AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿನಗೆಂದೂ ನಾಯಕಿ ಪಾತ್ರ ಸಿಗುವುದಿಲ್ಲ’ ಗಿರೀಶ್ ಕಾರ್ನಾಡ್ ಹೇಳಿದ್ದ ಮಾತು ನೆನಪಿಸಿಕೊಂಡ ನೀನಾ ಗುಪ್ತಾ

Girish Karnad: ಬಾಲಿವುಡ್​ನ ಜನಪ್ರಿಯ ನಟಿ ನೀನಾ ಗುಪ್ತಾ, ನಾಲ್ಕು ದಶಕದ ಹಿಂದೆ ಕನ್ನಡದ ಖ್ಯಾತ ಸಾಹಿತಿ, ನಟ, ನಿರ್ದೇಶಕ ಗಿರೀಶ್ ಕಾರ್ನಾಡ್ ಅವರು ತಮಗೆ ಹೇಳಿದ್ದ ಮಾತೊಂದನ್ನು ಇತ್ತೀಚೆಗೆ ನೆನಪು ಮಾಡಿಕೊಂಡಿದ್ದಾರೆ.

‘ನಿನಗೆಂದೂ ನಾಯಕಿ ಪಾತ್ರ ಸಿಗುವುದಿಲ್ಲ’ ಗಿರೀಶ್ ಕಾರ್ನಾಡ್ ಹೇಳಿದ್ದ ಮಾತು ನೆನಪಿಸಿಕೊಂಡ ನೀನಾ ಗುಪ್ತಾ
ಗಿರೀಶ್ ಕಾರ್ನಾಡ್
ಮಂಜುನಾಥ ಸಿ.
|

Updated on:Nov 08, 2023 | 7:33 PM

Share

ನೀನಾ ಗುಪ್ತಾ (Neena Gupta) ಬಾಲಿವುಡ್​ನ ಹಿರಿಯ ನಟಿ. ನಾಲ್ಕು ದಶಕಗಳಿಂದಲೂ ಚಿತ್ರರಂಗದಲ್ಲಿರುವ ನೀನಾ ಗುಪ್ತಾ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ, ಪೋಷಕ ನಟಿಯಾಗಿ ನಟಿಸುತ್ತಲೇ ಬಂದಿದ್ದಾರೆ. ಈಗಲೂ ಸಹ ಬಾಲಿವುಡ್​ನ ಬೇಡಿಕೆಯ ಪೋಷಕ ನಟಿ ನೀನಾ. ವೆಸ್ಟ್ ಇಂಡೀಸ್ ದೈತ್ಯ ಕ್ರಿಕೆಟಿಗ ವಿವಿಯನ್ ರಿಚರ್ಡ್ ಜೊತೆಗಿನ ಪ್ರೇಮ ಸಂಬಂಧದಿಂದಲೂ ನೀನಾ ಗುಪ್ತಾ ಸಾಕಷ್ಟು ಸುದ್ದಿಯಲ್ಲಿದ್ದರು. ದೇಶದ ಪ್ರಖ್ಯಾತ ನಟನಾ ತರಬೇತಿ ಶಾಲೆ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದ ವಿದ್ಯಾರ್ಥಿನಿಯಾಗಿದ್ದ ನೀನಾ ಗುಪ್ತಾ ಅವರಿಗೆ ಕನ್ನಡದ ಪ್ರಖ್ಯಾತ ಸಾಹಿತಿ, ನಟ, ನಿರ್ದೇಶಕ ಗಿರೀಶ್ ಕಾನಾರ್ಡ್ ಅವರ ಪರಿಚಯವಿತ್ತು. ಗಿರೀಶ್ ಅವರು, ತಮ್ಮ ಬಗ್ಗೆ ದಶಕಗಳ ಹಿಂದೆ ಹೇಳಿದ್ದ ಮಾತನ್ನು ನೀನಾ ಈಗ ನೆನಪು ಮಾಡಿಕೊಂಡಿದ್ದಾರೆ.

