AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂವರು ಭಾರತೀಯರನ್ನು ಫಾಲೋ ಮಾಡುತ್ತಿರುವ ‘ಅಬ್ಸೆಷನ್’ ಸಿನಿಮಾ ನಿರ್ದೇಶಕ

ಜಾಗತಿಕ ಮಟ್ಟದ ಖ್ಯಾತ ಹಾರರ್ ನಿರ್ದೇಶಕ ಕರಿ ಬಾರ್ಕರ್ ಅವರು ಭಾರತದ ಮೂವರು ಪ್ರತಿಭೆಗಳನ್ನು ಫಾಲೋ ಮಾಡುತ್ತಿದ್ದಾರೆ. ‘ಅಬ್ಸೆಷನ್’ ಸಿನಿಮಾ ಮೂಲಕ ಸೆನ್ಸೇಷನ್ ಸೃಷ್ಟಿ ಮಾಡಿರುವ ಕರಿ ಬಾರ್ಕರ್ ಅವರಿಗೆ ಭಾರತದಲ್ಲಿ ಫ್ಯಾನ್ ಫಾಲೋಯಿಂಗ್ ಜಾಸ್ತಿ ಆಗಿದೆ. ಎಲ್ಲ ಕಡೆಗಳಲ್ಲಿ ‘ಅಬ್ಸೆಷನ್’ ಬಗ್ಗೆಯೇ ಮಾತುಗಳು ಕೇಳಿಬರುತ್ತಿವೆ.

ಮೂವರು ಭಾರತೀಯರನ್ನು ಫಾಲೋ ಮಾಡುತ್ತಿರುವ ‘ಅಬ್ಸೆಷನ್’ ಸಿನಿಮಾ ನಿರ್ದೇಶಕ
Curry Barker
ಮದನ್​ ಕುಮಾರ್​
|

Updated on: Jun 26, 2026 | 9:45 PM

Share

ಮುಖ್ಯಾಂಶಗಳು

  • ಭಾರತದಲ್ಲಿ ಸೂಪರ್ ಹಿಟ್ ಆಗಿದೆ ಹಾಲಿವುಡ್​ನ ‘ಅಬ್ಸೆಷನ್’ ಸಿನಿಮಾ.
  • ಈ ಹಾರರ್ ಚಿತ್ರದ ನಿರ್ದೇಶಕ ಕರಿ ಬಾರ್ಕರ್ ಕೂಡ ಫೇಮಸ್ ಆಗಿದ್ದಾರೆ.
  • ಭಾರತದ ಕೇವಲ 3 ಸೆಲೆಬ್ರಿಟಿಗಳನ್ನು ಫಾಲೋ ಮಾಡ್ತಿರುವ ಕರಿ ಬಾರ್ಕರ್.

ತಮ್ಮ ಇತ್ತೀಚಿನ ಸೈಕಲಾಜಿಕಲ್ ಹಾರರ್ ಹಿಟ್ ಸಿನಿಮಾ ‘ಅಬ್ಸೆಷನ್’ (Obsession) ಮೂಲಕ ಜಾಗತಿಕ ಮಟ್ಟದಲ್ಲಿ ಭಾರಿ ಸೌಂಡ್ ಮಾಡಿರುವ 26 ವರ್ಷದ ಪ್ರತಿಭಾವಂತ ಹಾಲಿವುಡ್ ನಿರ್ದೇಶಕ ಕರಿ ಬಾರ್ಕರ್ (Curry Barker) ಈಗ ಸೋಷಿಯಲ್ ಮೀಡಿಯಾದಲ್ಲಿ ಹೊಸ ಕಾರಣಕ್ಕೆ ಸುದ್ದಿ ಆಗುತ್ತಿದ್ದಾರೆ. ಕರಿ ಬಾರ್ಕರ್ ಅವರ ಇನ್‌ಸ್ಟಾಗ್ರಾಮ್ ಫಾಲೋಯಿಂಗ್ ಲಿಸ್ಟ್ ಗಮನಿಸಿದರೆ, ಅವರಿಗೆ ಭಾರತದ ಚಿತ್ರರಂಗದೊಂದಿಗೆ ಇರುವ ಒಂದು ವಿಶೇಷ ನಂಟಿನ ಬಗ್ಗೆ ಗೊತ್ತಾಗಿದೆ. ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಕೇವಲ ಮೂವರು ಭಾರತೀಯ ಸೆಲೆಬ್ರಿಟಿಗಳನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ. ಅವರಲ್ಲಿ ಇಬ್ಬರು ನಟರಾದರೆ, ಮತ್ತೊಬ್ಬರು ಸಿನಿಮಾ ನಿರ್ದೇಶಕರಾಗಿದ್ದಾರೆ.

