AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೋಟೆಲ್​ ಕ್ಲೀನರ್​ ಆಗಿದ್ದ ಸುನೀಲ್​ ಶೆಟ್ಟಿ ತಂದೆ ವೀರಪ್ಪ ಶೆಟ್ಟಿ; ‘ಅಪ್ಪನೇ ನನ್ನ ಹೀರೋ’ ಎಂದ ಕನ್ನಡಿಗ

Suniel Shetty: ‘ನಿಮ್ಮ ಹೀರೋ ಯಾರು ಅಂತ ಯಾರಾದ್ರೂ ಕೇಳಿದರೆ ನಾನು ನನ್ನ ತಂದೆಯ ಹೆಸರು ಹೇಳುತ್ತೇನೆ. ಅಪ್ಪ ಎಂದರೆ ನನಗೆ ತುಂಬ ಹೆಮ್ಮೆ. ಅವರು ಬದುಕಿದ ರೀತಿ ತುಂಬ ಅದ್ಭುತವಾಗಿತ್ತು’ ಎಂದು ಸುನೀಲ್​ ಶೆಟ್ಟಿ ಹೇಳಿದ್ದಾರೆ.

ಹೋಟೆಲ್​ ಕ್ಲೀನರ್​ ಆಗಿದ್ದ ಸುನೀಲ್​ ಶೆಟ್ಟಿ ತಂದೆ ವೀರಪ್ಪ ಶೆಟ್ಟಿ; ‘ಅಪ್ಪನೇ ನನ್ನ ಹೀರೋ’ ಎಂದ ಕನ್ನಡಿಗ
ಸುನೀಲ್​ ಶೆಟ್ಟಿ
TV9 Web
| Edited By: |

Updated on: Nov 20, 2021 | 12:52 PM

Share

ಬಾಲಿವುಡ್​ ನಟ ಸುನೀಲ್​ ಶೆಟ್ಟಿ (Suniel Shetty) ಮೂಲತಃ ಕನ್ನಡದವರು. ಆದರೆ ಅವರು ಹೆಚ್ಚು ಗುರುತಿಸಿಕೊಂಡಿದ್ದು ಹಿಂದಿ ಚಿತ್ರರಂಗದಲ್ಲಿ. ಇತ್ತೀಚಿನ ವರ್ಷಗಳಲ್ಲಿ ಅವರು ಕನ್ನಡ ಚಿತ್ರರಂಗದತ್ತಲೂ ಆಸಕ್ತಿ ತೋರಿಸುತ್ತಿದ್ದಾರೆ. ಈ ನಡುವೆ ಅವರು ಕೆಲವು ಮನರಂಜನಾ ವಾಹಿನಿಗಳ ಕಾರ್ಯಕ್ರಮಗಳಿಗೆ ಅತಿಥಿಯಾಗಿಯೂ ಭಾಗವಹಿಸುತ್ತಿದ್ದಾರೆ. ಅವರ ಮಕ್ಕಳಾದ ಅಹಾನ್ ಶೆಟ್ಟಿ (Ahan Shetty) ಮತ್ತು ಆಥಿಯಾ ಶೆಟ್ಟಿ (Athiya Shetty) ಅವರಿಗೆ ಸುಲಭವಾಗಿ ಬಾಲಿವುಡ್​ಗೆ ಎಂಟ್ರಿ ಸಿಕ್ಕಿದೆ. ಈಗ ಅವರ ಇಡೀ ಕುಟುಂಬ (Suniel Shetty Family) ಸುಖವಾಗಿದೆ. ಆದರೆ ಸುನೀಲ್​ ಶೆಟ್ಟಿ ತಂದೆಯ ಬದುಕು ಅಷ್ಟು ಸುಲಭದ್ದಾಗಿರಲಿಲ್ಲ. ಆ ಕುರಿತು ಸುನೀಲ್​ ಶೆಟ್ಟಿ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ತಂದೆ ವೀರಪ್ಪ ಶೆಟ್ಟಿ (Veerappa Shetty) ಬಗ್ಗೆ ಅವರು ಹೆಮ್ಮೆಯಿಂದ ಮಾತನಾಡಿದ್ದಾರೆ. ಅಚ್ಚರಿ ಎಂದರೆ, ವೀರಪ್ಪ ಶೆಟ್ಟಿ ಅವರು ಹೋಟೆಲ್​ ಕ್ಲೀನರ್​ ಆಗಿದ್ದರು. ನಂತರ ಅದೇ ಕಟ್ಟಡಕ್ಕೆ ಮಾಲೀಕರಾದರು!

