Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಮಿರ್​​ ಖಾನ್​ ಸಂಬಂಧಿ ಇಮ್ರಾನ್​ ಖಾನ್​ ಮೂರು ಮತ್ತೊಂದು ಸಿನಿಮಾ ಮಾಡಿ ನಟನೆಗೆ ಗುಡ್​ಬೈ ಹೇಳಿದ್ದು ಯಾಕೆ?

ಬ್ಯಾಕ್​ ಟು ಬ್ಯಾಕ್​ ಸಿನಿಮಾದಲ್ಲಿ ಕಾಣಿಸಿಕೊಂಡ ಬಳಿಕ ಇಮ್ರಾನ್​ ಖಾನ್​ ನಟನೆಗೆ ಗುಡ್​ಬೈ ಹೇಳುವ ನಿರ್ಧಾರಕ್ಕೆ ಬಂದರು. ಆ ತೀರ್ಮಾನದಿಂದಾಗಿ ‘ಡೆಲ್ಲಿ ಬೆಲ್ಲಿ’ ಚಿತ್ರದ ನಿರ್ದೇಶಕ ಅಭಿನಯ್​ ಡಿಯೋ ಅವರಿಗೆ ಬೇಸರ ಆಗಿತ್ತು.

ಆಮಿರ್​​ ಖಾನ್​ ಸಂಬಂಧಿ ಇಮ್ರಾನ್​ ಖಾನ್​ ಮೂರು ಮತ್ತೊಂದು ಸಿನಿಮಾ ಮಾಡಿ ನಟನೆಗೆ ಗುಡ್​ಬೈ ಹೇಳಿದ್ದು ಯಾಕೆ?
‘ಡೆಲ್ಲಿ ಬೆಲ್ಲಿ’ ಸಿನಿಮಾದಲ್ಲಿ ನಟ ಇಮ್ರಾನ್​ ಖಾನ್​
Follow us
TV9 Web
| Updated By: ಮದನ್​ ಕುಮಾರ್​

Updated on: Jul 02, 2021 | 2:03 PM

ಫಿಲ್ಮಿ ಕುಟುಂಬದ ಹಿನ್ನೆಲೆ ಇರುವ ಯುವಕ-ಯುವತಿಯರು ಸುಲಭವಾಗಿ ಚಿತ್ರರಂಗಕ್ಕೆ ಬಂದು ಬಿಡಬಹುದು. ಆದರೆ ಯಶಸ್ಸು ಗಳಿಸುವುದು ಸುಲಭ ಅಲ್ಲ. ಒಂದು ವೇಳೆ ಯಶಸ್ಸು ಸಿಕ್ಕರೂ ಅದನ್ನು ಉಳಿಸಿಕೊಂಡು ಮುಂದೆ ಸಾಗುವುದು ಸಿಕ್ಕಾಪಟ್ಟೆ ಕಷ್ಟದ ಕೆಲಸ. ಬಾಲಿವುಡ್​ ನಟ ಆಮಿರ್​ ಖಾನ್​ ಅವರ ಸಂಬಂಧಿ ಇಮ್ರಾನ್​ ಖಾನ್​ ವಿಚಾರದಲ್ಲಿ ಹಾಗೆಯೇ ಆಯಿತು. ಒಂದೆರಡು ಸಿನಿಮಾಗಳಲ್ಲಿ ಯಶಸ್ಸು ಪಡೆದ ಅವರು ನಂತರ ನಟನೆಗೆ ವಿದಾಯ ಹೇಳಬೇಕಾಯಿತು. ಆ ಬಗ್ಗೆ ‘ಡೆಲ್ಲಿ ಬೆಲ್ಲಿ’ ಚಿತ್ರದ ನಿರ್ದೇಶಕ ಅಭಿನಯ್​ ಡಿಯೋ ಮಾತನಾಡಿದ್ದಾರೆ.

2011ರ ಜು.1ರಂದು ತೆರೆಗೆ ಬಂದ ‘ಡೆಲ್ಲಿ ಬೆಲ್ಲಿ’ ಸಿನಿಮಾ ಸಖತ್​ ಸೌಂಡು ಮಾಡಿತ್ತು. ತುಂಬ ಬೋಲ್ಡ್​ ಆದಂತಹ ಹಾಡುಗಳು, ಡಿಫರೆಂಟ್​ ಆದಂತಹ ಕಥೆ ಮುಂತಾದ ವಿಚಾರಗಳಿಂದ ಆ ಚಿತ್ರ ಜನಮನ ಸೆಳೆದಿತ್ತು. ಆ ಬಳಿಕ ‘ಮೇರೆ ಬ್ರದರ್​ ಕಿ ದುಲ್ಹನ್​’, ‘ಏಕ್​ ಮೇ ಔರ್ ಏಕ್​ ತು’ ಮುಂತಾದ ಚಿತ್ರಗಳಲ್ಲಿ ಇಮ್ರಾನ್​ ಖಾನ್​ ನಟಿಸಿದರು. ಆ ನಂತರದ ಸಿನಿಮಾಗಳಿಂದ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಗಲೇ ಇಲ್ಲ.