ಬಾಲಿವುಡ್ ಸ್ಟಾರ್ ನಟ ಕಾರ್ತಿಕ್ ಆರ್ಯನ್:

ಹಿಂದಿ ಚಿತ್ರರಂಗದ ಖ್ಯಾತ ನಟ ಕಾರ್ತಿಕ್ ಆರ್ಯನ್ ಅವರನ್ನು ಕರಿ ಬಾರ್ಕರ್ ಫಾಲೋ ಮಾಡುತ್ತಿರುವುದು ಅಷ್ಟೇನೂ ಆಶ್ಚರ್ಯ ತಂದಿಲ್ಲ. ಏಕೆಂದರೆ, ಕರಿ ಬಾರ್ಕರ್ ಅವರ ‘ಅಬ್ಸೆಷನ್’ ಸಿನಿಮಾ ಬಿಡುಗಡೆಯಾದಾಗ ಬಾಲಿವುಡ್‌ನಿಂದ ಅದಕ್ಕೆ ಮೊದಲ ಬಾರಿಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ್ದು ಇದೇ ಕಾರ್ತಿಕ್ ಆರ್ಯನ್. ಈ ಚಿತ್ರದ ಬಗ್ಗೆ ಇಂಟರ್ನೆಟ್‌ನಲ್ಲಿ ತಮಗಿರುವ ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದ ಕಾರ್ತಿಕ್, ‘ಬಹಳ ದಿನಗಳ ನಂತರ ಬಂದ ಅತ್ಯುತ್ತಮ ಹಾರರ್ ಚಿತ್ರಗಳಲ್ಲಿ ಇದು ಒಂದು. ನಾನು ನಿಜಕ್ಕೂ ‘ಅಬ್ಸೆಷನ್’ ಚಿತ್ರಕ್ಕೆ ಫಿದಾ ಆಗಿದ್ದೇನೆ. ಯಾರೂ ಇದನ್ನು ಮಿಸ್ ಮಾಡಬೇಡಿ’ ಎಂದು ಬರೆದುಕೊಂಡಿದ್ದರು.

ಉದಯೋನ್ಮುಖ ನಟಿ ರಿಚ್ಚಾ ಸಿನ್ಹಾ:

ಲಕ್ನೋ ಮೂಲದ ಉದಯೋನ್ಮುಖ ನಟಿ ರಿಚ್ಚಾ ಸಿನ್ಹಾ ಅವರು ಕರಿ ಬಾರ್ಕರ್ ಫಾಲೋ ಮಾಡುತ್ತಿರುವ ಎರಡನೇ ಭಾರತೀಯ ನಟಿ. ರಿಚ್ಚಾ ಅವರು ಸದ್ಯ ಬ್ರಿಟಿಷ್ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾವೊಂದರಲ್ಲಿ ಅನ್ಯಾ ಎಂಬ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಸಿದ್ಧ ಪೈನ್‌ವುಡ್ ಸ್ಟುಡಿಯೋಸ್‌ನಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರವು, ಹೊಸ ದೇಶಕ್ಕೆ ತೆರಳುವ ಯುವತಿಯೊಬ್ಬಳು ಅಲ್ಲಿ ಎದುರಿಸುವ ಭಾವುಕ ಹಾಗೂ ರೋಮಾಂಚನಕಾರಿ ಸನ್ನಿವೇಶಗಳ ಸುತ್ತ ಸಾಗುತ್ತದೆ.

