AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿರಂಜೀವಿ ಸಿನಿಮಾ ರಿಜೆಕ್ಟ್​ ಮಾಡಿದ್ದ ಸಾಯಿ ಪಲ್ಲವಿ; ಖುಷಿಯಿಂದ ಥ್ಯಾಂಕ್ಸ್​ ಹೇಳಿದ ಮೆಗಾಸ್ಟಾರ್​

ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿ ನಟನೆಯ ‘ಲವ್​ ಸ್ಟೋರಿ’ ಸಿನಿಮಾ ಸೆಪ್ಟೆಂಬರ್​ 24ರಂದು ತೆರೆಗೆ ಬರುತ್ತಿದೆ. ಈ ಸಿನಿಮಾಗೆ ಚಿತ್ರತಂಡ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡುತ್ತಿದೆ.

ಚಿರಂಜೀವಿ ಸಿನಿಮಾ ರಿಜೆಕ್ಟ್​ ಮಾಡಿದ್ದ ಸಾಯಿ ಪಲ್ಲವಿ; ಖುಷಿಯಿಂದ ಥ್ಯಾಂಕ್ಸ್​ ಹೇಳಿದ ಮೆಗಾಸ್ಟಾರ್​
ಚಿರಂಜೀವಿ ಸಿನಿಮಾ ರಿಜೆಕ್ಟ್​ ಮಾಡಿದ್ದ ಸಾಯಿ ಪಲ್ಲವಿ; ಖುಷಿಯಿಂದ ಥ್ಯಾಂಕ್ಸ್​ ಹೇಳಿದ ಮೆಗಾಸ್ಟಾರ್​
TV9 Web
| Edited By: |

Updated on: Sep 20, 2021 | 4:45 PM

Share

ಚಿರಂಜೀವಿ ನಟನೆಯ ಸಿನಿಮಾಗಳಿಗೆ ಟಾಲಿವುಡ್​ನಲ್ಲಿ ಭಾರೀ ಬೇಡಿಕೆ ಇದೆ. ಅವರ ನಟಿಸುವ ಸಿನಿಮಾದಲ್ಲಿ ಅವಕಾಶ ಸಿಕ್ಕರೆ ಸಾಕು ಎಂದು ಸಾಕಷ್ಟು ಕಲಾವಿದರು ಕಾದು ಕುಳಿತಿದ್ದಾರೆ. ಅವರ ಚಿತ್ರದಲ್ಲಿ ನಟಿಸಿದ್ದಕ್ಕೆ ಸಾಕಷ್ಟು ಜನರ ಲಕ್​ ಬದಲಾದ ಉದಾಹರಣೆ ಇದೆ. ಆದರೆ, ಖ್ಯಾತ ನಟಿ ಸಾಯಿ ಪಲ್ಲವಿ ಅವರು ಚಿರಂಜೀವಿ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದರು. ಈ ವಿಚಾರಕ್ಕೆ ಅವರಿಗೆ ಥ್ಯಾಂಕ್ಸ್​ ಹೇಳಿದ್ದಾರೆ ಚಿರಂಜೀವಿ!

ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿ ನಟನೆಯ ‘ಲವ್​ ಸ್ಟೋರಿ’ ಸಿನಿಮಾ ಸೆಪ್ಟೆಂಬರ್​ 24ರಂದು ತೆರೆಗೆ ಬರುತ್ತಿದೆ. ಈ ಸಿನಿಮಾಗೆ ಚಿತ್ರತಂಡ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡುತ್ತಿದೆ. ಇದರ ಭಾಗವಾಗಿ ಭಾನುವಾರ (ಸೆಪ್ಟೆಂಬರ್​ 19) ಚಿತ್ರತಂಡ ಹೈದರಾಬಾದ್​ನಲ್ಲಿ ಪ್ರೀರಿಲೀಸ್​ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮಕ್ಕೆ ಆಮಿರ್​ ಖಾನ್​ ಹಾಗೂ ಚಿರಂಜೀವಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಚಿರಂಜೀವಿ ಮಾತನಾಡಿದ್ದು ಎಲ್ಲರ ಗಮನ ಸೆಳೆದಿದೆ.

