AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಫೋನ್​ ಭೂತ್​’2 ನೇ ದಿನದ ಬಾಕ್ಸ್ ಆಫೀಸ್​ ಕಲೆಕ್ಷನ್​ ಎಷ್ಟು?

ಕತ್ರಿನಾ ಕೈಫ್​, ಇಶಾನ್​ ಖಟ್ಟರ್​ ಮತ್ತು ಸಿದ್ಧಾಂತ್​ ಚತುರ್ವೇದಿ ನಟಿಸಿರುವ ಪೋನ್​ ಭೂತ್​ ಸಿನಿಮಾವು ಎರಡನೇ ದಿನದಲ್ಲಿ ದೊಡ್ಡ ಮಟ್ಟದ ಕಲೆಕ್ಷನ್​ ಕಾಣದೆ 2.50-3.50 ಕೋಟಿ ರೂಪಾಯಿ ಗಳಿಸಿಕೊಂಡಿದೆ.

‘ಫೋನ್​ ಭೂತ್​'2 ನೇ ದಿನದ ಬಾಕ್ಸ್ ಆಫೀಸ್​ ಕಲೆಕ್ಷನ್​ ಎಷ್ಟು?
ಫೋನ್​ ಭೂತ್​ ಚಿತ್ರದ ಪೋಸ್ಟರ್​
TV9 Web
| Edited By: ಕಿರಣ್ ಹನುಮಂತ್​ ಮಾದಾರ್|

Updated on: Nov 06, 2022 | 4:25 PM

Share

ಶುಕ್ರವಾರ(ನವೆಂಬರ್​ 4) ಹಿಂದಿಯಲ್ಲಿ ಒಂದೇ ದಿನ ಮೂರು ಸಿನಿಮಾಗಳು ರಿಲೀಸ್​ ಆಗಿದ್ದು ಫೋನ್​ ಭೂತ್​(phone bhoot) ಸಿನಿಮಾವು 1400 ಸ್ಕ್ರೀನ್​ಗಳಲ್ಲಿ ಬಿಡುಗಡೆಯಾಗಿತ್ತು. ಚಿತ್ರ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಹೊಂದಿದ್ದ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದರೊಟ್ಟಿಗೆ ಬಾರಿ ವಿಮರ್ಶೆಯೊಂದಿಗೆ ಬಂದಿದ್ದ “ಮಿಲಿ” ಸಿನಿಮಾವು 40-50 ಲಕ್ಷ ರೂಪಾಯಿ ಗಳಿಸಿಕೊಂಡಿದೆ. ಸೋನಾಕ್ಷಿ ಸಿನ್ಹಾ-ಹುಮಾ ಖುರೇಷಿ ಅಭಿನಯದ ‘ಡಬಲ್​ ಎಕ್ಸ್​ಎಲ್’​ ಚಿತ್ರವು ಹೇಳಿಕೊಳ್ಳುವಷ್ಟು ಕಮಾಲ್​ ಮಾಡಿಲ್ಲ. 20-30 ಲಕ್ಷ ರೂಪಾಯಿ ಗಳಿಸುವಲ್ಲಿಯೇ ಸಿಮೀತವಾಯಿತು.

ಫೋನ್​ ಭೂತ್​ ಹಾರರ್​​ ಕಾಮಿಡಿ ಚಿತ್ರವಾಗಿದೆ. ಗುರ್ಮಿತ್ ಸಿಂಗ್​ ನಿರ್ದೇಶಿಸಿದ್ದು ಫರ್ಹಾನ್ ಮತ್ತು ರಿತೇಶ್ ಸಿಧ್ವಾನಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಮೊದಲ ದಿನದ ಕಲೆಕ್ಷನ್​ ವಿಚಾರಕ್ಕೆ ಬಂದರೆ ಫೋನ್​ ಭೂತ್​ 2.5 ಕೋಟಿ ರೂಪಾಯಿ ಗಳಿಸುವಲ್ಲಿ ಯಶಸ್ವಿಯಾಗಿತ್ತು. ಎರಡನೇ ದಿನದ ಕಲೆಕ್ಷನ್​ಲ್ಲಿ ದೊಡ್ಡ ಜಿಗಿತ ಕಾಣುವಲ್ಲಿ ವಿಫಲವಾಗಿದ್ದು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಬಂದಿದೆ.

ಇದನ್ನು ಓದಿ: Breaking: ನಟ ರಣ್​​ಬೀರ್ ಕಪೂರ್ ಆಲಿಯಾ ದಂಪತಿಗೆ ಹೆಣ್ಣು ಮಗು ಜನನ

ಇನ್ನು ಒಂದೇ ದಿನ 3 ಸಿನಿಮಾ ರಿಲೀಸ್​ ಆದ್ದರಿಂದ ಮಿಲಿ ಮತ್ತು ಡಬಲ್​ ಎಕ್ಸ್​ಎಲ್​ ಚಿತ್ರವು ಪ್ರೇಕ್ಷಕರನ್ನ ಸೆಳೆಯಲು ಹರಸಾಹಸ ಪಡುತ್ತಿವೆ. ಇದರ ಮಧ್ಯೆ ಹಿಂದಿಯಲ್ಲಿ ಕಾಂತಾರ ಸಿನಿಮಾವು ಉತ್ತಮ ಪ್ರದರ್ಶನ ಕಾಣುತ್ತಿದೆ. ಫೋನ್​ ಭೂತ್​ ಸಿನಿಮಾವು ಗಳಿಕೆಯಲ್ಲಿ ಮುಂದಿದ್ದು ಮೊದಲ ವಾರ 10 ಕೋಟಿ ರೂಪಾಯಿ ಗಳಿಸುವ ಭರವಸೆಯಲ್ಲಿದ್ದಾರೆ ಚಿತ್ರತಂಡ.

ಕತ್ರಿನಾ ಕೈಫ್ ಸೂರ್ಯವಂಶಿ ಸಿನಿಮಾವು ಸೂಪರ್​ ಹಿಟ್​ ಆಗಿತ್ತು ಆದರೆ ಫೋನ್​ ಭೂತ್​ ಸಿನಿಮಾವು ಅಷ್ಟೋಂದು ದೊಡ್ಡ ಗಳಿಕೆ ಕಾಣುತ್ತಿಲ್ಲ. ತಮ್ಮ​ ಮುಂದಿನ ಸಿನಿಮಾ ಟೈಗರ್​-3 ಯಲ್ಲಿ ಸಲ್ಮಾನ್​ ಖಾನ್​ ಜೊತೆ ಕಮ್​ಬ್ಯಾಕ್​ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಈ ಸಿನಿಮಾವು ದೊಡ್ಡ ಮಟ್ಟದ ಹೈಪ್​ ಕ್ರಿಯೇಟ್​ ಮಾಡಿದ್ದು 2023ಎಪ್ರಿಲ್​ನಲ್ಲಿ ಬರುವ ನಿರೀಕ್ಷೆಯಿದೆ.

ಮತ್ತಷ್ಟು ಮನರಂಜನಾ ಸುದ್ಧಿ ನೋಡಲು ಇಲ್ಲಿ ಕ್ಲಿಕ್​ ಮಾಡಿ

Follow Us
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಮೂರೇ ದಿನಗಳಲ್ಲಿ ಕೆಆರ್​ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಮೂರೇ ದಿನಗಳಲ್ಲಿ ಕೆಆರ್​ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್