AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂದೀಪ್​ ರೆಡ್ಡಿ ವಂಗಾ ಸಿನಿಮ್ಯಾಟಿಕ್​ ಯೂನಿವರ್ಸ್​ ಕೊನೇ ಹಂತದಲ್ಲಿ ಕ್ಯಾನ್ಸಲ್​

ಸಂದೀಪ್​ ರೆಡ್ಡಿ ವಂಗಾ ಅವರು ನಿರ್ದೇಶಿಸಿದ ಸಿನಿಮಾಗಳಲ್ಲಿನ ರಣ್​ವಿಜಯ್​ ಸಿಂಗ್​ ಮತ್ತು ಕಬೀರ್​ ಸಿಂಗ್​ ಪಾತ್ರಗಳು ‘ಅನಿಮಲ್​’ ಚಿತ್ರದಲ್ಲಿ ಮುಖಾಮುಖಿ ಆಗಬೇಕಿತ್ತು. ಆ ರೀತಿಯಲ್ಲಿ ಸ್ಕ್ರಿಪ್ಟ್​ ಕೂಡ ಸಿದ್ಧವಾಗಿತ್ತು. ಆದರೆ ಆ ದೃಶ್ಯದ ಶೂಟಿಂಗ್​ ಮಾಡಲು ಒಂದು ಸಮಸ್ಯೆ ಎದುರಾಯಿತು. ಆ ಕಾರಣದಿಂದ ಸಿನಿಮ್ಯಾಟಿಕ್​ ಯೂನಿವರ್ಸ್​ ಐಡಿಯಾ ಜಾರಿಗೆ ಬರಲಿಲ್ಲ.

ಸಂದೀಪ್​ ರೆಡ್ಡಿ ವಂಗಾ ಸಿನಿಮ್ಯಾಟಿಕ್​ ಯೂನಿವರ್ಸ್​ ಕೊನೇ ಹಂತದಲ್ಲಿ ಕ್ಯಾನ್ಸಲ್​
ಶಾಹಿದ್​ ಕಪೂರ್​, ರಣಬೀರ್​ ಕಪೂರ್​
ಮದನ್​ ಕುಮಾರ್​
|

Updated on: Jun 05, 2024 | 10:16 PM

Share

ನಿರ್ದೇಶಕ ಸಂದೀಪ್​ ರೆಡ್ಡಿ ವಂಗಾ (Sandeep Reddy Vanga) ಅವರು ಈವರೆಗೂ ಮಾಡಿರುವುದು ಮೂರು ಸಿನಿಮಾ ಮಾತ್ರ. ಆದರೆ ಅವರಿಗೆ ಸಿಕ್ಕಿರುವ ಯಶಸ್ಸು ಬಹಳ ದೊಡ್ಡದು. ತೆಲುಗಿನಲ್ಲಿ ಅವರು ಮಾಡಿದ ಮೊದಲ ಸಿನಿಮಾ ‘ಅರ್ಜುನ್​ ರೆಡ್ಡಿ’ ಸೂಪರ್​ ಹಿಟ್​ ಆಯಿತು. ಆ ಬಳಿಕ ಅದೇ ಸಿನಿಮಾವನ್ನು ಅವರು ಹಿಂದಿಯಲ್ಲಿ ‘ಕಬೀರ್​ ಸಿಂಗ್​’ (Kabir Singh) ಶೀರ್ಷಿಕೆಯಲ್ಲಿ ರಿಮೇಕ್​ ಮಾಡಿದರು. ನಂತರ ‘ಅನಿಮಲ್​’ ಸಿನಿಮಾಗೆ ನಿರ್ದೇಶನ ಮಾಡಿ ಭಾರಿ ಖ್ಯಾತಿ ಗಳಿಸಿದರು. ವಿಶೇಷ ಏನೆಂದರೆ, ‘ಅನಿಮಲ್​’ (Animal) ಸಿನಿಮಾದಲ್ಲಿ ‘ಸಂದೀಪ್​ ರೆಡ್ಡಿ ವಂಗಾ ಸಿನಿಮ್ಯಾಟಿಕ್​ ಯೂನಿವರ್ಸ್​’ ಮಾಡಲು ಪ್ಲ್ಯಾನ್​ ನಡೆದಿತ್ತು. ಆದರೆ ಕೊನೇ ಹಂತದಲ್ಲಿ ಅದು ಕ್ಯಾನ್ಸಲ್​ ಆಯಿತು.

