AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೊನಾಲಿ ಬೇಂದ್ರೆಗೆ ರಾತ್ರಿ ಕರೆ ಮಾಡಿ ‘ಓಡಿ ಹೋಗಿ ಮದ್ವೆ ಆಗೋಣ ಬಾ’ ಎಂದಿದ್ರಾ ಸುನೀಲ್​ ಶೆಟ್ಟಿ? ಇಲ್ಲಿದೆ ಅಸಲಿ ವಿಷಯ

ಆರಂಭದಲ್ಲಿ ಸುನೀಲ್​ ಶೆಟ್ಟಿ ಜೊತೆ ಕೇಳಿಬಂದ ಗಾಸಿಪ್​ಗಳಿಗೆ ಸೊನಾಲಿ ಬೇಂದ್ರೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ನಂತರದಲ್ಲಿ ಅವರ ಖಾಸಗಿ ಜೀವನದ ಮೇಲೆ ಅದು ಪರಿಣಾಮ ಬೀರಲು ಆರಂಭಿಸಿತು.

ಸೊನಾಲಿ ಬೇಂದ್ರೆಗೆ ರಾತ್ರಿ ಕರೆ ಮಾಡಿ ‘ಓಡಿ ಹೋಗಿ ಮದ್ವೆ ಆಗೋಣ ಬಾ’ ಎಂದಿದ್ರಾ ಸುನೀಲ್​ ಶೆಟ್ಟಿ? ಇಲ್ಲಿದೆ ಅಸಲಿ ವಿಷಯ
ಸುನೀಲ್​ ಶೆಟ್ಟಿ - ಸೊನಾಲಿ ಬೇಂದ್ರೆ
TV9 Web
| Edited By: |

Updated on: Aug 21, 2021 | 8:21 AM

Share

ಚಿತ್ರರಂಗದಲ್ಲಿನ ಗಾಸಿಪ್​ಗಳು ಯಾವ ಹಂತಕ್ಕೆ ಬೇಕಿದ್ದರೂ ತಲುಪುತ್ತವೆ. ಕೆಲವು ಸೆಲೆಬ್ರಿಟಿಗಳು ತಮ್ಮ ಬಗ್ಗೆ ಕೇಳಿಬಂದ ಗಾಸಿಪ್​ಗೆ ಹೆಚ್ಚೇನೂ ಪ್ರತಿಕ್ರಿಯಿಸದೇ ಸುಮ್ಮನೆ ನಕ್ಕು ಮುಂದೆ ಸಾಗುತ್ತಾರೆ. ಆದರೆ ಇನ್ನೂ ಕೆಲವು ಸ್ಟಾರ್​​ಗಳಿಗೆ ಗಾಸಿಪ್​ಗಳಿಂದ ತೀವ್ರ ತೊಂದರೆ ಉಂಟಾಗುವ ಪ್ರಸಂಗ ಎದುರಾಗುತ್ತದೆ. ಒಂದು ಕಾಲದಲ್ಲಿ ಬಾಲಿವುಡ್​ನ ಟಾಪ್​ ನಟಿಯಾಗಿದ್ದ ಸೊನಾಲಿ ಬೇಂದ್ರೆ (Sonali Bendre) ಅವರು ನೆನಪಿಸಿಕೊಂಡ ಅಂಥ ಒಂದು ಘಟನೆಯ ವಿವರ ಇಲ್ಲಿದೆ. ಹಲವು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದ ಸೊನಾಲಿ ಬೇಂದ್ರೆ ಮತ್ತು ಸುನೀಲ್​ ಶೆಟ್ಟಿ (Suniel Shetty) ನಡುವೆ 90ರ ದಶಕದಲ್ಲಿ ಸಿಕ್ಕಾಪಟ್ಟೆ ಗುಸುಗುಸು ಕೇಳಿಬರುತ್ತಿತ್ತು.

ಆರಂಭದಲ್ಲಿ ಸೊನಾಲಿ ಬೇಂದ್ರೆ ಅವರು ಗಾಸಿಪ್​ಗಳಿಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ನಂತರದಲ್ಲಿ ಅವರ ಖಾಸಗಿ ಜೀವನದ ಮೇಲೆ ಅದು ಪರಿಣಾಮ ಬೀರಲು ಆರಂಭಿಸಿತು. ಎಷ್ಟರಮಟ್ಟಿಗೆಂದರೆ, ಅಪರಿಚಿತ ವ್ಯಕ್ತಿಯೊಬ್ಬ ಮಧ್ಯರಾತ್ರಿ ಅವರ ಮನೆಗೆ ಕರೆ ಮಾಡಿ ತಾನು ಸುನೀಲ್ ಶೆಟ್ಟಿ ಎಂದು ಹೇಳಿಕೊಂಡಿದ್ದ. ಅಲ್ಲದೆ, ‘ಓಡಿ ಹೋಗಿ ಮದುವೆ ಆಗೋಣ ಬಾ’ ಎಂದು ಆಹ್ವಾನ ಕೂಡ ನೀಡಿದ್ದನಂತೆ. ಈ ಘಟನೆ ಸೊನಾಲಿಗೆ ನಿಜಕ್ಕೂ ಶಾಕಿಂಗ್​ ಆಗಿತ್ತು. ಕರೆ ಮಾಡಿದ ವ್ಯಕ್ತಿ ಸುನೀಲ್​ ಶೆಟ್ಟಿ ಅಲ್ಲ ಎಂಬುದು ಅವರಿಗೆ ಕ್ಷಣಾರ್ಧಲ್ಲೇ ಗೊತ್ತಾಗಿತ್ತು.

