AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rishab Shetty: ಬಾಲಿವುಡ್ ಸಿನಿಮಾ ​ ಸೋಲುತ್ತಿರಲು ಕಾರಣ ಏನು? ಎಂದು ಹೇಳಿದ ರಿಷಬ್​ ಶೆಟ್ಟಿ

ರಿಷಬ್​ ಶೆಟ್ಟಿ ಅವರ ಪ್ರಕಾರ ಬಾಲಿವುಡ್​ (bollywood)ಸಿನಿಮಾ ಅತಿಯಾಗಿ ಪಾಶ್ಚಿಮಾತ್ಯ ಪ್ರಭಾವದಿಂದ ಕೂಡಿದೆ. ಇದನ್ನು ಬಿಟ್ಟು ಸ್ಥಳೀಯ ಪ್ರದೇಶದ ಜನ ಸಾಮಾನ್ಯರ ಬದುಕಿನ ಬಗ್ಗೆ ತಿಳಿದಿರುವ ಕಥೆಗಳನ್ನ ಜನರ ಬಳಿ ಕೊಂಡೊಯ್ಯಬೇಕು.

Rishab Shetty: ಬಾಲಿವುಡ್ ಸಿನಿಮಾ ​ ಸೋಲುತ್ತಿರಲು ಕಾರಣ ಏನು? ಎಂದು ಹೇಳಿದ ರಿಷಬ್​ ಶೆಟ್ಟಿ
ರಿಷಬ್
TV9 Web
| Edited By: |

Updated on: Nov 06, 2022 | 11:33 AM

Share

ರಿಷಬ್​ ಶೆಟ್ಟಿ ಅವರ ಪ್ರಕಾರ ಬಾಲಿವುಡ್(bollywood)ಸಿನಿಮಾ ಅತಿಯಾಗಿ ಪಾಶ್ಚಿಮಾತ್ಯ ಪ್ರಭಾವದಿಂದ ಕೂಡಿದೆ. ಇದನ್ನು ಬಿಟ್ಟು ಸ್ಥಳೀಯ ಪ್ರದೇಶದ ಜನ ಸಾಮಾನ್ಯರ ಬದುಕಿನ ಬಗ್ಗೆ ತಿಳಿದಿರುವ ಕಥೆಗಳನ್ನ ಜನರ ಬಳಿ ಕೊಂಡೊಯ್ಯಬೇಕು ಇದರಿಂದ ಸ್ಥಳೀಯ ಪ್ರೇಕ್ಷಕರನ್ನು ಸೆಳೆಯಲು ಸಾಧ್ಯ ಇದನ್ನು ಇಂದಿನ ಬಾಲಿವುಡ್​ ನಿರ್ಮಾಪಕರು ಮರೆತುಬಿಟ್ಟಿದ್ದಾರೆ ಎಂದಿದ್ದಾರೆ.

ಕಾಂತಾರ (kantara) ಒಂದು ಕಾಲ್ಪನಿಕ ಕಥೆಯಾಗಿದ್ದು ಪ್ರಾದೇಶಿಕ ಜನರ ಜೀವನವನ್ನಾಧರಿಸಿದೆ ಇನ್ನು ಈ ಸಿನಿಮಾವನ್ನು 16 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು ಭಾರತೀಯ ಸಿನಿಮಾದಲ್ಲಿ 2022 ರ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳಲ್ಲಿ ಕಾಂತಾರ ಕೂಡ ಒಂದಾಗಿದೆ.

ಕಾಂತಾರ ಸಿನಿಮಾ ಈಗಾಗಲೇ ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು ಈಗಾಗಲೇ 325ಕೋಟಿಗೂ ಅಧಿಕ ರೂಪಾಯಿ ಗಳಿಸಿದೆ ಹಿಂದಿಯಲ್ಲಿ 53ಕೋಟಿ ರೂಪಾಯಿ ಗಳಿಸುವುದರೊಂದಿಗೆ ಉತ್ತಮ ಪ್ರದರ್ಶನ ನೀಡುತ್ತಿದೆ. ಜೊತೆಗೆ ಇತರೆ ಭಾಷೆಗಳಲ್ಲಿ ರಿಮೇಕ್​ ಮಾಡುವ ಮಾತುಕತೆಗಳು ಕೇಳಿಬರುತ್ತಿವೆ ಇದರ ಬಗ್ಗೆ ರಿಷಬ್​ ಊಹೆ ಮಾಡಲಾರೆ ಎನ್ನುತ್ತಾರೆ.

