AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಸಭ್ಯ ಮೆಸೇಜ್ ಮಾಡಿದ ಪೊಲೀಸಪ್ಪನ ವಿರುದ್ಧ ಪೊಲೀಸರಿಗೆ ಚೈತ್ರಾ ದೂರು

Chaithra J Achar: ಕೆಲವು ನಟಿಯರು ಮಾತ್ರ ಈ ಆನ್​ಲೈನ್ ದೌರ್ಜನ್ಯದ ವಿರುದ್ಧ ಗಟ್ಟಿ ದನಿ ಎತ್ತಿ ಮಾತನಾಡುತ್ತಾರೆ. ಅವರಲ್ಲಿ ಕನ್ನಡದ ಪ್ರತಿಭಾವಂತ ನಟಿ ಚೈತ್ರಾ ಆಚಾರ್ ಸಹ ಒಬ್ಬರು. ಚೈತ್ರಾ ಅದೆಷ್ಟು ಗಟ್ಟಿಗಿತ್ತಿಯೆಂದರೆ ತಮಗೆ ಕೆಟ್ಟ ಸಂದೇಶ ಕಳಿಸಿದ ಪೊಲೀಸ್ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದಾರೆ.

ಅಸಭ್ಯ ಮೆಸೇಜ್ ಮಾಡಿದ ಪೊಲೀಸಪ್ಪನ ವಿರುದ್ಧ ಪೊಲೀಸರಿಗೆ ಚೈತ್ರಾ ದೂರು
Chaithra Achar
ಮಂಜುನಾಥ ಸಿ.
|

Updated on: May 15, 2026 | 5:58 PM

Share

ನಟಿಯರು ಸಾಮಾಜಿಕ ಜಾಲತಾಣದಲ್ಲಿ (Social Media) ತೀವ್ರ ಕಿರುಕುಳ ಅನುಭಿವಿಸುತ್ತಾರೆ. ಕೀಳು ಮಟ್ಟದ ಕಮೆಂಟ್​​ಗಳು, ಅಸಭ್ಯ ಚಿತ್ರಗಳನ್ನು ಕಳಿಸುವುದು, ನಿಂದನೆ, ಕೆಟ್ಟ ಟೀಕೆ, ವೇಶ್ಯೆಯರಿಗೆ ಹೋಲಿಕೆ ಹೀಗೆ ತೀರಾ ಕೀಳು ಮಟ್ಟದ ಟ್ರೋಲಿಂಗ್ ಅನ್ನು ನಟಿಯರು ಎದುರಿಸುತ್ತಿದ್ದಾರೆ. ಕೆಲವು ನಟಿಯರು ಮಾತ್ರ ಈ ಆನ್​ಲೈನ್ ದೌರ್ಜನ್ಯದ ವಿರುದ್ಧ ಗಟ್ಟಿ ದನಿ ಎತ್ತಿ ಮಾತನಾಡುತ್ತಾರೆ. ಅವರಲ್ಲಿ ಕನ್ನಡದ ಪ್ರತಿಭಾವಂತ ನಟಿ ಚೈತ್ರಾ ಆಚಾರ್ ಸಹ ಒಬ್ಬರು. ಚೈತ್ರಾ ಅದೆಷ್ಟು ಗಟ್ಟಿಗಿತ್ತಿಯೆಂದರೆ ತಮಗೆ ಕೆಟ್ಟ ಸಂದೇಶ ಕಳಿಸಿದ ಪೊಲೀಸ್ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದಾರೆ.

ಮಹಿಳೆಯರ ರಕ್ಷಣೆಯ ಪ್ರತಿಜ್ಞೆ ಮಾಡಿರುವ ಪೊಲೀಸಪ್ಪನೇ ಒಬ್ಬ ನಟಿ ಚೈತ್ರಾ ಆಚಾರ್ ಅವರಿಗೆ ಅತ್ಯಂತ ಕೀಳು ಮಟ್ಟದ ಸಂದೇಶವನ್ನು ಕಳಿಸಿದ್ದ. ಸಾಮಾನ್ಯ ಮಹಿಳೆಯರು, ನಟಿಯರಾದರೆ ಪೊಲೀಸ್ ಸಮವಸ್ತ್ರ ನೋಡಿ ಅಂಜುತ್ತಿದ್ದರೇನೋ ಆದರೆ ಚೈತ್ರಾ ಆಚಾರ್, ಆ ವ್ಯಕ್ತಿ ಕಳಿಸಿದ್ದ ಸಂದೇಶದ ಸ್ಕ್ರೀನ್ ಶಾಟ್ ತೆಗೆದು, ಆ ವ್ಯಕ್ತಿಯ ಫೋಟೊದ ಸಮೇತ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಮಾತ್ರವಲ್ಲದೆ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಈ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದಿದ್ದಾರೆ.