ನೀನಾ ಗುಪ್ತಾ, ಎನ್​ಎಸ್​ಡಿಯಲ್ಲಿ ಅಭಿನಯ ತರಬೇತಿ ಪಡೆದು ಸಿನಿಮಾಗಳಲ್ಲಿ ಅವಕಾಶ ಅರಸಿ ಬಂದಾಗ ಅವರಿಗೆ ಭ್ರಮೆ ಇತ್ತಂತೆ, ನನ್ನನ್ನು ಸಿನಿಮಾ ಅವಕಾಶಗಳ ರಾಶಿಯೇ ಬಂದು ಬೀಳುತ್ತದೆ ಎಂದು ಆದರೆ ಹಾಗೆ ಆಗಲಿಲ್ಲವಂತೆ. ಬಹಳ ಕಷ್ಟಪಟ್ಟು 1982ರಲ್ಲಿ ‘ಸಾತ್-ಸಾತ್’ ಹೆಸರಿನ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡರು ನೀನಾ, ಆ ಸಿನಿಮಾದಲ್ಲಿ ಅವರದ್ದು ಹಾಸ್ಯ ಪಾತ್ರ. ದೊಡ್ಡ ಚಾಳಿಸು ಧರಿಸಿ ಚಿತ್ರಿ-ವಿಚಿತ್ರವಾಗಿ ಮಾತನಾಡುತ್ತಾ ನಗಿಸುವ ಪಾತ್ರ.

ಇದನ್ನೂ ಓದಿ:ದೋಸೆ, ದೋಸಾ ಡೋಸಾ ಚರ್ಚೆ ಹುಟ್ಟುಹಾಕಿದ ನಟಿ ನೀನಾ ಗುಪ್ತಾ ವಿಡಿಯೋ

ಆ ಸಿನಿಮಾ ಬಿಡುಗಡೆ ಆದಾಗ ಗಿರೀಶ್ ಕಾರ್ನಾಡ್ ಅವರು ನೀನಾ ಗುಪ್ತಾ ಅವರಿಗೆ ಹೇಳಿದ್ದರಂತೆ, ‘ಈ ಸಿನಿಮಾದ ಬಳಿಕ ನೀನೆಂದೂ ನಾಯಕಿ ಆಗಲಾರೆ. ನಾಯಕಿ ಪಾತ್ರ ನಿನಗೆ ಸಿಗುವುದೇ ಇಲ್ಲ. ಹಾಸ್ಯ ಪಾತ್ರದಲ್ಲಿ ನಟಿಸಿದ ಬಳಿಕ ಅದೇ ರೀತಿಯ ಪಾತ್ರಕ್ಕೆ ನಿನ್ನನ್ನು ಬ್ರ್ಯಾಂಡ್ ಮಾಡುತ್ತಾರೆ ಎಂದಿದ್ದರಂತೆ ಕಾರ್ನಾಡರು. ಅವರ ಮಾತು ನಿಜವೇ ಆಯಿತು. ‘ಸಾಥ್-ಸಾಥ್’ ಸಿನಿಮಾ ಹಿಟ್ ಆಯಿತು, ಆದರೆ ಆ ಸಿನಿಮಾದ ಬಳಿಕ ಸತತವಾಗಿ ಅದೇ ರೀತಿಯ ಪಾತ್ರಗಳೇ ನನಗೆ ಬರುತ್ತಿದ್ದವು. ಅದೇ ರೀತಿಯ ಬಟ್ಟೆ, ಅದೇ ರೀತಿಯ ಚಾಳಿಸು ಧರಿಸುವ ಪಾತ್ರಗಳೇ ಸತತವಾಗಿ ಬಂದವು. ಹಲವು ವರ್ಷ ನನಗೆ ಸೂಕ್ತ ಪಾತ್ರಗಳೇ ದೊರಕಲಿಲ್ಲ” ಎಂದು ಹೇಳಿಕೊಂಡಿದ್ದಾರೆ ನೀನಾ ಗುಪ್ತಾ.

ಎರಡು ರಾಷ್ಟ್ರಪ್ರಶಸ್ತಿ ಸೇರಿದಂತೆ ತಮ್ಮ ಅತ್ಯುತ್ತಮ ನಟನೆಗೆ ಹಲವು ಪ್ರಶಸ್ತಿಗಳನ್ನು ನೀನಾ ಗುಪ್ತಾ ಪಡೆದಿದ್ದಾರೆ. ಕಮರ್ಷಿಯಲ್ ಸಿನಿಮಾಗಳು ಮಾತ್ರವಲ್ಲದೆ ಹಲವು ಕಲಾತ್ಮಕ ಸಿನಿಮಾಗಳು, ಪ್ರಯೋಗಾತ್ಮಕ ಸಿನಿಮಾಗಳು, ವೆಬ್ ಸರಣಿ, ಟಿವಿ ಧಾರಾವಾಹಿ, ಡಾಕ್ಯುಮೆಂಟರಿಗಳಲ್ಲಿಯೂ ಕೆಲಸ ಮಾಡಿದ್ದಾರೆ. ಕೆಲ ಟಿವಿ ಶೋಗಳಿಗೆ ಬರಹಾರ್ತಿಯಾಗಿಯೂ ನೀನಾ ಗುಪ್ತಾ ಕೆಲಸ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:30 pm, Wed, 8 November 23

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?