Akshay Kumar: ಹಿಂದಿ ಚಿತ್ರಗಳ ಸೋಲಿನ ಎಫೆಕ್ಟ್​: ಅಕ್ಷಯ್​ ಕುಮಾರ್​ ಸಂಬಳಕ್ಕೆ ಬೀಳಲಿದೆ ಕತ್ತರಿ

| Updated By: ಮದನ್​ ಕುಮಾರ್​

Updated on: Nov 13, 2022 | 6:34 PM

Akshay Kumar Remuneration: ಅಕ್ಷಯ್ ಕುಮಾರ್​ ನಟನೆಯ ಸಿನಿಮಾಗಳಿಗೆ ಹಣ ಹೂಡಿದರೆ ಮಿನಿಮಮ್​ ಲಾಭ ಗ್ಯಾರಂಟಿ ಎಂಬ ಮಾತು ಒಂದು ಕಾಲದಲ್ಲಿ ಚಾಲ್ತಿಯಲ್ಲಿ ಇತ್ತು. ಆದರೆ ಈಗ ಕಾಲ ಬದಲಾಗಿದೆ.

Akshay Kumar: ಹಿಂದಿ ಚಿತ್ರಗಳ ಸೋಲಿನ ಎಫೆಕ್ಟ್​: ಅಕ್ಷಯ್​ ಕುಮಾರ್​ ಸಂಬಳಕ್ಕೆ ಬೀಳಲಿದೆ ಕತ್ತರಿ
ಅಕ್ಷಯ್ ಕುಮಾರ್
Follow us on

ಈಗಂತೂ ಹಿಂದಿ ಚಿತ್ರರಂಗಕ್ಕೆ ಶುಭಕಾಲ ಅಲ್ಲ. ಬಾಲಿವುಡ್​ ಸಿನಿಮಾಗಳು ಸತತವಾಗಿ ಸೋಲುತ್ತಿವೆ. ಅದರಲ್ಲೂ ನಟ ಅಕ್ಷಯ್​ ಕುಮಾರ್​ (Akshay Kumar) ಅವರು 2022ರಲ್ಲಿ ಬ್ಯಾಕ್​ ಟು ಬ್ಯಾಕ್​ ಸೋಲು ಅನುಭವಿಸಿದ್ದಾರೆ. ಈ ವರ್ಷ ಗೆದ್ದಿರುವ ಬಾಲಿವುಡ್ (Bollywood)​ ಸಿನಿಮಾಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಇದರಿಂದಾಗಿ ಎಲ್ಲ ಸ್ಟಾರ್​ ನಟರು ತಮ್ಮ ಭವಿಷ್ಯದ ಬಗ್ಗೆ ಆಲೋಚನೆ ಮಾಡಬೇಕಾದ ಪರಿಸ್ಥಿತಿ ಇದೆ. ಈ ಬಗ್ಗೆ ಅಕ್ಷಯ್​ ಕುಮಾರ್​ ಮಾತನಾಡಿದ್ದಾರೆ. ತಮ್ಮ ಸಂಬಳದಲ್ಲಿ ಶೇಕಡ 30ರಿಂದ ಶೇಕಡ 40ರವರೆಗೆ ಕಡಿಮೆ ಮಾಡಿಕೊಳ್ಳುವ ಬಗ್ಗೆ ಅವರು ಆಲೋಚಿಸಿದ್ದಾರೆ. ಈ ಕುರಿತು ‘ಹಿಂದುಸ್ತಾನ್​ ಟೈಮ್ಸ್​’ ವರದಿ ಮಾಡಿದೆ. ಸಂಭಾವನೆ (Akshay Kumar Remuneration) ಕಡಿತ ಮಾತ್ರವಲ್ಲದೇ ಅನೇಕ ವಿಚಾರಗಳ ಕುರಿತು ಅಕ್ಷಯ್​ ಕುಮಾರ್​ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಬಾಲಿವುಡ್​ ಸಿನಿಮಾಗಳು ನಷ್ಟ ಅನುಭವಿಸುತ್ತಿರುವುದಕ್ಕೆ ಹಲವು ಕಾರಣಗಳು ಇವೆ. ಸಿನಿಮಾ ನಿರ್ಮಾಣದ ವೆಚ್ಚ ಮಿತಿ ಮೀರಿರುವುದು ಕೂಡ ನಷ್ಟ ಹೆಚ್ಚಲು ಕಾರಣ ಆಗಿದೆ. ಈ ಬಗ್ಗೆ ಅಕ್ಷಯ್​ ಕುಮಾರ್​ ಮಾತನಾಡಿದ್ದಾರೆ. ಬಜೆಟ್​ ಕಡಿಮೆ ಮಾಡಬೇಕು ಎಂದರೆ ಸ್ಟಾರ್​ ಕಲಾವಿದರ ಸಂಭಾವನೆ ಕೂಡ ತಗ್ಗಬೇಕು ಎಂದು ಅವರು ಹೇಳಿದ್ದಾರೆ.

