AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಾರಕೆಶ್​’ ಫಿಲ್ಮ್​ ಫೆಸ್ಟಿವಲ್​ನಲ್ಲಿ ‘ಎಟೊಯಿಲ್​ ಡಿ ಒರ್’ ಪ್ರಶಸ್ತಿ ಪಡೆದ ರಣವೀರ್​ ಸಿಂಗ್​

ಮೊರಾಕೊದಲ್ಲಿ ಶನಿವಾರ (ನವೆಂಬರ್​ 12) ನಡೆದ ‘ಮಾರಕೆಶ್​​ ಅಂತರರಾಷ್ಟೀಯ ಫಿಲ್ಮ್​ ಫೆಸ್ಟಿವಲ್’​ನಲ್ಲಿ ರಣವೀರ್​ ಸಿಂಗ್​ ‘ಎಟೊಯಿಲ್​ ಡಿಒರ್’​ ಪ್ರಶಸ್ತಿ ಪಡೆದಿದ್ದು, ‘ಮಲ್ಹರಿ'ಯಲ್ಲಿ ಪವರ್​ ಫುಲ್​ ಡ್ಯಾನ್ಸ್​ ಮಾಡುವ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

‘ಮಾರಕೆಶ್​' ಫಿಲ್ಮ್​ ಫೆಸ್ಟಿವಲ್​ನಲ್ಲಿ ‘ಎಟೊಯಿಲ್​ ಡಿ ಒರ್’ ಪ್ರಶಸ್ತಿ ಪಡೆದ ರಣವೀರ್​ ಸಿಂಗ್​
ರಣವೀರ್​ ಸಿಂಗ್​
TV9 Web
| Edited By: |

Updated on: Nov 12, 2022 | 6:25 PM

Share

ರಣವೀರ್​ ಸಿಂಗ್​ ಅವರು ಫುಲ್​ ಎನರ್ಜಿಟಿಕ್.​ ಹೋದಲ್ಲೆಲ್ಲಾ ರಣವೀರ್​ ತಮ್ಮ ಕಾಮಿಡಿಗಳು ಮತ್ತು ಡ್ಯಾನ್ಸ್​ ಮೂಲಕ ನೋಡುಗರನ್ನು ಮೋಡಿ ಮಾಡುತ್ತಾರೆ. ಮೊರಾಕೊದಲ್ಲಿ ನಡೆಯುತ್ತಿರುವ 19ನೇ ಆವೃತ್ತಿಯ ಮಾರಕೆಶ್​ ಇಂಟರ್ನ್ಯಾಷನಲ್​ ಫಿಲ್ಮ್​ ಫೆಸ್ಟಿವಲ್ (marrakech international film festival)​ನಲ್ಲಿ ರಣವೀರ್​ ಸಿಂಗ್​ ಅವರು ಎಟೊಯಿಲ್​ ಡಿ ಒರ್​ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈ ಹಿಂದೆ ಈ ಅವಾರ್ಡ್​ನ್ನು ಅಮಿತಾಭ್​​ ಬಚ್ಚನ್​, ಶಾರುಖ್​ ಖಾನ್​, ಅಮೀರ್​ ಖಾನ್​ ಅವರಿಗೆ ನೀಡಲಾಗಿತ್ತು.

ಅವಾರ್ಡ್​ ಪಡೆದುಕೊಂಡ ರಣವೀರ್​ ಸಿಂಗ್​ ತಮ್ಮ ಫೈರಿಂಗ್​ ಡ್ಯಾನ್ಸ್​ ಮೂಲಕ ನೋಡುಗರನ್ನ ಮಂತ್ರ ಮುಗ್ದರನ್ನಾಗಿಸಿದ್ದಾರೆ. ‘ಭಾರತೀಯ ಚಿತ್ರರಂಗವನ್ನು ಪ್ರತಿನಿಧಿಸುತ್ತಿದ್ದೀರಿ. ಇದರ ಬಗ್ಗೆ ಏನು ಹೇಳುತ್ತಿರಿ’ ಎಂಬ ಪ್ರಶ್ನೆಗೆ ಉತ್ತರಿಸಿದ ರಣವೀರ್​ ಸಿಂಗ್​ ‘ಇದು ಭಾರತೀಯ ಚಿತ್ರರಂಗದ ಶಕ್ತಿಗೆ ಸಾಕ್ಷಿಯಾಗಿದೆ ಎಂದು ನಾನು ಭಾವಿಸುತ್ತೇನೆ. ಇದು ಭೌಗೋಳಿಕ ಮತ್ತು ಸಾಂಸ್ಕೃತಿಕ ಗಡಿಗಳನ್ನು ಮೀರಿದ್ದು, ಭಾರತೀಯ ಚಿತ್ರರಂಗದ ಭಾಗವಾಗಲು ಅವಕಾಶ ಸಿಕ್ಕಿರುವುದಕ್ಕೆ ನಾನು ಹೆಮ್ಮೆಪಡುತ್ತೇನೆ’ ಎಂದಿದ್ದಾರೆ.

