AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅನಿಮಲ್​’ ಚಿತ್ರದಲ್ಲಿ ಶಾರುಖ್​ ನಟಿಸಿದ್ರೆ 2000 ಕೋಟಿ ರೂ. ಕಲೆಕ್ಷನ್​ ಆಗ್ತಿತ್ತು ಎಂದ ಫ್ಯಾನ್ಸ್​

ಸೂಪರ್​ ಹಿಟ್​ ‘ಅನಿಮಲ್​’ ಚಿತ್ರದಲ್ಲಿ ನಟ ರಣಬೀರ್​ ಕಪೂರ್​ ಹಲವು ಶೇಡ್​ ಇರುವ ಪಾತ್ರ ನಿಭಾಯಿಸಿದ್ದರು. ಆ ಗೆಟಪ್​ಗಳಲ್ಲಿ ಶಾರುಖ್​ ಖಾನ್​ ಹೇಗೆ ಕಾಣಿಸಬಹುದು ಎಂಬ ಕಲ್ಪನೆಗೆ ಎಐ ವಿಡಿಯೋ ಜೀವ ತುಂಬಿದೆ. ರಣಬೀರ್​ ಕಪೂರ್​ ಅವರಿಗಿಂತಲೂ ಚೆನ್ನಾಗಿ ಶಾರುಖ್​ ಖಾನ್​ ನಟಿಸುತ್ತಿದ್ದರು ಎಂಬುದು ನೆಟ್ಟಿಗರ ವಾದ. ಆ ಬಗ್ಗೆ ಇಲ್ಲಿದೆ ಮಾಹಿತಿ..

‘ಅನಿಮಲ್​’ ಚಿತ್ರದಲ್ಲಿ ಶಾರುಖ್​ ನಟಿಸಿದ್ರೆ 2000 ಕೋಟಿ ರೂ. ಕಲೆಕ್ಷನ್​ ಆಗ್ತಿತ್ತು ಎಂದ ಫ್ಯಾನ್ಸ್​
ಶಾರುಖ್​ ಖಾನ್​ ಎಐ ಇಮೇಜ್​ಗಳು
ಮದನ್​ ಕುಮಾರ್​
|

Updated on: Mar 27, 2024 | 4:39 PM

Share

ರಣಬೀರ್​ ಕಪೂರ್​ ನಟನೆಯ ‘ಅನಿಮಲ್​’ ಸಿನಿಮಾ (Animal Movie) 2023ರಲ್ಲಿ ತೆರೆಕಂಡು ಬ್ಲಾಕ್​ ಬಸ್ಟರ್​ ಹಿಟ್​ ಆಯಿತು. ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡಿದ ಆ ಸಿನಿಮಾಗೆ ವಿಶ್ವ ಬಾಕ್ಸ್​ ಆಫೀಸ್​ನಲ್ಲಿ ಅಂದಾಜು 900 ಕೋಟಿ ರೂಪಾಯಿ ಕಲೆಕ್ಷನ್​ ಆಯಿತು. ಒಂದು ವೇಳೆ ಅದೇ ಸಿನಿಮಾದಲ್ಲಿ ರಣಬೀರ್​ ಕಪೂರ್​ (Ranbir Kapoor) ಬದಲು ಶಾರುಖ್​ ಖಾನ್​ (Shah Rukh Khan) ನಟಿಸಿದ್ದರೆ ಒಟ್ಟು ಕಲೆಕ್ಷನ್​ 2 ಸಾವಿರ ಕೋಟಿ ರೂಪಾಯಿ ಆಗುತ್ತಿತ್ತು ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಅದಕ್ಕೆ ಕಾರಣ ಆಗಿರುವುದು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋ.

ಕೃತಕ ಬುದ್ಧಿಮತ್ತೆಯಿಂದ ಯಾವುದೇ ಕಲ್ಪನೆಯನ್ನು ಬೇಕಾದರೂ ನಿಜವಾಗಿಸಬಹುದು. ಕೆಲವರು ಇದನ್ನು ಕೆಟ್ಟದ್ದಕ್ಕೆ ಬಳಸುತ್ತಾರೆ. ಆದರೆ ಇನ್ನೊಂದು ವರ್ಗದ ಜನರು ಎಐ ಬಳಸಿಕೊಂಡು ಹೊಸ ಲೋಕ ಸೃಷ್ಟಿಸುತ್ತಾರೆ. ಅದಕ್ಕೆ ಬೆಸ್ಟ್​ ಉದಾಹರಣೆ ಇಲ್ಲಿದೆ.. ‘ಅನಿಮಲ್​’ ಸಿನಿಮಾದಲ್ಲಿ ಶಾರುಖ್​ ಖಾನ್​ ನಟಿಸಿದ್ದರೆ ಹೇಗಿರುತ್ತಿತ್ತು ಎಂಬುದನ್ನು ತೋರಿಸುವ ಒಂದು ಡೀಪ್​ ಫೇಕ್​ ವಿಡಿಯೋ ರಚಿಸಲಾಗಿದೆ. ಇದನ್ನು ನೋಡಿದ ಅಭಿಮಾನಿಗಳು ಕಮೆಂಟ್​ ಮಾಡುತ್ತಿದ್ದಾರೆ.

