AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aishwarya Rai: ಹಿಂದಿ ಚಿತ್ರರಂಗದಲ್ಲಿ 20 ವರ್ಷ ಪೂರೈಸಿದ ಐಶ್ವರ್ಯಾ ರೈ; ಸುಂದರ ಪತ್ರದ ಮೂಲಕ ಶುಭ ಕೋರಿದ ರೇಖಾ

Aishwarya Rai Bachchan: ಬಾಲಿವುಡ್​ನ ಸೂಪರ್ ಹಿಟ್ ನಟಿ ಐಶ್ವರ್ಯಾ ರೈ ಬಚ್ಚನ್, ಚಿತ್ರರಂಗದಲ್ಲಿ 20 ವರ್ಷಗಳನ್ನು ಪೂರೈಸಿದ್ದಾರೆ. ಈ ಸಂದರ್ಭದಲ್ಲಿ ಹಿರಿಯ ನಟಿ ರೇಖಾ ಬರೆದಿರುವ ಪತ್ರ ಎಲ್ಲರ ಗಮನ ಸೆಳೆದಿದೆ.

Aishwarya Rai: ಹಿಂದಿ ಚಿತ್ರರಂಗದಲ್ಲಿ 20 ವರ್ಷ ಪೂರೈಸಿದ ಐಶ್ವರ್ಯಾ ರೈ; ಸುಂದರ ಪತ್ರದ ಮೂಲಕ ಶುಭ ಕೋರಿದ ರೇಖಾ
ರೇಖಾ, ಐಶ್ವರ್ಯಾ ರೈ (ಸಂಗ್ರಹ ಚಿತ್ರ)
TV9 Web
| Updated By: shivaprasad.hs|

Updated on:Sep 28, 2021 | 1:39 PM

Share

ಬಾಲಿವುಡ್​ನ ಖ್ಯಾತ ನಟಿಯರಾದ ಐಶ್ವರ್ಯ ರೈ ಬಚ್ಚನ್ ಮತ್ತು ರೇಖಾ ಆತ್ಮೀಯ ಬಾಂಧವ್ಯವನ್ನು ಹೊಂದಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿಲ್ಲ. ಇಬ್ಬರು ನಟಿಯರು ಪರಸ್ಪರ ಗೌರವ ಸಂಬಂಧವನ್ನು ಹೊಂದಿರುವುದಲ್ಲದೇ, ಐಶ್ವರ್ಯ ಅವರು ರೇಖಾರನ್ನು ‘ರೇಖಾ ಮಾ’ ಎಂದು ಸಂಬೋಧಿಸುತ್ತಾರೆ. ಇತ್ತೀಚೆಗಷ್ಟೇ ಐಶ್ವರ್ಯಾ ಹಿಂದಿ ಚಿತ್ರರಂಗದಲ್ಲಿ 20 ವರ್ಷಗಳನ್ನು ಪೂರೈಸಿದರು. ಈ ಸಂದರ್ಭದಲ್ಲಿ ರೇಖಾ ಸುಂದರವಾದ ಪತ್ರವನ್ನು ಬರೆದಿದ್ದು, ಅದರಲ್ಲಿ ಚಿತ್ರರಂಗದಲ್ಲಿ ಪಡೆದ ಘನತೆ ಮತ್ತು ಮಾಡಿದ ಸಾಧನೆಗಾಗಿ ಐಶ್ವರ್ಯರನ್ನು ಅಭಿನಂದಿಸಿದ್ದಾರೆ. ಜೊತೆಗೆ ಐಶ್ವರ್ಯಾರ ಯಾವ ಪಾತ್ರ ಇಷ್ಟ ಎಂಬುದರ ಕುರಿತು ಕುತೂಹಲಕರ ಸಂಗತಿಯನ್ನು ಹಂಚಿಕೊಂಡಿದ್ದಾರೆ.

ರೇಖಾರಿಗೆ ಐಶ್ವರ್ಯಾರ ‘ಆರಾಧ್ಯಾಳ ತಾಯಿಯ ಪಾತ್ರ’ ಬಹಳ ಇಷ್ಟವಂತೆ.  ರೇಖಾ ಬರೆದ ಪತ್ರ ‘ಫೆಮಿನಾ’ದಲ್ಲಿ ಪ್ರಕಟವಾಗಿದ್ದು, ಅದರಲ್ಲಿ ಅವರು ತಮ್ಮ ಮನದಾಳದ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ‘ಪ್ರೀತಿಯ ಆಶ್’  ಎಂದು ಅವರು ಪತ್ರವನ್ನು ಆರಂಭಿಸಿದ್ದಾರೆ. ಆ ಪತ್ರದ ಭಾವಾನುವಾದ ಇಲ್ಲಿದೆ.

