AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ್ಯಸಿಡ್​ ದಾಳಿಯಿಂದ ಕಂಗನಾ ಅಕ್ಕನ ಮುಖಕ್ಕೆ 53 ಸರ್ಜರಿ; ಕಡೆಗೂ ಯೋಗದಿಂದ ನಡೆದಿದ್ದು ಮ್ಯಾಜಿಕ್​

International Yoga Day: 21ನೇ ವಯಸ್ಸಿನಲ್ಲಿ ಕಂಗನಾ ರಣಾವತ್​ ಸಹೋದರಿ ರಂಗೋಲಿ ಚಂಡೇಲ್​ ಮೇಲೆ ಆ್ಯಸಿಡ್​ ದಾಳಿ ಆಗಿತ್ತು. ಅರ್ಧ ಮುಖ ಸುಟ್ಟು ಹೋಗಿತ್ತು. ಒಂದು ಕಣ್ಣಿನ ದೃಷ್ಟಿ ಹೋಗಿತ್ತು. ಒಂದು ಭಾಗದ ಸ್ತನಕ್ಕೂ ಹಾನಿ ಆಗಿತ್ತು!

ಆ್ಯಸಿಡ್​ ದಾಳಿಯಿಂದ ಕಂಗನಾ ಅಕ್ಕನ ಮುಖಕ್ಕೆ 53 ಸರ್ಜರಿ; ಕಡೆಗೂ ಯೋಗದಿಂದ ನಡೆದಿದ್ದು ಮ್ಯಾಜಿಕ್​
ಕಂಗನಾ ರಣಾವತ್​, ರಂಗೋಲಿ ಚಂಡೇಲ್​
ಮದನ್​ ಕುಮಾರ್​
| Edited By: |

Updated on: Jun 21, 2021 | 3:28 PM

Share

ನಟಿ ಕಂಗನಾ ರಣಾವತ್​ ಅವರ ಅಕ್ಕ ರಂಗೋಲಿ ಚಂಡೇಲ್​ ಅವರ ಬದುಕಿನಲ್ಲಿ ಕಣ್ಣೀರಿನ ಕಥೆ ಇದೆ. ಚಿಕ್ಕ ವಯಸ್ಸಿನಲ್ಲಿಯೇ ಅವರ ಮೇಲೆ ಆ್ಯಸಿಡ್​ ದಾಳಿ ಆಗಿತ್ತು. ಆಗ ಅವರ ಮುಖ ಸುಟ್ಟು ವಿಕಾರಗೊಂಡಿತ್ತು. ಅಂಥ ದುಸ್ಥಿತಿಯಿಂದ ಅವರ ಮನಸ್ಸು ಕೂಡ ಛಿದ್ರ ಆಗಿತ್ತು. ಆಗ ಅವರ ಸಹಾಯಕ್ಕೆ ಬಂದಿದ್ದೇ ಯೋಗ ಎಂಬುದನ್ನು ಕಂಗನಾ ಹೇಳಿದ್ದಾರೆ. ವಿಶ್ವ ಯೋಗ ದಿನದ ಪ್ರಯುಕ್ತ ಅವರು ಕೆಲವು ಅಚ್ಚರಿಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

‘ರಂಗೋಲಿ ಬದುಕಿನಲ್ಲಿ ಯೋಗದ ಕುರಿತು ಒಂದು ಸ್ಫೂರ್ತಿದಾಯಕ ಕಥೆ ಇದೆ. ಅವಳು 21 ವರ್ಷದವಳಿದ್ದಾಗ ಅವಳ ಮೇಲೆ ಒಬ್ಬ ರೋಡ್​ ಸೈಡ್​ ರೋಮಿಯೋ ಆ್ಯಸಿಡ್​ ಎರಚಿದ್ದ. ಅವಳ ಅರ್ಧ ಮುಖ ಸುಟ್ಟು ಹೋಗಿತ್ತು. ಒಂದು ಕಣ್ಣಿನ ದೃಷ್ಟಿ ಹೋಗಿತ್ತು. ಒಂದು ಭಾಗದ ಸ್ತನಕ್ಕೂ ಹಾನಿ ಆಗಿತ್ತು. ನಂತರ 2ರಿಂದ 3 ವರ್ಷದಲ್ಲಿ ಅವಳಿಗೆ 53 ಸರ್ಜರಿ ಮಾಡಲಾಯಿತು. ಅಷ್ಟು ಮಾತ್ರವಲ್ಲ, ಅವಳ ಮಾನಸಿಕ ಆರೋಗ್ಯದ ಬಗ್ಗೆ ನನಗೆ ಚಿಂತೆ ಆಗಿತ್ತು. ಆಕೆ ಮಾತನಾಡುವುದನ್ನೇ ನಿಲ್ಲಿಸಿದ್ದಳು’ ಎಂದು ಕಂಗನಾ ಹಳೇ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ.