ಇದನ್ನೂ ಓದಿ: ಭಾರತದಲ್ಲಿ ಸೂಪರ್ ಹಿಟ್ ಆದ ಹಾಲಿವುಡ್ ಸಿನಿಮಾ ‘ಅಬ್ಸೆಷನ್’ ಒಟಿಟಿಗೆ ಬರೋದು ಯಾವಾಗ?

ಯುವ ನಿರ್ದೇಶಕ ಕುಶಾಲ್ ಚಾವ್ಲಾ:

ಕರಿ ಬಾರ್ಕರ್ ಲಿಸ್ಟ್‌ನಲ್ಲಿರುವ ಮೂರನೇ ಭಾರತೀಯ ಅಂದರೆ ಅದು ನಿರ್ದೇಶಕ ಕುಶಾಲ್ ಚಾವ್ಲಾ. ಅಂತಾರಾಷ್ಟ್ರೀಯ ಶಾರ್ಟ್ ಫಿಲ್ಮ್ ಮತ್ತು ಇಂಡಿ ಸಿನಿಮಾ ವಲಯದಲ್ಲಿ ಕುಶಾಲ್ ದೊಡ್ಡ ಹೆಸರು ಮಾಡುತ್ತಿದ್ದಾರೆ. ಇತ್ತೀಚೆಗೆ ಅವರು ನಿರ್ದೇಶಿಸಿದ ‘ಅನದರ್ ಟೈಮ್’ ಸಿನಿಮಾ ಲಾಸ್ ಏಂಜಲೀಸ್‌ನ ಪ್ರಖ್ಯಾತ ವಾರ್ನರ್ ಬ್ರದರ್ಸ್ ಸ್ಟುಡಿಯೋಸ್‌ನಲ್ಲಿ ಪ್ರೀಮಿಯರ್ ಆಗುವ ಮೂಲಕ ದೊಡ್ಡ ಮೈಲಿಗಲ್ಲು ಸ್ಥಾಪಿಸಿತ್ತು. ಈ ಚಿತ್ರವು ನ್ಯೂಯಾರ್ಕ್ ಇಂಟರ್ನ್ಯಾಷನಲ್ ಫಿಲ್ಮ್ ಅವಾರ್ಡ್ಸ್‌ನಲ್ಲಿ ‘ಅತ್ಯುತ್ತಮ ನಿರ್ದೇಶಕ’ ಪ್ರಶಸ್ತಿ ಸೇರಿದಂತೆ ಜಾಗತಿಕವಾಗಿ 15ಕ್ಕೂ ಹೆಚ್ಚು ಗೌರವಗಳನ್ನು ಮುಡಿಗೇರಿಸಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಮಾಯಣ, ಮಹಾಭಾರತ ಇಂಡೋನೇಷ್ಯಾ- ಭಾರತದ ಬಾಂಧವ್ಯದ ಸ್ತಂಭಗಳು; ಪ್ರಧಾನಿ ಮೋದಿ
ರಾಮಾಯಣ, ಮಹಾಭಾರತ ಇಂಡೋನೇಷ್ಯಾ- ಭಾರತದ ಬಾಂಧವ್ಯದ ಸ್ತಂಭಗಳು; ಪ್ರಧಾನಿ ಮೋದಿ
ವಯನಾಡಿನಲ್ಲಿ ಮತ್ತೊಮ್ಮೆ ಪ್ರಕೃತಿ ವಿಕೋಪ; ಭೂಕುಸಿತದಿಂದ ಮೂವರು ಸಾವು
ವಯನಾಡಿನಲ್ಲಿ ಮತ್ತೊಮ್ಮೆ ಪ್ರಕೃತಿ ವಿಕೋಪ; ಭೂಕುಸಿತದಿಂದ ಮೂವರು ಸಾವು
