AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ಕರ್ ವಿಜೇತ ನಿರ್ದೇಶಕನಿಗೆ ನೋ ಹೇಳಿದ ಫಹಾದ್ ಫಾಸಿಲ್

Fahadh Faasil: ಭಾರತದ ಅತ್ಯುತ್ತಮ ನಟರಲ್ಲಿ ಒಬ್ಬರಾದ ಫಹಾದ್ ಫಾಸಿಲ್ ಕೆಲವು ಅದ್ಭುತ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್​​ನಲ್ಲಿ ಅವರ ನಟನೆಗೆ ಅಭಿಮಾನಿಗಳಿದ್ದಾರೆ. ಫಹಾದ್ ಫಾಸಿಲ್ ಹವಾ ಎಷ್ಟಿದೆಯೆಂದರೆ ಹಾಲಿವುಡ್​ನ ಖ್ಯಾತ ನಿರ್ದೇಶಕ ಕರೆ ಮಾಡಿ ಸಿನಿಮಾನಲ್ಲಿ ಅವಕಾಶ ನೀಡಿದ್ದಾರೆ. ಆದರೆ ಫಹಾದ್ ಫಾಸಿಲ್ ಹಾಲಿವುಡ್ ನಿರ್ದೇಶಕನಿಗೆ ನೋ ಹೇಳಿದ್ದಾರೆ. ಅದಕ್ಕೆ ಕಾರಣವನ್ನೂ ನೀಡಿದ್ದಾರೆ ಫಹಾದ್ ಫಾಸಿಲ್​.

ಆಸ್ಕರ್ ವಿಜೇತ ನಿರ್ದೇಶಕನಿಗೆ ನೋ ಹೇಳಿದ ಫಹಾದ್ ಫಾಸಿಲ್
Fahad Fasil
ಮಂಜುನಾಥ ಸಿ.
|

Updated on:Aug 17, 2025 | 7:58 PM

Share

ಫಹಾದ್ ಫಾಸಿಲ್ (Fahadh Faasil), ಪ್ರಸ್ತುತ ಭಾರತೀಯ ಚಿತ್ರರಂಗದ ಬೆರಳಿಣೆಕೆಯ ಪ್ರತಿಭಾವಂತ ಸ್ಟಾರ್ ನಟರುಗಳಲ್ಲಿ ಒಬ್ಬರು. ಫಹಾದ್ ಫಾಸಿಲ್​ಗೆ ಸವಾಲಾಗುವ ಪಾತ್ರಗಳೇ ಇಲ್ಲ. ಹೀರೋ, ವಿಲನ್, ಕಮಿಡಿಯನ್ ಎಲ್ಲ ರೀತಿಯ ಪಾತ್ರಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಮಲಯಾಳಂ ಸಿನಿಮಾಗಳಿಗೆ ಪ್ರತ್ಯೇಕ ಅಭಿಮಾನಿ ವರ್ಗ ಹುಟ್ಟಿಕೊಂಡಿರುವಂತೆಯೇ ಫಹಾದ್ ಫಾಸಿಲ್​ಗೂ ಪ್ಯಾನ್ ಇಂಡಿಯಾ ಲೆವೆಲ್​​ನಲ್ಲಿ ಪ್ರತ್ಯೇಕ ಅಭಿಮಾನಿ ವರ್ಗವೇ ಹುಟ್ಟಿಕೊಂಡಿದೆ. ಫಹಾದ್ ಫಾಸಿಲ್​ ಖ್ಯಾತಿ ಯಾವ ಲೆವೆಲ್​ಗೆ ಹಬ್ಬಿದೆಯೆಂದರೆ ಆಸ್ಕರ್ ವಿಜೇತ ಸಿನಿಮಾ ನಿರ್ದೇಶಕರೊಬ್ಬರು ಫಹಾದ್ ಅನ್ನು ತಮ್ಮ ಸಿನಿಮಾದಲ್ಲಿ ನಟಿಸುವಂತೆ ಕೇಳಿದ್ದಾರೆ ಆದರೆ ಅದಕ್ಕೆ ನೋ ಎಂದಿದ್ದಾರೆ ಫಹಾದ್ ಫಾಸಿಲ್.

‘ಟೈಟಾನಿಕ್’ ಹೀರೋ ಲಿಯೊನಾರ್ಡೊ ಡಿ ಕ್ಯಾಫ್ರಿಯೋಗೆ ಮೊದಲ ಆಸ್ಕರ್ ತಂದುಕೊಟ್ಟ ‘ದಿ ರೆವೆನೆಂಟ್’ ಸಿನಿಮಾ ನಿರ್ದೇಶನ ಮಾಡಿರುವ ಹಾಲಿವುಡ್​ನ ಲೆಜೆಂಡರಿ ನಿರ್ದೇಶಕರಲ್ಲಿ ಒಬ್ಬರು ಎನಿಸಿಕೊಂಡಿರುವ ಆಲೆಕ್ಸಾಂಡ್ರೊ ಗೊಂಜಾಲಿಸ್ ಇನ್ಹಾರಿತೊ ಹೊಸ ಸಿನಿಮಾ ಒಂದರ ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾದ ಪಾತ್ರವೊಂದರಲ್ಲಿ ನಟಿಸಲು ಫಹಾದ್ ಫಾಸಿಲ್ ಅವರನ್ನು ಕೇಳಿದ್ದಾರೆ. ಆದರೆ ಫಹಾದ್ ಫಾಸಿಲ್ ಅವರಿಗೆ ನೋ ಹೇಳಿದ್ದಾರೆ.

