Divya Uruduga: ಬಿಗ್​ ಬಾಸ್​ ಮನೆಯಲ್ಲಿರುವ ದಿವ್ಯಾ ಉರುಡುಗಗೆ ಪ್ರಾಣ ಬೆದರಿಕೆ!

ಮನೆ ಮಂದಿಯೆಲ್ಲರೂ ಮಂಜು ಅವರನ್ನು ಕಾಡಿಸುತ್ತಿದ್ದಾರೆ. ಸಿಕ್ಕ ಸಿಕ್ಕಲ್ಲೆಲ್ಲ ಮಂಜುಗೆ ಕಾಟ ಕೊಡಲಾಗುತ್ತಿದೆ .

Divya Uruduga: ಬಿಗ್​ ಬಾಸ್​ ಮನೆಯಲ್ಲಿರುವ ದಿವ್ಯಾ ಉರುಡುಗಗೆ ಪ್ರಾಣ ಬೆದರಿಕೆ!
ದಿವ್ಯಾ ಉರುಡುಗ
Follow us
|

Updated on: Mar 26, 2021 | 9:57 PM

ಬಿಗ್​ ಬಾಸ್​ ಮನೆ ಸೇರಿದ್ಮೇಲೆ ಸ್ಪರ್ಧಿಗಳಿಗೆ ಸೇಫ್​ ಎನ್ನುವುದು ತಲೆಯಲ್ಲಿರುತ್ತದೆ. ಏನೇ ಆದರೂ ಬಿಗ್​ ಬಾಸ್​ ನೋಡಕೊಳ್ಳುತ್ತಾರೆ ಎನ್ನುವ ಭರವಸೆ ಇರುತ್ತದೆ. ಹೀಗಾಗಿ, ಬಿಗ್​ ಬಾಸ್​ ಮನೆ ಸೇರಿರುವ ಸ್ಪರ್ಧಿಗಳು ಇದ್ದಷ್ಟು ದಿನ ಹಾಯಾಗಿ ಕಾಲಕಳೆಯುತ್ತಾರೆ. ಆದರೆ, ಬಿಗ್​ ಬಾಸ್ ಮನೆ ಒಳಗೆ ಇರುವ ದಿವ್ಯಾ ಉರುಡುಗಗೆ ಪ್ರಾಣ ಬೆದರಿಕೆ ಬಂದಿದೆ. ಅದೂ ಮನೆಯಲ್ಲಿರುವ ಸ್ಪರ್ಧಿಯಿಂದಲೇ! ಅಷ್ಟಕ್ಕೂ ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾಗೆ ಪ್ರಾಣ ಬೆದರಿಕೆ ಹಾಕಿದವರು ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಮನೆಯಲ್ಲಿರುವ ಸ್ಪರ್ಧಿಗಳಿಗೆ ಬಿಗ್​ ಬಾಸ್​ ಒಂದು ಟಾಸ್ಕ್​ ನೀಡಿದ್ದರು. ಈ ಟಾಸ್ಕ್​ ಅನುಸಾರ ಮನೆಯಲ್ಲಿ ಅತಿ ಹೆಚ್ಚು ಸೈಲೆಂಟ್​ ಇರುವವರಿಗೆ ಮೈಕ್​ ಹಾಗೂ ಅತಿಯಾಗಿ ಮಾತನಾಡುವವರಿಗೆ ಪ್ಲಾಸ್ಟರ್​ ನೀಡಬೇಕಿತ್ತು. ಅತಿ ಹೆಚ್ಚು ಮಾತಾಡೋದು ಮಂಜು ಎಂದು ಮನೆಯ ಬಹುತೇಕರು ಹೇಳಿದ್ದರು. ಹೀಗಾಗಿ, ಮನೆ ಮಂದಿ ಅತಿ ಹೆಚ್ಚು ಪ್ಲಾಸ್ಟರ್​ ನೀಡಿದ್ದು ಮಂಜುಗೆ. ಇನ್ನು, ಬಿಗ್​ ಬಾಸ್​ ಮನೆಯಲ್ಲಿ ನಾಲ್ಕು ವಾರ ಕಳೆದರೂ ವೈಷ್ಣವಿ ಅಷ್ಟಾಗಿ ಮಾತನಾಡುವುದನ್ನು ಕಲಿತಿಲ್ಲ. ಹೀಗಾಗಿ, ವೈಷ್ಣವಿಗೆ ಎಲ್ಲರೂ ಮೈಕ್​ ನೀಡಿದ್ದರು. ಬಿಗ್​ ಬಾಸ್​ ಧ್ವನಿಯಲ್ಲಿ ಆದೇಶವೊಂದು ಬಂದಿತ್ತು. ಇದರ ಅನುಸಾರ, ಮುಂದಿನ ಆದೇಶ ಬರುವವರೆಗೂ ಮಂಜು ಮಾತನಾಡುವ ಹಾಗಿಲ್ಲ. ಯಾರ ಜತೆಯಾದರೂ ಮಾತನಾಡಬೇಕು ಎಂದರೆ ವೈಷ್ಣವಿ ಮೂಲಕವೇ ಮಾತುಕತೆ ನಡೆಯಬೇಕು ಎಂದು ಬಿಗ್​ ಬಾಸ್​ ಹೇಳಿದ್ದರು.