ಒಬ್ಬರೇ ನಿರ್ದೇಶಕರ ಬೇರೆ ಬೇರೆ ಸಿನಿಮಾಗಳ ಪಾತ್ರಗಳು ಒಂದಕ್ಕೊಂದು ಲಿಂಕ್​ ಹೊಂದಿರುವುದನ್ನು ಸಿನಿಮ್ಯಾಟಿಕ್​ ಯೂನಿವರ್ಸ್​ ಎನ್ನುತ್ತಾರೆ. ತಮಿಳಿನ ನಿರ್ದೇಶಕ ಲೋಕೇಶ್​ ಕನಗರಾಜ್​ ಅವರು ಇದನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ನಿರ್ದೇಶಕ ಸಂದೀಪ್​ ರೆಡ್ಡಿ ವಂಗಾ ಕೂಡ ಆ ರೀತಿ ಒಂದು ಪ್ಲ್ಯಾನ್​ ಮಾಡಿಕೊಂಡಿದ್ದರು ಎಂಬ ಮಾಹಿತಿ ಈಗ ತಿಳಿದುಬಂದಿದೆ.

ರಣಬೀರ್​ ಕಪೂರ್​ ಮಾಡಿದ ರಣ್​ವಿಜಯ್​ ಸಿಂಗ್​ ಪಾತ್ರ ಮತ್ತು ಶಾಹಿದ್​ ಕಪೂರ್​ ಮಾಡಿದ್ದ ಕಬೀರ್​ ಸಿಂಗ್​ ಪಾತ್ರಗಳು ‘ಅನಿಮಲ್​’ ಸಿನಿಮಾದಲ್ಲಿ ಒಂದನ್ನೊಂದು ಭೇಟಿ ಮಾಡಬೇಕಿತ್ತು. ರಣ್​ವಿಜಯ್​ ಗುಂಡಿನ ದಾಳಿಗೆ ಒಳಗಾದ ಬಳಿಕ ಆತನನ್ನು ಆಸ್ಪತ್ರೆಗೆ ಸೇರಿಸಲಾಗುತ್ತದೆ. ಅಲ್ಲಿ ಅವನಿಗೆ ಚಿಕಿತ್ಸೆ ನೀಡಲು ಬರುವ ವೈದ್ಯನೇ ಕಬೀರ್ ಸಿಂಗ್​ ಆಗಿರಬೇಕಿತ್ತು. ಆದರೆ ಈ ರೀತಿ ದೃಶ್ಯಕ್ಕೆ ಶಾಹಿದ್​ ಕಪೂರ್​ ಅವರ ಡೇಟ್ಸ್​ ಸಿಗಲಿಲ್ಲ. ಹಾಗಾಗಿ ಕೊನೆ ಹಂತದಲ್ಲಿ ನಿರ್ದೇಶಕ ಸಂದೀಪ್​ ರೆಡ್ಡಿ ವಂಗಾ ಆ ಐಡಿಯಾವನ್ನು ಕೈ ಬಿಡಬೇಕಾಯಿತು.

ಇದನ್ನೂ ಓದಿ: ‘ಆ ಸಿನಿಮಾ ಒಪ್ಪಿಕೊಂಡು ತಪ್ಪು ಮಾಡಿದೆ’ ಎಂದ ನಟನಿಗೆ ಸಂದೀಪ್​ ರೆಡ್ಡಿ ವಂಗಾ ನೀಡಿದ ಉತ್ತರ ಏನು?