‘ನನ್ನ ಸಂಭಾವನೆಯಲ್ಲಿ ಶೇಕಡ 30ರಿಂದ ಶೇಕಡ 40ರಷ್ಟು ಕಡಿಮೆ ಮಾಡಲು ಬಯಸಿದ್ದೇನೆ. ಕಲಾವಿದರು ಮಾತ್ರವಲ್ಲದೇ ನಿರ್ಮಾಪಕರು ಮತ್ತು ಚಿತ್ರಮಂದಿರದವರು ಕೂಡ ಈ ಬಗ್ಗೆ ಆಲೋಚನೆ ಮಾಡಬೇಕಿದೆ. ಇದು ಆರ್ಥಿಕ ಹಿಂಜರಿತದ ಸಮಯ. ಮನರಂಜನೆಗಾಗಿ ಖರ್ಚು ಮಾಡಲು ಜನರ ಬಳಿ ಇರುವುದು ಕಡಿಮೆ ಹಣ. ಹೆಚ್ಚು ಕರ್ಚು ಮಾಡಲು ಸಾಧ್ಯವಿಲ್ಲ. ಎಲ್ಲದೂ ಬದಲಾಗಬೇಕಿದೆ’ ಎಂದು ಅಕ್ಷಯ್​ ಕುಮಾರ್​ ಹೇಳಿರುವುದು ವರದಿ ಆಗಿದೆ.

ಇದನ್ನೂ ಓದಿ
Akshay Kumar: ಸತತ ಸೋಲು ಕಂಡರೂ ಅಕ್ಷಯ್​ ಕುಮಾರ್​ ನಂ.1; ಇದು ಯಾವ ಲೆಕ್ಕಾಚಾರ?
Cuttputlli: ಒಟಿಟಿಯಲ್ಲಿ ಅಕ್ಷಯ್​ ಕುಮಾರ್​ ಚಿತ್ರಕ್ಕೆ ಗೆಲುವು; ಪೂರ್ತಿ ಬದಲಾಗುತ್ತಾ ಸ್ಟಾರ್​ ನಟನ ಭವಿಷ್ಯದ ಪ್ಲ್ಯಾನ್​?
Akshay Kumar: ವರದಕ್ಷಿಣೆ ಪಿಡುಗಿಗೆ ಅಕ್ಷಯ್​ ಕುಮಾರ್ ಪ್ರೋತ್ಸಾಹ? ಸರ್ಕಾರಿ ಜಾಹೀರಾತಿನಲ್ಲಿ ದೊಡ್ಡ ಎಡವಟ್ಟು
Cuttputlli: ತಪ್ಪು ತಿದ್ದಿಕೊಂಡ ಅಕ್ಷಯ್​ ಕುಮಾರ್​; ಒಂದು ನಿರ್ಧಾರದಿಂದ ಆಯ್ತು ನೂರಾರು ಕೋಟಿ ರೂ. ಲಾಭ

ಅಕ್ಷಯ್ ಕುಮಾರ್​ ಸಿನಿಮಾಗಳಿಗೆ ಹಣ ಹೂಡಿದರೆ ಮಿನಿಮಮ್​ ಲಾಭ ಗ್ಯಾರಂಟಿ ಎಂಬ ಮಾತು ಒಂದು ಕಾಲದಲ್ಲಿ ಚಾಲ್ತಿಯಲ್ಲಿ ಇತ್ತು. ಆದರೆ ಈಗ ಕಾಲ ಬದಲಾಗಿದೆ. 2023ರಲ್ಲಿ ಅಕ್ಷಯ್​ ಕುಮಾರ್​ ಅವರು ಪದೇಪದೇ ಮುಗ್ಗರಿಸಿದ್ದಾರೆ. ‘ಬಚ್ಚನ್​ ಪಾಂಡೆ’, ‘ಸಾಮ್ರಾಟ್​ ಪೃಥ್ವಿರಾಜ್​’, ‘ರಕ್ಷಾ ಬಂಧನ್​’, ‘ರಾಮ್​ ಸೇತು’ ಸಿನಿಮಾಗಳು ಗಲ್ಲಾ ಪೆಟ್ಟಿಗೆಯಲ್ಲಿ ನಿರೀಕ್ಷಿತ ಮಟ್ಟದ ಕಲೆಕ್ಷನ್​ ಮಾಡಲು ವಿಫಲವಾಗಿದೆ. ಬಾಲಿವುಡ್​ನಲ್ಲಿ ಸ್ಟಾರ್​ ನಟರ ಸಿನಿಮಾ ಎಂದರೆ 100ರಿಂದ 150 ಕೋಟಿ ರೂಪಾಯಿ ಗಳಿಕೆ ಮಾಡಲೇಬೇಕು. ಈ ವಿಚಾರದಲ್ಲಿ ಅಕ್ಷಯ್​ ಕುಮಾರ್​ ಸಿನಿಮಾಗಳು ಇತ್ತೀಚಿನ ವರ್ಷಗಳಲ್ಲಿ ಸೋಲುತ್ತಿವೆ.

‘ಡಿಫರೆಂಟ್​ ಆಗಿರುವುದನ್ನು ಪ್ರೇಕ್ಷಕರು ಬಯಸುತ್ತಿದ್ದಾರೆ. ಇದರ ಬಗ್ಗೆ ನಾವು ಆಲೋಚಿಸಬೇಕು. ಚಿತ್ರಮಂದಿರಕ್ಕೆ ಜನರು ಬರುತ್ತಿಲ್ಲ ಎಂದರೆ ಅದು ನಮ್ಮ ತಪ್ಪು ಹೊರತು ಪ್ರೇಕ್ಷಕರ ತಪ್ಪಲ್ಲ. ಜನರು ಬಯಸಿದ್ದನ್ನು ನಾವು ನೀಡಬೇಕು’ ಎಂದು ಅಕ್ಷಯ್​ ಕುಮಾರ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:00 pm, Sun, 13 November 22