ಇದೇ ವಿಚಾರ ಇಟ್ಟುಕೊಂಡು ಮನೆ ಮಂದಿಯೆಲ್ಲರೂ ಮಂಜು ಅವರನ್ನು ಕಾಡಿಸುತ್ತಿದ್ದಾರೆ. ಸಿಕ್ಕ ಸಿಕ್ಕಲ್ಲೆಲ್ಲ ಮಂಜುಗೆ ಕಾಟ ಕೊಡಲಾಗುತ್ತಿದೆ. ದಿವ್ಯಾ ಉರುಡುಗ ಕೂಡ ಮಂಜುಗೆ ತೊಂದರೆ ಕೊಟ್ಟಿದ್ದಾರೆ. ಅವರನ್ನು ಮಾತನಾಡಿಸೋಕೆ ಪ್ರಯತ್ನಿಸಿದ್ದಾರೆ. ಆಗ ಮಂಜು ಕಟಕಟನೆ ಹಲ್ಲು ಕಡಿದಿದ್ದಾರೆ. ಅಷ್ಟೇ ಅಲ್ಲ, ನಿಮಗೆಲ್ಲಾ ಐತೆ. ಹಲ್ಲಲ್ಲೇ ಎಲ್ಲವನ್ನೂ ಕಡಿದು ಹಾಕಿ ಬಿಡ್ತೇನೆ ಎಂದು ವೈಷ್ಣವಿ ಮೂಲಕ ಹೇಳಿಸಿದ್ದಾರೆ. ಆಗ ದಿವ್ಯಾ, ಬಿಗ್​ ಬಾಸ್​ ನನಗೆ ಪ್ರಾಣ ಬೆದರಿಕೆ ಇದೆ. ದಯವಿಟ್ಟು ರಕ್ಷಣೆ ನೀಡಿ ಎಂದು ನಕ್ಕಿದ್ದಾರೆ.

ಇದನ್ನೂ ಓದಿ: BBK8: ನಿಧಿ-ಶುಭಾ ಬಿಗ್​ ಬಾಸ್​ ಮನೆಯ ಗಾಸಿಪ್​ ರಾಣಿಯರು! ಮಲಗುವ ಮುನ್ನ ಬರೀ ಇಂಥ ಮಾತುಗಳೇ

‘ಸ್ಕರ್ಟ್​ ಹಾಕ್ಕೊಂಡು ಮಲಗಿದ್ದಾಗ ನಮ್ಮ ತಂದೆಯೇ ಕೆಟ್ಟದಾಗಿ ನಡೆದುಕೊಂಡ್ರು’: ಬಿಗ್​ ಬಾಸ್​ ಚಂದ್ರಕಲಾ ಬದುಕಿನ ಕಹಿ ಘಟನೆ!

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!