AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ್ಯಸಿಡ್​ ದಾಳಿಯಿಂದ ಕಂಗನಾ ಅಕ್ಕನ ಮುಖಕ್ಕೆ 53 ಸರ್ಜರಿ; ಕಡೆಗೂ ಯೋಗದಿಂದ ನಡೆದಿದ್ದು ಮ್ಯಾಜಿಕ್​

International Yoga Day: 21ನೇ ವಯಸ್ಸಿನಲ್ಲಿ ಕಂಗನಾ ರಣಾವತ್​ ಸಹೋದರಿ ರಂಗೋಲಿ ಚಂಡೇಲ್​ ಮೇಲೆ ಆ್ಯಸಿಡ್​ ದಾಳಿ ಆಗಿತ್ತು. ಅರ್ಧ ಮುಖ ಸುಟ್ಟು ಹೋಗಿತ್ತು. ಒಂದು ಕಣ್ಣಿನ ದೃಷ್ಟಿ ಹೋಗಿತ್ತು. ಒಂದು ಭಾಗದ ಸ್ತನಕ್ಕೂ ಹಾನಿ ಆಗಿತ್ತು!

ಆ್ಯಸಿಡ್​ ದಾಳಿಯಿಂದ ಕಂಗನಾ ಅಕ್ಕನ ಮುಖಕ್ಕೆ 53 ಸರ್ಜರಿ; ಕಡೆಗೂ ಯೋಗದಿಂದ ನಡೆದಿದ್ದು ಮ್ಯಾಜಿಕ್​
ಕಂಗನಾ ರಣಾವತ್​, ರಂಗೋಲಿ ಚಂಡೇಲ್​
ಮದನ್​ ಕುಮಾರ್​
| Edited By: |

Updated on: Jun 21, 2021 | 3:28 PM

Share

ನಟಿ ಕಂಗನಾ ರಣಾವತ್​ ಅವರ ಅಕ್ಕ ರಂಗೋಲಿ ಚಂಡೇಲ್​ ಅವರ ಬದುಕಿನಲ್ಲಿ ಕಣ್ಣೀರಿನ ಕಥೆ ಇದೆ. ಚಿಕ್ಕ ವಯಸ್ಸಿನಲ್ಲಿಯೇ ಅವರ ಮೇಲೆ ಆ್ಯಸಿಡ್​ ದಾಳಿ ಆಗಿತ್ತು. ಆಗ ಅವರ ಮುಖ ಸುಟ್ಟು ವಿಕಾರಗೊಂಡಿತ್ತು. ಅಂಥ ದುಸ್ಥಿತಿಯಿಂದ ಅವರ ಮನಸ್ಸು ಕೂಡ ಛಿದ್ರ ಆಗಿತ್ತು. ಆಗ ಅವರ ಸಹಾಯಕ್ಕೆ ಬಂದಿದ್ದೇ ಯೋಗ ಎಂಬುದನ್ನು ಕಂಗನಾ ಹೇಳಿದ್ದಾರೆ. ವಿಶ್ವ ಯೋಗ ದಿನದ ಪ್ರಯುಕ್ತ ಅವರು ಕೆಲವು ಅಚ್ಚರಿಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

‘ರಂಗೋಲಿ ಬದುಕಿನಲ್ಲಿ ಯೋಗದ ಕುರಿತು ಒಂದು ಸ್ಫೂರ್ತಿದಾಯಕ ಕಥೆ ಇದೆ. ಅವಳು 21 ವರ್ಷದವಳಿದ್ದಾಗ ಅವಳ ಮೇಲೆ ಒಬ್ಬ ರೋಡ್​ ಸೈಡ್​ ರೋಮಿಯೋ ಆ್ಯಸಿಡ್​ ಎರಚಿದ್ದ. ಅವಳ ಅರ್ಧ ಮುಖ ಸುಟ್ಟು ಹೋಗಿತ್ತು. ಒಂದು ಕಣ್ಣಿನ ದೃಷ್ಟಿ ಹೋಗಿತ್ತು. ಒಂದು ಭಾಗದ ಸ್ತನಕ್ಕೂ ಹಾನಿ ಆಗಿತ್ತು. ನಂತರ 2ರಿಂದ 3 ವರ್ಷದಲ್ಲಿ ಅವಳಿಗೆ 53 ಸರ್ಜರಿ ಮಾಡಲಾಯಿತು. ಅಷ್ಟು ಮಾತ್ರವಲ್ಲ, ಅವಳ ಮಾನಸಿಕ ಆರೋಗ್ಯದ ಬಗ್ಗೆ ನನಗೆ ಚಿಂತೆ ಆಗಿತ್ತು. ಆಕೆ ಮಾತನಾಡುವುದನ್ನೇ ನಿಲ್ಲಿಸಿದ್ದಳು’ ಎಂದು ಕಂಗನಾ ಹಳೇ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ.