‘ಏನೇ ಆದರೂ ಕೂಡ ಆಕೆ ಒಂದು ಅಕ್ಷರವನ್ನೂ ಮಾತನಾಡುತ್ತಿರಲಿಲ್ಲ. ಎಲ್ಲವನ್ನೂ ದಿಟ್ಟಿಸಿ ನೋಡುತ್ತಿದ್ದಳು ಅಷ್ಟೇ. ಅವಳಿಗೆ ಒಬ್ಬ ವಾಯುಸೇನೆ ಅಧಿಕಾರಿ ಜೊತೆ ನಿಶ್ಚಿತಾರ್ಥ ಆಗಿತ್ತು. ಆದರೆ ಆ್ಯಸಿಡ್​ ದಾಳಿ ಆದ ಬಳಿಕ ಅವಳ ಮುಖವನ್ನು ನೋಡಿದ ಆ ಅಧಿಕಾರಿ ಹೊರಟು ಹೋದ. ಮತ್ತೆಂದೂ ಮರಳಿ ಬರಲಿಲ್ಲ. ಆಗಲೂ ಕೂಡ ರಂಗೋಲಿ ಒಂದು ಹನಿ ಕಣ್ಣೀರು ಸಹ ಹಾಕಲಿಲ್ಲ. ಒಂದು ಮಾತೂ ಆಡಲಿಲ್ಲ’ ಎನ್ನುವ ಮೂಲಕ ಆ ಭಯಾನಕ ಸ್ಥಿತಿಯನ್ನು ಕಂಗನಾ ವಿವರಿಸಿದ್ದಾರೆ.

‘ಅವಳ ಮನಸ್ಸು ತೀವ್ರ ಆಘಾತಕ್ಕೆ ಒಳಗಾಗಿದೆ ಎಂದು ವೈದ್ಯರು ಹೇಳಿದರು. ಅದಕ್ಕಾಗಿ ಹಲವು ಬಗೆಯ ಚಿಕಿತ್ಸೆ ನೀಡಿದರು. ಮನೋವೈದ್ಯರ ಸಲಹೆ ಕೂಡ ಪಡೆಯಲಾಯಿತು. ಆದರೆ ಯಾವುದೂ ಉಪಯೋಗಕ್ಕೆ ಬರಲಿಲ್ಲ. ಆಕೆ ಮಾತನಾಡಲೇಬೇಕು ಎಂದು ನಾನು ಬಯಸಿದ್ದೆ. ನಾನು ಹೋದಲ್ಲೆಲ್ಲ ಅವಳನ್ನು ಕರೆದುಕೊಂಡು ಹೋಗುತ್ತಿದ್ದೆ. ನನ್ನ ಯೋಗ ಕ್ಲಾಸ್​ಗೂ ಕರೆದುಕೊಂಡು ಹೋದೆ. ಅವಳು ನಿಧಾನಕ್ಕೆ ಯೋಗ ಮಾಡಲು ಆರಂಭಿಸಿದಳು. ಅವಳಲ್ಲಿ ಬದಲಾವಣೆ ಕಾಣಿಸಿಕೊಂಡಿತ್ತು. ನೋವು ಮತ್ತು ನನ್ನ ಜೋಕ್​ಗಳಿಗೆ ಅವಳು ಪ್ರತಿಕ್ರಿಯಿಸಲು ಶುರು ಮಾಡಿದ್ದು ಮಾತ್ರವಲ್ಲದೇ, ಅವಳು ಕಳೆದುಕೊಂಡಿದ್ದ ಒಂದು ಕಣ್ಣಿನ ದೃಷ್ಟಿ ಕೂಡ ಮರಳಿಬಂತು’ ಎಂದು ಕಂಗನಾ ಹೇಳಿದ್ದಾರೆ.

ಇದನ್ನೂ ಓದಿ:

ಲಾಕ್​ಡೌನ್​ ಎಫೆಕ್ಟ್​; ತೆರಿಗೆ ಕಟ್ಟಲೂ ಆಗದೆ ಒದ್ದಾಡುತ್ತಿದ್ದಾರೆ ಕಂಗನಾ ರಣಾವತ್​; ಅಳಲು ತೋಡಿಕೊಂಡ ನಟಿ

ಅತ್ಯಾಚಾರ ಆರೋಪ ಎದುರಿಸುತ್ತಿದ್ದ ಕಂಗನಾ ರಣಾವತ್ ಬಾಡಿಗಾರ್ಡ್ ಮಂಡ್ಯದಲ್ಲಿ ಅರೆಸ್ಟ್​

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