ಮುಸ್ಲಿಂ ಹೆಸರನ್ನ ಡಿಲೀಟ್ ಮಾಡದಂತೆ ಡಿಸಿಗೆ ನಿರ್ದೇಶನ
ಮುಸ್ಲಿಂ ಹೆಸರನ್ನ ಡಿಲೀಟ್ ಮಾಡದಂತೆ ಡಿಸಿಗೆ ನಿರ್ದೇಶನ
ಮಂಜು ಮುಸುಕಿದ ಹಾದಿ, ಬೆಟ್ಟ-ಗುಡ್ಡಗಳ ಅದ್ಭುತ ಸೌಂದರ್ಯ:ಆಗುಂಬೆಯ ಸೊಬಗು
ಮಂಜು ಮುಸುಕಿದ ಹಾದಿ, ಬೆಟ್ಟ-ಗುಡ್ಡಗಳ ಅದ್ಭುತ ಸೌಂದರ್ಯ:ಆಗುಂಬೆಯ ಸೊಬಗು
ಗದಗನಲ್ಲಿ ಮನಕಲಕುವ ದೃಶ್ಯ: ಮಳೆಗಾಗಿ ಮಂಡಿಯೂರಿ ಕಣ್ಣೀರಿಟ್ಟ ರೈತರು
ಗದಗನಲ್ಲಿ ಮನಕಲಕುವ ದೃಶ್ಯ: ಮಳೆಗಾಗಿ ಮಂಡಿಯೂರಿ ಕಣ್ಣೀರಿಟ್ಟ ರೈತರು
‘ಕರಾವಳಿ’ ಕಿರಿಕ್; ನಟ ಪ್ರಜ್ವಲ್, ನಿರ್ದೇಶಕ ಗುರುದತ್ ನಡುವೆ ಆಗಿದ್ದೇನು?
‘ಕರಾವಳಿ’ ಕಿರಿಕ್; ನಟ ಪ್ರಜ್ವಲ್, ನಿರ್ದೇಶಕ ಗುರುದತ್ ನಡುವೆ ಆಗಿದ್ದೇನು?
ಹಾಸನದಲ್ಲಿ ಮಳೆ ಆರ್ಭಟಕ್ಕೆ ಶಿರಾಡಿಘಾಟ್ ವ್ಯಾಪ್ತಿಯಲ್ಲಿ ಭೂಕುಸಿತ
ಹಾಸನದಲ್ಲಿ ಮಳೆ ಆರ್ಭಟಕ್ಕೆ ಶಿರಾಡಿಘಾಟ್ ವ್ಯಾಪ್ತಿಯಲ್ಲಿ ಭೂಕುಸಿತ
SIR ಪ್ರಕ್ರಿಯಲ್ಲಿ ಸಾಲುಸಾಲು ಎಡವಟ್ಟು: ಫಾರ್ಮ್​ ತುಂಬಲು ಶಾಲಾ ಮಕ್ಕಳ ಬಳಕೆ
SIR ಪ್ರಕ್ರಿಯಲ್ಲಿ ಸಾಲುಸಾಲು ಎಡವಟ್ಟು: ಫಾರ್ಮ್​ ತುಂಬಲು ಶಾಲಾ ಮಕ್ಕಳ ಬಳಕೆ
ಅಯೋಧ್ಯೆ ರಾಮಮಂದಿರ ದೇಣಿಗೆ ಲೆಕ್ಕ ಬಹಿರಂಗ
ಅಯೋಧ್ಯೆ ರಾಮಮಂದಿರ ದೇಣಿಗೆ ಲೆಕ್ಕ ಬಹಿರಂಗ
ಜೋಗ ಜಲಪಾತದ ಜಲವೈಭವ ಕಣ್ತುಂಬಿಕೊಂಡ ಪ್ರವಾಸಿಗರು
ಜೋಗ ಜಲಪಾತದ ಜಲವೈಭವ ಕಣ್ತುಂಬಿಕೊಂಡ ಪ್ರವಾಸಿಗರು