AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನೂ ಗಾಂಜಾ ಸೇದಿದ್ದೇನೆ, ಆರ್ಯನ್​ ತಪ್ಪಿಲ್ಲ, ನ್ಯಾಯಾಂಗ ವ್ಯವಸ್ಥೆ ಸರಿ ಇಲ್ಲ ಎಂದ ಸಲ್ಲು ಮಾಜಿ ಪ್ರೇಯಸಿ

ಆರ್ಯನ್​ಗೆ ಕಿಲ್ಲಾ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಆರ್ಯನ್​ ಪರ ವಕೀಲರಾದ ಸತೀಶ್​ ಮಾನೇಶಿಂಧೆ ಅವರು ಎಷ್ಟೇ ಪ್ರಯತ್ನ ಮಾಡಿದರೂ ಜಾಮೀನು ಸಿಗುತ್ತಿಲ್ಲ.

ನಾನೂ ಗಾಂಜಾ ಸೇದಿದ್ದೇನೆ, ಆರ್ಯನ್​ ತಪ್ಪಿಲ್ಲ, ನ್ಯಾಯಾಂಗ ವ್ಯವಸ್ಥೆ ಸರಿ ಇಲ್ಲ ಎಂದ ಸಲ್ಲು ಮಾಜಿ ಪ್ರೇಯಸಿ
ಸೋಮಿ-ಆರ್ಯನ್​
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Oct 10, 2021 | 10:12 PM

Share

ಸೋಮಿ ಅಲಿ ಬಾಲಿವುಡ್​ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಇವರು ಸಲ್ಲು ಜತೆ ರಿಲೇಶನ್​ಶಿಪ್​ನಲ್ಲೂ ಇದ್ದರು. ಈಗ ಎಲ್ಲವನ್ನೂ ಬಿಟ್ಟು ತಮ್ಮದೇ ಎನ್​ಜಿಒ ಕಟ್ಟಿಕೊಂಡು ಸಮಾಜಮುಖಿ ಕಾರ್ಯದಲ್ಲಿ ತೊಡಗಿದ್ದಾರೆ. ಅಚ್ಚರಿ ಎಂದರೆ, ಇವರು 15ನೇ ವಯಸ್ಸಿಗೆ ಗಾಂಜಾ ಸೇವನೆ ಮಾಡಿದ್ದರು. ಇದನ್ನು ಅವರು ಒಪ್ಪಿಕೊಂಡಿದ್ದಾರೆ.

‘ಮಾನವ ಹಕ್ಕುಗಳ ಕಾರ್ಯಕರ್ತೆಯಾಗು ಮತ್ತು ಎನ್‌ಜಿಒ ಸ್ಥಾಪಕಿಯಾಗಿ ಕಷ್ಟದ ಪರಿಸ್ಥಿತಿ ಎದುರಿಸುತ್ತಿರುವವರಿಗೆ ಸಹಾಯ ಮಾಡೋದು ನನಗೆ ಅಭ್ಯಾಸವಾಗಿದೆ. ಇದೀಗ ಆರ್ಯನ್ ಮತ್ತು ಅವನ ಪೋಷಕರು ಕಷ್ಟದ ಸನ್ನಿವೇಶಗಳನ್ನು ಎದುರಿಸುತ್ತಿದ್ದಾರೆ. ಇದಕ್ಕಾಗಿ ನನ್ನ ಧ್ವನಿ ಎತ್ತುತ್ತಿದ್ದೇನೆ’ ಎಂದಿದ್ದಾರೆ ಅವರು.

‘ನಾನು 15ನೇ ವಯಸ್ಸಿಗೆ ಗಾಂಜಾ ಸೇದಿದ್ದೆ. ನಂತರ ಶೂಟಿಂಗ್​ ಸೆಟ್​ನಲ್ಲೂ ಒಮ್ಮೆ ಅದನ್ನು ತೆಗೆದುಕೊಂಡಿದ್ದ. ಯುವಕರಾಗಿದ್ದಾಗ ಅನೇಕರು ಇದನ್ನು ಪ್ರಯತ್ನಿಸುತ್ತಾರೆ ಮತ್ತು ಕೆಲವರು ಮಾತ್ರ ಅದೇ ಗುಂಗಿನಲ್ಲಿರುತ್ತಾರೆ, ಬಹುತೇಕರು ಅದರಿಂದ ಹೊರ ಬರುತ್ತಾರೆ. ಇದೆಲ್ಲವೂ ನನಗಲ್ಲ ಎಂಬುದು ಜ್ಞಾನೋದವಾಯಿತು’ ಎಂದರು ಸೋಮಿ.