‘ಬರ್ಡ್​ ಮ್ಯಾನ್’, ‘ದಿ ರೆವನೆಂಟ್’ ಇನ್ನೂ ಕೆಲವು ಅತ್ಯುತ್ತಮ ಸಿನಿಮಾಗಳನ್ನು ಆಲೆಕ್ಸಾಂಡ್ರೊ ಗೊಂಜಾಲಿಸ್ ಇನ್ಹಾರಿತೊ ನಿರ್ದೇಶನ ಮಾಡಿದ್ದು, ಅವರು ಇದೀಗ ಬ್ಲಾಕ್ ಕಾಮಿಡಿ ಜಾನರ್​ನ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಒಂದು ನಿಗದಿತ ಪಾತ್ರದಲ್ಲಿ ನಟಿಸಲು ಸ್ವತಃ ನಿರ್ದೇಶಕ ಆಲೆಕ್ಸಾಂಡ್ರೊ ಗೊಂಜಾಲಿಸ್ ಇನ್ಹಾರಿತೊ ಫಹಾದ್ ಅವರನ್ನು ಕೇಳಿದರಂತೆ. ವಿಡಿಯೋ ಕಾಲ್​​ನಲ್ಲಿ ಪಾತ್ರದ ಬಗ್ಗೆ ಚರ್ಚೆ ಸಹ ಆಯ್ತಂತೆ. ಆದರೆ ಎಲ್ಲ ಮಾತುಕತೆಗಳ ಬಳಿಕ ಫಹಾದ್ ನೋ ಹೇಳಿದರಂತೆ.

ಇದನ್ನೂ ಓದಿ:ಫಹಾದ್ ಫಾಸಿಲ್ ಬಳಸುವುದು ಕೀಪ್ಯಾಡ್ ಫೋನು, ಆದರೆ ಬೆಲೆ ಎಷ್ಟು ಗೊತ್ತೆ?

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಫಹಾದ್ ಫಾಸಿಲ್, ‘ವಿಡಿಯೋ ಕಾಲ್​​ನಲ್ಲಿ ನಾವು ಮಾತನಾಡಿದೆವು. ಆದರೆ ಆ ಸಿನಿಮಾನಲ್ಲಿ ನಟಿಸಲು ನನ್ನ ಮಾತನಾಡುವ ರೀತಿ (ಆಕ್ಸೆಂಟ್) ಸಮಸ್ಯೆ ಆಯ್ತು. ಅದನ್ನು ಸರಿಮಾಡಲು ತರಬೇತಿಗಾಗಿ ನಾನು ನಾಲ್ಕು ತಿಂಗಳು ಅಮೆರಿಕದ ನ್ಯೂಯಾರ್ಕ್​​ನಲ್ಲಿ ಕಳೆಯಬೇಕು ಎಂದರು. ಆದರೆ ಆ ಅವಧಿಗೆ ನನಗೆ ಯಾವುದೇ ಸಂಭಾವನೆ ಸಹ ಕೊಡುವುದಿಲ್ಲ ಎಂದರು. ಹೀಗಾಗಿ ನಾನು ಆ ಸಿನಿಮಾದಲ್ಲಿ ನಟಿಸಲಿಲ್ಲ’ ಎಂದಿದ್ದಾರೆ ಫಹಾದ್ ಫಾಸಿಲ್.

ಅಲ್ಲದೆ, ಅಷ್ಟು ರಿಸ್ಕ್ ಹಾಕಿ ಸಿನಿಮಾನಲ್ಲಿ ನಟಿಸುವಂಥಹಾ ಫೈರ್ ಇರುವ ಪಾತ್ರ ಎಂದು ನನಗೆ ಅದು ಅನಿಸಲಿಲ್ಲ ಹಾಗಾಗಿ ನಾನು ರಿಸ್ಕ್ ತೆಗೆದುಕೊಳ್ಳಲಿಲ್ಲ ಎಂದಿದ್ದಾರೆ ಫಹಾದ್ ಫಾಸಿಲ್. ಅಂದಹಾಗೆ ಫಹಾದ್ ಬೇಡ ಎಂದಿರುವ ಹಾಲಿವುಡ್ ಸಿನಿಮಾದ ನಾಯಕ ವಿಶ್ವವಿಖ್ಯಾತ ನಟ ಟಾಮ್ ಕ್ರೂಸ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:57 pm, Sun, 17 August 25

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!