AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮನ ಭಕ್ತರಿಗೆ ಅಪಮಾನ: ಹಳೆ ಟ್ವೀಟ್​ಗೆ ಕ್ಷಮೆ ಕೇಳಿದ ‘12th ಫೇಲ್’ ನಟ

Vikrant Massey: ‘12th ಫೇಲ್’ ಸಿನಿಮಾದ ನಟ ವಿಕ್ರಾಂತ್ ಮಸ್ಸಿಯ ಹಳೆಯ ಟ್ವೀಟ್ ಒಂದು ವೈರಲ್ ಆಗಿದ್ದು ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದು, ಟ್ವೀಟ್​ಗೆ ಪ್ರತಿಯಾಗಿ ವಿಕ್ರಾಂತ್ ಮಸ್ಸಿ ಕ್ಷಮೆ ಕೇಳಿದ್ದಾರೆ.

ರಾಮನ ಭಕ್ತರಿಗೆ ಅಪಮಾನ: ಹಳೆ ಟ್ವೀಟ್​ಗೆ ಕ್ಷಮೆ ಕೇಳಿದ ‘12th ಫೇಲ್’ ನಟ
ಮಂಜುನಾಥ ಸಿ.
|

Updated on: Feb 21, 2024 | 3:37 PM

Share

12th ಫೇಲ್’ (12th Fail) ಸಿನಿಮಾ ಬಹುದೊಡ್ಡ ಹಿಟ್ ಆಗಿದೆ. ಸಿನಿಮಾಕ್ಕೆ ಪ್ರೇಕ್ಷಕರ ಹಾಗೂ ವಿಮರ್ಶಕರ ಆದರ ದೊರೆತಿದೆ. ಸಿನಿಮಾದ ನಾಯಕ ವಿಕ್ರಾಂತ್ ಮಸ್ಸಿನ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ‘12th ಫೇಲ್’ ಸಿನಿಮಾದ ಯಶಸ್ಸಿನ ಬಳಿಕ ಹಲವು ಅವಕಾಶಗಳು ಅವರನ್ನು ಅರಸಿ ಬರುತ್ತಿವೆ. ಆದರೆ ಈ ನಡುವೆ ವಿಕ್ರಾಂತ್ ಮಸ್ಸಿಯ ಹಳೆಯ ಟ್ವೀಟ್ ಒಂದು ವೈರಲ್ ಆಗಿದ್ದು, ವಿಕ್ರಾಂತ್ ಮಸ್ಸಿ ಹಿಂದೂ ವಿರೋಧಿ ಎಂಬ ಆರೋಪ ಎದುರಾಗಿದೆ. ತಮ್ಮ ಹಳೆಯ ಟ್ವೀಟ್ ವೈರಲ್ ಆಗುತ್ತಿದ್ದಂತೆ ವಿಕ್ರಾಂತ್ ಮಸ್ಸಿ ಕ್ಷಮೆ ಸಹ ಕೇಳಿದ್ದಾರೆ. ಹಾಗಿದ್ದರೆ ಏನಿತ್ತು ವಿಕ್ರಾಂತ್ ಮಸ್ಸಿ ಮಾಡಿದ ಟ್ವೀಟ್​ನಲ್ಲಿ?

2018ರಲ್ಲಿ ವಿಕ್ರಾಂತ್ ಮಸ್ಸಿ ಟ್ವೀಟ್​ ಒಂದನ್ನು ಮಾಡಿದ್ದರು. ಟ್ವೀಟ್​ನಲ್ಲಿ ರಾಮನ ಭಕ್ತರಿಗೆ ಅಪಮಾನವಾಗುವಂಥಹಾ ಸಾಲುಗಳಿದ್ದವು. ಹಿಂದೂ ಕಾರ್ಯಕರ್ತರು ಬಾಲಕಿಯೊಬ್ಬರನ್ನು ಅತ್ಯಾಚಾರ ಮಾಡಿದ ಸುದ್ದಿಗಾಗಿ ರಚಿಸಲಾದ ಕಾರ್ಟೂನ್ ಒಂದನ್ನು ವಿಕ್ರಾಂತ್ ಮಸ್ಸಿ ಹಂಚಿಕೊಂಡಿದ್ದರು, ಕಾರ್ಟೂನ್​ನಲ್ಲಿ, ಸೀತಾಮಾತೆ, ರಾಮನೊಂದಿಗೆ, ‘ಪುಣ್ಯಕ್ಕೆ ನನ್ನನ್ನು ರಾವಣ ಅಪಹರಣ ಮಾಡಿದ, ನಿನ್ನ ಭಕ್ತರು ಅಪಹರಣ ಮಾಡಿದ್ದರೆ ಕಷ್ಟವಾಗುತ್ತಿತ್ತು’ ಎಂಬ ಸಾಲಿತ್ತು. ಕಾರ್ಟೂನು ಹಂಚಿಕೊಂಡಿದ್ದ ವಿಕ್ರಾಂತ್ ಮಸ್ಸಿ, ‘ಅರ್ಧ ಬೆಂದ ಆಲೂಗಡ್ಡೆ, ಅರ್ಧ ಬೆಂದ ರಾಷ್ಟ್ರೀಯವಾದಿಗಳು ದೇಹಕ್ಕೆ ನೋವನ್ನೇ ನೀಡುತ್ತವೆ’ ಎಂದು ವಿಕ್ರಾಂತ್ ಮಸ್ಸಿ ಬರೆದುಕೊಂಡಿದ್ದರು.