‘ನಾವು ಹಣವಂತರಾಗಲಿ ಅಥವಾ ಬಡವರಾಗಲಿ ಎಲ್ಲರನ್ನೂ ಒಂದೇ ರೀತಿಯಲ್ಲಿ ನೋಡುತ್ತೇವೆ ಎಂಬುದನ್ನು ನ್ಯಾಯಾಂಗಕ್ಕೆ ಸಾಬೀತು ಮಾಡಬೇಕಿದೆ. ಅದಕ್ಕೆ ಆರ್ಯನ್​ಗೆ ಜಾಮೀನು ನೀಡುತ್ತಿಲ್ಲ. ಆತ ಯುವಕ. ನಾವೇಕೆ ಅವರನ್ನು ಮಾನ್​ಸ್ಟರ್​ ಎಂಬ ರೀತಿಯಲ್ಲಿ ಬಿಂಬಿಸಬೇಕು? ಮುಂಬೈನಲ್ಲಿ ಮನೆ ಇಲ್ಲದ ಅನೇಕರು ಡ್ರಗ್​ನ ದಾಸರಾಗಿದ್ದಾರೆ. ಪೊಲೀಸರು ಅವರನ್ನು ಬಂಧಿಸುತ್ತಿಲ್ಲ. ಏಕೆಂದರೆ, ಅವರು ಶಾರುಖ್​ ಹಾಗೂ ಗೌರಿ ಖಾನ್​ ಮಕ್ಕಳಲ್ಲ’ ಎಂದು ನ್ಯಾಯಾಂಗ ಹಾಗೂ ಪೊಲೀಸ್​ ವ್ಯವಸ್ಥೆಯನ್ನು ಅವರು ಟೀಕಿಸಿದ್ದಾರೆ.

ಅಕ್ಟೋಬರ್ 2ರಂದು ಮುಂಬೈನ ಐಷಾರಾಮಿ ಕ್ರೂಸ್​ ಹಡಗಿನಲ್ಲಿ ಪಾರ್ಟಿ ಮಾಡುತ್ತಿದ್ದ ವೇಳೆ ಆರ್ಯನ್ ಖಾನ್​ ಬಂಧನಕ್ಕೆ ಒಳಗಾದರು. ಅವರನ್ನು ಎನ್​ಸಿಬಿ ವಶಕ್ಕೆ ಪಡೆಯಿತು. ಕೆಲ ದಿನಗಳ ಕಾಲ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ಇದಾದ ನಂತರ ಆರ್ಯನ್​ಗೆ ಕಿಲ್ಲಾ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಆರ್ಯನ್​ ಪರ ವಕೀಲರಾದ ಸತೀಶ್​ ಮಾನೇಶಿಂಧೆ ಅವರು ಎಷ್ಟೇ ಪ್ರಯತ್ನ ಮಾಡಿದರೂ ಜಾಮೀನು ಸಿಗುತ್ತಿಲ್ಲ.

ಇದನ್ನೂ ಓದಿ: ‘ಕುಟುಂಬಕ್ಕೆ ಸಮಸ್ಯೆ ಆದಾಗ ಮೊದಲು ಬರೋದು ಸಲ್ಮಾನ್’​​; ಶಾರುಖ್​ ಮಾತನಾಡಿದ್ದ ಹಳೆಯ ವಿಡಿಯೋ ವೈರಲ್​

ಮಗನಿಗಾಗಿ ನಿದ್ದೆ, ಊಟ ತ್ಯಜಿಸಿದ ಶಾರುಖ್​ ಖಾನ್​; ಹೀಗಾದರೆ ಫಿಟ್​ನೆಸ್​ ಗತಿಯೇನು?

