AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಟ್ಟಾಗಿ ನಡೆಯುತ್ತಿದ್ದದ್ದು ಬಯಲಾಯ್ತು; ಮೊದಲ ಬಾರಿಗೆ ಮಂಜು ವಿರುದ್ಧ ತಿರುಗಿ ಬಿದ್ರು ದಿವ್ಯಾ ಸುರೇಶ್​

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಂಬರಗಿ ತಮ್ಮ ನಿಜವಾದ ಆಟ ಶುರು ಮಾಡಿದ್ದಾರೆ. ಮಂಜು ವಿರುದ್ಧ ಎಲ್ಲರನ್ನೂ ಎತ್ತಿಕಟ್ಟುತ್ತಿದ್ದಾರೆ.

ಗುಟ್ಟಾಗಿ ನಡೆಯುತ್ತಿದ್ದದ್ದು ಬಯಲಾಯ್ತು; ಮೊದಲ ಬಾರಿಗೆ ಮಂಜು ವಿರುದ್ಧ ತಿರುಗಿ ಬಿದ್ರು ದಿವ್ಯಾ ಸುರೇಶ್​
ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್​
ರಾಜೇಶ್ ದುಗ್ಗುಮನೆ
| Edited By: |

Updated on: Mar 27, 2021 | 7:00 AM

Share

ಬಿಗ್​ ಬಾಸ್ ಮನೆಯಲ್ಲಿ ದಿವ್ಯಾ ಸುರೇಶ್​ ಡಬಲ್​ ಗೇಮ್​ ಆಡುತ್ತಿದ್ದಾರೆ. ಮಂಜು ಪಾವಗಡ ಎದುರಿಗೆ ನಗು ನಗುತ್ತಾ ಮಾತನಾಡುವ ಅವರು, ಪ್ರಶಾಂತ್​ ಸಂಬರಗಿ ಎದುರು ಹೋಗಿ ಮಂಜು ವಿರುದ್ಧವೇ ಮಾತನಾಡುತ್ತಾರೆ. ಮಂಜು ಜತೆಗಿನ ಫ್ರೆಂಡ್​ಶಿಪ್​ ಜಾಸ್ತಿ ಆಗಿರುವುದರಿಂದ ನಾನು ವೀಕ್​ ಅನಿಸೋ ತರ ಫೀಲ್​ ಆಯ್ತು ಎಂದು ಹೇಳಿದ್ದರು. ಇದೆಲ್ಲವೂ ಗುಟ್ಟಾಗಿಯೇ ನಡೆಯುತ್ತಾ ಇತ್ತು. ಆದರೆ, ಈಗ ಬಿಗ್​ ಬಾಸ್​ ಮನೆಯಲ್ಲಿ ಇದೇ ಮೊದಲ ಬಾರಿಗೆ ದಿವ್ಯಾ ಸುರೇಶ್​ ನೇರವಾಗಿ ಮಂಜು ವಿರುದ್ಧ ತಿರುಗಿ ಬಿದ್ದಿದ್ದಾರೆ. ಗುಟ್ಟಾಗಿ ನಡೆಯುತ್ತಿದ್ದಿದ್ದು ಈಗ ಬಯಲಾದಂತಾಗಿದೆ. ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಂಬರಗಿ ತಮ್ಮ ನಿಜವಾದ ಆಟ ಶುರು ಮಾಡಿದ್ದಾರೆ. ಮಂಜು ವಿರುದ್ಧ ಎಲ್ಲರನ್ನೂ ಎತ್ತಿಕಟ್ಟುತ್ತಿದ್ದಾರೆ. ಮಂಜು ಆಪ್ತೆ ಎನಿಸಿಕೊಂಡ ದಿವ್ಯಾ ಸುರೇಶ್​ ಬಳಿಯೂ ಚಾಡಿ ಹೇಳುವ ಕೆಲಸ ಮಾಡಿದ್ದರು. ಎಲ್ಲರೂ ಒಂದೊಂದು ಐಡೆಂಟಿಟಿ ಹೊಂದಿದ್ದಾರೆ. ಶುಭಾಗೆ ಅವರದ್ದೇ ಆದ ಚಾರ್ಮ್​ ಇದೆ. ಮಹಿಳೆಯರಲ್ಲಿ ನೀನೇ ಸ್ಟ್ರಾಂಗ್​. ಆದರೆ, ನೀನು ಮಂಜುನ ಬಾಲ ಆಗ್ತಾ ಇದೀಯಾ. ನೆರಳಲ್ಲಿ ಬದುಕುಬೇಡ. ನೀನು ಒಬ್ಬರ ಪ್ರಾಪರ್ಟಿ ಆಗಬಾರದು ಎಂದು ಬುದ್ಧಿ ಹೇಳಿದ್ದರು. ಇದಾದ ಬೆನ್ನಲ್ಲೇ ದಿವ್ಯಾ ಇದೇ ಮೊದಲ ಬಾರಿಗೆ ಮಂಜು ಅವರ ವಿರುದ್ಧವಾಗಿ ಮಾತನಾಡಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಮಂಜುಗೆ ಕಿಚನ್​ ಡಿಪಾರ್ಟ್​ಮೆಂಡ್ ನೀಡಲಾಗಿದೆ. ಹೀಗಾಗಿ, ಪಾತ್ರೆ ತೊಳೆಯಬೇಕಿತ್ತು. ಆದರೆ, ಮಂಜು ಅಡುಗೆ ಮನೆಗೆ ಹೋಗದೆ ಹೊರ ಭಾಗದಲ್ಲಿ ಕುಳಿತು ಸುದ್ದಿ ಹೇಳುತ್ತಾರೆ ನಿಂತಿದ್ದರು. ಅಷ್ಟೇ ಅಲ್ಲ, ನಾನು ವಾಕಿಂಗ್​ ಮುಗಿಸಿ ಬಂದು ತೊಳೆಯುತ್ತೇನೆ ಕಾಯಿರಿ ಎಂದಿದ್ದರು.