ಇದನ್ನೂ ಓದಿ:Viral Video : ರಣವೀರ್ ಸಿಂಗ್ ಅಭಿನಯದ​ ‘ರಾಮ್​ಜೀ ಕೀ ಚಾಲ್​’ ಹಾಡಿಗೆ ದಕ್ಷಿಣ ಕೊರಿಯಾದ ಹೈಕಳ ಹೆಜ್ಜೆ

ರಣವೀರ್​ ಸಿಂಗ್​ ಹೊರತಾಗಿ ಸ್ಕಾಟಿಷ್​ನ ನಟಿ ಟಿಲ್ಡಾ ಸ್ವಿಂಟನ್, ಅಮೆರಿಕದ ಖ್ಯಾತ ಚಿತ್ರ ನಿರ್ಮಾಪಕ ಜೇಮ್ಸ್​ ಗ್ರೇ ಮತ್ತು ಮೊರೊಕನ್​ ಸಿನಿಮಾ ಪ್ರವರ್ತಕಿ ಹಾಗೂ ನಿರ್ದೇಶಕಿ ಫರಿದಾ ಬೆನ್ಲಿಯಾಜಿದ್​ ಈ ಗೌರವವನ್ನ ಪಡೆದಿದ್ದಾರೆ ಎಂದು ISNS ವರದಿ ಮಾಡಿದೆ.

ಇನ್ನಷ್ಟು ಮನರಂಜನಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಆಗ ವೀರಪ್ಪನ್‌ ಕೇಸ್‌ನಲ್ಲಿ ಗಿಫ್ಟ್‌: ಹೆಚ್​ಡಿ ಕುಮಾರಸ್ವಾಮಿ ಹೊಸ ಬಾಂಬ್‌
ಆಗ ವೀರಪ್ಪನ್‌ ಕೇಸ್‌ನಲ್ಲಿ ಗಿಫ್ಟ್‌: ಹೆಚ್​ಡಿ ಕುಮಾರಸ್ವಾಮಿ ಹೊಸ ಬಾಂಬ್‌
ಬಾಂಗ್ಲಾ ಜೊತೆಗೆ ಪಾಕಿಸ್ತಾನ ಕೂಡ ಟಿ20 ವಿಶ್ವಕಪ್​ನಿಂದ ಔಟ್?
ಬಾಂಗ್ಲಾ ಜೊತೆಗೆ ಪಾಕಿಸ್ತಾನ ಕೂಡ ಟಿ20 ವಿಶ್ವಕಪ್​ನಿಂದ ಔಟ್?
ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್: ತಡೆಯಲಾಗದೇ ರಸ್ತೆಯಲ್ಲಿ ಮೂತ್ರ ವಿಸರ್ಜನೆ!
ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್: ತಡೆಯಲಾಗದೇ ರಸ್ತೆಯಲ್ಲಿ ಮೂತ್ರ ವಿಸರ್ಜನೆ!
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರ ಪ್ಲ್ಯಾನ್: ಏನದು?
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರ ಪ್ಲ್ಯಾನ್: ಏನದು?
ಮೂಲಕ ಧರ್ಮ ಪ್ರಚಾರದ ವಾಹನವಾದ ಪಂಚಾಯ್ತಿ ಸ್ವಚ್ಛತಾ ಗಾಡಿ!
ಮೂಲಕ ಧರ್ಮ ಪ್ರಚಾರದ ವಾಹನವಾದ ಪಂಚಾಯ್ತಿ ಸ್ವಚ್ಛತಾ ಗಾಡಿ!
ಚಾಕು, ಲಾಂಗ್‌ ಹಿಡಿದು ಬೀದಿಗಳಲ್ಲಿ ಅಡ್ಡಾಡುತ್ತಿರುವ ಕಳ್ಳರು
ಚಾಕು, ಲಾಂಗ್‌ ಹಿಡಿದು ಬೀದಿಗಳಲ್ಲಿ ಅಡ್ಡಾಡುತ್ತಿರುವ ಕಳ್ಳರು
ಲಕ್ಕುಂಡಿ ಸಂಪತ್ತು ಕಾಯ್ತಾ ಇದೆಯಾ ಘಟಸರ್ಪ? ಬೃಹತ್ ಘಟಸರ್ಪ ಮೂರ್ತಿ ಪತ್ತೆ!
ಲಕ್ಕುಂಡಿ ಸಂಪತ್ತು ಕಾಯ್ತಾ ಇದೆಯಾ ಘಟಸರ್ಪ? ಬೃಹತ್ ಘಟಸರ್ಪ ಮೂರ್ತಿ ಪತ್ತೆ!
ಸಿದ್ದರಾಮಯ್ಯ ಆಗಮನಕ್ಕೂ ಮುನ್ನ ಬೃಹತ್ ಕಟೌಟ್​ಗಳು ಬಿದ್ದು ನಾಲ್ವರಿಗೆ ಗಾಯ
ಸಿದ್ದರಾಮಯ್ಯ ಆಗಮನಕ್ಕೂ ಮುನ್ನ ಬೃಹತ್ ಕಟೌಟ್​ಗಳು ಬಿದ್ದು ನಾಲ್ವರಿಗೆ ಗಾಯ
ಮಗನ ‘ಕಲ್ಟ್’ ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ಜಮೀರ್ ಅಹ್ಮದ್
ಮಗನ ‘ಕಲ್ಟ್’ ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ಜಮೀರ್ ಅಹ್ಮದ್
ಕುಮಾರ ಷಷ್ಠಿ ಆಚರಣೆಯ ವಿಧಾನ ಹಾಗೂ ಮಹತ್ವ
ಕುಮಾರ ಷಷ್ಠಿ ಆಚರಣೆಯ ವಿಧಾನ ಹಾಗೂ ಮಹತ್ವ