AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಲಾಮ್​ ವೆಂಕಿ’ ಫಸ್ಟ್​ ಲುಕ್ : ಸುಜಾತಾ ಮತ್ತು ವೆಂಕಟೇಶ್​ ಪಾತ್ರದಲ್ಲಿ ಕಾಜೋಲ್​ ಮತ್ತು ವಿಶಾಲ್​ ಜೇತ್ವಾ

ಸಲಾಮ್​ ವೆಂಕಿ ಚಿತ್ರದ ಟ್ರೇಲರ್​ ಸೋಮವಾರ (ನವೆಂಬರ್​ 14) ರಂದು ಬಿಡುಗಡೆಯಾಗಲಿದೆ.

‘ಸಲಾಮ್​ ವೆಂಕಿ' ಫಸ್ಟ್​ ಲುಕ್ : ಸುಜಾತಾ ಮತ್ತು ವೆಂಕಟೇಶ್​ ಪಾತ್ರದಲ್ಲಿ ಕಾಜೋಲ್​ ಮತ್ತು ವಿಶಾಲ್​ ಜೇತ್ವಾ
ಸಲಾಮ್​ ವೆಂಕಿ ಮೂವಿ ಫಸ್ಟ್​ ಲುಕ್​
TV9 Web
| Edited By: ಕಿರಣ್ ಹನುಮಂತ್​ ಮಾದಾರ್|

Updated on: Nov 11, 2022 | 11:23 AM

Share

ಕಾಜೋಲ್​ (kajol) ಅವರ ಇತ್ತೀಚಿನ ಇನ್​ಸ್ಟಾಗ್ರಾಮ್​ ಪೋಸ್ಟ್​ ಪ್ರಕಾರ ಕಾಜೋಲ್​ ಮತ್ತು ವಿಶಾಲ್​ ಜೇತ್ವಾ ಅವರ ‘ಸಲಾಮ್​ ವೆಂಕಿ’(salaam venky)ಚಿತ್ರದ ಟ್ರೇಲರ್​ ನವೆಂಬರ್​ 14 ರಂದು ಬಿಡುಗಡೆಯಾಗಲಿದೆ. ಗುರುವಾರ ಕಾಜೋಲ್ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ‘ಏಕ್​ ಬಡಿ ಜಿಂದಗಿ ಕಾ ಬಡಾ ಸೆಲೆಬ್ರೇಶನ್​ ಪ್ರಾರಂಭವಾಗಲಿದೆ’ ಎಂದು ಬರೆಯುವ ಮೂಲಕ ಚಿತ್ರದ ಮೊದಲ ಪೋಸ್ಟರ್​ನ್ನು ಹಂಚಿಕೊಂಡಿದ್ದಾರೆ.ಚಿತ್ರದ ಮೊದಲ ಪೋಸ್ಟ್​ರ್​ನಲ್ಲಿ ಕಾಜೋಲ್​ ಕೆಂಪು ಸೀರೆ ಧರಿಸಿದ್ದು ಹಾಗೂ ವಿಶಾಲ್​ ವಿಲ್​ಚೇರ್​ನಲ್ಲಿ ಕುಳಿತಿದ್ದಾರೆ.

ಇನ್ನು ಈ ಸಿನಿಮಾವನ್ನು ನಟಿ ಮತ್ತು ನಿರ್ಮಾಪಕಿ ರೇವತಿ ಅವರು ನಿರ್ದೇಶನ ಮಾಡಿದ್ದು, ಸೂರಜ್​ ಸಿಂಗ್​, ಶ್ರದ್ಧಾ ಅಗರವಾಲ್ ನಿರ್ಮಾಣ ಮಾಡಿದ್ದಾರೆ. ಈ ಚಿತ್ರವು ಡಿಸೆಂಬರ್ 9 ರಂದು ತೆರೆಯ ಮೇಲೆ ಬರಲು ಸಿದ್ಧವಾಗಿದೆ. ಸಿನಿಮಾವು ಮಹಿಳೆಯ ನೈಜ ಕಥೆಯನ್ನ ಆಧಾರಿಸಿದ್ದು, ಜೀವನದಲ್ಲಿ ಅವಳು ಎದುರಿಸುವ ಸವಾಲುಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ಹೊಸ ಸಿನಿಮಾ ಕೆಲಸ ಆರಂಭಿಸಿದ ಕಾಜೋಲ್​; ನಿರ್ದೇಶಕಿ ರೇವತಿ ಜೊತೆ ಕೈ ಜೋಡಿಸಿದ ನಟಿ

ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ‘ಮಿತ್ರ’ ವನ್ನು ನಿರ್ದೇಶಿಸಿರುವ ರೇವತಿಯವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ‘ಸಲಾಮ್​ ವೆಂಕಿ’ ಚಿತ್ರದ ಅನೇಕ ಪೋಸ್ಟ್​ಗಳನ್ನು ಹಂಚಿಕೊಂಡಿದ್ದಾರೆ. ಇನ್ನು ದುರ್ಗಾ ಪೂಜೆಯ ಸಂದರ್ಭದಲ್ಲಿ ನಟಿ ಕಾಜೋಲ್​ ತನ್ನ ಇನ್​ಸ್ಟಾಗ್ರಾಮ್​ನಲ್ಲಿ ನಿರ್ಮಾಪಕಿ ರೇವತಿಯವರೊಂದಿಗೆ ತಮ್ಮ ಸಿನಿಮಾಗೆ ಶುಭವಾಗಲಿ ಎಂದು ಆರ್ಶಿವಾದ ಪಡೆಯುತ್ತಿರುವ ವಿಡಿಯೋವನ್ನ ಹಂಚಿಕೊಂಡಿದ್ದರು.

View this post on Instagram

A post shared by Kajol Devgan (@kajol)

ಕಾಜೋಲ್​ ಅವರ ಈ ಹಿಂದೆ ನಟಿಸಿದ ತನ್ಹಾಜಿ ಚಿತ್ರವು ಬ್ಲಾಕ್​ ಬಸ್ಟರ್​ ಆಗಿ ಹೊರಹೊಮ್ಮಿತು, ಇದಾದ ಬಳಿಕ ಸಲಾಮ್​ ವೆಂಕಿ ಸಿನಿಮಾವೊಂದಿಗೆ ಬಂದಿದ್ದು ಗಲ್ಲಾ ಪೆಟ್ಟಗೆಯಲ್ಲಿ ಎಷ್ಟು ಗಳಿಕೆ ಮಾಡಬಹುದು ಎಂದು ಕಾದು ನೋಡಬೇಕಾಗಿದೆ.

ಇನ್ನಷ್ಟು ಮನರಂಜನಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ಹುಮನಾಬಾದ್ ಪುರಭವನಕ್ಕಿಲ್ಲ ಉದ್ಘಾಟನೆ ಭಾಗ್ಯ: ಪಾಳುಬಿದ್ದ ಕಟ್ಟಡ
ಹುಮನಾಬಾದ್ ಪುರಭವನಕ್ಕಿಲ್ಲ ಉದ್ಘಾಟನೆ ಭಾಗ್ಯ: ಪಾಳುಬಿದ್ದ ಕಟ್ಟಡ