AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತ್ರಿ ಈಡಿಯಟ್ಸ್ ಖ್ಯಾತಿಯ ಸಹನಟರಿಬ್ಬರಿಗೂ ಕೊರೊನಾ ಸೋಂಕು; ಆದರೆ ನಟ ಮಾಧವನ್ ಹೇಳಿದ್ದೇನು ಗೊತ್ತಾ?

Aamir Khan, Madhavan: ಈ ಬಗ್ಗೆ ಮಾಧವನ್ ಟ್ವೀಟ್ ಮಾಡಿದ್ದು, ತಾವಿಬ್ಬರೂ ತ್ರಿ ಈಡಿಯಟ್ಸ್ ಸಿನಿಮಾದಲ್ಲಿ ಅಭಿನಯಿಸಿದ್ದ ಚಿತ್ರದ ತುಣುಕೊಂದನ್ನು ಹಂಚಿಕೊಂಡಿದ್ದಾರೆ.

ತ್ರಿ ಈಡಿಯಟ್ಸ್ ಖ್ಯಾತಿಯ ಸಹನಟರಿಬ್ಬರಿಗೂ ಕೊರೊನಾ ಸೋಂಕು; ಆದರೆ ನಟ ಮಾಧವನ್ ಹೇಳಿದ್ದೇನು ಗೊತ್ತಾ?
ಅಮಿರ್​ ಖಾನ್​ ಮತ್ತು ಮಾಧವನ್​ ಇಬ್ಬರಿಗೂ ಕೊರೊನಾ ಸೋಂಕು
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Mar 25, 2021 | 5:42 PM

Share

ತ್ರಿ ಈಡಿಯಟ್ಸ್ ಎಂಬ ಸೊಗಸಾದ ಸಿನಿಮಾದಲ್ಲಿ ಸಹನಟರಾಗಿ ಅಭಿನಯಿಸಿದ್ದ ಖ್ಯಾತನಾಮರಾದ ಆಮಿರ್​ ಖಾನ್​ ಮತ್ತು ಮಾಧವನ್​ ಇಬ್ಬರಿಗೂ ಕೊರೊನಾ ಸೋಂಕು ತಗುಲಿದೆ.

ಮೊದಲು ನಟ ಆಮಿರ್​ ಖಾನ್​ಗೆ ಕೊರೊನಾ ಮಹಾಮಾರಿ ಕಾಡತೊಡಗಿತು. ಒಂದು ದಿನದ ಬಳಿಕ ಇದೀಗ ಮಾಧವನ್ ಅವರಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಈ ಬಗ್ಗೆ ಮಾಧವನ್ ಟ್ವೀಟ್ ಮಾಡಿದ್ದು, ತಾವಿಬ್ಬರೂ ತ್ರಿ ಈಡಿಯಟ್ಸ್ ಸಿನಿಮಾದಲ್ಲಿ ಅಭಿನಯಿಸಿದ್ದ ಚಿತ್ರದ ತುಣುಕೊಂದನ್ನು ಹಂಚಿಕೊಂಡಿದ್ದಾರೆ.

ನಟ ಮಾಧವನ್ ಹಾಸ್ಯ ಧಾಟಿಯಲ್ಲಿಯೇ ತಮಗೆ ಕೊರೊನಾ ತಗುಲಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಮೇರು ನಟ ಆಮಿರ್​ ಖಾನ್​ ಜೊತೆ ತಾವು ತ್ರಿ ಈಡಿಯಟ್ಸ್ ಸಿನಿಮಾದಲ್ಲಿ ನಟಿಸಿದ್ದನ್ನು ಸ್ಮರಿಸುತ್ತಾ.. ಆ ಸಿನಿಮಾದ ಚಿತ್ರವೊಂದನ್ನು ಬಳಸಿಕೊಂಡು ಟ್ವೀಟ್​ ಮಾಡಿ, ತಮಗೆ ಕೊರೊನಾ ಬಂದಿರುವುದನ್ನು ಘೋಷಿಸಿದ್ದಾರೆ.

