AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿರಾಟ್​ ಬಳಿ ಕ್ಯಾಪ್ಟನ್​ ಆಗ್ತೀರಾ ಎಂದು ಕೇಳಿದ ದಾನಿಶ್​; ಕೊಹ್ಲಿ ಉತ್ತರ ಏನಿತ್ತು?

ಆರ್​ಸಿಬಿ ಮೂರು ಆಟಗಾರರನ್ನು ಉಳಿಸಿಕೊಂಡಿದೆ. ವಿರಾಟ್​ ಕೊಹ್ಲಿ, ಗ್ಲೇನ್​ ಮ್ಯಾಕ್ಸ್​ವೆಲ್​ ಹಾಗೂ ಮೊಹ್ಮದ್​ ಸಿರಾಜ್​ ಆರ್​ಸಿಬಿಯಲ್ಲಿ ಉಳಿದುಕೊಂಡಿದ್ದಾರೆ. ಆರ್​ಸಿಬಿ ಉಳಿಸಿಕೊಂಡ ನಾಲ್ಕನೇ ವ್ಯಕ್ತಿ ದಾನಿಶ್​ ಅಂತೆ! ಈ ಬಗ್ಗೆಯೂ ಅವರು ಹೇಳಿಕೊಂಡಿದ್ದಾರೆ.

ವಿರಾಟ್​ ಬಳಿ ಕ್ಯಾಪ್ಟನ್​ ಆಗ್ತೀರಾ ಎಂದು ಕೇಳಿದ ದಾನಿಶ್​; ಕೊಹ್ಲಿ ಉತ್ತರ ಏನಿತ್ತು?
ದಾನಿಶ್​-ವಿರಾಟ್​
TV9 Web
| Edited By: |

Updated on:Feb 13, 2022 | 3:28 PM

Share

ರಾಯಲ್​ ಚಾಲೆಂಜರ್ಸ್​ ಬೆಂಗಳೂರು (Royal Challengers Bangalore) ತಂಡದ ನಾಯಕತ್ವವನ್ನು ವಿರಾಟ್​ ಕೊಹ್ಲಿ ತ್ಯಜಿಸಿದ್ದಾರೆ. ಈ ಬಾರಿ ನಡೆಯಲಿರುವ ಐಪಿಎಲ್​ನಲ್ಲಿ (IPL 2022) ಆರ್​ಸಿಬಿ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಐಪಿಎಲ್​​ ಹರಾಜಿನಲ್ಲಿ ನಾಯಕತ್ವ ವಹಿಸಿಕೊಳ್ಳುವ ಆಟಗಾರ ಸಿಗದಿದ್ದರೆ ವಿರಾಟ್​ ಬಳಿ ನಾಯಕತ್ವ ಮುಂದುವರಿಸುವಂತೆ ಕೋರುವುದಾಗಿ ಆರ್​ಸಿಬಿ ತಂಡ ಹೇಳಿಕೊಂಡಿತ್ತು. ಆರ್​ಸಿಬಿಯನ್ನು ಯಾರು ಮುನ್ನಡೆಸುತ್ತಾರೆ ಎನ್ನುವ ಕುತೂಹಲಕ್ಕೆ ಇನ್ನೂ ತೆರೆ ಬಿದ್ದಿಲ್ಲ. ಈ ಮಧ್ಯೆ ಆರ್​ಸಿಬಿ ಇನ್​ಸೈಡರ್​ ದಾನಿಶ್​ ಸೇಠ್​ (Danish Sait) ಅವರ ಫನ್ನಿ ವಿಡಿಯೋವನ್ನು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತನ್ನ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ. ಈ ವಿಡಿಯೋ ಈಗ ಸಖತ್​ ವೈರಲ್​ ಆಗುತ್ತಿದೆ.

ವಿರಾಟ್​ ಕೊಹ್ಲಿಗೆ ದಾನಿಶ್​ ಸೇಠ್​ ಕರೆ ಮಾಡುತ್ತಾರೆ. ‘ಫಾಸ್ಟ್​ ಬೌಲರ್​ ಆಯ್ಕೆ ಬಗ್ಗೆ ಏನು ಯೋಚನೆ ಮಾಡಿದ್ದೀರಾ? ನನ್ನ ಪ್ರಕಾರ ಕಪಿಲ್​ ದೇವ್​ ಉತ್ತಮ ಆಯ್ಕೆ ಅನಿಸುತ್ತದೆ. ಇತ್ತೀಚೆಗೆ ಅವರ ಕುರಿತ ಬಯೋಪಿಕ್ ಕೂಡ ತೆರೆಗೆ ಬಂದಿದೆ’ ಎಂದಿದ್ದಾರೆ ದಾನಿಶ್​. ಆ ಬಳಿಕ, ‘ವಿರಾಟ್​ ನೀವು ಕ್ಯಾಪ್ಟನ್​ ಆಗಲು ಬಯಸುತ್ತೀರಾ?’ ಎಂದು ದಾನಿಶ್ ಕೇಳುತ್ತಿದ್ದಂತೆ ಆ ಕಡೆಯಿಂದ ಕರೆ ಕಟ್​ ಆಗಿದೆ.

