AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rishab Shetty: ಬಾಲಿವುಡ್ ಸಿನಿಮಾ ​ ಸೋಲುತ್ತಿರಲು ಕಾರಣ ಏನು? ಎಂದು ಹೇಳಿದ ರಿಷಬ್​ ಶೆಟ್ಟಿ

ರಿಷಬ್​ ಶೆಟ್ಟಿ ಅವರ ಪ್ರಕಾರ ಬಾಲಿವುಡ್​ (bollywood)ಸಿನಿಮಾ ಅತಿಯಾಗಿ ಪಾಶ್ಚಿಮಾತ್ಯ ಪ್ರಭಾವದಿಂದ ಕೂಡಿದೆ. ಇದನ್ನು ಬಿಟ್ಟು ಸ್ಥಳೀಯ ಪ್ರದೇಶದ ಜನ ಸಾಮಾನ್ಯರ ಬದುಕಿನ ಬಗ್ಗೆ ತಿಳಿದಿರುವ ಕಥೆಗಳನ್ನ ಜನರ ಬಳಿ ಕೊಂಡೊಯ್ಯಬೇಕು.

Rishab Shetty: ಬಾಲಿವುಡ್ ಸಿನಿಮಾ ​ ಸೋಲುತ್ತಿರಲು ಕಾರಣ ಏನು? ಎಂದು ಹೇಳಿದ ರಿಷಬ್​ ಶೆಟ್ಟಿ
ರಿಷಬ್
TV9 Web
| Edited By: |

Updated on: Nov 06, 2022 | 11:33 AM

Share

ರಿಷಬ್​ ಶೆಟ್ಟಿ ಅವರ ಪ್ರಕಾರ ಬಾಲಿವುಡ್(bollywood)ಸಿನಿಮಾ ಅತಿಯಾಗಿ ಪಾಶ್ಚಿಮಾತ್ಯ ಪ್ರಭಾವದಿಂದ ಕೂಡಿದೆ. ಇದನ್ನು ಬಿಟ್ಟು ಸ್ಥಳೀಯ ಪ್ರದೇಶದ ಜನ ಸಾಮಾನ್ಯರ ಬದುಕಿನ ಬಗ್ಗೆ ತಿಳಿದಿರುವ ಕಥೆಗಳನ್ನ ಜನರ ಬಳಿ ಕೊಂಡೊಯ್ಯಬೇಕು ಇದರಿಂದ ಸ್ಥಳೀಯ ಪ್ರೇಕ್ಷಕರನ್ನು ಸೆಳೆಯಲು ಸಾಧ್ಯ ಇದನ್ನು ಇಂದಿನ ಬಾಲಿವುಡ್​ ನಿರ್ಮಾಪಕರು ಮರೆತುಬಿಟ್ಟಿದ್ದಾರೆ ಎಂದಿದ್ದಾರೆ.

ಕಾಂತಾರ (kantara) ಒಂದು ಕಾಲ್ಪನಿಕ ಕಥೆಯಾಗಿದ್ದು ಪ್ರಾದೇಶಿಕ ಜನರ ಜೀವನವನ್ನಾಧರಿಸಿದೆ ಇನ್ನು ಈ ಸಿನಿಮಾವನ್ನು 16 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು ಭಾರತೀಯ ಸಿನಿಮಾದಲ್ಲಿ 2022 ರ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳಲ್ಲಿ ಕಾಂತಾರ ಕೂಡ ಒಂದಾಗಿದೆ.

ಕಾಂತಾರ ಸಿನಿಮಾ ಈಗಾಗಲೇ ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು ಈಗಾಗಲೇ 325ಕೋಟಿಗೂ ಅಧಿಕ ರೂಪಾಯಿ ಗಳಿಸಿದೆ ಹಿಂದಿಯಲ್ಲಿ 53ಕೋಟಿ ರೂಪಾಯಿ ಗಳಿಸುವುದರೊಂದಿಗೆ ಉತ್ತಮ ಪ್ರದರ್ಶನ ನೀಡುತ್ತಿದೆ. ಜೊತೆಗೆ ಇತರೆ ಭಾಷೆಗಳಲ್ಲಿ ರಿಮೇಕ್​ ಮಾಡುವ ಮಾತುಕತೆಗಳು ಕೇಳಿಬರುತ್ತಿವೆ ಇದರ ಬಗ್ಗೆ ರಿಷಬ್​ ಊಹೆ ಮಾಡಲಾರೆ ಎನ್ನುತ್ತಾರೆ.

