AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lata Mangeshkar Birthday: ಲತಾ ಮಂಗೇಶ್ಕರ್ ಫೇಮಸ್​ ಆಗುವುದಕ್ಕೂ ಮುನ್ನವೇ ಭವಿಷ್ಯ ನುಡಿದಿದ್ದರು ಪಾಕ್​ ಗಾಯಕಿ ನೂರ್​ ಜಹಾನ್

Happy Birthday Lata Mangeshkar: ‘ಬಡೀ ಮಾ’ ಚಿತ್ರದಲ್ಲಿ ಲತಾ ಮಂಗೇಶ್ಕರ್​ ಒಂದು ಚಿಕ್ಕ ಪಾತ್ರ ಮಾಡುವುದರ ಜೊತೆಗೆ ಒಂದು ಗೀತೆಯನ್ನೂ ಹಾಡಿದ್ದರು. ಆಗ ಅವರ ಕಂಠವನ್ನು ಗಮನಿಸಿದ ನೂರ್​ ಜಹಾನ್​ ಅವರು ಲತಾ ಬಗ್ಗೆ ಭವಿಷ್ಯ ನುಡಿದಿದ್ದರು.

Lata Mangeshkar Birthday: ಲತಾ ಮಂಗೇಶ್ಕರ್ ಫೇಮಸ್​ ಆಗುವುದಕ್ಕೂ ಮುನ್ನವೇ ಭವಿಷ್ಯ ನುಡಿದಿದ್ದರು ಪಾಕ್​ ಗಾಯಕಿ ನೂರ್​ ಜಹಾನ್
ಲತಾ ಮಂಗೇಶ್ಕರ್
TV9 Web
| Edited By: |

Updated on: Sep 28, 2021 | 11:56 AM

Share

ಭಾರತೀಯ ಚಿತ್ರರಂಗದ ಲೆಜೆಂಡರಿ ಗಾಯಕಿ ಲತಾ ಮಂಗೇಶ್ಕರ್​ ಅವರು ಇಂದು (ಸೆ.28) 92ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸಿನಿಮಾ ಸಂಗೀತ ಲೋಕದಲ್ಲಿ ಅಪಾರ ಸಾಧನೆ ಮಾಡಿದ ಈ ಮಹಾನ್​ ಸಿಂಗರ್​ಗೆ ಕೋಟ್ಯಂತರ ಅಭಿಮಾನಿಗಳಿಂದ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ. ಸಾವಿರಾರು ಸೂಪರ್​ ಹಿಟ್​ ಹಾಡುಗಳಿಗೆ ಧ್ವನಿಯಾದ ಲತಾ ಮಂಗೇಶ್ಕರ್​ ಅವರಿಗೆ ಸಾಟಿ ಬೇರಾರೂ ಇಲ್ಲ. ಅನೇಕ ಸೆಲೆಬ್ರಿಟಿಗಳು ಕೂಡ ಅವರಿಗೆ ವಿಶ್​ ಮಾಡುತ್ತಿದ್ದಾರೆ. ತಮ್ಮ ಸುಮಧುರ ಕಂಠದ ಬಗ್ಗೆ ಲತಾ ಮಂಗೇಶ್ಕರ್​ ಸ್ವತಃ ಮಾತನಾಡಿದ್ದು ವಿರಳ. ಅಂಥ ಕೆಲವು ಅಪರೂಪದ ಮಾತುಗಳು ಇಲ್ಲಿವೆ.

ಪಾಕಿಸ್ತಾನಿ ಗಾಯಕಿ ನೂರ್​ ಜಹಾನ್​ ಅವರು ಲತಾ ಮಂಗೇಶ್ಕರ್​ ಅವರಿಗೆ ಸ್ಫೂರ್ತಿ ಆಗಿದ್ದರು. ಪಾಕಿಸ್ತಾನಿ ಸಿನಿಮಾದಲ್ಲಿ ಗಾಯಕಿಯಾಗಿ ಫೇಮಸ್​ ಆಗುವುದರ ಜೊತೆಗೆ ಅನೇಕ ಬಾಲಿವುಡ್​ ಸಿನಿಮಾಗಳಲ್ಲಿ ನೂರ್​ ಜಹಾನ್​ ನಟಿಸಿದ್ದಾರೆ. ಅವರ ಅಭಿನಯದ ‘ಬಡೀ ಮಾ’ (1945) ಚಿತ್ರದಲ್ಲಿ ಲತಾ ಮಂಗೇಶ್ಕರ್​ ಒಂದು ಚಿಕ್ಕ ಪಾತ್ರ ಮಾಡುವುದರ ಜೊತೆಗೆ ಒಂದು ಗೀತೆಯನ್ನೂ ಹಾಡಿದ್ದರು. ಆಗ ಅವರ ಕಂಠವನ್ನು ಗಮನಿಸಿದ ನೂರ್​ ಜಹಾನ್​ ಅವರು ಲತಾ ಬಗ್ಗೆ ಭವಿಷ್ಯ ನುಡಿದಿದ್ದರು.