ಬಳಿಕ, ಚೈತ್ರಾ ಅವರಿಗೆ ಕೀಳು ಸಂದೇಶ ಕಳಿಸಿದ್ದ ಹೊಸಮನಿ ಎಂಬ ಪೊಲೀಸ್ ಇಲಾಖೆಗೆ ಸೇರಿದ ವ್ಯಕ್ತಿ, ‘ತಪ್ಪಾಯಿತು, ನಿಮ್ಮ ಮೇಲಿನ ಕಾಳಜಿಯಿಂದಲೇ ಆ ಸಂದೇಶ ಕಳಿಸಿದೆ, ನೀವು ಹಂಚಿಕೊಂಡಿರುವ ಪೋಸ್ಟ್ ಅನ್ನು ಡಿಲೀಟ್ ಮಾಡಿ, ಅದು ನನ್ನ ಕೆಲಸಕ್ಕೆ ತೊಂದರೆ ಕೊಡುತ್ತದೆ’ ಎಂದು ಗೋಗರೆದಿದ್ದಾನೆ. ಆದರೆ ಚೈತ್ರಾ ಆಚಾರ್, ಅದಕ್ಕೆಲ್ಲ ಕರಗದೆ, ಆ ಸಂದೇಶದ ಸ್ಕ್ರೀನ್ ಶಾಟ್ ಅನ್ನೂ ಹಂಚಿಕೊಂಡಿದ್ದು, ‘ನನ್ನ ವೃತ್ತಿಯ ಬಗ್ಗೆ ಮಾತನಾಡುವಾಗ ಇದು ಅರಿವಾಗಲಿಲ್ಲವೇ’ ಎಂದು ಪ್ರಶ್ನೆ ಮಾಡಿದ್ದಾರೆ. ಆ ಸಂದೇಶವನ್ನೂ ಸಹ ಅವರು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.

ಇದನ್ನೂ ಓದಿ:ವೀಕೆಂಡ್​ನಲ್ಲೂ ವರ್ಕೌಟ್ ತಪ್ಪಿಸಿಲ್ಲ ಚೈತ್ರಾ ಆಚಾರ್

ಚೈತ್ರಾ ಆಚಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು, ತಮ್ಮ ಫೋಟೊಗಳನ್ನು ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಚಿತ್ರಗಳಿಗೆ ನಾನಾ ಜನ ನಾನಾ ರೀತಿಯ ಕಮೆಂಟುಗಳನ್ನು ಮಾಡುತ್ತಿರುತ್ತಾರೆ. ತೀರ ಅಸಭ್ಯ, ಕೀಳು ಅಭಿರುಚಿಯ ಕಮೆಂಟುಗಳ ಬಂದಾಗ ನಟಿ ಚೈತ್ರಾ ಆಚಾರ್, ಹಿಂದೆ-ಮುಂದೆ ನೋಡದೆ ಅಂಥಹವರ ಚಳಿ ಬಿಡಿಸುತ್ತಾರೆ.

