ವಿಶ್ವಕಪ್​ ಸೋಲಿನ ನೋವಿನ ನಡುವೆಯೂ ಟೀಮ್​ ಇಂಡಿಯಾದ ಬೆನ್ನು ತಟ್ಟಿದ ಸೆಲೆಬ್ರಿಟಿಗಳು

‘ನಿಮ್ಮನ್ನು ನಾವು ಪ್ರೀತಿಸುತ್ತೇವೆ. ನಿಮ್ಮ ಜೊತೆ ನಾವು ಬೆಂಬಲವಾಗಿ ನಿಂತುಕೊಳ್ಳುತ್ತೇವೆ. ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ’ ಎಂದು ರಿತೇಶ್​​ ದೇಶಮುಖ್​ ಬರೆದುಕೊಂಡಿದ್ದಾರೆ. ‘ಕಳೆದ ವಾರಗಳಲ್ಲಿ ನೀವು ನಮಗೆ ಸ್ಮರಣೀಯ ಕ್ಷಣಗಳನ್ನು ನೀಡಿದ್ದೀರಿ. ಅದಕ್ಕಾಗಿ ಧನ್ಯವಾದಗಳು’ ಎಂದು ದಿಯಾ ಮಿರ್ಜಾ ಅವರು ಟೀಮ್​ ಇಂಡಿಯಾದ ಬೆನ್ನು ತಟ್ಟಿದ್ದಾರೆ.

ವಿಶ್ವಕಪ್​ ಸೋಲಿನ ನೋವಿನ ನಡುವೆಯೂ ಟೀಮ್​ ಇಂಡಿಯಾದ ಬೆನ್ನು ತಟ್ಟಿದ ಸೆಲೆಬ್ರಿಟಿಗಳು
ಟೀಮ್​ ಇಂಡಿಯಾ
Follow us
|

Updated on: Nov 20, 2023 | 7:33 AM

‘ವಿಶ್ವಕಪ್​ 2023’ ಫೈನಲ್​ನಲ್ಲಿ (ICC World Cup 2023 Final) ಭಾರತ ಗೆದ್ದೇ ಗೆಲ್ಲುತ್ತದೆ ಎಲ್ಲರೂ ಭಾವಿಸಿದ್ದರು. ಆದರೆ ಆ ಊಹೆ ನಿಜವಾಗಲಿಲ್ಲ. ಆಸ್ಟ್ರೇಲಿಯಾ ತಂಡವನ್ನು ಮಣಿಸಲು ಭಾರತಕ್ಕೆ ಸಾಧ್ಯವಾಗಲೇ ಇಲ್ಲ. ಅದರಿಂದ ಕೋಟ್ಯಂತರ ಹೃದಯಗಳಿಗೆ ನೋವಾಗಿದೆ. ಬಾಲಿವುಡ್​ನ (Bollywood) ಸೆಲೆಬ್ರಿಟಿಗಳಿಗೂ ನಿರಾಸೆ ಆಗಿದೆ. ಹಾಗಂತ ಟೀಮ್​ ಇಂಡಿಯಾವನ್ನು (Team India) ಅವರು ನಿಂದಿಸುತ್ತಿಲ್ಲ. ಇಷ್ಟು ದಿನ ಉತ್ತಮ ಪರ್ಫಾರ್ಮೆನ್ಸ್​ ನೀಡಿದ ನಮ್ಮ ಆಟಗಾರರನ್ನು ಎಲ್ಲರೂ ಅಭಿನಂದಿಸುತ್ತಿದ್ದಾರೆ. ಮುಂದೆ ಇನ್ನೂ ಚೆನ್ನಾಗಿ ಆಡಲಿ ಎಂದು ಹುರಿದುಂಬಿಸಲಾಗುತ್ತಿದೆ. ಅಜಯ್​ ದೇವಗನ್​, ಅಭಿಷೇಕ್​ ಬಚ್ಚನ್​, ದಿಯಾ ಮಿರ್ಜಾ, ರಿತೇಶ್​ ದೇಶಮುಖ್​ ಸೇರಿದಂತೆ ಅನೇಕರು ಟೀಮ್ ಇಂಡಿಯಾ ಆಟಗಾರರಿಗೆ ಬೆಂಬಲ ಸೂಚಿಸಿದ್ದಾರೆ.