ನಾವು ‘ಸಿನಿಮಾವನ್ನು ಪ್ರೇಕ್ಷಕರಿಗಾಗಿ ನಿರ್ಮಿಸುತ್ತೇವೆ ನಮಗಾಗಿ ಅಲ್ಲ. ನಾವು ಅವರ ಭಾವನೆಗಳನ್ನ ಮನಸ್ಸಿನಲ್ಲಿಟ್ಟುಕೊಂಡು ಅವರ ಮೌಲ್ಯಗಳು ಮತ್ತು ಜೀವನ ವಿಧಾನಗಳು ಯಾವುವು ಎಂಬುದನ್ನು ನೋಡಬೇಕಾಗಿದೆ. ಈಗ ಹೆಚ್ಚು ವಿದೇಶಿ ವ್ಯಾಮೋಹ ಮತ್ತು ಹಾಲಿವುಡ್ ಪ್ರಭಾವ ಅದೇ ತರಹದ ಸಿನಿಮಾ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅದನ್ನು ನಿವೇಕೆ ಮಾಡುತ್ತಿರಿ? ಜನರು ಈಗಾಗಲೇ ಅಂತಹ ಸಿನಿಮಾಗಳನ್ನು ನೋಡಿದ್ದಾರೆ ಎಂದು ಹೇಳುತ್ತಾರೆ.

ಕಾಂತಾರ ಸಿನಿಮಾವನ್ನು ನಾನು ನೋಡುವ ದೃಷ್ಟಿ ಕೋನದಿಂದ ನೋಡಿದರೆ ಎಲ್ಲಾ ಸಿನಿಮಾದಲ್ಲೂ ಇರುವ ಹಾಗೆ ಹೀರೋ, ವಿಲನ್​, ರೋಮ್ಯಾನ್ಸ್ ಇದೆ. ಇದರ ಜೊತೆ ನಾನು ನೋಡಿದ ನನ್ನ ಹಳ್ಳಿಯ ಕಥೆಯನ್ನು ಪ್ರಸ್ತುತ ಪಡಿಸಿದ್ದೇನೆ ಬಹುಶಃ ನಿರ್ಮಾಪಕರು ತಮ್ಮ ಪ್ರದೇಶದಲ್ಲಿನ ಸಂಸ್ರ್ಕತಿಯನ್ನ ಕಂಡುಕೊಂಡ ಸಿನಿಮಾ ಮಾಡಿದರೆ ಅದು ಗೆಲ್ಲಬಹುದು ಆದರೂ ಅದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

ಇತ್ತಿಚೀನ ದಿನಗಳಲ್ಲಿ ಭಾರತೀಯತೆಯೊಂದಿಗೆ ಸಂಪರ್ಕ ಹೊಂದಿದ ಬಹುತೇಕ ಸಿನಿಮಾಗಳು ಯಶಸ್ಸು ಕಂಡಿವೆ ಗಂಗೂಬಾಯಿ ಕಥಿಯಾವಾಡಿ, ದಿ ಕಾಶ್ಮೀರಿ ಪೈಲ್ಸ್​, ಭೂಲ್​ ಭುಲೈಯಾ-2 ಇವುಗಳು ಹೆಚ್ಚಾಗಿ ಪ್ರಾದೇಶಿಕತೆಯನ್ನು ಸಾರುತ್ತವೆ ಅದನ್ನೇ ಜನರ ಬಳಿಗೆ ಕೊಂಡೊಯ್ಯಬೇಕು ಎಂದು ಸಿನಿಮಾ ನಿರ್ಮಾಪಕರಿಗೆ ಹೇಳಿದ್ದಾರೆ.

ಮತ್ತಷ್ಟು ಮನರಂಜನಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್