AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಫೇರ್​ ಬಗ್ಗೆ ಬರೆದ ಪತ್ರಕರ್ತನ ಮೇಲೆ ಹಲ್ಲೆ ಮಾಡಿ ​ಜೈಲು ಸೇರಿದ್ದರು ಶಾರುಖ್​ ಖಾನ್

ಗೌರಿ ಖಾನ್ ಜತೆ​ ಮದುವೆ ಆಗಿ ಎರಡು ವರ್ಷ ಕಳೆದಿತ್ತು. ಇದೇ ಸಂದರ್ಭದಲ್ಲಿ ಶಾರುಖ್​ ಕಳ್ಳ ಸಂಬಂಧ ಇಟ್ಟುಕೊಂಡಿದ್ದಾರೆ ಎನ್ನುವ ಸುದ್ದಿ ಪ್ರಕಟವಾಗಿತ್ತು.

ಅಫೇರ್​ ಬಗ್ಗೆ ಬರೆದ ಪತ್ರಕರ್ತನ ಮೇಲೆ ಹಲ್ಲೆ ಮಾಡಿ ​ಜೈಲು ಸೇರಿದ್ದರು ಶಾರುಖ್​ ಖಾನ್
ಶಾರುಖ್ ಖಾನ್
TV9 Web
| Edited By: |

Updated on: Sep 25, 2021 | 6:02 PM

Share

ಶಾರುಖ್​ ಖಾನ್​ ಅವರು ಇಂದು ಬಾಲಿವುಡ್​ನ ಬಾದ್​ಶಾ. ಇತ್ತೀಚೆಗೆ ಅವರಿಗೆ ಅದೃಷ್ಟ ಕೈ ಕೊಟ್ಟಿದೆಯಾದರೂ ಅವರ ಬೇಡಿಕೆ ಕುಗ್ಗಿಲ್ಲ. ಅಭಿಮಾನಿ…..​ಗಳಿಗೆ ಹಾಗೂ ನಿರ್ಮಾಪಕರಿಗ ಅವರ ಮೇಲೆ ಇರುವ ಗೌರವ ಕಿಂಚಿತ್ತೂ ಕಡಿಮೆ ಆಗಿಲ್ಲ. ನಟ ಶಾರುಖ್​ ಖಾನ್​ ಪತ್ರಕರ್ತನಿಗೆ ಕೊಲೆ ಬೆದರಿಕೆ ಹಾಕಿ ಜೈಲಿಗೆ ಹೋಗಿದ್ದರು ಎನ್ನುವ ವಿಚಾರ ಅನೇಕರಿಗೆ ಗೊತ್ತಿಲ್ಲ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಜೈಲಿಗೆ ಹೋದ ವಿಚಾರವನ್ನು ಶಾರುಖ್​ ಖಾನ್​ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಅದು 1993ರ ಸಮಯ. ‘ಕಭಿ ಹಾ ಕಭಿ ನಾ’ ಸಿನಿಮಾ ಶೂಟಿಂಗ್​​ನಲ್ಲಿ ಶಾರುಖ್​ ಖಾನ್​ ಬ್ಯುಸಿ ಇದ್ದರು. ಗೌರಿ ಖಾನ್ ಜತೆ​ ಮದುವೆ ಆಗಿ ಎರಡು ವರ್ಷ ಕಳೆದಿತ್ತು. ಇದೇ ಸಂದರ್ಭದಲ್ಲಿ ಶಾರುಖ್​ ಕಳ್ಳ ಸಂಬಂಧ ಇಟ್ಟುಕೊಂಡಿದ್ದಾರೆ ಎನ್ನುವ ಸುದ್ದಿ ಪ್ರಕಟವಾಗಿತ್ತು. ಇದರಿಂದ ಶಾರುಖ್​ ಕೋಪಗೊಂಡಿದ್ದರು. ಗೌರಿ ತಮ್ಮನ್ನು ಎಲ್ಲಿ ಬಿಟ್ಟು ಹೋಗುತ್ತಾರೋ ಎನ್ನುವ ಭಯ ಕೂಡ ಅವರನ್ನು ಕಾಡಿತ್ತು. ಅವರು ನೇರವಾಗಿ ತೆರಳಿದ್ದು ಪತ್ರಕರ್ತನ ಮನೆಗೆ.