‘ಇದು ಒಂದು ಕೆಟ್ಟ ದಿನ ಅಷ್ಟೇ. 2023ರ ವಿಶ್ವಕಪ್​ನಲ್ಲಿ ಕಠಿಣ ಸ್ಪರ್ಧಿಯಾಗಿ ನೀವು ಎಂದೆಂದಿಗೂ ನೆನಪಿನಲ್ಲಿ ಉಳಿಯುತ್ತೀರಿ. ಚೆನ್ನಾಗಿ ಆಡಿದ್ದೀರಿ’ ಎಂದು ಆಯುಷ್ಮಾನ್​ ಖುರಾನಾ ಪೋಸ್ಟ್​ ಮಾಡಿದ್ದಾರೆ. ‘ಇಡೀ ಟೂರ್ನಿಯಲ್ಲಿ ನೀವು ಆಟ ಆಡಿದ ರೀತಿಯೇ ಗೆಲುವಿಗೆ ಸಮಾನ. ಹೆಮ್ಮೆಯಿಂದ ಇರಿ’ ಎಂದು ಅಜಯ್​ ದೇವಗನ್​ ಅವರು ಟ್ವೀಟ್​ ಮಾಡಿದ್ದಾರೆ.

‘ಸೋತು ಗೆಲ್ಲುವವರನ್ನು ಬಾಜಿಗರ್​ ಎನ್ನುತ್ತೇವೆ. ಇಂಡಿಯಾ ಚೆನ್ನಾಗಿ ಆಡಿದೆ. ವರ್ಲ್ಡ್​ ಕಪ್​ ಗೆದ್ದ ಆಸ್ಟ್ರೇಲಿಯಾಗೆ ಅಭಿನಂದನೆಗಳು’ ಎಂದು ಬರೆದುಕೊಂಡಿದ್ದಾರೆ ಕಾಜೋಲ್​.

‘ಮನಸ್ಸಿಗೆ ನೋವಾಗಿದೆ. ಇಡೀ ಸರಣಿಯಲ್ಲಿ ನಮ್ಮ ತಂಡದವರು ತುಂಬಾ ಚೆನ್ನಾಗಿ ಆಡಿದ್ದಾರೆ. ನಾವು ಎಂದೆಂದಿಗೂ ನಮ್ಮ ಆಟಗಾರರ ದೊಡ್ಡ ಅಭಿಮಾನಿಗಳಾಗಿರುತ್ತೇವೆ. ಮುಂದಿನ ವರ್ಲ್ಡ್​ ಕಪ್​​ ನಮ್ಮದಾಗಲಿದೆ’ ಎಂದು ವಿವೇಕ್​ ಒಬೆಯಾರ್​ ಬರೆದುಕೊಂಡಿದ್ದಾರೆ.

‘ಕಠಿಣ ಪರಿಶ್ರಮದ ನಡುವೆ ಬಂದ ಸೋಲು ಇದು. ಎಲ್ಲ ಪಂದ್ಯಗಳಲ್ಲೂ ನಮ್ಮವರ ಪ್ರಯತ್ನ ಚೆನ್ನಾಗಿತ್ತು. ಹೆಮ್ಮೆಯಿಂದಿರಿ. ಈ ಜರ್ನಿಗೆ ಧನ್ಯವಾದಗಳು’ ಎಂದು ಅಭಿಷೇಕ್​ ಬಚ್ಚನ್​ ಅವರು ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ಗೆದ್ದ ಆಸ್ಟ್ರೇಲಿಯಾಕ್ಕೆ ಸಿಕ್ಕಿದ್ದೆಷ್ಟು? ಸೋತ ಭಾರತ ಗೆದ್ದಿದ್ದು ಎಷ್ಟು ಕೋಟಿ? ಇಲ್ಲಿದೆ ಬಹುಮಾನದ ವಿವರ

‘ನಿಮ್ಮನ್ನು ನಾವು ಪ್ರೀತಿಸುತ್ತೇವೆ. ನಿಮ್ಮ ಜೊತೆ ನಾವು ಬೆಂಬಲವಾಗಿ ನಿಂತುಕೊಳ್ಳುತ್ತೇವೆ. ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ’ ಎಂದು ರಿತೇಶ್​​ ದೇಶಮುಖ್​ ಅವರು ಬರೆದುಕೊಂಡಿದ್ದಾರೆ.

