AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಶಾಂತ್ ಸಂಬರ್ಗಿ, ಅನುಪಮಾ ಗೌಡಗೆ ಸಖತ್ ಆಗಿ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್

ಪ್ರಶಾಂತ್ ಸಂಬರ್ಗಿ ಅವರನ್ನು ಕನ್ನಡ ಪರ ಹೋರಾಟಗಾರರಿಗೆ ಇತ್ತೀಚೆಗೆ ಅವಮಾನ ಮಾಡಿದ್ದಾರೆ ಎಂಬ ಆರೋಪ ಬಂತು. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಯಿತು. ಈ ವಿಚಾರಕ್ಕೆ ಪ್ರಶಾಂತ್ ಸಂಬರ್ಗಿ ಅವರಿಗೆ ಕಿಚ್ಚ ಸುದೀಪ್ ಅವರು ಖಡಕ್ ಆಗಿ ಎಚ್ಚರಿಕೆ ನೀಡಿದ್ದಾರೆ.

ಪ್ರಶಾಂತ್ ಸಂಬರ್ಗಿ, ಅನುಪಮಾ ಗೌಡಗೆ ಸಖತ್ ಆಗಿ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Nov 05, 2022 | 9:38 PM

Share

ತಪ್ಪು ಮಾಡಿದ ಸ್ಪರ್ಧಿಗಳಿಗೆ ವೀಕೆಂಡ್​ನಲ್ಲಿ ಕಿಚ್ಚ ಸುದೀಪ್ (Kichcha Sudeep) ಅವರು ಕ್ಲಾಸ್ ತೆಗೆದುಕೊಳ್ಳುತ್ತಾರೆ. ಅವರು ಸಿಟ್ಟಲ್ಲಿ ಖಡಕ್ ಎಚ್ಚರಿಕೆ ನೀಡೋದು ವೀಕ್ಷಕರಿಗೆ ಇಷ್ಟ ಆಗುತ್ತದೆ. ಈ ವಾರ ಕಿಚ್ಚ ಸುದೀಪ್ ಅವರು ಅನುಪಮಾ ಗೌಡ ಹಾಗೂ ಪ್ರಶಾಂತ್ ಸಂಬರ್ಗಿಗೆ ಸಖತ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಇಬ್ಬರಿಗೂ ಅವರು ಹಲವು ವಿಚಾರಕ್ಕೆ ಪಾಠ ಮಾಡಿದ್ದಾರೆ. ಶನಿವಾರದ (ನವೆಂಬರ್ 5) ಎಪಿಸೋಡ್​ನಲ್ಲಿ ಸುದೀಪ್ ಖಡಕ್ ಎಚ್ಚರಿಕೆ ಹೈಲೈಟ್ ಆಗಿದೆ.

ಪ್ರಶಾಂತ್​ಗೆ ಪಾಠ

ಪ್ರಶಾಂತ್ ಸಂಬರ್ಗಿ ಅವರುಇತ್ತೀಚೆಗೆ ಕನ್ನಡ ಪರ ಹೋರಾಟಗಾರರಿಗೆ  ಅವಮಾನ ಮಾಡಿದ್ದಾರೆ ಎಂಬ ಆರೋಪ ಬಂತು. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಯಿತು. ಈ ವಿಚಾರಕ್ಕೆ ಪ್ರಶಾಂತ್ ಸಂಬರ್ಗಿ ಅವರಿಗೆ ಕಿಚ್ಚ ಸುದೀಪ್ ಅವರು ಖಡಕ್ ಆಗಿ ಎಚ್ಚರಿಕೆ ನೀಡಿದ್ದಾರೆ. ‘ಕೋಪದಲ್ಲಿ ಒಂದು ಮಾತು ಬರುತ್ತೆ, ಹೋಗುತ್ತೆ. ಆದರೆ, ಅದು ವೀಕ್ಷಕರ ಭಾವನೆಗೆ ನೋವಾಗಬಾರದು. ನೀವು ಮನೆಯ ಒಳಗಿನ ವಿಚಾರ ಚರ್ಚೆ ಮಾಡಿ ತಪ್ಪಿಲ್ಲ. ಆದರೆ, ಹೊರಗಿನ ವಿಚಾರ ಎಳೆದು ತರಬೇಡಿ. ಮನೆ ಹೊರಗೆ ನಿಮ್ಮ ಮಧ್ಯೆ ಏನೇ ಇರಬಹುದು. ಆದರೆ, ಇದನ್ನು ಒಳಗೆ ಚರ್ಚಿಸಬೇಡಿ’ ಎಂದು ಎಚ್ಚರಿಕೆ ನೀಡಿದ್ದಾರೆ ಸುದೀಪ್.

ಅನುಪಮಾ ಗೌಡ ಸುದೀಪ್ ಪಾಠ

ಅನುಪಮಾ ಗೌಡ ಅವರು ಈ ವಾರ ಕ್ಯಾಪ್ಟನ್ ಆಗಿದ್ದರು. ಈ ವೇಳೆ ಅವರು ಫೇವರಿಸಂ ಮಾಡಿದ್ದಾರೆ ಎಂದು ಕೆಲವರು ಆರೋಪ ಮಾಡಿದ್ದರು. ಇದಕ್ಕೆ ಅನುಪಮಾ ಗೌಡ ವಿರೋಧ ವ್ಯಕ್ತಪಡಿಸಿದ್ದರು. ನನ್ನಿಂದ ಆ ರೀತಿ ಆಗಿಲ್ಲ ಎಂದು ಅನುಪಮಾ ಗೌಡ ಹೇಳುತ್ತಲೇ ಬಂದಿದ್ದರು. ಇನ್ನು, ಬಿಗ್ ಬಾಸ್ ಮನೆಯಲ್ಲಿ ಈ ವಾರದ ಟಾಸ್ಕ್​​ನಲ್ಲಿ ಅನುಪಮಾ ತಮ್ಮದೇ ರೂಲ್ಸ್ ಮಾಡಿದ್ದಾರೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದಕ್ಕೆ ಸುದೀಪ್ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