‘ಅನಿಮಲ್​’ ಸಿನಿಮಾದಲ್ಲಿ ರಣಬೀರ್​ ಕಪೂರ್​ ಅವರು ಅನೇಕ ಶೇಡ್​ ಇರುವ ಪಾತ್ರವನ್ನು ನಿಭಾಯಿಸಿದ್ದರು. ಆ ಎಲ್ಲ ಗೆಟಪ್​ಗಳಲ್ಲಿ ಶಾರುಖ್​ ಹೇಗೆ ಕಾಣಿಸಬಹುದು ಎಂಬ ಕಲ್ಪನೆಗೆ ಈ ವಿಡಿಯೋ ಜೀವ ತುಂಬಿದೆ. ರಣಬೀರ್​ ಕಪೂರ್​ ಅವರಿಗಿಂತಲೂ ಶಾರುಖ್​ ಖಾನ್​ ಅವರು ಚೆನ್ನಾಗಿ ನಟಿಸುತ್ತಿದ್ದರು. ಅಲ್ಲದೇ ಅವರ ಫ್ಯಾನ್​ ಫಾಲೋಯಿಂಗ್​ ದೊಡ್ಡದಿರುವ ಕಾರಣ ಬಾಕ್ಸ್​ ಆಫೀಸ್​ನಲ್ಲಿ ಎರಡು ಸಾವಿರ ಕೋಟಿ ರೂಪಾಯಿ ಕಮಾಯಿ ಆಗುತ್ತಿತ್ತು ಎಂದು ಕಿಂಗ್ ಖಾನ್​ ಅಭಿಮಾನಿಗಳು ಕಮೆಂಟ್​ಗಳ ಮೂಲಕ ತಮ್ಮ ಅನಿಸಿಕೆ ತಿಳಿಸಿದ್ದಾರೆ.

ವೈರಲ್​ ಆಗಿರುವ ಎಐ ವಿಡಿಯೋ:

View this post on Instagram

A post shared by Bollyvert AI (@bollyvert.ai)

ರಶ್ಮಿಕಾ ಮಂದಣ್ಣ, ತೃಪ್ತಿ ದಿಮ್ರಿ, ಬಾಬಿ ಡಿಯೋಲ್, ಅನಿಲ್​ ಕಪೂರ್​, ರಣಬೀರ್​ ಕಪೂರ್​ ಮುಂತಾದವರು ‘ಅನಿಮಲ್​’ ಸಿನಿಮಾದಲ್ಲಿ ನಟಿಸಿದ್ದರು. ‘ಅರ್ಜುನ್​ ರೆಡ್ಡಿ’, ‘ಕಬೀರ್​ ಸಿಂಗ್​’ ಮೂಲಕ ತಮ್ಮದೇ ಛಾಪು ಮೂಡಿಸಿದ್ದ ನಿರ್ದೇಶಕ ಸಂದೀಪ್​ ರೆಡ್ಡಿ ವಂಗಾ ಅವರು ‘ಅನಿಮಲ್​’ ಚಿತ್ರದ ಬಳಿಕ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಪ್ರಭಾಸ್​ ಜೊತೆ ಅವರು ಮುಂದಿನ ಸಿನಿಮಾ ಮಾಡಲಿದ್ದಾರೆ. ಆ ಸಿನಿಮಾ ಹೇಗಿರಲಿದೆ ಎಂಬುದನ್ನು ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ.

ಜನರು ‘ಸಿಂಗಂ’ ಅಂದುಕೊಂಡಿದ್ರು; ಆದ್ರೆ ರಣಬೀರ್​ ಕಪೂರ್​ ಆಗಿದ್ದು ಕೇವಲ ‘ಚಿಂಗಂ’

ಇನ್ನು, ಶಾರುಖ್​ ಖಾನ್​ ಅವರು 2023ರಲ್ಲಿ ‘ಪಠಾಣ್​’ ಹಾಗೂ ‘ಜವಾನ್​’ ಸಿನಿಮಾಗಳಿಂದ ಗೆಲುವಿನ ಟ್ರ್ಯಾಕ್​ಗೆ ಮರಳಿದರು. ‘ಡಂಕಿ’ ಸಿನಿಮಾ ಸಾಧಾರಣ ಕಲೆಕ್ಷನ್​ ಮಾಡಿತು. ಅವರ ಹೊಸ ಸಿನಿಮಾ ಘೋಷಣೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಸ್ಕ್ರಿಪ್ಟ್​ ಆಯ್ಕೆಯಲ್ಲಿ ಶಾರುಖ್​ ಖಾನ್​ ಅವರು ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ
ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ತಾವು ಮಾಡಿದ ಶಪಥ ರಿವೀಲ್ ಮಾಡಿದ ವೀರಕಪು
ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ತಾವು ಮಾಡಿದ ಶಪಥ ರಿವೀಲ್ ಮಾಡಿದ ವೀರಕಪು