ಆರ್​ಸಿಬಿ ಮೂರು ಆಟಗಾರರನ್ನು ಉಳಿಸಿಕೊಂಡಿದೆ. ವಿರಾಟ್​ ಕೊಹ್ಲಿ, ಗ್ಲೇನ್​ ಮ್ಯಾಕ್ಸ್​ವೆಲ್​ ಹಾಗೂ ಮೊಹ್ಮದ್​ ಸಿರಾಜ್​ ಆರ್​ಸಿಬಿಯಲ್ಲಿ ಉಳಿದುಕೊಂಡಿದ್ದಾರೆ. ಆರ್​ಸಿಬಿ ಉಳಿಸಿಕೊಂಡ ನಾಲ್ಕನೇ ವ್ಯಕ್ತಿ ದಾನಿಶ್​ ಅಂತೆ! ಈ ಬಗ್ಗೆಯೂ ಅವರು ಹೇಳಿಕೊಂಡಿದ್ದಾರೆ.

ತಂಡವನ್ನು ಆಯ್ಕೆ ಮಾಡುವ ಸಮಿತಿ ಬಳಿ ಬಂದ ದಾನಿಶ್ ಅವರು ಒಂದು ಲೆಟರ್​ ನೀಡಿದರು. ‘ಇದು ನಿಮ್ಮ ಟರ್ಮಿನೇಟರ್​ ಲೆಟರ್​. ಕಳೆದ 14 ವರ್ಷದಿಂದ ಕಪ್​ ಬಂದಿಲ್ಲ. ಈ ಬಾರಿ ಒಳ್ಳೆಯ ಆಯ್ಕೆ ಮಾಡಿಲ್ಲ ಎಂದರೆ ನಿಮ್ಮನ್ನು ಟರ್ಮಿನೇಟ್​ ಮಾಡುತ್ತೇವೆ, ನೆನಪಿರಲಿ’ ಎಂದು ಫನ್ನಿಯಾಗಿ ಎಚ್ಚರಿಕೆ ನೀಡಿದರು ದಾನಿಶ್.

ಈ ವಿಡಿಯೋಗೆ ನಾನಾ ರೀತಿಯ ಕಮೆಂಟ್​ಗಳು ಬಂದಿವೆ. ಆರ್​ಸಿಬಿ ಈ ಬಾರಿಯೂ ತಪ್ಪು ನಿರ್ಧಾರ ಮಾಡಿದೆ ಎಂದು ಕೆಲವರು ಹೇಳಿಕೊಂಡಿದ್ದಾರೆ. ಶ್ರೀಲಂಕಾ ಆಟಗಾರ ವನಿಂದು ಹಸರಂಗ ಅವರನ್ನು 10.75 ಕೋಟಿ ರೂಪಾಯಿ ನೀಡಿ ಖರೀದಿಸಿದೆ. ಇದು ತುಂಬಾನೇ ಕಾಸ್ಟ್ಲಿ ಆಯ್ತು ಎಂದು ಕೆಲವರು ಟೀಕಿಸಿದ್ದಾರೆ.

ಸಿನಿಮಾ ವಿಚಾರಕ್ಕೆ ಬರೋದಾದರೆ ದಾನಿಶ್​ ಸೇಠ್​ ನಟನೆಯ ‘ಒನ್​ ಕಟ್​ ಟೂ ಕಟ್​’ ಚಿತ್ರ ಇತ್ತೀಚೆಗೆ ಅಮೇಜಾನ್​ ಪ್ರೈಮ್​ ವಿಡಿಯೋದಲ್ಲಿ ತೆರೆಗೆ ಬಂದಿದೆ. ಪಿಆರ್​ಕೆ ಪ್ರೊಡಕ್ಷನ್​ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಈ ಚಿತ್ರ ವಿಮರ್ಶೆಯಲ್ಲಿ ಸೋತಿದೆ. ಸಿನಿಮಾಗೆ ಎಲ್ಲ ಕಡೆಗಳಿಂದ ನೆಗೆಟಿವ್​ ಕಮೆಂಟ್​ಗಳು ಬರುತ್ತಿವೆ.

ಇದನ್ನೂ ಓದಿ: ನಟ ದಾನಿಶ್​ ಸೇಠ್​ಗೆ ಅಭಿನಂದನೆ ತಿಳಿಸಿದ ಕ್ರಿಕೆಟರ್​​ ಕೆ.ಎಲ್​. ರಾಹುಲ್​; ಕಾರಣ ಏನು?

‘ಅವರ​ ಜತೆ ಸಾಕಷ್ಟು ನೆನಪುಗಳಿವೆ’; ಪುನೀತ್, ‘ಒನ್ ಕಟ್​ ಟೂ ಕಟ್​’ ಸಿನಿಮಾ ಬಗ್ಗೆ ನಟ ದಾನಿಶ್​ ಸೇಠ್​ ಮಾತು

Published On - 2:33 pm, Sun, 13 February 22

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?