ಆದರೆ, ದಿವ್ಯಾ ಕಾದಿಲ್ಲ. ಬದಲಿಗೆ ಅವರು ಪಾತ್ರೆ ತೊಳೆಯುವ ಕೆಲಸ ಮಾಡಿದ್ದಾರೆ. ಹೀಗಾಗಿ ನಾನು ಕಿಚನ್​ ಹೋಗಲ್ಲ ಎಂದಿದ್ದಾರೆ ಮಂಜು. ಈ ವಿಚಾರ ದಿವ್ಯಾ ಅವರ ಸಿಟ್ಟಿಗೆ ಕಾರಣವಾಗಿದೆ. ಇಬ್ಬರ ನಡುವೆಯೂ ಈ ವಿಚಾರಕ್ಕೆ ವಾಗ್ವಾದ ಕೂಡ ಏರ್ಪಟ್ಟಿದೆ. ದಿವ್ಯಾ ಸುರೇಶ್​ ನಗೋಕೆ ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ.

ಇದನ್ನೂ ಓದಿ: Divya Uruduga: ಬಿಗ್​ ಬಾಸ್​ ಮನೆಯಲ್ಲಿರುವ ದಿವ್ಯಾ ಉರುಡುಗಗೆ ಪ್ರಾಣ ಬೆದರಿಕೆ!

Follow Us
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ನಶಾಮುಕ್ತ ಭಾರತ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು
ನಶಾಮುಕ್ತ ಭಾರತ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು
ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; ಬೆಂಗಳೂರಿನಲ್ಲಿ ಹೈ ಅಲರ್ಟ್
ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; ಬೆಂಗಳೂರಿನಲ್ಲಿ ಹೈ ಅಲರ್ಟ್