ಸಲ್ಮಾನ್ ಖಾನ್​ಗೆ ಹೇಗಿದೆ ನೋಡಿ ಭದ್ರತೆ; ಸಲ್ಲು ಬಳಿ ಯಾರೂ ಸುಳಿಯುವ ಹಾಗಿಲ್ಲ..

ಸಲ್ಮಾನ್ ಖಾನ್ ಅವರ ಸುತ್ತುವರಿದ ರಕ್ಷಣಾ ಸಿಬ್ಬಂದಿ ಬಳಿ ಗನ್​ಗಳದ್ದವು. ಅಂಗರಕ್ಷಕ ಶೇರಾ ಕೂಡ ಸಲ್ಲು ಜೊತೆ ಇದ್ದರು. ವಿಮಾನ ನಿಲ್ದಾಣದ ಗೇಟ್‌ನಿಂದ ಹೊರಬರುತ್ತಿದ್ದಂತೆ ಅಂಗರಕ್ಷಕರು ಸಲ್ಮಾನ್‌ ಅವರನ್ನು ಸುತ್ತುವರಿದಿದ್ದಾರೆ.

ಸಲ್ಮಾನ್ ಖಾನ್​ಗೆ ಹೇಗಿದೆ ನೋಡಿ ಭದ್ರತೆ; ಸಲ್ಲು ಬಳಿ ಯಾರೂ ಸುಳಿಯುವ ಹಾಗಿಲ್ಲ..
ಸಲ್ಮಾನ್ ಖಾನ್
Edited By:

Updated on: Nov 23, 2023 | 11:42 AM

ಸೆಲೆಬ್ರಿಟಿಗಳ ಜೊತೆ ಯಾವಾಗಲೂ ಬಾಡಿಗಾರ್ಡ್ಸ್ ಇದ್ದೇ ಇರುತ್ತಾರೆ. ಇದರ ಜೊತೆಗೆ ಅವರಿಗೆ ಕೊಲೆ ಬೆದರಿಕೆ ಇದ್ದರೆ ಸರ್ಕಾರದ ಕಡೆಯಿಂದ ಹೆಚ್ಚಿನ ಭದ್ರತೆ ಒದಗಿಸಲಾಗುತ್ತದೆ. ಸದ್ಯ ಸಲ್ಮಾನ್ ಖಾನ್ (Salman Khan) ಅವರಿಗೆ ವೈ ಪ್ಲಸ್ ಸೆಕ್ಯೂರಿಟಿ ನೀಡಲಾಗಿದೆ. ಅವರು ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಿಂದ ಹೊರಗೆ ಬರುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದರಲ್ಲಿ ಸಲ್ಮಾನ್ ಸುತ್ತ ಭದ್ರತಾ ಸಿಬ್ಬಂದಿ ಇದ್ದರು. ಅವರುಗಳು ಅಭಿಮಾನಿಗಳನ್ನು ತಳ್ಳಿದ್ದಾರೆ. ಈ ವಿಡಿಯೋ ಬಗ್ಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಇತ್ತೀಚೆಗೆ ಗೋವಾದಲ್ಲಿ ಪ್ರಾರಂಭ ಆಗಿದೆ. ಇದರಲ್ಲಿ ಪಾಲ್ಗೊಳ್ಳಲು ಸಲ್ಮಾನ್ ತೆರಳಿದ್ದರು. ಅಲ್ಲಿ ಸ್ವಲ್ಪ ಹೊತ್ತು ಇದ್ದು ಮುಂಬೈಗೆ ಮರಳಿದ್ದಾರೆ. ವಿಮಾನ ನಿಲ್ದಾಣದಿಂದ ಹೊರ ಬರುವಾಗ ಸಲ್ಮಾನ್ ಅವರ ಅಂಗರಕ್ಷಕರು ಅಭಿಮಾನಿಯನ್ನು ತಳ್ಳುತ್ತಿರುವುದು ಕಂಡುಬಂದಿದೆ. ಸಲ್ಮಾನ್ ಕಡೆಗೆ ಹೂವಿನ ಗುಚ್ಛವನ್ನು ಹಿಡಿದು ಅಭಿಮಾನಿಯೋರ್ವ ಬಂದಿದ್ದ. ಸಲ್ಲು ಬಳಿ ಬರಲೂ ಭದ್ರತಾ ಸಿಬ್ಬಂದಿ ಬಿಡಲಿಲ್ಲ. ಇದಕ್ಕೆ ಫ್ಯಾನ್ಸ್ ವಿವಿಧ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಸಲ್ಮಾನ್ ಖಾನ್ ಅವರ ಸುತ್ತುವರಿದ ರಕ್ಷಣಾ ಸಿಬ್ಬಂದಿ ಬಳಿ ಗನ್​ಗಳದ್ದವು. ಅಂಗರಕ್ಷಕ ಶೇರಾ ಕೂಡ ಸಲ್ಲು ಜೊತೆ ಇದ್ದರು. ವಿಮಾನ ನಿಲ್ದಾಣದ ಗೇಟ್‌ನಿಂದ ಹೊರಬರುತ್ತಿದ್ದಂತೆ ಅಂಗರಕ್ಷಕರು ಸಲ್ಮಾನ್‌ ಅವರನ್ನು ಸುತ್ತುವರಿದಿದ್ದಾರೆ. ಸಲ್ಲುನ ಭೇಟಿ ಮಾಡುವುದು ಫ್ಯಾನ್ಸ್​ಗೆ ಅಸಾಧ್ಯವಾಗಿಬಿಟ್ಟಿದೆ.