ಕಿರುತೆರೆಯ ‘ಇಂಡಿಯಾಸ್​ ಬೆಸ್ಟ್​ ಡ್ಯಾನ್ಸರ್​ 2’ ಕಾರ್ಯಕ್ರಮದಲ್ಲಿ ಸುನೀಲ್​ ಶೆಟ್ಟಿ ಭಾಗವಹಿಸಿದ್ದರು. ಆಗ ಅವರು ತಂದೆಯ ಬಗೆಗಿನ ನೆನಪುಗಳನ್ನು ತೆರೆದಿಟ್ಟರು. ಕೆಲಸ ಹುಡುಕಿಕೊಂಡು ತುಂಬ ಚಿಕ್ಕ ವಯಸ್ಸಿನಲ್ಲಿಯೇ ಮುಂಬೈಗೆ ಬಂದಿದ್ದರು ಸುನೀಲ್​ ಶೆಟ್ಟಿ ತಂದೆ. ‘ನಿಮ್ಮ ಹೀರೋ ಯಾರು ಅಂತ ಯಾರಾದರೂ ಕೇಳಿದರೆ ನಾನು ನನ್ನ ತಂದೆಯ ಹೆಸರು ಹೇಳುತ್ತೇನೆ. ಅಪ್ಪ ಎಂದರೆ ನನಗೆ ತುಂಬ ಹೆಮ್ಮೆ. ಅವರು ಬದುಕಿದ ರೀತಿ ತುಂಬ ಅದ್ಭುತವಾಗಿತ್ತು’ ಎಂದು ಸುನೀಲ್​ ಶೆಟ್ಟಿ ಹೇಳಿದ್ದಾರೆ.

‘ನಮ್ಮ ತಂದೆ ಕೇವಲ 9ನೇ ವಯಸ್ಸಿನಲ್ಲಿ ಕೆಲಸ ಹುಡುಕಿಕೊಂಡು ಮುಂಬೈಗೆ ಬಂದರು. ಮೊದಲಿಗೆ ಹೋಟೆಲ್​ ಕ್ಲೀನರ್​ ಆಗಿ ಕೆಲಸ ಆರಂಭಿಸಿದರು. ಜೀವನ ನಡೆಸಲು ತಾವು ಮಾಡುತ್ತಿರುವ ಕೆಲಸದ ಬಗ್ಗೆ ಅವರಿಗೆ ಎಂದಿಗೂ ನಾಚಿಕೆ ಅನಿಸಲಿಲ್ಲ. ಮೊದಲು ಕ್ಲೀನರ್​ ಆಗಿದ್ದ ಬಿಲ್ಡಿಂಗ್​ನಲ್ಲಿಯೇ ಅವರು ನಂತರ ಮ್ಯಾನೇಜರ್​ ಆಗಿ ಬೆಳೆದರು. ಬಳಿಕ ಆ ಕಟ್ಟಡಗಳನ್ನು ಖರೀದಿಸಿ ಮಾಲೀಕರಾದರು. ಅವರು ಅಂಥ ವ್ಯಕ್ತಿ ಆಗಿದ್ದರು’ ಎಂದು ತಂದೆಯ ಬಗ್ಗೆ ಹೆಮ್ಮೆಯ ಮಾತುಗಳನ್ನು ಸುನೀಲ್​ ಶೆಟ್ಟಿ ಹಂಚಿಕೊಂಡಿದ್ದಾರೆ.

‘ನಾವು ಏನು ಮಾಡುತ್ತೇವೋ ಆ ಕೆಲಸದ ಬಗ್ಗೆ ನಮಗೆ ಹೆಮ್ಮೆ ಇರಬೇಕು. ಆ ಕೆಲಸವನ್ನು ಮನಸಾರೆ ಮಾಡಬೇಕು ಅಂತ ನನಗೆ ಕಲಿಸಿಕೊಟ್ಟಿದ್ದೇ ನನ್ನ ತಂದೆ’ ಎಂದಿದ್ದಾರೆ ಸುನೀಲ್​ ಶೆಟ್ಟಿ. ‘ಅಪ್ಪನೇ ನನ್ನ ಹೀರೋ’ ಎಂದಿರುವ ಅವರ ಮಾತುಗಳಿಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸುನೀಲ್​ ಶೆಟ್ಟಿ ಪುತ್ರ ಅಹಾನ್​ ಶೆಟ್ಟಿ ನಟಿಸಿರುವ ಮೊದಲ ಬಾಲಿವುಡ್​ ಸಿನಿಮಾ ‘ತಡಪ್​’ ಈಗ ಬಿಡುಗಡೆಗೆ ಸಜ್ಜಾಗಿದೆ. ಡಿ.3ರಂದು ಈ ಚಿತ್ರ ರಿಲೀಸ್​ ಆಗಲಿದೆ. ಇದು ತೆಲುಗಿನ ‘ಆರ್​ಎಕ್ಸ್​100’ ಚಿತ್ರದ ಹಿಂದಿ ರಿಮೇಕ್​.

ಇದನ್ನೂ ಓದಿ:

ಆರ್ಯನ್​ ಖಾನ್​ ಇನ್ನೂ ಮಗು ಎಂದು ಹೇಳಿ ಸಂಕಷ್ಟಕ್ಕೆ ಸಿಲುಕಿದ ನಟ ಸುನೀಲ್​ ಶೆಟ್ಟಿ

ಸೊನಾಲಿ ಬೇಂದ್ರೆಗೆ ರಾತ್ರಿ ಕರೆ ಮಾಡಿ ‘ಓಡಿ ಹೋಗಿ ಮದ್ವೆ ಆಗೋಣ ಬಾ’ ಎಂದಿದ್ರಾ ಸುನೀಲ್​ ಶೆಟ್ಟಿ? ಇಲ್ಲಿದೆ ಅಸಲಿ ವಿಷಯ

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