ಜೊತೆಗೆ, ಆ ಸಿನಿಮಾದಲ್ಲಿ ತಮ್ಮನ್ನು ಬಹುವಾಗಿ ಕಾಡುವ ಎಂಜಿನಿಯರಿಂಗ್ ಕಾಲೇಜಿನ ಪ್ರಿನ್ಸಿಪಾಲ್​ ಅಥವಾ ಆ ಪ್ರಿನ್ಸಿಪಾಲರನ್ನು ಬಹುವಾಗಿ ಕಾಡುವ ರಾಂಚೋ ಮತ್ತು ಫರ್ಹಾ ಜೋಡಿ ಬಗ್ಗೆ ಹೇಳುತ್ತಾ, ಸಿನಿಮಾದಲ್ಲಿ ಆ ಪ್ರಿನ್ಸಿಪಾಲರನ್ನು ವೈರಸ್ ಎಂದು ಉಲ್ಲೇಖಿಸುವುದನ್ನು ಸ್ಮರಿಸಿದ್ದಾರೆ. ಫರ್ಹಾ ಅಂದ್ರೆ ತಾನು, ರಾಂಚೋನನ್ನು ಅನುಸರಿಸಲೇಬೇಕು. ಮತ್ತು ವೈರಸ್ ನಮ್ಮಿಬ್ಬರ ಹಿಂದೆ ಸುಳಿದಾಡಲೇಬೇಕು.

ಇಲ್ಲೂ ಹಾಗೆಯೇ ಆಗಿದೆ ಎಂದು ಮಾಧವನ್​ ಹೇಳಿದ್ದಾರಾದರೂ ಕೊನೆಯಲ್ಲಿ.. ತ್ರಿ ಈಡಿಯಟ್ಸ್ ಸಿನಿಮಾದ ಕ್ಯಾಚಿ ಟ್ಯಾಗ್​ ಲೈನ್​ ಆದ ಆಲ್​ ಈಸ್ ವೆಲ್ ಎಂದು ಹೇಳುತ್ತಾ.​. ಸದ್ಯದಲ್ಲೇ ಕೋವಿಡ್ ಸಹ ವೆಲ್​ ಅಂದ್ರೆ ಬಾವಿಯಲ್ಲಿ ಮುಳುಗಲಿದೆ ಎಂದಿದ್ದಾರೆ. ಜೊತೆಗೆ, ತ್ರಿ ಈಡಿಯಟ್ಸ್ ಪೈಕಿ ಉಳಿದ ಮೂರನೆಯವ ರಾಜು ನಮ್ಮನ್ನು ಅನುಸರಿ ಬಾರದಿರಲಿ ಎಂದು ಆಶಿಸಿದಿದ್ದಾರೆ. ಎಲ್ಲರಿಗೂ ವಂದನೆಗಳು, ನಾನು ಗುಣಮುಖನಾಗುತ್ತಿದ್ದೇನೆ ಎಂದು ಮಾಧವನ್​ ಹೇಳಿಕೊಂಡಿದ್ದಾರೆ.

ನಟ ಆಮಿರ್ ಖಾನ್​ ಕೊರೊನಾ ಸೋಂಕಿತರಾಗಿದ್ದಾರೆ. ಹಾಗಾಗಿ ಮನೆಯಲ್ಲೇ ಕ್ವಾರಂಟೈನ್​ ಆಗಿದ್ದಾರೆ. ತಮ್ಮ ಸಂಪರ್ಕಕ್ಕೆ ಬಂದವರು, ಕೆಲಸದ ಸಿಬ್ಬಂದಿಯವರಿಗೆ ಟೆಸ್ಟ್​ಗೆ ಒಳಗಾಗಲು ಸೂಚಿಸಿದ್ದಾರೆ. ಹಾಗೇ, ಕೊರೊನಾ ಬಗ್ಗೆ ಎಲ್ಲ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದೂ ಹೇಳಿದ್ದಾರೆ. ಆಮಿರ್ ​ಖಾನ್​ ಸಂಪೂರ್ಣ ಗುಣಮುಖರಾಗುವವರೆಗೂ ಲಾಲ್​ ಸಿಂಗ್ ಛಡ್ಡಾ ಸಿನಿಮಾ ಶೂಟಿಂಗ್​ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಆಮಿರ್​ ಖಾನ್​ ಆಪ್ತ ಮೂಲಗಳು ತಿಳಿಸಿವೆ.

Published On - 4:59 pm, Thu, 25 March 21

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