‘ಏನೇ ಆದರೂ ಕೂಡ ಆಕೆ ಒಂದು ಅಕ್ಷರವನ್ನೂ ಮಾತನಾಡುತ್ತಿರಲಿಲ್ಲ. ಎಲ್ಲವನ್ನೂ ದಿಟ್ಟಿಸಿ ನೋಡುತ್ತಿದ್ದಳು ಅಷ್ಟೇ. ಅವಳಿಗೆ ಒಬ್ಬ ವಾಯುಸೇನೆ ಅಧಿಕಾರಿ ಜೊತೆ ನಿಶ್ಚಿತಾರ್ಥ ಆಗಿತ್ತು. ಆದರೆ ಆ್ಯಸಿಡ್​ ದಾಳಿ ಆದ ಬಳಿಕ ಅವಳ ಮುಖವನ್ನು ನೋಡಿದ ಆ ಅಧಿಕಾರಿ ಹೊರಟು ಹೋದ. ಮತ್ತೆಂದೂ ಮರಳಿ ಬರಲಿಲ್ಲ. ಆಗಲೂ ಕೂಡ ರಂಗೋಲಿ ಒಂದು ಹನಿ ಕಣ್ಣೀರು ಸಹ ಹಾಕಲಿಲ್ಲ. ಒಂದು ಮಾತೂ ಆಡಲಿಲ್ಲ’ ಎನ್ನುವ ಮೂಲಕ ಆ ಭಯಾನಕ ಸ್ಥಿತಿಯನ್ನು ಕಂಗನಾ ವಿವರಿಸಿದ್ದಾರೆ.

‘ಅವಳ ಮನಸ್ಸು ತೀವ್ರ ಆಘಾತಕ್ಕೆ ಒಳಗಾಗಿದೆ ಎಂದು ವೈದ್ಯರು ಹೇಳಿದರು. ಅದಕ್ಕಾಗಿ ಹಲವು ಬಗೆಯ ಚಿಕಿತ್ಸೆ ನೀಡಿದರು. ಮನೋವೈದ್ಯರ ಸಲಹೆ ಕೂಡ ಪಡೆಯಲಾಯಿತು. ಆದರೆ ಯಾವುದೂ ಉಪಯೋಗಕ್ಕೆ ಬರಲಿಲ್ಲ. ಆಕೆ ಮಾತನಾಡಲೇಬೇಕು ಎಂದು ನಾನು ಬಯಸಿದ್ದೆ. ನಾನು ಹೋದಲ್ಲೆಲ್ಲ ಅವಳನ್ನು ಕರೆದುಕೊಂಡು ಹೋಗುತ್ತಿದ್ದೆ. ನನ್ನ ಯೋಗ ಕ್ಲಾಸ್​ಗೂ ಕರೆದುಕೊಂಡು ಹೋದೆ. ಅವಳು ನಿಧಾನಕ್ಕೆ ಯೋಗ ಮಾಡಲು ಆರಂಭಿಸಿದಳು. ಅವಳಲ್ಲಿ ಬದಲಾವಣೆ ಕಾಣಿಸಿಕೊಂಡಿತ್ತು. ನೋವು ಮತ್ತು ನನ್ನ ಜೋಕ್​ಗಳಿಗೆ ಅವಳು ಪ್ರತಿಕ್ರಿಯಿಸಲು ಶುರು ಮಾಡಿದ್ದು ಮಾತ್ರವಲ್ಲದೇ, ಅವಳು ಕಳೆದುಕೊಂಡಿದ್ದ ಒಂದು ಕಣ್ಣಿನ ದೃಷ್ಟಿ ಕೂಡ ಮರಳಿಬಂತು’ ಎಂದು ಕಂಗನಾ ಹೇಳಿದ್ದಾರೆ.

ಇದನ್ನೂ ಓದಿ:

ಲಾಕ್​ಡೌನ್​ ಎಫೆಕ್ಟ್​; ತೆರಿಗೆ ಕಟ್ಟಲೂ ಆಗದೆ ಒದ್ದಾಡುತ್ತಿದ್ದಾರೆ ಕಂಗನಾ ರಣಾವತ್​; ಅಳಲು ತೋಡಿಕೊಂಡ ನಟಿ

ಅತ್ಯಾಚಾರ ಆರೋಪ ಎದುರಿಸುತ್ತಿದ್ದ ಕಂಗನಾ ರಣಾವತ್ ಬಾಡಿಗಾರ್ಡ್ ಮಂಡ್ಯದಲ್ಲಿ ಅರೆಸ್ಟ್​

ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಸ್ವಂತ ಮನೆ ಕನಸು ನನಸಾಗಲು ಏನು ಮಾಡಬೇಕು ನೋಡಿ
ಸ್ವಂತ ಮನೆ ಕನಸು ನನಸಾಗಲು ಏನು ಮಾಡಬೇಕು ನೋಡಿ
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?