ಈ ವಿಡಿಯೋಗೆ ವಿವಿಧ ಕಮೆಂಟ್​ಗಳು ಬಂದಿವೆ. ಕಾಮೆಂಟ್ ಬಾಕ್ಸ್‌ನಲ್ಲಿ ಹಲವರು ಕುಖ್ಯಾತ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಹೆಸರನ್ನು ಉಲ್ಲೇಖಿಸಿದ್ದಾರೆ. ಸಲ್ಮಾನ್​ಗೆ ಲಾರೆನ್ಸ್ ಹಲವು ಬಾರಿ ಕೊಲೆ ಬೆದರಿಕೆ ಹಾಕಿದ್ದಾನೆ. ಹೀಗಾಗಿ ಅವರಿಗೆ ಭದ್ರತೆ ಹೆಚ್ಚಿಸಲಾಗಿದೆ. ಸದ್ಯ ಸಲ್ಮಾನ್​ಗೆ ವೈ ಪ್ಲಸ್ ಭದ್ರತೆ ಒದಗಿಸಲಾಗಿದೆ. ‘ಲಾರೆನ್ಸ್ ಬಿಷ್ಣೋಯ್ ಮೇಲಿನ ಭಯ ಎದ್ದು ಕಾಣುತ್ತಿದೆ’ ಎಂದು ಕೆಲವರು ಬರೆದುಕೊಂಡಿದ್ದಾರೆ.

ಸೇಡು ಏಕೆ?

ಸಲ್ಮಾನ್ ಖಾನ್ ಅವರು 1998ರಲ್ಲಿ ಸಿನಿಮಾ ಶೂಟಿಂಗ್​ಗೆ ಹೋದಾಗ ಕೃಷ್ಣಮೃಗವನ್ನು ಹತ್ಯೆ ಮಾಡಿದ್ದರು. ಬಿಷ್ಣೋಯ್ ಸಮುದಾಯಕ್ಕೆ ಕೃಷ್ಣಮೃಗ ದೇವರ ಸಮಾನ. ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಕ್ಷಮೆಯಾಚಿಸಬೇಕೆಂದು ಲಾರೆನ್ಸ್ ಒತ್ತಾಯಿಸಿದ. ಇಲ್ಲವಾದಲ್ಲಿ ಇದರ ಪರಿಣಾಮ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದ. ಸಲ್ಮಾನ್ ಅವರು ಬಿಷ್ಣೋಯ್ ಸಮುದಾಯಕ್ಕೆ ಓಪನ್ ಆಗಿ ಕ್ಷಮೆ ಕೇಳಿದರೆ ಅವರನ್ನು ಬಿಟ್ಟುಬಿಡುವುದಾಗಿ ಲಾರೆನ್ಸ್ ಹೇಳಿದ್ದ. ಜೈಲಿನಲ್ಲಿ ಇದ್ದುಕೊಂಡೇ ಸಲ್ಮಾನ್‌ಗೆ ಬೆದರಿಕೆ ಲಾರೆನ್ಸ್ ಹಾಕಿದ್ದಾನೆ. ಜೀವ ಬೆದರಿಕೆ ಬಂದ ನಂತರ, ಸಲ್ಮಾನ್ ಖಾನ್ ಭದ್ರತೆ ಒದಗಿಸುವಂತೆ ಕೋರಿದ್ದರು.


ಇದನ್ನೂ ಓದಿ: Salman Khan: ಸಲ್ಮಾನ್ ಖಾನ್ ಜೊತೆ ಹೊಸ ಸಿನಿಮಾ ಮಾಡ್ತಾರೆ ಸನ್ನಿ ಡಿಯೋಲ್?

‘ಟೈಗರ್ 3’

ಇತ್ತೀಚೆಗೆ ಸಲ್ಮಾನ್ ಖಾನ್ ನಟನೆಯ ‘ಟೈಗರ್ 3’ ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾದ ಗಳಿಕೆ 250 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ. ಸಲ್ಮಾನ್ ಖಾನ್ ಅವರಂಥ ಸ್ಟಾರ್ ಹೀರೋಗೆ ಈ ಕಲೆಕ್ಷನ್ ಏನಂದರೆ ಏನೂ ಅಲ್ಲ. ಹೀಗಾಗಿ, ಈ ಚಿತ್ರ ದೊಡ್ಡ ಗೆಲುವು ಕಂಡಿದೆ ಎಂದು ಘೋಷಿಸುವುದು ಕಷ್ಟ ಎಂಬುದು ಅನೇಕರ ಅಭಿಪ್ರಾಯ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us