ಪರಿಸ್ಥಿತಿಯ ಲಾಭ ಪಡೆಯಲು ಸುಲಿಗೆಗಿಳಿದ ಖಾಸಗಿ ಸಾರಿಗೆ ಸಂಸ್ಥೆಗಳು
ಪರಿಸ್ಥಿತಿಯ ಲಾಭ ಪಡೆಯಲು ಸುಲಿಗೆಗಿಳಿದ ಖಾಸಗಿ ಸಾರಿಗೆ ಸಂಸ್ಥೆಗಳು
ನನ್ನಷ್ಟು ಕನ್ನಡ ಬಳಸಿ ಸಾಧನೆ ಮಾಡಿದವರು ಮಾತ್ರ ನನ್ನ ಟೀಕಿಸಬಹುದು: ಬಾನು
ನನ್ನಷ್ಟು ಕನ್ನಡ ಬಳಸಿ ಸಾಧನೆ ಮಾಡಿದವರು ಮಾತ್ರ ನನ್ನ ಟೀಕಿಸಬಹುದು: ಬಾನು
ಚಾಮುಂಡೇಶ್ವರಿ ತಾಯಿಯೇ ಕರೆಸಿಕೊಳ್ಳುತ್ತಿದ್ದಾಳೆ: ಟೀಕೆಗಳಿಗೆ ಬಾನು ಟಾಂಗ್
ಚಾಮುಂಡೇಶ್ವರಿ ತಾಯಿಯೇ ಕರೆಸಿಕೊಳ್ಳುತ್ತಿದ್ದಾಳೆ: ಟೀಕೆಗಳಿಗೆ ಬಾನು ಟಾಂಗ್
ಪ್ರವಾಹದಿಂದ ಕೊಚ್ಚಿ ಹೋದ ಮನಾಲಿ ರಸ್ತೆ; ನದಿಯಲ್ಲಿ ಉರುಳಿ ಬಿದ್ದ ಕಾರು
ಪ್ರವಾಹದಿಂದ ಕೊಚ್ಚಿ ಹೋದ ಮನಾಲಿ ರಸ್ತೆ; ನದಿಯಲ್ಲಿ ಉರುಳಿ ಬಿದ್ದ ಕಾರು
ಮಟ್ಟಣ್ಣನವರ್ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು: ದೂರುದಾರ
ಮಟ್ಟಣ್ಣನವರ್ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು: ದೂರುದಾರ
ಕಳ್ಳರ ಕೈಯಲ್ಲಿ ಪಿಸ್ಟಲ್ ಕಂಡ ಮಾಲೀಕ ಪ್ಯಾನಿಕ್ ಆಗದೆ ಕಿರುಚಿದರು
ಕಳ್ಳರ ಕೈಯಲ್ಲಿ ಪಿಸ್ಟಲ್ ಕಂಡ ಮಾಲೀಕ ಪ್ಯಾನಿಕ್ ಆಗದೆ ಕಿರುಚಿದರು
ಬಾನು ಮುಷ್ತಾಕ್ ಕನ್ನಡದ ಬಗ್ಗೆ ಯಾವತ್ತೂ ಕೆಟ್ಟದ್ದಾಗಿ ಮಾತಾಡಿಲ್ಲ: ಸಚಿವ
ಬಾನು ಮುಷ್ತಾಕ್ ಕನ್ನಡದ ಬಗ್ಗೆ ಯಾವತ್ತೂ ಕೆಟ್ಟದ್ದಾಗಿ ಮಾತಾಡಿಲ್ಲ: ಸಚಿವ
ನಸುಕಿನ ಜಾವ 5 ಗಂಟೆಗೆ SIT ಕಚೇರಿಗೆ ಬಂದು ಕುಳಿತ ಸುಜಾತಾ ಭಟ್
ನಸುಕಿನ ಜಾವ 5 ಗಂಟೆಗೆ SIT ಕಚೇರಿಗೆ ಬಂದು ಕುಳಿತ ಸುಜಾತಾ ಭಟ್
ದಶಕಗಳಿಂದ ಕಾಂಗ್ರೆಸ್​ನಲ್ಲಿರುವ ನನ್ನ ಮೇಲೆ ಜವಾಬ್ದಾರಿ ಹೆಚ್ಚು: ಪ್ರಸಾದ್
ದಶಕಗಳಿಂದ ಕಾಂಗ್ರೆಸ್​ನಲ್ಲಿರುವ ನನ್ನ ಮೇಲೆ ಜವಾಬ್ದಾರಿ ಹೆಚ್ಚು: ಪ್ರಸಾದ್
ಯಾವ ನೈತಿಕತೆಯೊಂದಿಗೆ ಯತ್ನಾಳ್ ಮಾತಾಡುತ್ತಾರೆ? ಶಿವರಾಜ್ ತಂಗಡಿಗಿ
ಯಾವ ನೈತಿಕತೆಯೊಂದಿಗೆ ಯತ್ನಾಳ್ ಮಾತಾಡುತ್ತಾರೆ? ಶಿವರಾಜ್ ತಂಗಡಿಗಿ