ಸಂದೀಪ್​ ರೆಡ್ಡಿ ವಂಗಾ ನಿರ್ದೇಶಿಸಿದ ಪ್ರತಿ ಸಿನಿಮಾಗಳು ಕೂಡ ವಿವಾದ ಮಾಡಿಕೊಂಡಿವೆ. ಅವರ ಸಿನಿಮಾದಲ್ಲಿ ಸ್ತ್ರೀ ವಿರೋಧಿ ಅಂಶಗಳು ಇವೆ ಎಂದು ಅನೇಕರು ತಕರಾರು ತೆಗೆದಿದ್ದಾರೆ. ವಿಮರ್ಶಕರು ಕೂಡ ಈ ಸಿನಿಮಾಗಳನ್ನು ತೆಗಳಿದ್ದಾರೆ. ಹಾಗಿದ್ದರೂ ಪ್ರೇಕ್ಷಕರು ‘ಅನಿಮಲ್​’ ಸಿನಿಮಾವನ್ನು ಮುಗಿಬಿದ್ದು ನೋಡಿದರು ಎಂಬುದು ಅಚ್ಚರಿ. ಈಗ ಪ್ರಭಾಸ್​ ಜೊತೆ ‘ಸ್ಪಿರಿಟ್​’ ಸಿನಿಮಾ ಮಾಡಲು ಸಂದೀಪ್​ ರೆಡ್ಡಿ ವಂಗಾ ಸಕಲ ತಯಾರಿ ಮಾಡಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಸಚಿವ ಡಿ.ಸುಧಾಕರ್ ಅಂತಿಮ ದರ್ಶನದ ವೇಳೆ ಬಿಕ್ಕಿ ಬಿಕ್ಕಿ ಅತ್ತ ಡಿಕೆಶಿ
ಸಚಿವ ಡಿ.ಸುಧಾಕರ್ ಅಂತಿಮ ದರ್ಶನದ ವೇಳೆ ಬಿಕ್ಕಿ ಬಿಕ್ಕಿ ಅತ್ತ ಡಿಕೆಶಿ
ಮೋದಿ ಸಂಚರಿಸುವ ರಸ್ತೆ ಬಳಿ ಜಿಲೆಟಿನ್ ಕಡ್ಡಿ ಪತ್ತೆ: DIG ಹೇಳಿದ್ದಿಷ್ಟು
ಮೋದಿ ಸಂಚರಿಸುವ ರಸ್ತೆ ಬಳಿ ಜಿಲೆಟಿನ್ ಕಡ್ಡಿ ಪತ್ತೆ: DIG ಹೇಳಿದ್ದಿಷ್ಟು
ಮೊದಲ ಭಾಷಣದಲ್ಲೇ ಸಾಲದ ಬಗ್ಗೆ ಮಾತಾಡಿದ ತಮಿಳುನಾಡು ಸಿಎಂ ವಿಜಯ್​​
ಮೊದಲ ಭಾಷಣದಲ್ಲೇ ಸಾಲದ ಬಗ್ಗೆ ಮಾತಾಡಿದ ತಮಿಳುನಾಡು ಸಿಎಂ ವಿಜಯ್​​
ರವಿಶಂಕರ್ ಗುರೂಜಿ ಮಾತಿಗೆ ಪ್ರಧಾನಿ ಮೋದಿಗೂ ನಗು!
ರವಿಶಂಕರ್ ಗುರೂಜಿ ಮಾತಿಗೆ ಪ್ರಧಾನಿ ಮೋದಿಗೂ ನಗು!
ರವಿಶಂಕರ್ ಗುರೂಜಿಯ 100ನೇ ಹುಟ್ಟುಹಬ್ಬಕ್ಕೂ ಬರುತ್ತೇನೆ ಎಂದ ಪ್ರಧಾನಿ ಮೋದಿ
ರವಿಶಂಕರ್ ಗುರೂಜಿಯ 100ನೇ ಹುಟ್ಟುಹಬ್ಬಕ್ಕೂ ಬರುತ್ತೇನೆ ಎಂದ ಪ್ರಧಾನಿ ಮೋದಿ
ಮೋದಿ ಸಂಚರಿಸೋ ರಸ್ತೇಲಿ ಜಿಲೆಟಿನ್ ಕಡ್ಡಿಗಳು ಪತ್ತೆ: ಶಂಕಿತ ಪೊಲೀಸ್ ವಶಕ್ಕೆ
ಮೋದಿ ಸಂಚರಿಸೋ ರಸ್ತೇಲಿ ಜಿಲೆಟಿನ್ ಕಡ್ಡಿಗಳು ಪತ್ತೆ: ಶಂಕಿತ ಪೊಲೀಸ್ ವಶಕ್ಕೆ
ಮೋದಿಗೆ ಆರ್ಟ್​ ಆಫ್ ಲಿವಿಂಗ್ ಫೋಟೊ ಕೊಟ್ಟು ಸನ್ಮಾನಿಸಿದ ಗುರೂಜಿ
ಮೋದಿಗೆ ಆರ್ಟ್​ ಆಫ್ ಲಿವಿಂಗ್ ಫೋಟೊ ಕೊಟ್ಟು ಸನ್ಮಾನಿಸಿದ ಗುರೂಜಿ
ವಿಜಯ್ ಪ್ರಮಾಣವಚನ ಮುಗಿಸಿ ಹೊರಟ ತ್ರಿಶಾ ನೋಡಲು ಮುಗಿಬಿದ್ದ ಅಭಿಮಾನಿಗಳು
ವಿಜಯ್ ಪ್ರಮಾಣವಚನ ಮುಗಿಸಿ ಹೊರಟ ತ್ರಿಶಾ ನೋಡಲು ಮುಗಿಬಿದ್ದ ಅಭಿಮಾನಿಗಳು
ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ವಿಜಯ್​ ದಿಟ್ಟ ಮಾತುಗಳು!
ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ವಿಜಯ್​ ದಿಟ್ಟ ಮಾತುಗಳು!
ತಮಿಳುನಾಡಿನ ನೂತನ ಮುಖ್ಯಮಂತ್ರಿಯಾದ ವಿಜಯ್​​ಗೆ ಶುಭ ಕೋರಿದ ಪ್ರಧಾನಿ ಮೋದಿ
ತಮಿಳುನಾಡಿನ ನೂತನ ಮುಖ್ಯಮಂತ್ರಿಯಾದ ವಿಜಯ್​​ಗೆ ಶುಭ ಕೋರಿದ ಪ್ರಧಾನಿ ಮೋದಿ