‘ನಿಮ್ಮಂತಹ ಚೈತನ್ಯಯುತ ಮಹಿಳೆ ಹರಿಯುವ ನದಿಯಂತೆ, ಎಂದಿಗೂ ನಿಲ್ಲುವುದಿಲ್ಲ. ಅವಳು ಬಯಸಿದ ಸ್ಥಳಕ್ಕೆ ಹೋಗುತ್ತಾಳೆ; ಮತ್ತು ತನ್ನ ಗಮ್ಯಸ್ಥಾನವನ್ನು ತಲುಪುತ್ತಾಳೆ. ಜನರು ನೀವು ಹೇಳಿದ್ದನ್ನು ಮರೆತುಬಿಡಬಹುದು, ನೀವು ಮಾಡಿದ್ದನ್ನು ಸಹ ಅವರು ಮರೆತುಬಿಡಬಹುದು ಆದರೆ ನೀವು ಅವರಿಗೆ ನೀಡಿದ ಭಾವಗಳು(ಪಾತ್ರಗಳ ಮುಖಾಂತರ) ಎಂದಿಗೂ ಮರೆಯುವುದಿಲ್ಲ. ಧೈರ್ಯವಿಲ್ಲದೆಯೇ ಬೇರೆ ಯಾವುದೇ ಸದ್ಗುಣವನ್ನು ನಿರಂತರವಾಗಿ ಅಭ್ಯಾಸ ಮಾಡಲು ಸಾಧ್ಯವಿಲ್ಲದ ಕಾರಣ ಎಲ್ಲಾ ಸದ್ಗುಣಗಳಲ್ಲಿ ಧೈರ್ಯವು ಅತ್ಯಂತ ಪ್ರಮುಖವಾದುದು ಎಂಬುದಕ್ಕೆ ನೀವು (ಐಶ್ವರ್ಯಾ) ಜೀವಂತ ಉದಾಹರಣೆ! ಮಾತನಾಡುವ ಮುನ್ನವೇ ನಿಮ್ಮ ಆಳವಾದ ಶಕ್ತಿ ಮತ್ತು ಶುದ್ಧ ಮನವು ನಿಮ್ಮನ್ನು ಎಲ್ಲರಿಗೂ ಪರಿಚಯಿಸುತ್ತದೆ!’

‘ನಿಮ್ಮಲ್ಲಿರುವ ಉತ್ತಮ ದೃಷ್ಟಿಕೋನವೆಂದರೆ, ‘ಪ್ರಸ್ತುತ’ದೊಂದಿಗೆ ಕೃತಜ್ಞತೆಯಿಂದ ಇರುವುದು. ನೀವು ಇಷ್ಟಪಡುವ ಕೆಲಸಗಳನ್ನು ಮುಂದುವರಿಸಿದ್ದೀರಿ. ಜೊತೆಗೆ ಜನರು ಅದನ್ನು ಮರೆಯಲು ಸಾಧ್ಯವಾಗದಂತೆ ಅದನ್ನು ಪ್ರಸ್ತುತಪಡಿಸಿದ್ದೀರಿ. ನೀವು ಬಹಳ ದೂರ ಬಂದು, ಫೀನಿಕ್ಸ್​​ನಂತೆ ಅನೇಕ ಅಡೆತಡೆಗಳನ್ನು ಸಹಿಸಿಕೊಂಡು ಮತ್ತೆ ಮೇಲೇರಿದ್ದೀರಿ. ‘ತಂಪಾದ’ ಚಂದ್ರನಂತಿರುವ ಹುಡುಗಿಯ ಬಗ್ಗೆ ನಾನು ಎಷ್ಟು ಹೆಮ್ಮೆಪಡುತ್ತೇನೆ ಎಂದು ನಾನು ಪದಗಳಲ್ಲಿ ಬರೆಯಲು ಸಾಧ್ಯವಿಲ್ಲ.’

‘ನೀವು ನಿರ್ವಹಿಸಿರುವ ಎಲ್ಲಾ ಪಾತ್ರಗಳಲ್ಲೂ ಅತ್ಯುತ್ತಮವಾದದ್ದನ್ನೇ ನೀಡಿದ್ದೀರಿ. ಆದರೆ ‘ಆರಾಧ್ಯಾ’ಳ ತಾಯಾಗಿ ನೀವು ನಿರ್ವಹಿಸಿದ ಪಾತ್ರ ಅದ್ಭುತವಾದದ್ದು. ಎರಡು ದಶಕಗಳ ಐಶ್ವರ್ಯ ರೈ ಬಚ್ಚನ್- ವಾಹ್! ಆಶೀರ್ವಾದಗಳು ಮತ್ತು ಶುಭ ಹಾರೈಕೆಗಳು. ನಿಮ್ಮ ಹೃದಯವು ಹೊಂದಿರುವುದಕ್ಕಿಂತ ಹೆಚ್ಚು ಪ್ರೀತಿ, ಸಂತೋಷ ನಿಮಗೆ ಲಭಿಸಲಿ ಎಂದು ಹಾರೈಸುತ್ತೇನೆ’ ಎಂದು ರೇಖಾ ಬರೆದಿದ್ದಾರೆ. ಐಶ್ವರ್ಯಾರ ಬೆಳವಣಿಗೆಯನ್ನು ಸಂಪೂರ್ಣವಾಗಿ ಗಮನಿಸಿರುವ ರೇಖಾ, ಅದನ್ನೆಲ್ಲವನ್ನೂ ನೆನಪು ಮಾಡಿಕೊಂಡು, ಐಶ್ವರ್ಯಾರಿಗೆ ಹಾರೈಸುವ ಭಾವುಕ ಪತ್ರ ಎಲ್ಲರಿಂದ ಮೆಚ್ಚುಗೆ ಗಳಿಸಿದ್ದು, ಈರ್ವರು ಖ್ಯಾತ ನಟಿಯರಿಗೂ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

ಇದನ್ನೂ ಓದಿ:

ರಣಬೀರ್​ ಕಪೂರ್​ ಹುಟ್ಟುಹಬ್ಬ: ಆಲಿಯಾ ಭಟ್​ ಜೊತೆ ಮದುವೆಗೆ ಜೋರಾಗಿದೆ ತಯಾರಿ

Prabhas: ಪ್ರಭಾಸ್ ಅಭಿಮಾನಿಗಳಿಗೆ ಮುಂದಿನ ವರ್ಷ ಭರ್ಜರಿ ಹಬ್ಬ; ಕಾರಣ ಏನು ಗೊತ್ತಾ?

(Rekha writes a heart felt note to Aishwarya Rai when she completes 20 years in industry)

Published On - 1:34 pm, Tue, 28 September 21

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!