AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

51ನೇ ವಯಸ್ಸಿಗೆ ಮೂರನೇ ಬಾರಿ ತಂದೆ ಆಗುತ್ತಿದ್ದಾರೆ ಫರ್ಹಾನ್ ಅಖ್ತರ್?

Farhan Akhtar: ಫರ್ಹಾನ್ ಅಖ್ತರ್ ಮತ್ತು ಶಿಬಾನಿ ದಾಂಡೇಕರ್ ಅವರ ಮದುವೆಯಾಗಿ ಮೂರು ವರ್ಷಗಳು ಸಂದಿವೆ. ಶಿಬಾನಿ ಗರ್ಭಿಣಿ ಎಂಬ ವದಂತಿಗಳು ಹಬ್ಬುತ್ತಿವೆ, ಆದರೆ ಫರ್ಹಾನ್ ಅವರ ಮಾಜಿ ಪತ್ನಿ ಅಧುನಾ ಇದನ್ನು ನಿರಾಕರಿಸಿದ್ದಾರೆ. ಫರ್ಹಾನ್ ತಮ್ಮ ವಿಚ್ಛೇದನ ಮತ್ತು ಅದರ ಮಕ್ಕಳ ಮೇಲಿನ ಪರಿಣಾಮದ ಬಗ್ಗೆ ರಿಯಾ ಚಕ್ರವರ್ತಿಯ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಈ ದಂಪತಿಯ ಮುಂಬರುವ ಯೋಜನೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

51ನೇ ವಯಸ್ಸಿಗೆ ಮೂರನೇ ಬಾರಿ ತಂದೆ ಆಗುತ್ತಿದ್ದಾರೆ ಫರ್ಹಾನ್ ಅಖ್ತರ್?
Farhan Akhtar
 ಶ್ರೀಲಕ್ಷ್ಮೀ ಎಚ್
| Edited By: |

Updated on:Jan 12, 2025 | 6:12 PM

Share

ನಟ, ನಿರ್ದೇಶಕ ಫರ್ಹಾನ್ ಅಖ್ತರ್ ಮತ್ತು ಶಿಬಾನಿ ದಾಂಡೇಕರ್ 2022ರಲ್ಲಿ ಕೆಲವೇ ಅತಿಥಿಗಳ ಸಮ್ಮುಖದಲ್ಲಿ ವಿವಾಹವಾದರು. ಇದೀಗ ಮದುವೆಯಾಗಿ ಮೂರು ವರ್ಷಗಳ ನಂತರ ಹೊಸ ಸುದ್ದಿ ನೀಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಶಿಬಾನಿ ಜೊತೆ ಫರ್ಹಾನ್ಗೆ ಇದು ಎರಡನೇ ಮದುವೆ. ಈ ಹಿಂದೆ ಅವರು ಮೊದಲು ಕೇಶ ವಿನ್ಯಾಸಕಿ ಅಧುನಾ ಭವಾನಿ ಅವರನ್ನು ವಿವಾಹವಾದರು. ಫರ್ಹಾನ್ ಮತ್ತು ಅಧುನಾ ಅವರಿಗೆ ಶಕ್ಯಾ ಮತ್ತು ಅಕಿರಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮದುವೆಯಾದ 16 ವರ್ಷಗಳ ನಂತರ, ಫರ್ಹಾನ್ ಮತ್ತು ಅಧುನಾ ವಿಚ್ಛೇದನ ಪಡೆದರು. ಇದೀಗ 51ನೇ ವಯಸ್ಸಿನಲ್ಲಿ ಫರ್ಹಾನ್ ಮೂರನೇ ಬಾರಿಗೆ ತಂದೆಯಾಗಲಿದ್ದಾರೆ ಎಂಬ ಚರ್ಚೆ ಇದೆ. ಇದಕ್ಕೆ ಅವರ ಮಲತಾಯಿ ಮತ್ತು ಹಿರಿಯ ನಟಿ ಅಧುನಾ ಮೌನವಾಗಿದ್ದಾರೆ.

ಏಪ್ರಿಲ್ 2017 ರಲ್ಲಿ, ಫರ್ಹಾನ್ ಅಧುನಾಗೆ ವಿಚ್ಛೇದನ ನೀಡಿದರು. ಅದರ ನಂತರ, ಫರ್ಹಾನ್ ಮತ್ತು ಶಿಬಾನಿ ಇನ್‌ಸ್ಟಾಗ್ರಾಮ್ ಡಿಎಂ (ಡೈರೆಕ್ಟ್ ಮೆಸೇಜ್) ಮೂಲಕ ಮೊದಲ ಬಾರಿಗೆ ಪರಸ್ಪರ ಮಾತುಕತೆ ನಡೆಸಿದರು. ಈ ಸಂವಹನವು ಕ್ರಮೇಣ ಸ್ನೇಹವಾಗಿ ಮತ್ತು ನಂತರ ಪ್ರೀತಿಗೆ ತಿರುಗಿತು. ಆ ಬಳಿಕ ಇವರು ಮದುವೆ ಆದರು.

