Mohanlal: ‘ದೃಶ್ಯಂ’ ಸರಣಿಯ ಯಶಸ್ಸಿನ ನಂತರ ಮತ್ತೆ ಒಂದಾದ ಮೋಹನ್​ಲಾಲ್, ಜೀತು ಜೋಸೆಫ್ ಜೋಡಿ; ಯಾವ ಚಿತ್ರ?

Jeethu Joseph: ಮಾಲಿವುಡ್​ನ ಹಿಟ್ ಜೋಡಿಯಾದ ನಿರ್ದೇಶಕ ಜೀತು ಜೋಸೆಫ್ ಹಾಗೂ ನಟ ಮೋಹನ್​ಲಾಲ್ ಜೊತೆಯಾಗಿ ಹೊಸ ಚಿತ್ರವನ್ನು ಘೋಷಿಸಿದ್ದಾರೆ. ಚಿತ್ರಕ್ಕೆ '12th ಮ್ಯಾನ್' ಎಂದು ಹೆಸರಿಡಲಾಗಿದೆ.

Mohanlal: ‘ದೃಶ್ಯಂ’ ಸರಣಿಯ ಯಶಸ್ಸಿನ ನಂತರ ಮತ್ತೆ ಒಂದಾದ ಮೋಹನ್​ಲಾಲ್, ಜೀತು ಜೋಸೆಫ್ ಜೋಡಿ; ಯಾವ ಚಿತ್ರ?
‘12th ಮ್ಯಾನ್’ ಚಿತ್ರದ ಪೋಸ್ಟರ್
Follow us
| Updated By: shivaprasad.hs

Updated on: Aug 18, 2021 | 12:41 PM

ಮಾಲಿವುಡ್​ನ ಖ್ಯಾತ ನಟ ಮೋಹನ್​ಲಾಲ್  ತಮ್ಮ ಮುಂದಿನ ಚಿತ್ರವನ್ನು ಘೋಷಿಸಿದ್ದಾರೆ. ದೃಶ್ಯಂ 1 ಹಾಗೂ ದೃಶ್ಯಂ 2ರ ಸೂಪರ್​ಹಿಟ್ ನಿರ್ದೇಶಕ ಜೀತು ಜೋಸೆಫ್ ನಿರ್ದೇಶನದಲ್ಲಿ ಚಿತ್ರ ಸೆಟ್ಟೇರಿದೆ. ಮೋಹನ್​ಲಾಲ್ ಟ್ವೀಟ್​ ಮೂಲಕ ಹೊಸ ಚಿತ್ರದ ಪೂಜೆಯ ಸಂದರ್ಭದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರ ಮೋಹನ್​ಲಾಲ್ ಹಾಗೂ ಜೀತು ಜೋಸೆಫ್ ಜೋಡಿಯ ನಾಲ್ಕನೇ ಚಿತ್ರವಾಗಿದೆ. ‘ಚಿಂಗಮ್’ ಮಾಸದ ಮೊದಲನೆಯ ದಿನ ಪೂಜೆ ನಡೆದಿದ್ದು, ಅಭಿಮಾನಿಗಳು ಪುಳಕಿತಗೊಂಡಿದ್ದಾರೆ. ಹೊಸ ಚಿತ್ರಕ್ಕೆ ’12th ಮ್ಯಾನ್’ ಎಂದು ಹೆಸರಿಡಲಾಗಿದೆ. ಮಲಯಾಳಂನ ಖ್ಯಾತ ನಿರ್ಮಾಪಕ ಆಂಟೊನಿ ಪೆರುವಾಂಬೂರ್  ಆಶೀರ್ವಾದ್ ಸಿನಿಮಾಸ್ ಮೂಲಕ ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಪೂಜೆಯ ಸಂದರ್ಭದಲ್ಲಿ ಆಂಟೊನಿ ಹಾಗೂ ನಟ ಉನ್ನಿ ಮುಕುಂದನ್ ಸೇರಿದಂತೆ ಹಲವು ತಾರೆಯರು ಉಪಸ್ಥಿತರಿದ್ದರು.