‘ನನಗೆ ಆಗ ಇನ್ನೂ ಮದುವೆ ಆಗಿರಲಿಲ್ಲ. ಹಾಗಾಗಿ ಎಷ್ಟೇ ಗಾಸಿಪ್​ಗಳು ಹರಿದಾಡಿದರೂ ನಾನು ಯಾರಿಗೂ ಉತ್ತರ ನೀಡಬೇಕಿರಲಿಲ್ಲ. ಆದರೆ ವಿವಾಹಿತನಾಗಿದ್ದ ಸುನೀಲ್​ ಶೆಟ್ಟಿ ಅವರಿಗೆ ಎಷ್ಟು ತೊಂದರೆ ಆಗಿರಬಹುದು ಅಂತ ನಾನು ಯೋಚಿಸುತ್ತಿದ್ದೆ. ಅದರ ಬಗ್ಗೆ ನಾನು ಅವರ ಜೊತೆ ಚರ್ಚೆ ಕೂಡ ಮಾಡಲಿಲ್ಲ’ ಎಂದು ಸೊನಾಲಿ ಬೇಂದ್ರೆ ಹೇಳಿದ್ದಾರೆ.

ಸೊನಾಲಿ ಬೇಂದ್ರೆ ಸಂಬಂಧಿಕರು ಸಹ ಮನೆಗೆ ಬಂದು ಅಸಂಬದ್ಧ ಮಾತುಗಳನ್ನು ಆಡುತ್ತಿದ್ದರು. ‘ಈಗ ನಿಮಗೆ ಬೇಕಾದಷ್ಟು ಹಣ ಸಿಗುತ್ತಿದೆ. ನಿಮ್ಮ ಮಗಳು ಯಾವ ಹೀರೋ ಜೊತೆ ಏನೇ ಮಾಡಿದರೂ ನಿಮಗೆ ಚಿಂತೆ ಇಲ್ಲ’ ಎಂದು ಸಂಬಂಧಿಕರು ನೇರವಾಗಿ ಮಾತನಾಡಿಕೊಂಡಿದ್ದು ಸೊನಾಲಿ ಬೇರೆ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿತ್ತು. 2004ರ ಬಳಿಕ ಸೊನಾಲಿ ಬೇಂದ್ರ ಮುಖ್ಯಪಾತ್ರಗಳಲ್ಲಿ ನಟಿಸಲೇ ಇಲ್ಲ. 2018ರಲ್ಲಿ ಅವರು ಕ್ಯಾನ್ಸರ್​ನಿಂದ ಬಳಲುತ್ತಿರುವುದು ತಿಳಿದುಬಂತು. 2016ರವರೆಗೂ ಅವರು ಟಿವಿ ಶೋಗಳಿಗೆ ನಿರ್ಣಾಯಕಿಯಾಗಿ ಕೆಲಸ ಮಾಡಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಬಣ್ಣದ ಲೋಕದಿಂದ ಅಂತರ ಕಾಪಾಡಿಕೊಂಡಿದ್ದಾರೆ.

ಇದನ್ನೂ ಓದಿ:

ಬಾಯ್​ಫ್ರೆಂಡ್​ ರಾಹುಲ್​ ಜತೆ ಫೋಟೋ ಹಂಚಿಕೊಂಡ ಆಥಿಯಾ; ಇದು ನಿಜ ಎಂದ ಸುನೀಲ್​ ಶೆಟ್ಟಿ

‘ನಾಲ್ಕಲ್ಲ ನಲವತ್ತು ಬಾರಿ ಮದುವೆ ಆಗುತ್ತೇನೆ’; ಬಿಗ್​ ಬಾಸ್​ ಸ್ಪರ್ಧಿಯ ಖಡಕ್​ ಮಾತು

ವಿದ್ಯಾರ್ಥಿಗಳ ಕೈಯಲ್ಲಿ ಕಾರು ತೊಳೆಸಿದ ಶಿಕ್ಷಕ
ವಿದ್ಯಾರ್ಥಿಗಳ ಕೈಯಲ್ಲಿ ಕಾರು ತೊಳೆಸಿದ ಶಿಕ್ಷಕ
ತೆಲಂಗಾಣದ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯ ಮೇಲೆ ವಾರ್ಡನ್ ದರ್ಪ
ತೆಲಂಗಾಣದ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯ ಮೇಲೆ ವಾರ್ಡನ್ ದರ್ಪ
ಹೊಸ ವರ್ಷಕ್ಕೆ ಶುಭಸುದ್ದಿ: ಫಲಾನುಭವಿಗಳ ಖಾತೆಗೆ ಬಂದ ಗೃಹಲಕ್ಷ್ಮಿ
ಹೊಸ ವರ್ಷಕ್ಕೆ ಶುಭಸುದ್ದಿ: ಫಲಾನುಭವಿಗಳ ಖಾತೆಗೆ ಬಂದ ಗೃಹಲಕ್ಷ್ಮಿ
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​