ಫರ್ಹಾನ್ ತನ್ನ 51 ನೇ ಹುಟ್ಟುಹಬ್ಬವನ್ನು 9 ಜನವರಿ 2025 ರಂದು ಆಚರಿಸಿದರು. ಇದೇ ಹುಟ್ಟುಹಬ್ಬದ ದಿನವೇ ಶಿಬಾನಿ ಪ್ರೆಗ್ನೆಂಟ್ ಎಂಬ ಮಾತು ಶುರುವಾಗಿತ್ತು. 2025ರ ಹೊಸ ವರ್ಷದಲ್ಲಿ ಶಿಬಾನಿ ಮಗುವಿಗೆ ಜನ್ಮ ನೀಡಲಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ಚರ್ಚೆಗಳ ಬಗ್ಗೆ ಅಧುನಾ ಅಜ್ಮಿ ‘ಇ ಟೈಮ್ಸ್’ಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಶನದಲ್ಲಿ ಶಿಬಾನಿ ಬಗ್ಗೆ ಅಧುನಾ ಅವರನ್ನು ಕೇಳಿದಾಗ, ‘ಅದರಲ್ಲಿ ಯಾವುದೇ ಸತ್ಯವಿಲ್ಲ’ಎಂದು ಹೇಳಿದರು. ಈ ಉತ್ತರದೊಂದಿಗೆ ಅಧುನಾ ಅಜ್ಮಿ ಫರ್ಹಾನ್ ಮತ್ತು ಶಿಬಾನಿ ಶೀಘ್ರದಲ್ಲೇ ಪೋಷಕರಾಗುತ್ತಾರೆ ಎಂಬ ಮಾತಿಗೆ ಅಂತ್ಯ ಹಾಡಿದ್ದಾರೆ.

ಇದನ್ನೂ ಓದಿ:ಬಾಲಿವುಡ್​ಗೆ ಕಾಲಿಟ್ಟ ‘ಕೆಜಿಎಫ್’ ನಟಿಯ ಪುತ್ರಿ, ಜಾನ್ಹವಿ, ಸಾರಾಗೆ ನಡುಕ

ಕೆಲ ದಿನಗಳ ಹಿಂದೆ ನಟಿ ರಿಯಾ ಚಕ್ರವರ್ತಿ ಅವರ ಯೂಟ್ಯೂಬ್ ಚಾನೆಲ್‌ಗೆ ಫರ್ಹಾನ್ ಸಂದರ್ಶನ ನೀಡಿದ್ದರು. ಈ ಸಂದರ್ಶನದಲ್ಲಿ, ಅವರು ತಮ್ಮ ವಿಚ್ಛೇದನದ ಬಗ್ಗೆ ಮತ್ತು ಅದು ಅವರ ಹೆಣ್ಣುಮಕ್ಕಳ ಮೇಲೆ ಹೇಗೆ ಪರಿಣಾಮ ಬೀರಿತು ಎಂಬುದರ ಬಗ್ಗೆ ತೆರೆದಿಟ್ಟರು. ‘ವಿಚ್ಛೇದನವನ್ನು ಯಾರೂ ಅರಗಿಸಿಕೊಳ್ಳುವುದು ಸುಲಭವಲ್ಲ. ಏಕೆಂದರೆ ತುಂಬಾ ಬಲವಾದ ಮತ್ತು ಪರಿಪೂರ್ಣವೆಂದು ಭಾವಿಸುವ ಸಂಬಂಧವು ಬಿರುಕು ಬಿಡುತ್ತದೆ. ಆದ್ದರಿಂದ, ನನ್ನ ಮಕ್ಕಳಲ್ಲಿ ನನ್ನ ಬಗ್ಗೆ ಅಸಮಾಧಾನವಿದೆ. ಆದರೆ ಇಬ್ಬರೂ ಮುಕ್ತವಾಗಿ ವ್ಯಕ್ತಪಡಿಸುವುದಿಲ್ಲ. ಇದು ಸಮಯದೊಂದಿಗೆ ಉತ್ತಮವಾಗಬಹುದು. ಸಮಯ ಮತ್ತು ಸಂವಹನವು ಸ್ವಲ್ಪ ಮಟ್ಟಿಗೆ ಪರಿಸ್ಥಿತಿಯನ್ನು ಸುಧಾರಿಸುತ್ತದೆ’ ಎಂದು ಅವರು ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:38 pm, Sun, 12 January 25

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಏಕಾಏಕಿ ಕಳಚಿ ಬಿತ್ತು ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಟೈರ್
ಏಕಾಏಕಿ ಕಳಚಿ ಬಿತ್ತು ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಟೈರ್
ಇಡೀ ವಿಶ್ವಕ್ಕೆ ಇಂಟರ್ನೆಟ್ ಆಘಾತ ನೀಡುತ್ತಾ ಇರಾನ್?
ಇಡೀ ವಿಶ್ವಕ್ಕೆ ಇಂಟರ್ನೆಟ್ ಆಘಾತ ನೀಡುತ್ತಾ ಇರಾನ್?
ಗಿನ್ನಿಸ್​​ ದಾಖಲೆ ಬರೆದ ತುಮಕೂರು: ಪ್ರಮಾಣಪತ್ರ ಸ್ವೀಕರಿಸಿದ ಸಿದ್ದರಾಮಯ್ಯ
ಗಿನ್ನಿಸ್​​ ದಾಖಲೆ ಬರೆದ ತುಮಕೂರು: ಪ್ರಮಾಣಪತ್ರ ಸ್ವೀಕರಿಸಿದ ಸಿದ್ದರಾಮಯ್ಯ