‘ಮೊದಲು ನೀವು ಅಪೀಲ್ ಮಾಡಿ ಅಂದಾಗ ಮಾಡಿಲ್ಲ. ಅರುಣ್ ಅವರು ಕೇಳಿದಾಗ ನೀವು ಅಪೀಲ್ ಮಾಡಿದಿರಿ. ಒಬ್ಬರಿಗೊಂದು ಮಾಡಿದ್ರಿ, ಮತ್ತೊಬ್ಬರಿಗೊಂದು ಮಾಡಿದ್ರಿ ಎಂದು ಅನಿಸಿಯೇ ಅನಿಸುತ್ತದೆ’ ಎಂದು ಸುದೀಪ್ ಹೇಳಿದರು. ಅನುಪಮಾಗೆ ತಾವು ಮಾಡಿದ್ದು ತಪ್ಪು ಎನ್ನುವ ವಿಚಾರ ಗೊತ್ತಾಗಿದೆ.

ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ
ಮುಂಬೈನಲ್ಲಿ ಟೆಸ್ಲಾ ಕಾರು ಚಲಾಯಿಸಿದ ಡಿಸಿಎಂ ಏಕನಾಥ್ ಶಿಂಧೆ
ಮುಂಬೈನಲ್ಲಿ ಟೆಸ್ಲಾ ಕಾರು ಚಲಾಯಿಸಿದ ಡಿಸಿಎಂ ಏಕನಾಥ್ ಶಿಂಧೆ
ಏರೋಸ್ಪೇಸ್ ಯೋಜನೆ ಬಗ್ಗೆ ಸಿಎಂ ಹೇಳಿಕೆ ಗೊಂದಲಮಯ: ವಿಜಯೇಂದ್ರ
ಏರೋಸ್ಪೇಸ್ ಯೋಜನೆ ಬಗ್ಗೆ ಸಿಎಂ ಹೇಳಿಕೆ ಗೊಂದಲಮಯ: ವಿಜಯೇಂದ್ರ
ಮನೆ ಕಟ್ಟಿಸಿಕೊಟ್ಟಿಲ್ಲ: KGF​ ಬಾಬು ಮನೆ ಮುಂದೆ ಜನರ ಪ್ರತಿಭಟನೆ
ಮನೆ ಕಟ್ಟಿಸಿಕೊಟ್ಟಿಲ್ಲ: KGF​ ಬಾಬು ಮನೆ ಮುಂದೆ ಜನರ ಪ್ರತಿಭಟನೆ
ಬೀಗರನ್ನು ಒಮ್ಮೆ ನಂಬಿ ಮೋಸ ಹೋಗಿದ್ದೇನೆ, ಪುನಃ ನಂಬಲಾರೆ: ಕೆಜಿಎಫ್ ಬಾಬು
ಬೀಗರನ್ನು ಒಮ್ಮೆ ನಂಬಿ ಮೋಸ ಹೋಗಿದ್ದೇನೆ, ಪುನಃ ನಂಬಲಾರೆ: ಕೆಜಿಎಫ್ ಬಾಬು
ಯುವಕನಿಗೆ ಮಹಿಳೆಯ ವಯಸ್ಸು ಗೊತ್ತಾಗದಿರೋದು ಅಚ್ಚರಿಯ ಸಂಗತಿ
ಯುವಕನಿಗೆ ಮಹಿಳೆಯ ವಯಸ್ಸು ಗೊತ್ತಾಗದಿರೋದು ಅಚ್ಚರಿಯ ಸಂಗತಿ
ಕೇಸ್ ದಾಖಲಾಗಿರುವುದು ರಾಜಕೀಯ ಪಿತೂರಿಯ ಭಾಗ: ಭೈರತಿ ಬಸವರಾಜ
ಕೇಸ್ ದಾಖಲಾಗಿರುವುದು ರಾಜಕೀಯ ಪಿತೂರಿಯ ಭಾಗ: ಭೈರತಿ ಬಸವರಾಜ
ಕುತ್ತಿಗೆಗೆ ನಾಗರಹಾವು ಸುತ್ತಿಕೊಂಡು ಬೈಕ್ ಓಡಿಸುತ್ತಿದ್ದ ವ್ಯಕ್ತಿ ಸಾವು
ಕುತ್ತಿಗೆಗೆ ನಾಗರಹಾವು ಸುತ್ತಿಕೊಂಡು ಬೈಕ್ ಓಡಿಸುತ್ತಿದ್ದ ವ್ಯಕ್ತಿ ಸಾವು
ಧರ್ಮದ ಹೆಸರಲ್ಲಿ ದ್ವೇಷಸಾಧನೆ ಸಲ್ಲದು: ಶ್ರೀಶೈಲ ಜಗದ್ಗುರುಗಳು
ಧರ್ಮದ ಹೆಸರಲ್ಲಿ ದ್ವೇಷಸಾಧನೆ ಸಲ್ಲದು: ಶ್ರೀಶೈಲ ಜಗದ್ಗುರುಗಳು