ಯೂನಿವರ್ಸ್​ ಹರ್ನಾಜ್​ ಸಂಧು ಭಾರತಕ್ಕೆ ಬರುತ್ತಿದ್ದಂತೆ ಭೇಟಿಯಾಗಿ ಸೆಲ್ಫೀ ತೆಗೆದುಕೊಂಡ ಶಶಿ ತರೂರ್​; ಸಮಚಿತ್ತ, ಆಕರ್ಷಕ ಎಂದು ಹೊಗಳಿಕೆ
    Image
    ಮಿಸ್ ಯೂನಿವರ್ಸ್​ ಮತ್ತು ಮಿಸ್ ವರ್ಲ್ಡ್​ ಏನು ವ್ಯತ್ಯಾಸ? ಯಾವುದಕ್ಕೆ ಹೆಚ್ಚು ಪ್ರಾಮುಖ್ಯತೆ?
    Image
    Viral Video: ‘ಮಿಸಸ್​ ಶ್ರೀಲಂಕಾ’ ವಿಜೇತೆಗೆ ವೇದಿಕೆ ಮೇಲೆಯೇ ಅವಮಾನ, ತಲೆಗೆ ಗಾಯ; ಕಿರೀಟ ಕಿತ್ತುಕೊಂಡ ಮಾಜಿ ವಿನ್ನರ್​, ಅಳುತ್ತ ನಡೆದ ವಿನ್ನರ್​
  6. ಪ್ರಿಯಾಂಕಾ ಚೋಪ್ರಾ – ಮಿಸ್​ ವರ್ಲ್ಡ್​ 2000: ಮಿಸ್​ ವರ್ಲ್ಡ್​ ಗೆದ್ದ ಬಳಿಕ ಪ್ರಿಯಾಂಕಾ ಚೋಪ್ರಾ ಅವರು ಬಾಲಿವುಡ್​ಗೆ ಕಾಲಿಟ್ಟರು. ಹಿಂದಿ ಚಿತ್ರರಂಗದಲ್ಲಿ ಭಾರಿ ಯಶಸ್ಸು ಪಡೆದ ಬಳಿಕ ಅವರು ಹಾಲಿವುಡ್​ಗೂ ಎಂಟ್ರಿ ನೀಡಿದರು.
  7. ಪೂಜಾ ಹೆಗ್ಡೆ – ಮಿಸ್​ ಯೂನಿವರ್ಸ್​ 2010: ಈಗ ನಟಿ ಪೂಜಾ ಹೆಗ್ಡೆ ಅವರು ಬಹುಬೇಡಿಕೆಯ ಹೀರೋಯಿನ್​ ಆಗಿ ಮೆರೆಯುತ್ತಿದ್ದಾರೆ. ಸೌಂದರ್ಯ ಸ್ಪರ್ಧೆಯಲ್ಲಿ ಕಿರೀಟ ಗೆದ್ದಿದ್ದೇ ಅವರಿಗೆ ಚಿತ್ರರಂಗಕ್ಕೆ ಟಿಕೆಟ್​ ಸಿಗಲು ಕಾರಣ ಆಯ್ತು. ಈಗ ಅವರಿಗೆ ಕೈ ತುಂಬ ಆಫರ್​ಗಳಿವೆ.
  8. ರಾಕುಲ್​ ಪ್ರೀತ್​ ಸಿಂಗ್​ – ಮಿಸ್​ ಇಂಡಿಯಾ 2011: ನಟಿ ರಾಕುಲ್​ ಪ್ರೀತ್​ ಸಿಂಗ್​ ಅವರು 2011ರ ಮಿಸ್​ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ 5ನೇ ಸ್ಥಾನ ಪಡೆದರು. 5 ಟೈಟಲ್​ಗಳನ್ನು ಅವರು ವಿನ್​ ಆದರು. ಬಳಿಕ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು ಯಶಸ್ಸು ಕಂಡರು.
  9. ಮಾನುಷಿ ಚಿಲ್ಲರ್​-  ಮಿಸ್​ ವರ್ಲ್ಡ್​ 2017: ಇತ್ತೀಚೆಗೆ ತೆರೆಕಂಡ ಅಕ್ಷಯ್​ ಕುಮಾರ್​ ನಟನೆಯ ‘ಸಾಮ್ರಾಟ್​ ಪೃಥ್ವಿರಾಜ್​’ ಚಿತ್ರದಿಂದ ಬಾಲಿವುಡ್​ಗೆ ಕಾಲಿಟ್ಟರು ನಟಿ ಮಾನುಷಿ ಚಿಲ್ಲರ್​. 2017ರ ಮಿಸ್​ ವರ್ಲ್ಡ್​ ಕಿರೀಟ ಗೆದ್ದ ಅವರಿಗೆ ಹಲವು ಅವಕಾಶಗಳು ಸಿಗುತ್ತಿವೆ.
  10. ತಾಪ್ಸೀ ಪನ್ನು, ತನುಶ್ರೀ ದತ್ತ, ಊರ್ವಶಿ ರೌಟೇಲಾ, ಜಾಕ್ವೆಲಿನ್​ ಫರ್ನಾಂಡಿಸ್​, ಇಶಾ ಗುಪ್ತಾ, ನಮ್ರತಾ ಶಿರೋಡ್ಕರ್​, ಸೆಲಿನಾ ಜೇಟ್ಲಿ, ದಿಯಾ ಮಿರ್ಜಾ, ನೇಹಾ ಧೂಪಿಯಾ ಸೇರಿದಂತೆ ಅನೇಕರು ಕೂಡ ಇದೇ ಹಾದಿಯಲ್ಲಿ ಬಾಲಿವುಡ್​ ಟಿಕೆಟ್​ ಗಿಟ್ಟಿಸಿದರು.

