Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಗಲಮೇಲೆ ಕೈ ಹಾಕಲು ಬಂದ ಪ್ರಶಾಂತ್​ರನ್ನು ಸಿಟ್ಟಿನಿಂದ ತಳ್ಳಿದ ಚಕ್ರವರ್ತಿ; ಇಬ್ಬರ ನಡುವೆ ಮೂಡಿತು ವೈಮನಸ್ಸು

ಪ್ರಶಾಂತ್​ ಹಾಗೂ ಚರ್ಕವರ್ತಿ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಹೆಗಲಮೇಲೆ ಕೈ ಹಾಕಲು ಬಂದ ಪ್ರಶಾಂತ್​ ಅವರನ್ನು ಚಕ್ರವರ್ತಿ ದೂಕಿದ್ದಾರೆ.

ಹೆಗಲಮೇಲೆ ಕೈ ಹಾಕಲು ಬಂದ ಪ್ರಶಾಂತ್​ರನ್ನು ಸಿಟ್ಟಿನಿಂದ ತಳ್ಳಿದ ಚಕ್ರವರ್ತಿ; ಇಬ್ಬರ ನಡುವೆ ಮೂಡಿತು ವೈಮನಸ್ಸು
ಹೆಗಲಮೇಲೆ ಕೈ ಹಾಕಲು ಬಂದ ಪ್ರಶಾಂತ್​ರನ್ನು ಸಿಟ್ಟಿನಿಂದ ತಳ್ಳಿದ ಚಕ್ರವರ್ತಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 02, 2021 | 2:51 PM

‘ಕನ್ನಡ ಬಿಗ್​ ಬಾಸ್ ಸೀಸನ್​ 8’ ಎರಡನೇ ಇನ್ನಿಂಗ್ಸ್​ ದಿನೇದಿನೇ ರಂಗೇರುತ್ತಿದೆ. ಎರಡನೇ ವಾರ ಇಡೀ ಮನೆ ರಣರಂಗವಾಗಿ ಮಾರ್ಪಟ್ಟಿದೆ. ಚಕ್ರವರ್ತಿ ಚಂದ್ರಚೂಡ್​ ನಡೆದುಕೊಳ್ಳುತ್ತಿರುವ ರೀತಿ ಮನೆಯಲ್ಲಿ ಅನೇಕರಿಗೆ ಇಷ್ಟವಾಗುತ್ತಿಲ್ಲ. ಆಪ್ತ ಗೆಳೆಯ​ ಎನಿಸಿಕೊಂಡಿರುವ ಪ್ರಶಾಂತ್​ ಸಂಬರಗಿ ಅವರಿಗೇ ಚಕ್ರವರ್ತಿ ನಡೆ ಹಿಡಿಸುತ್ತಿಲ್ಲ. ಈ ಮಧ್ಯೆ ಪ್ರಶಾಂತ್​ ಅವರನ್ನು ಚಕ್ರವರ್ತಿ ತಳ್ಳಿದ ಘಟನೆ ಕೂಡ ನಡೆದಿದೆ.

ಬಿಗ್​ ಬಾಸ್​ ಮನೆಯಲ್ಲಿ ಟಾಸ್ಕ್​ ಒಂದನ್ನು ನೀಡಲಾಗಿದೆ. ಮನೆಯಲ್ಲಿರುವ 12 ತಂಡಗಳನ್ನು ಎರಡು ಟೀಂ ಆಗಿ ವಿಭಜಿಸಲಾಗಿದ್ದು, ಮಂಜು ಹಾಗೂ ಅರವಿಂದ್​ ಎರಡು ತಂಡವನ್ನು ಮುನ್ನಡೆಸುವ ಕೆಲಸ ಮಾಡುತ್ತಿದ್ದಾರೆ. ತಂಡ ತಂಡಗಳ ನಡುವೆ ಇರಬೇಕಾಗಿದ್ದ ಸ್ಪರ್ಧೆ ತಂಡದ ಒಳಗೇ ಏರ್ಪಟ್ಟಿದೆ. ಅರವಿಂದ್​ ಟೀಂನಲ್ಲಿರುವ ಚಕ್ರವರ್ತಿ ಟಾಸ್ಕ್​ ಸರಿಯಾಗಿ ಆಡದೆ ಇದ್ದರೂ ಉಳಿದವರ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಬೇರೆಯವರ ತಪ್ಪನ್ನು ಎತ್ತಿ ಹೇಳುತ್ತಿದ್ದಾರೆ. ಇದು ಸ್ಪರ್ಧಿಗಳ ಕೋಪಕ್ಕೆ ಕಾರಣವಾಗಿದೆ.

