ಮಗ ಆರ್ಯನ್​ ಬಗ್ಗೆ ಚಿಂತಿಸಿ ಶಾರುಖ್​ ಖಾನ್​ ಹೀಗಾದರೆ? ಈ ಫೋಟೋದ ಅಸಲಿಯತ್ತು ಇಲ್ಲಿದೆ

ಶಾರುಖ್​ ಖಾನ್​ಗೆ ಸರಿಯಾಗಿ ಊಟ ಸೇರುತ್ತಿಲ್ಲ. ಅವರು ರಾತ್ರಿ ನಿದ್ದೆ ಮಾಡುತ್ತಿಲ್ಲ ಎಂಬಿತ್ಯಾದಿ ಸುದ್ದಿಗಳು ಇತ್ತೀಚೆಗೆ ಹರಿದಾಡಿದ್ದವು. ಇದಾದ ಬೆನ್ನಲ್ಲೇ ಶಾರುಖ್​ ಅವರ ಫೋಟೋ ಒಂದು ವೈರಲ್​ ಆಗುತ್ತಿದೆ.

ಮಗ ಆರ್ಯನ್​ ಬಗ್ಗೆ ಚಿಂತಿಸಿ ಶಾರುಖ್​ ಖಾನ್​ ಹೀಗಾದರೆ? ಈ ಫೋಟೋದ ಅಸಲಿಯತ್ತು ಇಲ್ಲಿದೆ
ಶಾರುಖ್​ ಖಾನ್​
Follow us
| Updated By: ರಾಜೇಶ್ ದುಗ್ಗುಮನೆ

Updated on: Oct 24, 2021 | 1:37 PM

ಶಾರುಖ್​ ಖಾನ್​ ಅಕ್ಷರಶಃ ಚಿಂತೆಗೆ ಒಳಗಾಗಿದ್ದಾರೆ. ಮಗ ಆರ್ಯನ್​ ಖಾನ್ ಡ್ರಗ್​ ಕೇಸ್​ನಲ್ಲಿ​ ಬಂಧನಕ್ಕೊಳಗಾದ ನಂತರ ಅವರು ಯಾವ ಕೆಲಸದ ಮೇಲೂ ಗಮನ ಕೊಡೋಕೆ ಸಾಧ್ಯವಾಗುತ್ತಿಲ್ಲ. ಜಿಮ್​ಗೆ ಅವರು ಸರಿಯಾಗಿ ತೆರಳುತ್ತಿಲ್ಲ. ಸಿನಿಮಾ ಕೆಲಸಗಳಲ್ಲಿ ಭಾಗಿಯಾಗುವುದಂತೂ ಸದ್ಯದ ಮಟ್ಟಿಗೆ ದೂರದ ಮಾತಾಗಿದೆ. ನವೆಂಬರ್​ 2ರಂದು ಶಾರುಖ್​ ಜನ್ಮದಿನ. ಅದನ್ನು ಕೂಡ ಅವರು ಆಚರಿಸಿಕೊಳ್ಳುತ್ತಿಲ್ಲ. ಆರ್ಯನ್​ ಅವರನ್ನು ಜೈಲಿನಿಂದ ಹೊರಗೆ ತರಬೇಕು ಎನ್ನುವ ಪ್ರಯತ್ನದಲ್ಲಿ ಅವರಿದ್ದಾರೆ. ಈ ಮಧ್ಯೆ ಶಾರುಖ್​ ಅವರ ಫೋಟೋ ಒಂದು ವೈರಲ್​ ಆಗಿದೆ. ಈ ಫೋಟೋ ನೋಡಿದ ಅಭಿಮಾನಿಳು ನಿಜಕ್ಕೂ ಅಚ್ಚರಿಗೊಂಡಿದ್ದಾರೆ.