ಇದನ್ನೂ ಓದಿ: ಹೊಂಬಾಳೆ ಜತೆ ಸಿನಿಮಾ ಮಾಡಲಿದ್ದಾರೆ ಮಾಜಿ ಮಿಸ್​ ವರ್ಲ್ಡ್​ ಮಾನುಷಿ ಚಿಲ್ಲರ್​? ಕುತೂಹಲ ಮೂಡಿಸಿದ ಭೇಟಿ

ಮಿಸೆಸ್​ ವರ್ಲ್ಡ್​​​​ 2022ನಲ್ಲಿ ಭಾರತವನ್ನು ಪ್ರತಿನಿಧಿಸಿದ ನವದೀಪ್​ ಕೌರ್ ಯಾರು?

Published On - 1:01 pm, Mon, 4 July 22

ಸಕಲೇಶಪುರ: ರಸ್ತೆಯಲ್ಲೇ ಕಾಡಾನೆಗಳ ಪರೇಡ್! ಬೆಚ್ಚಿಬಿದ್ದ ಗ್ರಾಮಸ್ಥರು
ಸಕಲೇಶಪುರ: ರಸ್ತೆಯಲ್ಲೇ ಕಾಡಾನೆಗಳ ಪರೇಡ್! ಬೆಚ್ಚಿಬಿದ್ದ ಗ್ರಾಮಸ್ಥರು
ಸಚಿವ ಶಿವರಾಜ್ ತಂಗಡಗಿ ಬೆಂಗಾವಲು ಪಡೆ ವಾಹನ ಅಪಘಾತ, ಇಬ್ಬರಿಗೆ ಗಾಯ
ಸಚಿವ ಶಿವರಾಜ್ ತಂಗಡಗಿ ಬೆಂಗಾವಲು ಪಡೆ ವಾಹನ ಅಪಘಾತ, ಇಬ್ಬರಿಗೆ ಗಾಯ
Daily Devotional: ಈ 5 ವಿಷಯಗಳನ್ನ ಯಾರಿಗೂ ಹೇಳಬಾರದು
Daily Devotional: ಈ 5 ವಿಷಯಗಳನ್ನ ಯಾರಿಗೂ ಹೇಳಬಾರದು
ಸೂರ್ಯ ಮಿಥುನ ರಾಶಿಯಲ್ಲಿ, ಇಂದು ಯಾರಿಗೆಲ್ಲಾ ಶುಭ ದಿನ ತಿಳಿಯಿರಿ
ಸೂರ್ಯ ಮಿಥುನ ರಾಶಿಯಲ್ಲಿ, ಇಂದು ಯಾರಿಗೆಲ್ಲಾ ಶುಭ ದಿನ ತಿಳಿಯಿರಿ
ನಟಿ ರಚಿತಾ ರಾಮ್ ವಿರುದ್ಧ ಕ್ರಮ ಕೈಗೊಳ್ಳುತ್ತಾ ಚಲನಚಿತ್ರ ವಾಣಿಜ್ಯ ಮಂಡಳಿ?
ನಟಿ ರಚಿತಾ ರಾಮ್ ವಿರುದ್ಧ ಕ್ರಮ ಕೈಗೊಳ್ಳುತ್ತಾ ಚಲನಚಿತ್ರ ವಾಣಿಜ್ಯ ಮಂಡಳಿ?
ಪ್ರಕೃತಿಯ ಶಕ್ತಿ ಮುಂದೆ ನಾವೇನೂ ಅಲ್ಲ!; ಈ ವಿಡಿಯೋ ನೋಡಿ
ಪ್ರಕೃತಿಯ ಶಕ್ತಿ ಮುಂದೆ ನಾವೇನೂ ಅಲ್ಲ!; ಈ ವಿಡಿಯೋ ನೋಡಿ
ಕನ್ನಡ ಸಿನಿಮಾಗೆ ಬೆಳಗ್ಗೆ 9.30ರ ಶೋ ಕೊಟ್ಟರೆ ಜನ ಬರಲ್ಲ: ಶ್ರೀನಗರ ಕಿಟ್ಟಿ
ಕನ್ನಡ ಸಿನಿಮಾಗೆ ಬೆಳಗ್ಗೆ 9.30ರ ಶೋ ಕೊಟ್ಟರೆ ಜನ ಬರಲ್ಲ: ಶ್ರೀನಗರ ಕಿಟ್ಟಿ
ಬಿಹಾರದಲ್ಲಿ ಭಾರೀ ಮಳೆಯಿಂದ ಆರೆಂಜ್ ಅಲರ್ಟ್ ಘೋಷಣೆ;  14 ಜನರು ಸಾವು
ಬಿಹಾರದಲ್ಲಿ ಭಾರೀ ಮಳೆಯಿಂದ ಆರೆಂಜ್ ಅಲರ್ಟ್ ಘೋಷಣೆ;  14 ಜನರು ಸಾವು
ಮಧ್ಯಾಹ್ನ ಬೆಂಗಳೂರಿಂದ ಲಂಡನ್​ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ರದ್ದು
ಮಧ್ಯಾಹ್ನ ಬೆಂಗಳೂರಿಂದ ಲಂಡನ್​ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ರದ್ದು
ನಮ್ಮ ಸಚಿವ ಸ್ಥಾನ ಉಳಿಸಿಕೊಳ್ಳುವುದು ಕಷ್ಟವಾಗಿದೆ: ಸತೀಶ್ ಜಾರಕಿಹೊಳಿ
ನಮ್ಮ ಸಚಿವ ಸ್ಥಾನ ಉಳಿಸಿಕೊಳ್ಳುವುದು ಕಷ್ಟವಾಗಿದೆ: ಸತೀಶ್ ಜಾರಕಿಹೊಳಿ