ಚೈತ್ರಾ ಆಚಾರ್ ಇದೀಗ ಕನ್ನಡ ಮಾತ್ರವಲ್ಲದೆ ಪರ ಭಾಷೆ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಪ್ರಭಾಸ್ ನಟನೆಯ ‘ಫೌಜಿ’ ಸಿನಿಮಾನಲ್ಲೂ ಚೈತ್ರಾ ಆಚಾರ್ ಪ್ರಮುಖವಾದ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ತಮಿಳಿನ ಕೆಲ ಸಿನಿಮಾಗಳಲ್ಲಿ ಈಗಾಗಲೇ ನಟಿಸಿ ಸೈ ಎನಿಸಿಕೊಂಡಿದ್ದಾರೆ. ‘ಸ್ಟ್ರಾಬೆರ್ರಿ’, ‘ಲೈಲಾಸ್ ಸ್ವೀಟ್ ಡ್ರೀಮ್ಸ್’, ತಮಿಳಿನ ‘ಮೀಸೆಯಾ ಮುರುಕ್ಕು 2’ ಸಿನಿಮಾಗಳಲ್ಲಿ ಚೈತ್ರಾ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಬಿಜೆಪಿ ಕಚೇರಿ ಮುತ್ತಿಗೆಗೆ ಯುವ ಕಾಂಗ್ರೆಸ್​​ ಕಾರ್ಯಕರ್ತರ ಯತ್ನ
ಬಿಜೆಪಿ ಕಚೇರಿ ಮುತ್ತಿಗೆಗೆ ಯುವ ಕಾಂಗ್ರೆಸ್​​ ಕಾರ್ಯಕರ್ತರ ಯತ್ನ
ರೌಡಿಶೀಟರ್‌ಗಳಿಗೆ ಚಳಿ ಬಿಡಿಸಿದ ದಾವಣಗೆರೆ ಎಸ್‌ಪಿ ಡಾ. H T ಶೇಖರ್‌
ರೌಡಿಶೀಟರ್‌ಗಳಿಗೆ ಚಳಿ ಬಿಡಿಸಿದ ದಾವಣಗೆರೆ ಎಸ್‌ಪಿ ಡಾ. H T ಶೇಖರ್‌
ತುಮಕೂರಲ್ಲೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪರಮೇಶ್ವರ್​​ ಆಗ್ರಹ
ತುಮಕೂರಲ್ಲೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪರಮೇಶ್ವರ್​​ ಆಗ್ರಹ
'ನಾವು ಮಾಡಿದ್ದು ತಪ್ಪು' ಎಂದು ಕೈಮುಗಿದು ಬೇಡಿಕೊಂಡ ಆರೋಪಿಗಳು!
'ನಾವು ಮಾಡಿದ್ದು ತಪ್ಪು' ಎಂದು ಕೈಮುಗಿದು ಬೇಡಿಕೊಂಡ ಆರೋಪಿಗಳು!
ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಲಾರಿ ಪಲ್ಟಿ, ಟ್ರಾಫಿಕ್ ಜಾಮ್
ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಲಾರಿ ಪಲ್ಟಿ, ಟ್ರಾಫಿಕ್ ಜಾಮ್
ಸ್ವದೇಶಿ ನಿರ್ಮಿತ ಮಾಲ್ವಾಣ್ ಯುದ್ಧನೌಕೆ ಹೇಗಿದೆ? ವಿಶೇಷಗಳೇನು?
ಸ್ವದೇಶಿ ನಿರ್ಮಿತ ಮಾಲ್ವಾಣ್ ಯುದ್ಧನೌಕೆ ಹೇಗಿದೆ? ವಿಶೇಷಗಳೇನು?
ಮಗ ಆಯುಷ್ ಸಿನಿಮಾ ಬಗ್ಗೆ ದೊಡ್ಡ ಅಪ್​​ಡೇಟ್ ಕೊಟ್ಟ ಪ್ರಿಯಾಂಕಾ ಉಪೇಂದ್ರ
ಮಗ ಆಯುಷ್ ಸಿನಿಮಾ ಬಗ್ಗೆ ದೊಡ್ಡ ಅಪ್​​ಡೇಟ್ ಕೊಟ್ಟ ಪ್ರಿಯಾಂಕಾ ಉಪೇಂದ್ರ
ಜಂತರ್​ ಮಂತರ್​ನಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಜಟಾಪಟಿ
ಜಂತರ್​ ಮಂತರ್​ನಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಜಟಾಪಟಿ
ವೃಷಭ ರಾಶಿಯಲ್ಲಿ ಕುಜ ಸಂಚಾರ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ವೃಷಭ ರಾಶಿಯಲ್ಲಿ ಕುಜ ಸಂಚಾರ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಬಿಜೆಪಿ ನಾಯಕರು ಹೇಡಿಗಳು; ಬಂಧನದ ಬಳಿಕ ಪ್ರಿಯಾಂಕಾ ಗಾಂಧಿ ಆಕ್ರೋಶ
ಬಿಜೆಪಿ ನಾಯಕರು ಹೇಡಿಗಳು; ಬಂಧನದ ಬಳಿಕ ಪ್ರಿಯಾಂಕಾ ಗಾಂಧಿ ಆಕ್ರೋಶ