‘ಕಳೆದ ವಾರಗಳಲ್ಲಿ ನೀವು ನಮಗೆ ಸ್ಮರಣೀಯ ಕ್ಷಣಗಳನ್ನು ನೀಡಿದ್ದೀರಿ. ಅದಕ್ಕಾಗಿ ಧನ್ಯವಾದಗಳು. ಚೆನ್ನಾಗಿ ಆಡಿದ್ದೀರಿ. ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ’ ಎಂದು ಟೀಮ್​ ಇಂಡಿಯಾದ ಬೆನ್ನು ತಟ್ಟಿದ್ದಾರೆ ದಿಯಾ ಮಿರ್ಜಾ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
ಬರೋಬ್ಬರಿ 3.30 ಕೋಟಿಯ ಮರ್ಸಿಡಿಸ್ ಕಾರು ಖರೀದಿಸಿದ ಧೋನಿ
ಬರೋಬ್ಬರಿ 3.30 ಕೋಟಿಯ ಮರ್ಸಿಡಿಸ್ ಕಾರು ಖರೀದಿಸಿದ ಧೋನಿ
ಮಂಡ್ಯ: ಮಹಿಳೆಯರ ಮೈಮುಟ್ಟಿ ಲೈಂಗಿಕ ಕಿರುಕುಳ ನೀಡುತ್ತಿದ್ದ ವಿಕೃತನ ಸೆರೆ
ಮಂಡ್ಯ: ಮಹಿಳೆಯರ ಮೈಮುಟ್ಟಿ ಲೈಂಗಿಕ ಕಿರುಕುಳ ನೀಡುತ್ತಿದ್ದ ವಿಕೃತನ ಸೆರೆ
Telangana Assembly Polls: ಹೈದರಾಬಾದ್​ನಲ್ಲಿ ಮತ ಚಲಾಯಿಸಿದ ಚಿರಂಜೀವಿ
Telangana Assembly Polls: ಹೈದರಾಬಾದ್​ನಲ್ಲಿ ಮತ ಚಲಾಯಿಸಿದ ಚಿರಂಜೀವಿ
Telangana Assembly Polls 2023: ಮತಗಟ್ಟೆಗೆ ಆಗಮಿಸಿದ ಜ್ಯೂ. ಎನ್ ಟಿ ಆರ್
Telangana Assembly Polls 2023: ಮತಗಟ್ಟೆಗೆ ಆಗಮಿಸಿದ ಜ್ಯೂ. ಎನ್ ಟಿ ಆರ್
ಸಂಸಾರದಲ್ಲಿನ ಬಿರುಕಿಗೆ ಕಾರಣ ತಿಳಿಸಿದ ವರ್ತೂರು ಸಂತೋಷ್
ಸಂಸಾರದಲ್ಲಿನ ಬಿರುಕಿಗೆ ಕಾರಣ ತಿಳಿಸಿದ ವರ್ತೂರು ಸಂತೋಷ್
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜಗಳ ನೆನಪಿಸಿಕೊಂಡ ಗೆಳತಿ ಸಂಜನಾ ಗಲ್ರಾನಿ
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜಗಳ ನೆನಪಿಸಿಕೊಂಡ ಗೆಳತಿ ಸಂಜನಾ ಗಲ್ರಾನಿ
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜೋಕ್ ನೆನಪಿಸಿಕೊಂಡ ಯೋಗರಾಜ್ ಭಟ್
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜೋಕ್ ನೆನಪಿಸಿಕೊಂಡ ಯೋಗರಾಜ್ ಭಟ್
ನಿಮ್ಹಾನ್ಸ್ ಆಸ್ಪತ್ರೆಯ​​ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮಗು ಬಲಿ ಆರೋಪ
ನಿಮ್ಹಾನ್ಸ್ ಆಸ್ಪತ್ರೆಯ​​ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮಗು ಬಲಿ ಆರೋಪ
ತೆಲಂಗಾಣದಲ್ಲಿ ಕೆಸಿಅರ್ ನನ್ನ ಡೋಂಗಿ ಅಂತ  ಹೇಳುತ್ತಿದ್ದಾರೆ: ಸಿದ್ದರಾಮಯ್ಯ
ತೆಲಂಗಾಣದಲ್ಲಿ ಕೆಸಿಅರ್ ನನ್ನ ಡೋಂಗಿ ಅಂತ  ಹೇಳುತ್ತಿದ್ದಾರೆ: ಸಿದ್ದರಾಮಯ್ಯ
ಡಿಎ ಪ್ರಕರಣ; ನ್ಯಾಯಾಲಯದಲ್ಲಿ ಶಿವಕುಮಾರ್​ಗೆ ಜಯ ಸಿಗಲ್ಲ: ಬಿವೈ ವಿಜಯೇಂದ್ರ
ಡಿಎ ಪ್ರಕರಣ; ನ್ಯಾಯಾಲಯದಲ್ಲಿ ಶಿವಕುಮಾರ್​ಗೆ ಜಯ ಸಿಗಲ್ಲ: ಬಿವೈ ವಿಜಯೇಂದ್ರ