‘ನಾನು ಅಂದು ತುಂಬಾ ಕೆಟ್ಟಾಗಿ ನಡೆದುಕೊಂಡಿದ್ದೆ. ನನ್ನ ಮದುವೆಯಲ್ಲಿ ನನ್ನ ಮಾವ ನೀಡಿದ್ದ ಖಡ್ಗವನ್ನು ತೆಗೆದುಕೊಂಡು ಪತ್ರಕರ್ತನ ಮನೆಗೆ ಹೋಗಿದ್ದೆ. ಅಲ್ಲಿ ಆತನ ಮೇಲೆ ಹಲ್ಲೆಮಾಡಿದೆ. ಇದಾದ ನಂತರ ಸೆಟ್​ಗೆ ಹಿಂದಿರುಗಿದೆ. ಮರುದಿನ ಪೊಲೀಸರು ಬಂದು ನನ್ನನ್ನು ಪೊಲೀಸ್​ ಠಾಣೆಗೆ ಕರೆದುಕೊಂಡು ಹೋದರು’ ಎಂದು ಶಾರುಖ್​ ಖಾನ್​ ಘಟನೆ ಬಗ್ಗೆ ವಿವರಿಸಿದ್ದರು.

‘ನನ್ನನ್ನು ಕರೆದುಕೊಂಡು ಹೋದಾಗ ಸಂಜೆ ಆರು ಗಂಟೆ ಆಗಿತ್ತು. ಹೀಗಾಗಿ ಜಾಮೀನು ಸಿಗಲಿಲ್ಲ. ಒಂದು ಫೋನ್​ ಕಾಲ್​ ಮಾಡೋಕೆ ನನ​ಗೆ ಪೊಲೀಸರು ಅವಕಾಶ ನೀಡಿದ್ದರು. ನಾನು ಕುಟುಂಬದವರಿಗೆ ಮಾಡುವ ಬದಲು ಅದೇ ಜರ್ನಲಿಸ್ಟ್​ಗೆ ಕರೆ ಮಾಡಿ ಬೆದರಿಕೆ ಹಾಕಿದೆ. ಇದಕ್ಕೆಲ್ಲ ನೀನೆ ಕಾರಣ, ಜೈಲಿನಿಂದ ಹೊರ ಬಂದಮೇಲೆ ಬಿಡಲ್ಲ ಎಂದಿದ್ದೆ. ಈ ಘಟನೆಯಿಂದ ನನ್ನ ಹೆಂಡತಿ ತುಂಬಾನೇ ಬೇಸರಗೊಂಡಿದ್ದರು. ನಾನಾ ಪಾಟೇಕರ್​ ನನಗೆ​ ಜಾಮೀನು ನೀಡಿ, ಜೈಲಿನಿಂದ ಬಿಡಿಸಿದರು’ ಎಂದು ಶಾರುಖ್​ ಹಳೆ ಘಟನೆ ನೆನೆದಿದ್ದರು.

ಇದನ್ನೂ ಓದಿ: ಶಾರುಖ್​ ಖಾನ್​-ಅಟ್ಲೀ ಸಿನಿಮಾಗೆ ಜನಪ್ರಿಯ ವೆಬ್​ ಸೀರಿಸ್ ‘ಮನಿ ಹೈಸ್ಟ್’​ ಕಥೆ?

ಸೋತು ಸುಣ್ಣವಾದ ಶಾರುಖ್​ ಖಾನ್​ಗೆ ಸೋಲಿಲ್ಲದ ಸರದಾರನ ನಿರ್ದೇಶನ; ಇಲ್ಲಿದೆ ಹೊಸ ಅಪ್​ಡೇಟ್

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು