ಹೆಗಲಮೇಲೆ ಕೈ ಹಾಕಲು ಬಂದ ಪ್ರಶಾಂತ್​ರನ್ನು ಸಿಟ್ಟಿನಿಂದ ತಳ್ಳಿದ ಚಕ್ರವರ್ತಿ; ಇಬ್ಬರ ನಡುವೆ ಮೂಡಿತು ವೈಮನಸ್ಸು

ಪ್ರಶಾಂತ್​ ಹಾಗೂ ಚರ್ಕವರ್ತಿ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಹೆಗಲಮೇಲೆ ಕೈ ಹಾಕಲು ಬಂದ ಪ್ರಶಾಂತ್​ ಅವರನ್ನು ಚಕ್ರವರ್ತಿ ದೂಕಿದ್ದಾರೆ.

ಹೆಗಲಮೇಲೆ ಕೈ ಹಾಕಲು ಬಂದ ಪ್ರಶಾಂತ್​ರನ್ನು ಸಿಟ್ಟಿನಿಂದ ತಳ್ಳಿದ ಚಕ್ರವರ್ತಿ; ಇಬ್ಬರ ನಡುವೆ ಮೂಡಿತು ವೈಮನಸ್ಸು
ಹೆಗಲಮೇಲೆ ಕೈ ಹಾಕಲು ಬಂದ ಪ್ರಶಾಂತ್​ರನ್ನು ಸಿಟ್ಟಿನಿಂದ ತಳ್ಳಿದ ಚಕ್ರವರ್ತಿ
Follow us
| Updated By: ರಾಜೇಶ್ ದುಗ್ಗುಮನೆ

Updated on: Jul 02, 2021 | 2:51 PM

‘ಕನ್ನಡ ಬಿಗ್​ ಬಾಸ್ ಸೀಸನ್​ 8’ ಎರಡನೇ ಇನ್ನಿಂಗ್ಸ್​ ದಿನೇದಿನೇ ರಂಗೇರುತ್ತಿದೆ. ಎರಡನೇ ವಾರ ಇಡೀ ಮನೆ ರಣರಂಗವಾಗಿ ಮಾರ್ಪಟ್ಟಿದೆ. ಚಕ್ರವರ್ತಿ ಚಂದ್ರಚೂಡ್​ ನಡೆದುಕೊಳ್ಳುತ್ತಿರುವ ರೀತಿ ಮನೆಯಲ್ಲಿ ಅನೇಕರಿಗೆ ಇಷ್ಟವಾಗುತ್ತಿಲ್ಲ. ಆಪ್ತ ಗೆಳೆಯ​ ಎನಿಸಿಕೊಂಡಿರುವ ಪ್ರಶಾಂತ್​ ಸಂಬರಗಿ ಅವರಿಗೇ ಚಕ್ರವರ್ತಿ ನಡೆ ಹಿಡಿಸುತ್ತಿಲ್ಲ. ಈ ಮಧ್ಯೆ ಪ್ರಶಾಂತ್​ ಅವರನ್ನು ಚಕ್ರವರ್ತಿ ತಳ್ಳಿದ ಘಟನೆ ಕೂಡ ನಡೆದಿದೆ.

ಬಿಗ್​ ಬಾಸ್​ ಮನೆಯಲ್ಲಿ ಟಾಸ್ಕ್​ ಒಂದನ್ನು ನೀಡಲಾಗಿದೆ. ಮನೆಯಲ್ಲಿರುವ 12 ತಂಡಗಳನ್ನು ಎರಡು ಟೀಂ ಆಗಿ ವಿಭಜಿಸಲಾಗಿದ್ದು, ಮಂಜು ಹಾಗೂ ಅರವಿಂದ್​ ಎರಡು ತಂಡವನ್ನು ಮುನ್ನಡೆಸುವ ಕೆಲಸ ಮಾಡುತ್ತಿದ್ದಾರೆ. ತಂಡ ತಂಡಗಳ ನಡುವೆ ಇರಬೇಕಾಗಿದ್ದ ಸ್ಪರ್ಧೆ ತಂಡದ ಒಳಗೇ ಏರ್ಪಟ್ಟಿದೆ. ಅರವಿಂದ್​ ಟೀಂನಲ್ಲಿರುವ ಚಕ್ರವರ್ತಿ ಟಾಸ್ಕ್​ ಸರಿಯಾಗಿ ಆಡದೆ ಇದ್ದರೂ ಉಳಿದವರ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಬೇರೆಯವರ ತಪ್ಪನ್ನು ಎತ್ತಿ ಹೇಳುತ್ತಿದ್ದಾರೆ. ಇದು ಸ್ಪರ್ಧಿಗಳ ಕೋಪಕ್ಕೆ ಕಾರಣವಾಗಿದೆ.