ನಾವು ‘ಸಿನಿಮಾವನ್ನು ಪ್ರೇಕ್ಷಕರಿಗಾಗಿ ನಿರ್ಮಿಸುತ್ತೇವೆ ನಮಗಾಗಿ ಅಲ್ಲ. ನಾವು ಅವರ ಭಾವನೆಗಳನ್ನ ಮನಸ್ಸಿನಲ್ಲಿಟ್ಟುಕೊಂಡು ಅವರ ಮೌಲ್ಯಗಳು ಮತ್ತು ಜೀವನ ವಿಧಾನಗಳು ಯಾವುವು ಎಂಬುದನ್ನು ನೋಡಬೇಕಾಗಿದೆ. ಈಗ ಹೆಚ್ಚು ವಿದೇಶಿ ವ್ಯಾಮೋಹ ಮತ್ತು ಹಾಲಿವುಡ್ ಪ್ರಭಾವ ಅದೇ ತರಹದ ಸಿನಿಮಾ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅದನ್ನು ನಿವೇಕೆ ಮಾಡುತ್ತಿರಿ? ಜನರು ಈಗಾಗಲೇ ಅಂತಹ ಸಿನಿಮಾಗಳನ್ನು ನೋಡಿದ್ದಾರೆ ಎಂದು ಹೇಳುತ್ತಾರೆ.

ಕಾಂತಾರ ಸಿನಿಮಾವನ್ನು ನಾನು ನೋಡುವ ದೃಷ್ಟಿ ಕೋನದಿಂದ ನೋಡಿದರೆ ಎಲ್ಲಾ ಸಿನಿಮಾದಲ್ಲೂ ಇರುವ ಹಾಗೆ ಹೀರೋ, ವಿಲನ್​, ರೋಮ್ಯಾನ್ಸ್ ಇದೆ. ಇದರ ಜೊತೆ ನಾನು ನೋಡಿದ ನನ್ನ ಹಳ್ಳಿಯ ಕಥೆಯನ್ನು ಪ್ರಸ್ತುತ ಪಡಿಸಿದ್ದೇನೆ ಬಹುಶಃ ನಿರ್ಮಾಪಕರು ತಮ್ಮ ಪ್ರದೇಶದಲ್ಲಿನ ಸಂಸ್ರ್ಕತಿಯನ್ನ ಕಂಡುಕೊಂಡ ಸಿನಿಮಾ ಮಾಡಿದರೆ ಅದು ಗೆಲ್ಲಬಹುದು ಆದರೂ ಅದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

ಇತ್ತಿಚೀನ ದಿನಗಳಲ್ಲಿ ಭಾರತೀಯತೆಯೊಂದಿಗೆ ಸಂಪರ್ಕ ಹೊಂದಿದ ಬಹುತೇಕ ಸಿನಿಮಾಗಳು ಯಶಸ್ಸು ಕಂಡಿವೆ ಗಂಗೂಬಾಯಿ ಕಥಿಯಾವಾಡಿ, ದಿ ಕಾಶ್ಮೀರಿ ಪೈಲ್ಸ್​, ಭೂಲ್​ ಭುಲೈಯಾ-2 ಇವುಗಳು ಹೆಚ್ಚಾಗಿ ಪ್ರಾದೇಶಿಕತೆಯನ್ನು ಸಾರುತ್ತವೆ ಅದನ್ನೇ ಜನರ ಬಳಿಗೆ ಕೊಂಡೊಯ್ಯಬೇಕು ಎಂದು ಸಿನಿಮಾ ನಿರ್ಮಾಪಕರಿಗೆ ಹೇಳಿದ್ದಾರೆ.