ಬ್ಯಾಕ್​ ಟು ಬ್ಯಾಕ್​ ಸಿನಿಮಾದಲ್ಲಿ ಕಾಣಿಸಿಕೊಂಡರೂ ಕೂಡ ಇಮ್ರಾನ್​ ಗೆಲ್ಲಲಿಲ್ಲ. ಕಡೆಗೆ ಅವರು ನಟನೆಗೆ ಗುಡ್​ಬೈ ಹೇಳುವ ನಿರ್ಧಾರಕ್ಕೆ ಬಂದರು. ನಟನೆ ಬಿಟ್ಟು ನಿರ್ದೇಶನದ ಕಡೆಗೆ ಅವರು ಆಸಕ್ತಿ ತೋರಿಸಿದರು. ಅವರು ತೆಗೆದುಕೊಂಡ ಆ ತೀರ್ಮಾನದಿಂದಾಗಿ ‘ಡೆಲ್ಲಿ ಬೆಲ್ಲಿ’ ಚಿತ್ರದ ನಿರ್ದೇಶಕ ಅಭಿನಯ್​ ಡಿಯೋ ಅವರಿಗೆ ಬೇಸರ ಆಗಿತ್ತು. ‘ಡೆಲ್ಲಿ ಬೆಲ್ಲಿ’ ಸಿನಿಮಾ 10 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಅವರು ಇ್ರಮಾನ್​ ಬಗ್ಗೆ ಮಾತನಾಡಿದ್ದಾರೆ.

‘ಇಮ್ರಾನ್​ ಬಗ್ಗೆ ನಾನು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದೆ. ಆದರೆ ಅವರು ನಟನೆಗೆ ವಿದಾಯ ಹೇಳಿದಾಗ ನನಗೆ ಬೇಸರ ಆಗಿತ್ತು. ಅವರಂಥ ಒಳ್ಳೆಯ ವ್ಯಕ್ತಿ ಇಂಡಸ್ಟ್ರಿಯಲ್ಲಿ ಇರಬೇಕಾಗಿತ್ತು. ಕ್ಯಾಮರಾ ಮುಂದೆ ಇರಲಿ ಅಥವಾ ಕ್ಯಾಮರಾ ಹಿಂದೆ ಇರಲಿ, ಅವರೊಬ್ಬ ಪ್ರತಿಭಾವಂತ. ಫಿಲ್ಮ್​ ಮೇಕಿಂಗ್​ ಬಗ್ಗೆ ತರಬೇತಿ ಪಡೆದುಕೊಂಡವರು. ಅವರಿಗೆ ಸಾಧ್ಯವಾಗುವ ಯಾವುದೇ ಪ್ರಕಾರದಲ್ಲಿ ಅವರು ತಮ್ಮ ಕ್ರಿಯೇಟಿವಿಟಿ ತೋರಿಸಬೇಕು. ಅವರು ಇನ್ಮುಂದೆ ನಟಿಸುವುದಿಲ್ಲ ಎಂದು ಹೇಳಿದಾಗ ನನಗೆ ಬಹಳ ಬೇಸರ ಆಗಿತ್ತು’ ಎಂದು ಅಭಿನಯ್​ ಡಿಯೋ ಹೇಳಿದ್ದಾರೆ.

ಇದನ್ನೂ ಓದಿ:

ಯಾಮಿ ಗೌತಮ್​ ಪೋಸ್ಟ್​ನಲ್ಲಿ ಕಂಗನಾ ಕಿರಿಕ್​; ಬಾಲಿವುಡ್​ ನಟನಿಗೆ ಚಪ್ಪಲಿ ತೋರಿಸುವ ಬಗ್ಗೆ ಮಾತನಾಡಿದ ನಟಿ

ಬಾಲಿವುಡ್​ನಲ್ಲಿ ಸ್ಟಾರ್​ ಆದಮೇಲೂ ಸುಶಾಂತ್​ ಧಾರಾವಾಹಿಯಲ್ಲಿ ನಟಿಸಬೇಕಾಯಿತು; ಕಾರಣ ಏನು?