ಕಲರ್ಸ್​ ಕನ್ನಡ ವಾಹಿನಿ ಜುಲೈ 2ರ ಸಂಚಿಕೆಯ ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಈ ಪ್ರೋಮೋದಲ್ಲಿ ಚಕ್ರವರ್ತಿ ವಿರುದ್ಧ ಎಲ್ಲರೂ ತಿರುಗಿ ಬಿದ್ದಿದ್ದಾರೆ. ಇನ್ನು, ಪ್ರಶಾಂತ್​ ಹಾಗೂ ಚರ್ಕವರ್ತಿ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಹೆಗಲಮೇಲೆ ಕೈ ಹಾಕಲು ಬಂದ ಪ್ರಶಾಂತ್​ ಅವರನ್ನು ಚಕ್ರವರ್ತಿ ದೂಕಿದ್ದಾರೆ.

ಇನ್ನು, ಜುಲೈ 1ರ ಎಪಿಸೋಡ್​ನಲ್ಲಿ ಚಕ್ರವರ್ತಿ ಬಗ್ಗೆ ಪ್ರಶಾಂತ್​ ಅಸಮಾಧಾನ ಹೊರಹಾಕಿದ್ದರು. ಚಕ್ರವರ್ತಿಯದು ಅತಿಯಾಗುತ್ತಿದೆ. ಹಾಗಾಗಿ, ಆತನಿಂದ ಅಂತರ ಕಾಯ್ದುಕೊಳ್ಳುತ್ತಿದ್ದೇನೆ. ಅವನ ಗೆಳೆಯ ಎನ್ನುವ ಕಾರಣಕ್ಕೆ ನನ್ನ ಬಗ್ಗೆ ತಪ್ಪು ಅಭಿಪ್ರಾಯ ಮೂಡಬಹುದು ಎಂದು ಪ್ರಶಾಂತ್​ ಹೇಳಿರುವ ವಿಚಾರ ಸಾಕಷ್ಟು ಅಚ್ಚರಿ ಮೂಡಿಸಿದೆ.

ಶಮಂತ್​ ಬ್ರೋ ಗೌಡ ಹಾಗೂ ರಘು ಮಾತ್ರ ಎಲ್ಲರ ಜತೆಯೂ ಚೆನ್ನಾಗಿದ್ದಾರೆ. ಉಳಿದ ಸ್ಪರ್ಧಿಗಳಲ್ಲಿ ವೈಮನಸ್ಸು ಮೂಡುತ್ತಿದೆ. ಹೀಗಾಗಿ, ಮನೆಯ ಶಾಂತಿ ಕದಡಿದಂತೆ ಕಾಣುತ್ತಿದೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಮಾಡಿದ ಆ ಒಂದು ತಪ್ಪಿಗೆ ಭಾರೀ ದಂಡ ತೆರಲಿದ್ದಾರಾ ಅರವಿಂದ್​?

ಸುದೀಪ್​ ಹೇಳಿದ ಬುದ್ಧಿವಾದ ಮರೆತ ಬಿಗ್​ ಬಾಸ್​ ಸ್ಪರ್ಧಿಗಳು; ಈ ವಾರವೂ ಇದೆ ಕಿಚ್ಚನ ಕ್ಲಾಸ್​?