ಈ ಮೊದಲು ಜೀತು ಜೋಸೆಫ್ ನಿರ್ದೇಶನದ  ದೃಶ್ಯಂ ಚಿತ್ರವು ಕನ್ನಡ ಸೇರಿದಂತೆ, ನಾಲ್ಕು ಭಾಷೆಗಳಲ್ಲಿ ರಿಮೇಕ್ ಆಗಿತ್ತು. ಕನ್ನಡದಲ್ಲಿ ನಟ ರವಿಚಂದ್ರನ್ ನಟಿಸಿದ್ದರು. ಇತ್ತೀಚೆಗೆ ದೃಶ್ಯಂ 2 ತೆರೆಕಂಡಿದ್ದು, ಅಪಾರ ಜನಮೆಚ್ಚುಗೆ ಗಳಿಸಿತ್ತು. ದೃಶ್ಯಂನ ಮುಂದುವರೆದ ಭಾಗವಾದ ದೃಶ್ಯಂ 2 ಒಟಿಟಿ ಮುಖಾಂತರ ನೇರವಾಗಿ ತೆರೆಕಂಡಿತ್ತು. ದೃಶ್ಯಂ 2ಗೂ ಮೊದಲು ಜೀತು ಹಾಗೂ ಮೋಹನ್​ಲಾಲ್ ಕಾಂಬಿನೇಷನ್​ನಲ್ಲಿ ಆಕ್ಷನ್ ಥ್ರಿಲ್ಲರ್ ಚಿತ್ರವಾದ ‘ರಾಮ್’ ಸೆಟ್ಟೇರಿತ್ತು. ಆದರೆ ಕೊರೊನಾದ ನಿಯಮಾವಳಿಗಳಿಂದ ಚಿತ್ರವು ಅರ್ಧಕ್ಕೆ ನಿಂತಿದೆ.

ಮೋಹನ್​ಲಾಲ್ ಹಂಚಿಕೊಂಡಿರುವ ಟ್ವೀಟ್:

ಪ್ರಸ್ತುತ ಮೋಹನ್​ಲಾಲ್ ಮಲಯಾಳಂನ ಮತ್ತೊಬ್ಬ ಖ್ಯಾತ ನಟ ಪೃಥ್ವಿರಾಜ್ ಸುಕುಮಾರ್ ಅವರೊಂದಿಗೆ ‘ಬ್ರೊ ಡ್ಯಾಡಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಸ್ವತಃ ಪೃಥ್ವಿರಾಜ್ ನಿರ್ದೇಶಿಸುತ್ತಿದ್ದು, ‘ಲೂಸಿಫರ್’ ನಂತರ ಈ ಜೋಡಿ ಮತ್ತೆ ಒಂದಾಗಿದೆ. ಈ ಚಿತ್ರದಲ್ಲಿ ಬಹುದೊಡ್ಡ ತಾರಾಗಣವಿದ್ದು, ಮೀನಾ, ಕಲ್ಯಾಣಿ ಪ್ರಿಯದರ್ಶನ್, ಲಾಲು ಅಲೆಕ್ಸ್, ಮುರಳಿ ಗೋಪಿ, ಸೌಬಿನ್ ಶಾಹಿರ್ ಮೊದಲಾದವರು ಕಾಣಿಸಿಕೊಳ್ಳುತ್ತಿದ್ದಾರೆ.

ನಟನೆಯಲ್ಲದೇ ಮೋಹನ್​ಲಾಲ್ ಸದ್ಯ ನಿರ್ದೇಶನದ ಕ್ಯಾಪ್ ಸಹ ತೊಟ್ಟಿದ್ದಾರೆ. ಅವರ ಚೊಚ್ಚಲ ನಿರ್ದೇಶನದಲ್ಲಿ ‘ಬರ್ರೋಸ್’ ಚಿತ್ರ ಮೂಡಿಬರಲಿದ್ದು, ಆ ಚಿತ್ರದಲ್ಲೂ ಮೋಹನ್​ಲಾಲ್ ಹಾಗೂ ಪೃಥ್ವಿ ಕಾಣಿಸಿಕೊಳ್ಳಲಿದ್ದಾರೆ. ಮೋಹನ್​ಲಾಲ್ ನಟಿಸಿರುವ ಎರಡು ಚಿತ್ರಗಳು ಬಿಡುಗಡೆಗೆ ತಯಾರಾಗಿವೆ. ಅದರಲ್ಲಿ ‘ಮರಕ್ಕರ್: ಅರಬಿಕಡಲಿಂಟೆ ಸಿಂಹಮ್’ ಚಿತ್ರ ಈಗಾಗಲೇ ಎಲ್ಲರ ಗಮನ ಸೆಳೆದಿದ್ದು, ಮತ್ತೊಂದು ಚಿತ್ರ ‘ಆರಟ್ಟು’ ಕೂಡಾ ನಿರೀಕ್ಷೆ ಹುಟ್ಟಿಸಿದೆ.

ಇದನ್ನೂ ಓದಿ:

ಬಾಲಿವುಡ್​ಗೆ ಶಾರುಖ್​ ಖಾನ್​ ಮಗಳ ಬ್ಯಾಂಗ್ ಎಂಟ್ರಿ; ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ ಸ್ಟಾರ್​ ನಿರ್ದೇಶಕಿ

Kamal Haasan: ಕಮಲ್ ಹಾಸನ್, ಚಾರುಹಾಸನ್, ಮಣಿರತ್ನಂ, ಸುಹಾಸಿನಿ ಎಲ್ಲರೂ ಒಂದೇ ಚಿತ್ರದಲ್ಲಿ; ಏನು ವಿಶೇಷ?

(Jeethu Joseph and Mohanlal again collaborated for 12th Man after Drishyam series hit)

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