‘ಬಡೀ ಮಾ ಸಿನಿಮಾದ ಶೂಟಿಂಗ್​ ಸೆಟ್​ನಲ್ಲಿ ನೂರ್​ ಜಹಾನ್​ ಅವರಿಗೆ ನನ್ನನ್ನು ಪರಿಚಯಿಸಲಾಯಿತು. ತಮ್ಮೆದುರು ಒಂದು ಹಾಡು ಹೇಳುವಂತೆ ಅವರು ನನಗೆ ಸೂಚಿಸಿದರು. ನನ್ನ ಹಾಡು ಕೇಳಿ ಅವರಿಗೆ ಖುಷಿ ಆಯಿತು. ನೀನು ಮುಂದೊಂದು ದಿನ ಒಳ್ಳೆಯ ಗಾಯಕಿ ಆಗೋದು ಖಚಿತ. ಚೆನ್ನಾಗಿ ಅಭ್ಯಾಸ ಮಾಡು ಅಂತ ಹೇಳಿದ್ದರು’ ಎಂಬ ವಿಷಯವನ್ನು ‘ಇನ್​ ಹರ್​ ಓನ್​ ವಾಯ್ಸ್​’ ಪುಸ್ತಕದಲ್ಲಿ ಲತಾ ಮಂಗೇಶ್ಕರ್​ ಉಲ್ಲೇಖಿಸಿದ್ದಾರೆ.

ಗಾಯನವನ್ನು ವೃತ್ತಿಯಾಗಿ ಸ್ವೀಕರಿಸಿದವರು ತಮ್ಮ ಧ್ವನಿಯನ್ನು ಚೆನ್ನಾಗಿ ಇಟ್ಟುಕೊಳ್ಳಲು ಹಲವು ರೀತಿಯಲ್ಲಿ ಎಚ್ಚರಿಕೆ ವಹಿಸುತ್ತಾರೆ. ಧ್ವನಿ ಕೆಡಬಾರದು ಎಂಬ ಕಾಳಜಿಯಿಂದ ತಾವು ಸೇವಿಸುವ ಆಹಾರದಲ್ಲೂ ಕಟ್ಟುನಿಟ್ಟಾಗಿ ಇರುತ್ತಾರೆ. ಆದರೆ ಲತಾ ಮಂಗೇಶ್ಕರ್​ ಆ ರೀತಿ ಅಲ್ಲ. ‘ನಾನು ಊಟದಲ್ಲಿ ಯಾವುದೇ ನಿರ್ಬಂಧಗಳನ್ನು ಹಾಕಿಕೊಂಡಿಲ್ಲ. ಉಪ್ಪಿನಕಾಯಿ, ಮೊಸರು, ಮೆಣಸಿನಕಾಯಿ ತಿನ್ನಬಾರದು ಅಂತ ಕೆಲವರು ಕೇಳುತ್ತಾರೆ. ನಾನು ಎಲ್ಲವನ್ನೂ ತಿನ್ನುತ್ತೇನೆ’ ಎಂದು ಈ ಹಿಂದೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಲತಾ ಮಂಗೇಶ್ಕರ್​ ಹೇಳಿಕೊಂಡಿದ್ದರು.

ಇದನ್ನೂ ಓದಿ:

ಸತತ ಒಂದು ತಿಂಗಳ ಚಿಕಿತ್ಸೆ ವಿಫಲ; ಕೊವಿಡ್​ಗೆ ಬಲಿಯಾದ ಖ್ಯಾತ ಗಾಯಕಿ

ಹಿಂದೂಸ್ಥಾನಿ ಗಾಯಕ, ಪದ್ಮವಿಭೂಷಣ ಪುರಸ್ಕೃತ ಉಸ್ತಾದ್​ ಗುಲಾಮ್​ ಮುಸ್ತಫಾ ಖಾನ್ ನಿಧನ

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್