ಶಾರುಖ್​ ಖಾನ್​ಗೆ ಸರಿಯಾಗಿ ಊಟ ಸೇರುತ್ತಿಲ್ಲ. ಅವರು ರಾತ್ರಿ ನಿದ್ದೆ ಮಾಡುತ್ತಿಲ್ಲ ಎಂಬಿತ್ಯಾದಿ ಸುದ್ದಿಗಳು ಇತ್ತೀಚೆಗೆ ಹರಿದಾಡಿದ್ದವು. ಇದಾದ ಬೆನ್ನಲ್ಲೇ ಶಾರುಖ್​ ಅವರ ಫೋಟೋ ಒಂದು ವೈರಲ್​ ಆಗುತ್ತಿದೆ. ಶಾರುಖ್​ ಗಡ್ಡ ಬಿಳಿಯಾಗಿದೆ. ಕಣ್ಣ ಕೆಳಗೆ ಸಂಪೂರ್ಣವಾಗಿ ಕಪ್ಪಾಗಿದೆ. ಕಣ್ಣಂತೂ ಹಲವು ದಿನ ನಿದ್ದೆ ಮಾಡದೇ ಇದ್ದಾಗ ಆಗುವಷ್ಟು ಕೆಂಪಾಗಿದೆ. ಮಗನ ಬಗ್ಗೆ ಶಾರುಖ್ ಚಿಂತೆಗೆ ಒಳಗಾಗಿದ್ದಾರೆ. ಈ ಕಾರಣಕ್ಕೆ ಅವರು ಇಷ್ಟು ಕೆಟ್ಟ ಪರಿಸ್ಥಿತಿಗೆ ತಲುಪಿದ್ದಾರೆ ಎನ್ನುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದೆ. ಆದರೆ, ಇದರ ಅಸಲಿಯತ್ತೇ ಬೇರೆ.

ಅಸಲಿಗೆ ಈ ಫೋಟೋ ಇತ್ತೀಚಿಗಿನದ್ದು ಅಲ್ಲವೇ ಅಲ್ಲ. ಇದು 2017ರ ಫೋಟೋ. ಮಾರ್ಚ್​ 15 ಆಲಿಯಾ ಹುಟ್ಟಿದ ದಿನ. ಆ ವರ್ಷ ಆಲಿಯಾ ಅದ್ದೂರಿಯಾಗಿ ಬರ್ತ್​ಡೇ ಆಚರಣೆ ಮಾಡಿಕೊಂಡಿದ್ದರು. ಮನೆಗೆ ಸೆಲೆಬ್ರೆಟಿಗಳಿಗೆ ಆಹ್ವಾನ ನೀಡಲಾಗಿತ್ತು. ಆ ವೇಳೆ ಶಾರುಖ್​ ಕೂಡ ಆಗಮಿಸಿದ್ದರು. ಆಗ ತೆಗೆದ ಫೋಟೋ ಇದಾಗಿದೆ. ಇದು ಈಗ ವೈರಲ್​ ಆಗಿದೆ. ಅಂದು ಮತ್ತೊಂದು ಘಟನೆಯೂ ನಡೆದಿತ್ತು. ಶಾರುಖ್​ ಖಾನ್​ ಕಾರಿನ ಚಕ್ರಕ್ಕೆ ಸಿಲುಕಿ ಫೋಟೋಗ್ರಾಫರ್​ ಒಬ್ಬನ ಕಾಲಿಗೆ ಏಟಾಗಿತ್ತು. ಈ ವೇಳೆ ಶಾರುಖ್​ ಖಾನ್​ ಸಹಾಯಕ್ಕೆ ಧಾವಿಸಿದ್ದರು. ಈ ಮೂಲಕ ಅವರು ಮಾನವೀಯತೆ ಮೆರೆದಿದ್ದರು.

ಇದನ್ನೂ ಓದಿ: ಆರ್ಯನ್​ ಭೇಟಿ ಮಾಡಿದ  ಶಾರುಖ್​ ಖಾನ್ ತೆಗೆದುಕೊಂಡ್ರು ಕಠಿಣ ನಿರ್ಧಾರ; ಪರಿಣಾಮ ಯಾರ ಮೇಲೆ?

‘ಶಾರುಖ್​ ಖಾನ್ ಬಿಜೆಪಿ ಸೇರಿದರೆ, ಡ್ರಗ್ಸ್​ ಸಕ್ಕರೆ ಪುಡಿಯಾಗಿ ಬದಲಾಗುತ್ತದೆ’-ಮಹಾ ಸಚಿವನ ವ್ಯಂಗ್ಯ

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