ಮತ್ತಷ್ಟು ಮನರಂಜನಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ತಮ್ಮ ಕುಟುಂಬದ ಮಹಿಳೆಯರು ಮಾತ್ರ ಉದ್ಧಾರವಾಗಬೇಕೆಂಬ ಕುತಂತ್ರ; ಮೋದಿ ಚಾಟಿ
ತಮ್ಮ ಕುಟುಂಬದ ಮಹಿಳೆಯರು ಮಾತ್ರ ಉದ್ಧಾರವಾಗಬೇಕೆಂಬ ಕುತಂತ್ರ; ಮೋದಿ ಚಾಟಿ
ಸಂಪುಟ ಪುನಾರಚನೆಯ ಬಗ್ಗೆ ಬೇಲೂರು ಗೋಪಾಲಕೃಷ್ಣ ಮಹತ್ವದ ಸುಳಿವು!
ಸಂಪುಟ ಪುನಾರಚನೆಯ ಬಗ್ಗೆ ಬೇಲೂರು ಗೋಪಾಲಕೃಷ್ಣ ಮಹತ್ವದ ಸುಳಿವು!
ಕೇವಲ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಅಭಿಷೇಕ್ ಶರ್ಮಾ
ಕೇವಲ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಅಭಿಷೇಕ್ ಶರ್ಮಾ
ರಾಹುಲ್​ ಗಾಂಧಿ ಪೆದ್ದು ಪೆದ್ದಾಗಿ ಮಾತನಾಡುತ್ತಾರೆ": ಪ್ರಹ್ಲಾದ್ ಜೋಶಿ
ರಾಹುಲ್​ ಗಾಂಧಿ ಪೆದ್ದು ಪೆದ್ದಾಗಿ ಮಾತನಾಡುತ್ತಾರೆ
ಪ್ರಧಾನಿ ಮೋದಿ ದೇಶದ ಜನರನ್ನು ಉದ್ದೇಶಿಸಿ ಭಾಷಣ ನೇರಪ್ರಸಾರ
ಪ್ರಧಾನಿ ಮೋದಿ ದೇಶದ ಜನರನ್ನು ಉದ್ದೇಶಿಸಿ ಭಾಷಣ ನೇರಪ್ರಸಾರ
ಹಾರ್ಮುಜ್ ಜಲಸಂಧಿ ದಾಟುತ್ತಿದ್ದ ಭಾರತದ 2 ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ
ಹಾರ್ಮುಜ್ ಜಲಸಂಧಿ ದಾಟುತ್ತಿದ್ದ ಭಾರತದ 2 ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ
ಆರ್​​ಸಿಬಿ ಸೋಲಿಗೆ ಕಾರಣರಾದ ಕನ್ನಡಿಗ ಕೆಎಲ್ ರಾಹುಲ್
ಆರ್​​ಸಿಬಿ ಸೋಲಿಗೆ ಕಾರಣರಾದ ಕನ್ನಡಿಗ ಕೆಎಲ್ ರಾಹುಲ್
W,W,W.. ಒಂದೇ ಓವರ್​ನಲ್ಲಿ 2 ವಿಕೆಟ್ ಉರುಳಿಸಿದ ಭುವಿ
W,W,W.. ಒಂದೇ ಓವರ್​ನಲ್ಲಿ 2 ವಿಕೆಟ್ ಉರುಳಿಸಿದ ಭುವಿ
ಕುರುಬ ಸಮುದಾಯದ ಆಕ್ರೋಶ ಬೆನ್ನಲ್ಲೇ ವಿಷಾದ ವ್ಯಕ್ತಪಡಿಸಿದ ಬಿಜೆಪಿ ಶಾಸಕ
ಕುರುಬ ಸಮುದಾಯದ ಆಕ್ರೋಶ ಬೆನ್ನಲ್ಲೇ ವಿಷಾದ ವ್ಯಕ್ತಪಡಿಸಿದ ಬಿಜೆಪಿ ಶಾಸಕ
ಸಿದ್ದರಾಮಯ್ಯ ಟಗರು ಇದ್ದಂತೆ; ಯಾವಾಗ ಗುದ್ದಬೇಕೋ ಗುದ್ದುತ್ತದೆ: ಮಹದೇವಪ್ಪ
ಸಿದ್ದರಾಮಯ್ಯ ಟಗರು ಇದ್ದಂತೆ; ಯಾವಾಗ ಗುದ್ದಬೇಕೋ ಗುದ್ದುತ್ತದೆ: ಮಹದೇವಪ್ಪ