ಕಲರ್ಸ್​ ಕನ್ನಡ ವಾಹಿನಿ ಜುಲೈ 2ರ ಸಂಚಿಕೆಯ ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಈ ಪ್ರೋಮೋದಲ್ಲಿ ಚಕ್ರವರ್ತಿ ವಿರುದ್ಧ ಎಲ್ಲರೂ ತಿರುಗಿ ಬಿದ್ದಿದ್ದಾರೆ. ಇನ್ನು, ಪ್ರಶಾಂತ್​ ಹಾಗೂ ಚರ್ಕವರ್ತಿ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಹೆಗಲಮೇಲೆ ಕೈ ಹಾಕಲು ಬಂದ ಪ್ರಶಾಂತ್​ ಅವರನ್ನು ಚಕ್ರವರ್ತಿ ದೂಕಿದ್ದಾರೆ.

ಇನ್ನು, ಜುಲೈ 1ರ ಎಪಿಸೋಡ್​ನಲ್ಲಿ ಚಕ್ರವರ್ತಿ ಬಗ್ಗೆ ಪ್ರಶಾಂತ್​ ಅಸಮಾಧಾನ ಹೊರಹಾಕಿದ್ದರು. ಚಕ್ರವರ್ತಿಯದು ಅತಿಯಾಗುತ್ತಿದೆ. ಹಾಗಾಗಿ, ಆತನಿಂದ ಅಂತರ ಕಾಯ್ದುಕೊಳ್ಳುತ್ತಿದ್ದೇನೆ. ಅವನ ಗೆಳೆಯ ಎನ್ನುವ ಕಾರಣಕ್ಕೆ ನನ್ನ ಬಗ್ಗೆ ತಪ್ಪು ಅಭಿಪ್ರಾಯ ಮೂಡಬಹುದು ಎಂದು ಪ್ರಶಾಂತ್​ ಹೇಳಿರುವ ವಿಚಾರ ಸಾಕಷ್ಟು ಅಚ್ಚರಿ ಮೂಡಿಸಿದೆ.

ಶಮಂತ್​ ಬ್ರೋ ಗೌಡ ಹಾಗೂ ರಘು ಮಾತ್ರ ಎಲ್ಲರ ಜತೆಯೂ ಚೆನ್ನಾಗಿದ್ದಾರೆ. ಉಳಿದ ಸ್ಪರ್ಧಿಗಳಲ್ಲಿ ವೈಮನಸ್ಸು ಮೂಡುತ್ತಿದೆ. ಹೀಗಾಗಿ, ಮನೆಯ ಶಾಂತಿ ಕದಡಿದಂತೆ ಕಾಣುತ್ತಿದೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಮಾಡಿದ ಆ ಒಂದು ತಪ್ಪಿಗೆ ಭಾರೀ ದಂಡ ತೆರಲಿದ್ದಾರಾ ಅರವಿಂದ್​?

ಸುದೀಪ್​ ಹೇಳಿದ ಬುದ್ಧಿವಾದ ಮರೆತ ಬಿಗ್​ ಬಾಸ್​ ಸ್ಪರ್ಧಿಗಳು; ಈ ವಾರವೂ ಇದೆ ಕಿಚ್ಚನ ಕ್ಲಾಸ್​?

ಸಿಹಿ ಸುದ್ದಿ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ರೈತರಿಗೆ ಯುಗಾದಿ ಬೋನಸ್​
ಸಿಹಿ ಸುದ್ದಿ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ರೈತರಿಗೆ ಯುಗಾದಿ ಬೋನಸ್​
ಔರಂಗಜೇಬನ ಸಮಾಧಿ ಸಂಬಂಧಿತ ವಿವಾದ, ನಾಗ್ಪುರದಲ್ಲಿ ಹಿಂಸಾಚಾರ
ಔರಂಗಜೇಬನ ಸಮಾಧಿ ಸಂಬಂಧಿತ ವಿವಾದ, ನಾಗ್ಪುರದಲ್ಲಿ ಹಿಂಸಾಚಾರ
Daily Devotional: ದೇವಾಲಯದ ಹೊಸ್ತಿಲು ಮುಟ್ಟಿ ನಮಸ್ಕರಿಸುವುದರ ಹಿಂದಿನ ಫಲ
Daily Devotional: ದೇವಾಲಯದ ಹೊಸ್ತಿಲು ಮುಟ್ಟಿ ನಮಸ್ಕರಿಸುವುದರ ಹಿಂದಿನ ಫಲ
ಸೂರ್ಯ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ಸೂರ್ಯ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ನಮ್ಮ ಫ್ಯಾನ್ಸ್ ’ಬೊಂಬಾಟ್’ ಎಂದ ಕಿಂಗ್ ಕೊಹ್ಲಿ; ವಿಡಿಯೋ
ನಮ್ಮ ಫ್ಯಾನ್ಸ್ ’ಬೊಂಬಾಟ್’ ಎಂದ ಕಿಂಗ್ ಕೊಹ್ಲಿ; ವಿಡಿಯೋ
ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