ಸಾಯಿ ಪಲ್ಲವಿ ‘ಫಿದಾ’ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾದಲ್ಲಿ ಅದ್ಭುತವಾಗಿ ಡ್ಯಾನ್ಸ್​ ಮಾಡಿದ್ದರು. ಈ ಮೂಲಕ ಅವರು ಎಲ್ಲರ ಗಮನ ಸೆಳೆದಿದ್ದರು. ಚಿರಂಜೀವಿ ಕೂಡ ಸಾಯಿ ಪಲ್ಲವಿ ಡ್ಯಾನ್ಸ್​ ಇಷ್ಟಪಟ್ಟಿದ್ದರು. ನಂತರ ‘ಭೋಲಾ ಶಂಕರ್​’ ಸಿನಿಮಾದಲ್ಲಿ ಚಿರಂಜೀವಿ ತಂಗಿ ಪಾತ್ರದಲ್ಲಿ ನಟಿಸೋಕೆ ಸಾಯಿ ಪಲ್ಲವಿಗೆ ಆಫರ್​ ನೀಡಲಾಗಿತ್ತು. ಆದರೆ, ಅವರು ಈ ಆಫರ್​ ತಿರಸ್ಕರಿಸಿದ್ದರು. ಈ ಬಗ್ಗೆ ಚಿರಂಜೀವಿ ಮಾತನಾಡಿದ್ದಾರೆ.

‘ಸಾಯಿ ಪಲ್ಲವಿ ಅವರನ್ನು ಅಪ್ರೋಚ್​ ಮಾಡಿದ್ದೇವೆ. ಅವರು ನಿಮ್ಮ ತಂಗಿ ಪಾತ್ರ ಮಾಡಲಿದ್ದಾರೆ ಎಂದು ಚಿತ್ರತಂಡದವರು ಹೇಳಿದ್ದರು. ಸಾಯಿ ಪಲ್ಲವಿ ಈ ಆಫರ್​ ರಿಜೆಕ್ಟ್​ ಮಾಡಲಿ ಎಂದು ನಾನು ಕೋರಿಕೊಂಡಿದ್ದೆ. ಅಂತೆಯೇ ಅವರು ಆಫರ್​ ರಿಜೆಕ್ಟ್​ ಮಾಡಿದ್ದರು. ಅವರಿಗೆ ಥ್ಯಾಂಕ್ಸ್​’ ಎಂದಿದ್ದಾರೆ ಚಿರಂಜೀವಿ.

ತಕ್ಷಣಕ್ಕೆ ಮೈಕ್ ಎತ್ತಿಕೊಂಡ ಸಾಯಿ ಪಲ್ಲವಿ, ‘ನನಗೆ ರಿಮೇಕ್​ ಸಿನಿಮಾಗಳನ್ನು ಮಾಡೋಕೆ ಯಾವಾಗಲೂ ಭಯ. ಆ ಕಾರಣಕ್ಕೆ ನಾನು ಆ ಸಿನಿಮಾ ಆಫರ್​ ರಿಜೆಕ್ಟ್​ ಮಾಡಿದ್ದೆ. ಇದರ ಹೊರತು ಮತ್ತಾವುದೇ ಉದ್ದೇಶವಿಲ್ಲ’ ಎಂದಿದ್ದಾರೆ ಸಾಯಿ ಪಲ್ಲವಿ.

ಇದಕ್ಕೆ ನಗುತ್ತಲೇ ಉತ್ತರಿಸಿದ ಚಿರಂಜೀವಿ, ‘ನನ್ನ ಸಿನಿಮಾಗೆ ನೀವು ಹೀರೋಯಿನ್​ ಆಗಿ ನಟಿಸಬೇಕೇ ಹೊರತು, ನನ್ನ ತಂಗಿ ಆಗಿ ಅಲ್ಲ’ ಎಂದರು. ಆಗ ಮುಂದಿನ ಸಿನಿಮಾದಲ್ಲಿ ಅವರ ಜತೆ ನಟಿಸೋಕೆ ಅವಕಾಶ ನೀಡುವಂತೆ ಚಿರು ಬಳಿ ಸಾಯಿ ಪಲ್ಲವಿಗೆ ಮನವಿ ಮಾಡಿಕೊಂಡರು.

ಇದನ್ನೂ ಓದಿ: ಚಿರಂಜೀವಿ ಅಳಿಯ ಸಾಯಿ ಧರಮ್​ ತೇಜ್​ ಆಕ್ಸಿಡೆಂಟ್​ನ ಸಿಸಿಟಿವಿ ದೃಶ್ಯ; ಹೆಲ್ಮೆಟ್​ನಿಂದ ಬಚಾವ್​

‘ಮೆಗಾ ಸ್ಟಾರ್’​ ಚಿರಂಜೀವಿ ಮತ್ತು ರವಿಚಂದ್ರನ್​ ನಡುವಿನ ಸ್ನೇಹ ವಿವರಿಸಲು ಈ ಒಂದು ಘಟನೆ ಸಾಕು

Follow Us
ಮುಂಗಾರಿನಲ್ಲೇ ಹೀಟ್ ವೇವ್! ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ ತಾಪ
ಮುಂಗಾರಿನಲ್ಲೇ ಹೀಟ್ ವೇವ್! ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ ತಾಪ
ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ: ಕೈದಿಯಿಂದ ಮೊಬೈಲ್​​ ವಶ
ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ: ಕೈದಿಯಿಂದ ಮೊಬೈಲ್​​ ವಶ
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್