ಇದನ್ನೂ ಓದಿ:‘12th ಫೇಲ್​’ ನಿರ್ದೇಶಕನ ಹೆಂಡತಿ ಮೇಲೆ ಸರಣಿ ಆರೋಪ ಮಾಡಿದ ಕಂಗನಾ ರಣಾವತ್​

2018ರ ಆ ಟ್ವೀಟ್ ಇದೀಗ ವೈರಲ್ ಆಗಿದ್ದು, ಅದರ ಬೆನ್ನಲ್ಲೆ ಕ್ಷಮೆ ಕೇಳಿರುವ ವಿಕ್ರಾಂತ್ ಮಸ್ಸಿ, ‘2018ರ ನನ್ನ ಆ ಟ್ವೀಟ್​ ಬಗ್ಗೆ ಕೆಲವು ಮಾತುಗಳನ್ನು ಹೇಳುವುದಕ್ಕಿದೆ. ಹಿಂದೂ ಧರ್ಮಕ್ಕೆ ಅಪಮಾನ ಮಾಡುವ ಅಥವಾ ಕೇಡು ಬಯಸುವ ಉದ್ದೇಶ ನನದ್ದಾಗಿರಲಿಲ್ಲ. ನನ್ನ ಸಹಜ ಬೇಸರವನ್ನು ವ್ಯಂಗ್ಯದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೆ, ಆದರೆ ನಾನು ಆ ಕಾರ್ಟೂನ್ ಅನ್ನು ನನ್ನ ಟ್ವೀಟ್​ ಜೊತೆಗೆ ಸೇರಿಸಬಾರದಿತ್ತು. ಯಾರಿಗೇ ಆಗಲಿ ನನ್ನ ಟ್ವೀಟ್​ನಿಂದ ನೋವಾಗಿದ್ದರೆ ಅಂಥಹವರಿಗೆ ಮನಃಪೂರ್ವಕವಾಗಿ ಕ್ಷಮೆ ಕೇಳುತ್ತೇನೆ. ನಿಮಗೆಲ್ಲರಿಗೂ ತಿಳಿದೇ ಇರುವಂತೆ, ನಾನು ಎಲ್ಲಾ ನಂಬಿಕೆಗಳನ್ನ ಮತ್ತು ಧರ್ಮಗಳನ್ನು ಸಾಧ್ಯವಾದಷ್ಟು ಹೆಚ್ಚಿನ ಗೌರವಿಸುತ್ತೇನೆ. ನಾವೆಲ್ಲರೂ ಸಮಯದೊಂದಿಗೆ ಬೆಳೆಯುತ್ತೇವೆ ಮತ್ತು ನಮ್ಮ ತಪ್ಪುಗಳಿಂದ ಕಲಿಯುತ್ತೇವೆ’ ಎಂದಿದ್ದಾರೆ ವಿಕ್ರಾಂತ್ ಮಸ್ಸಿ.

‘12th ಫೇಲ್’ ಸಿನಿಮಾದಲ್ಲಿ ವಿಕ್ರಾಂತ್ ಮಸ್ಸಿಯ ನಟನೆಗೆ ತೀವ್ರ ಮೆಚ್ಚುಗೆ ವ್ಯಕ್ತವಾಗಿದೆ. ‘12th ಫೇಲ್’ ಸಿನಿಮಾದ ಬಳಿಕ ವಿಕ್ರಾಂತ್ ಮಸ್ಸಿಯ ಹಲವಾರು ಸಿನಿಮಾ ಆಫರ್​ಗಳು ಬಂದಿವೆ. ಪ್ರಸ್ತುತ ಐದು ಸಿನಿಮಾಗಳಿವೆ ವಿಕ್ರಾಂತ್ ಮಸ್ಸಿ ಬಳಿ. ‘ಯಾರ್ ಜಿಗ್ರಿ’, ‘ಸೆಕ್ಟರ್ 36’, ‘ಫಿರ್ ಆಯಿ ಹಸೀನ್ ದಿಲ್​ರುಬಾ’, ‘ದಿ ಸಾಬರ್​ಮತಿ ರಿಪೋರ್ಟ್’, ‘ಟಿಎಂಇ’ ಸಿನಿಮಾಗಳಲ್ಲಿ ವಿಕ್ರಾಂತ್ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್