Daily Devotional: ಪೂಜೆ ಸಮಯದಲ್ಲಿ ಅಗರಬತ್ತಿ ಬಳಕೆಯ ಮಹತ್ವ ತಿಳಿಯಿರಿ
Daily Devotional: ಪೂಜೆ ಸಮಯದಲ್ಲಿ ಅಗರಬತ್ತಿ ಬಳಕೆಯ ಮಹತ್ವ ತಿಳಿಯಿರಿ
ಸುನಿತಾ ವಿಲಿಯಮ್ಸ್, ವಿಲ್ಮೋರ್ ಲ್ಯಾಂಡಿಂಗ್: ಅದ್ಭುತ ವಿಡಿಯೋ ಇಲ್ಲಿದೆ ನೋಡಿ
ಸುನಿತಾ ವಿಲಿಯಮ್ಸ್, ವಿಲ್ಮೋರ್ ಲ್ಯಾಂಡಿಂಗ್: ಅದ್ಭುತ ವಿಡಿಯೋ ಇಲ್ಲಿದೆ ನೋಡಿ
Daily Horoscope: ಮಿಥುನ ರಾಶಿಯವರಿಗೆ ಆರು ಗ್ರಹಗಳ ಶುಭಫಲವಿದೆ
Daily Horoscope: ಮಿಥುನ ರಾಶಿಯವರಿಗೆ ಆರು ಗ್ರಹಗಳ ಶುಭಫಲವಿದೆ
ಪತಿಯೊಂದಿಗೆ ಜಗಳವಾಡಿ ವಿದ್ಯುತ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ
ಪತಿಯೊಂದಿಗೆ ಜಗಳವಾಡಿ ವಿದ್ಯುತ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ
ಶಿವಪುರಿಯ ಮಾತಟಿಲಾ ಡ್ಯಾಂನಲ್ಲಿ ಮುಳುಗಿದ ದೋಣಿ; 7 ಜನ ಸಾವನ್ನಪ್ಪಿರುವ ಶಂಕೆ
ಶಿವಪುರಿಯ ಮಾತಟಿಲಾ ಡ್ಯಾಂನಲ್ಲಿ ಮುಳುಗಿದ ದೋಣಿ; 7 ಜನ ಸಾವನ್ನಪ್ಪಿರುವ ಶಂಕೆ
ಕೋರ್ಟ್​ ಆದೇಶ ಹಾಗೂ ವ್ಯಕ್ತಿ ಪ್ರಾಣಕ್ಕೂ ಬೆಲೆ ಕೊಡದ KSRTC, ಬಸ್ ಜಪ್ತಿ!
ಕೋರ್ಟ್​ ಆದೇಶ ಹಾಗೂ ವ್ಯಕ್ತಿ ಪ್ರಾಣಕ್ಕೂ ಬೆಲೆ ಕೊಡದ KSRTC, ಬಸ್ ಜಪ್ತಿ!
ಚಂದನ್ ಶೆಟ್ಟಿ ಜೊತೆ ಮದುವೆ ಗಾಸಿಪ್, ಸ್ಪಷ್ಟನೆ ಕೊಟ್ಟ ಸಂಜನಾ
ಚಂದನ್ ಶೆಟ್ಟಿ ಜೊತೆ ಮದುವೆ ಗಾಸಿಪ್, ಸ್ಪಷ್ಟನೆ ಕೊಟ್ಟ ಸಂಜನಾ
ಕುಮಾರಸ್ವಾಮಿ ನನ್ನನ್ನು ಬಯ್ಯದೆ ಬೇರೆ ಯಾರನ್ನು ಬಯ್ಯಲು ಸಾಧ್ಯ? ಶಿವಕುಮಾರ್
ಕುಮಾರಸ್ವಾಮಿ ನನ್ನನ್ನು ಬಯ್ಯದೆ ಬೇರೆ ಯಾರನ್ನು ಬಯ್ಯಲು ಸಾಧ್ಯ? ಶಿವಕುಮಾರ್
ಜಾರ್ಖಂಡ್‌ನ ದಿಯೋಘರ್‌ನಲ್ಲಿ ಇಂಡಿಯನ್ ಆಯಿಲ್ ಸ್ಥಾವರದಲ್ಲಿ ಬೆಂಕಿ ಅವಘಡ
ಜಾರ್ಖಂಡ್‌ನ ದಿಯೋಘರ್‌ನಲ್ಲಿ ಇಂಡಿಯನ್ ಆಯಿಲ್ ಸ್ಥಾವರದಲ್ಲಿ ಬೆಂಕಿ ಅವಘಡ
ಕರ್ನಾಟಕ ಮೊದಲು ತಮಿಳುನಾಡು ಚರ್ಚೆ ಮಾಡಬೇಕಾದ ಅವಶ್ಯಕತೆ ಸ್ಪಷ್ಟವಾಗುತ್ತಿದೆ
ಕರ್ನಾಟಕ ಮೊದಲು ತಮಿಳುನಾಡು ಚರ್ಚೆ ಮಾಡಬೇಕಾದ ಅವಶ್ಯಕತೆ ಸ್ಪಷ್ಟವಾಗುತ್ತಿದೆ